ಜೈನ ಸ್ವಾಮಿ ಹತ್ಯೆ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

      


            ಬೆಳ್ತಂಗಡಿಯ ಜೈನ ಬಸದಿ ಸ್ವಚ್ಚತಾ ತಂಡ ಹಾಗೂ ಸಮಸ್ತ ಜೈನ ಬಾಂಧವರು ದಿನಾಂಕ  10.7.2023 ರಂದು ಬೆಳ್ತಂಗಡಿಯಲ್ಲಿ ಶಾಂತಿಯುತ ಪ್ರತಿ ಭಟನೆ ನಡೆಸಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಂದಿ ಪರ್ವತ ಜೈನ ಸ್ವಾಮಿ ಹತ್ಯೆ ಖಂಡಿಸಿ  ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಬೆಳ್ತಂಗಡಿ ತಹಶೀಲ್ದಾರ್ ಮುಖೇನ ಮನವಿ ಸಲ್ಲಿಸಿದರು.
   ಜೈನ ಸ್ವಾಮಿಗಳ ಹತ್ಯೆಯ ಸಮಗ್ರ ತನಿಖೆ ನಡೆಸಬೇಕು ಮತ್ತು ಜೈನ ಸಮುದಾಯದ ಉಳಿದ ಮುನಿಗಳಿಗೆ, ತ್ಯಾಗಿ ಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
         ತಹಶೀಲ್ದಾರ್ ಗೆ ಮನವಿ ನೀಡುವ ಸಂದರ್ಭದಲ್ಲಿ ಬೆಳ್ತಂಗಡಿ ಜೈನ ಸಮುದಾಯದ ಮುಂದಾಳುಗಳು ಮತ್ತು ಬಸದಿ ಸ್ವಚ್ಚತಾ ‌ತಂಡದ ವಿತೇಶ್ ಕುಮಾರ್, ನಿತೇಶ್ ಪುತ್ತಿಲ, ಉದಯ ವರ್ಮ, ಸಂತೋಷ್ ಕುಮಾರ್,‌ ವಿ.ಪಿ, ನಮನ್ ರಾಜ್, ಲಾಲ್‌ ಚಂದ್ರ ಭಂಗ, ಅಶೋಕ್ ಕುಮಾರ್ ಕುದ್ಯಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.













       



 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget