ಕಲ್ಲುಗುಂಡಿ: ಎರುಕಡ್ಪು ಅಣ್ಣಾಚಿ‌ ಅವಾಂತರಗಳು

        


      ಈತ ಎರುಕಡ್ಪು ಅಣ್ಣಾಚೀ ಮಗ. ಫುಲ್ ಟೈಟ್ ಮಾಸ್ತರ್. ಅಮಲೇರುವ ಎಲ್ಲಾ ಐಟಂಗಳ ದಾಸ ಇವನು. ಇವನ ಅಮಲು ಬಿಡಿಸಲು ಕಂಕನಾಡಿಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವನಲ್ಲಿ ಎರಡು ಲಕ್ಷದ ಒಂದು ಬೈಕ್ ಇದ್ದು ಅದರಲ್ಲಿ ಇವನ ಸರ್ಕಸ್ ನಿತ್ಯ ಕಲ್ಲು ಗುಂಡಿಯಲ್ಲಿ ನಡೆಯುತ್ತಾ ಇರುತ್ತದೆ.
       ಹಾಗೆಂದು ಈ ಮರಿ ಅಣ್ಣಾಚೀ ಮೇಲೆ ಒಂದು ವಿಚಿತ್ರ ಕಂಪ್ಲೈಂಟ್ ಇದೆ. ಇವನು ಟೈಟ್ ಆದಾಗಲೆಲ್ಲ ಅಣ್ಣಾಚೀ ಕಾಲೊನಿಗಳಿಗೆ ನುಗ್ಗಿ ಅಲ್ಲಿ ಒಣಗಲು ಹಾಕಿದ ಹೆಂಗಸರ ಅಂಗಿ, ಚಡ್ಡಿ ಧರಿಸಿ ಪರಾರಿಯಾಗುವ ಮಂಡೆಸೀಕ್ ಇವನಿಗಿದೆ ಎಂದು ತಿಳಿದುಬಂದಿದೆ. ಈವತ್ತು ಇವನ ಬೈಕ್ ಕಲ್ಲುಗುಂಡಿ ಕೆನರಾ ಬ್ಯಾಂಕ್ ಬಳಿ ಸ್ಕೂಟರ್ ಒಂದಕ್ಕೆ ‌ಡಿಕ್ಕಿ ಹೊಡೆದು ಸ್ಕೂಟರ್ ನವರ ಕೈ ಮುರಿತ ಆಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ. ಸ್ಥಳಕ್ಕೆ ಬಂದಿದ್ದ ಕಲ್ಲುಗುಂಡಿ ಪೋಲಿಸರು ಅಣ್ಣಾಚೀ ಬೈಕನ್ನು ತೆಗೆದ್ದು ಒಳಗೆ ಇಟ್ಟು ಅಣ್ಣಾಚೀ‌ಯನ್ನು ಹಾಗೆ ಬಿಟ್ಟಿದ್ದಾರೆ. ಇಲ್ಲಿ ಪೋಲಿಸರು ಒಂದು ಮಿಸ್ಟೇಕ್ ಮಾಡಿದ್ದು ಅಣ್ಣಾಚೀ ಬಾಯಿಯಿಂದ ಏನೆಲ್ಲಾ ಪರಿಮಳ ಬರುತ್ತಿದೆ ಎಂದು ಟೆಸ್ಟ್ ಮಾಡಿಸುತ್ತಿದ್ದರೆ ಗಾಂಜಾ ವಾಸನೆ ಗ್ಯಾರಂಟಿ ಬರುತ್ತಿತ್ತು ಎಂದು ಜನ ಮಾತಾಡಿ ಕೊಳ್ಳುತ್ತಿದ್ದಾರೆ. ಆದರೆ ಪಾಪ ಕಲ್ಲುಗುಂಡಿ ಪೋಲಿಸರು ಯಾವ ಪರಿಸ್ಥಿತಿಯಲ್ಲಿ ದ್ದರೋ ಆ ದೇವರಿಗೇ ಗೊತ್ತು
     ಇನ್ನು ಅಲ್ಲಿ ಕಲ್ಲುಗುಂಡಿಯಲ್ಲಿ ಗಾಂಜಾ ವಾಸನೆ ಬರುತ್ತಿದ್ದು ಈಗಾಗಲೇ ಕುತ್ತಿ ಮೀಸೆ ಹುಡುಗರು  ಗಾಳಿಯಲ್ಲಿ ತೇಲುವ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಕೆನರಾ ಬ್ಯಾಂಕ್ ಎದುರು ಇರುವ ಕ್ಯಾಂಟೀನ್ ಒಂದರಲ್ಲಿ ಹೊಗೆ ಬಿಡಲು ಹುಡುಗರು ಬಂದು ಜಮಾವಣೆ ಆಗುತ್ತಾರೆ ಎಂಬ ಮಾಹಿತಿ ಇದೆ. ಪಾಪ ಕ್ಯಾಂಟೀನ್ ರವರಿಗೆ ಇವರನ್ನು ಹೊರ ಹಾಕಲೂ ಗೊತ್ತಿಲ್ಲ, ಒಳಗೆ ಬಿಡಲೂ ಆಗಲ್ಲ. ಅವರ ವ್ಯಾಪಾರ ಅಷ್ಟೇ.

















       



 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget