3

                                    


      ಮೊನ್ನೆ ಮಾರಾಯ್ರೆ ಒಂದು ಘಂಟೆ ರಾತ್ರಿ ವೇಳೆ ತಮ್ಮ ಸುಪ್ರೀತ್ ಕಾಲ್ ಮಾಡಿದ್ದ. "ನೋಡು ಹಿಂದೂ ಬಾಂಧವರ ಬಗ್ಗೆ ಬರಿ ಬೇಡ, ಅವರು ನಮಗೆ ಬೇಕಲ್ಲ. ಈ ಟೈಮಲ್ಲಿ ನಾವು ಅವರಿಗೆ ಏನು ಹೇಳಿದರೂ ಅರ್ಥ ಆಗಲ್ಲ. ಅವರನ್ನು ಅವ ರಷ್ಟಕ್ಕೇ ಬಿಟ್ಟು ಬಿಡು" ಅಂದಿದ್ದ. ನನಗೆ ನಿದ್ದೆ ಇಲ್ಲ.
   ಹಾಗೆಂದು ನಾನು ಹಿಂದೂ ಬಾಂಧವರ ಬಗ್ಗೆ ವಿರೋಧಿಸಿ ಬರೆದಿಲ್ಲ. ಈ ದೇಶ ಹಿಂದೂ ದೇಶ ಆಗಬೇಕೆಂದೇ ನನ್ನ ಹೆಬ್ಬ ಯಕೆ ಕೂಡ. ಅದಕ್ಕೆಂದೇ ದೇಶ ಭಕ್ತರ ಸಹವಾಸ, ಅರುಣ್ ಪುತ್ತಿಲನ ಗಡ್ಡದಲ್ಲಿ ನೇತಾಡುವುದು, ನಳಿನ್ ಕುಮಾರ್ ನ ಭಾವನೊಂದಿಗೆ  ನಿದ್ರೆ ಬಿಟ್ಟು ಪಟ್ಟಾಂಗ ಹೊಡೆಯೋದು, ಹರೀಶ್ ಕಂಜಿಪಿಲಿಗೆ ದೊಡ್ಡ ನಮಸ್ಕಾರ ಹೊಡೆಯೋದು. ಈ ದೇಶದಲ್ಲಿ ಹಿಂದೂಗಳನ್ನು ಎದುರಾಕ್ಕೊಂಡು ನಾವು ಯಾ ರೊಂದಿಗೆ ಬದುಕಲಿ. ಈ ಭರತ ಖಂಡ ಅವರೀಗೇ ಇರಲಿ. ಆದರೆ ಸುಖಾಸುಮ್ಮನೆ ಒಂದು ಶ್ರದ್ಧಾ ಕೇಂದ್ರದ ಹೆಸರು ಕೆಡಿಸುವ ಹುನ್ನಾರಕ್ಕೆ ನನ್ನ ವಿರೋಧ ಇದೆ. ಹಿಂದೂ ಮಹಾ ಸಾಗರದಲ್ಲಿ ಸುನಾಮಿ ಏಳ ಬೇಕು, ಆದರೆ ಅಕಾಲಿಕವಾಗಿ ಎದ್ದರೆ ಸಮಸ್ಯೆ ಯಾರಿಗೆ? ಹಿಂದೂ ಮಹಾ ಸಾಗರದ ಸುನಾಮಿಗೆ ನಾನೂ ತಲೆಬಾಗುತ್ತೇನೆ, ಆದರೆ ಅದು ಏಳಲು ಕಾರಣಗಳಿರ ಬೇಕು ಮತ್ತು ಅದು ಏಳುವವರ ವಿರುದ್ಧವೇ ಏಳಬೇಕು. ಇದು ಯಾವನೋ ಒಬ್ಬ ಪ್ರಶಾಂತವಾಗಿದ್ದ ಹಿಂದೂ ಜೈನ ಸರೋವರಕ್ಕೆ ಕಲ್ಲು ಬಿಸಾಡಿ ಎಬ್ಬಿಸಿದ ಅಲೆ ಯಲ್ಲಿ ನನ್ನ ಹಿಂದೂ ಬಾಂಧವರು ಬೊಳ್ಳಕ್ಕೆ ಹೋಗುತ್ತಿ ದ್ದಾರಲ್ಲ ಎಂಬ ಚಡಪಡಿಕೆ ನನ್ನದು, ಬೇಸರ ನನ್ನದು. ಅವರೊಂದಿಗೆ ನೀವೂ ಬೊಳ್ಳಕ್ಕೆ ಹೋಗಬೇಡಿ, ಅವರು ಲಾಭವಿಲ್ಲದೆ ಬೊಳ್ಳಕ್ಕೆ ಹೋಗುವ ಜಾತಿ ಅಲ್ಲ ಎಂದು ಬಡಕ್ಕೊಂಡರೂ  ನನ್ನ ಹಿಂದೂ ಬಾಂಧವರಿಗೆ ಅರ್ಥವೇ ಆಗಲ್ಲ. ದುಡ್ಡು ಬಿಸಾಡಿ, ಪ್ರಭಾವ ಬಳಸಿ ಒಂದು ಕೊಲೆ ಕೇಸಿಂದ ಸೇಫ್ ಆಗ ಬಹುದು ಎಂಬುದು ಮೆರವಣಿಗೆ ಹೊರಟಿರುವ ನಮ್ಮ ಭ್ರಮೆ ಅಷ್ಟೆ. ಹಾಗೆ ಆಗುತ್ತಿದ್ದರೆ ಕಂಚಿ ಕಾಮಕೋಟಿ ಶ್ರೀಗಳು ಜೈಲಿಗೆ ಹೋಗುತ್ತಿರಲಿಲ್ಲ. ಇನ್ನು ಮುರುಘಾ ಸ್ವಾಮಿ ಕತೆ ಗೊತ್ತಲ್ಲ? ಈ ರಾಜ್ಯದ ನಂಬರ್ ಟೂ ಲಿಂಗಾಯತ ಸ್ವಾಮಿ. ಸರ್ಕಾರವೂ ಲಿಂಗಾಯತ ಮುಖ್ಯ ಮಂತ್ರಿಗಳದ್ದೇ ಇತ್ತು. ಏನಾಯ್ತು? ಒದ್ದು ಒಳಗೆ ಹಾಕಲಾ ಯಿತು. ಇನ್ನು ಮುಖ್ಯ ಮಂತ್ರಿ ಯಡಿಯೂರಪ್ಪ, ಜಯಲಲಿತಾ, ಲಾಲೂ, ಕನಿಮೋಳಿ, ಚಿದೂ, ರಾಜೆರ್ ಹೀಗೆ ಎಲ್ಲರೂ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವಾಗಲೇ ಇಳಿದು ಜೈಲಿಗೆ ಹೋದವರು. ಜಯಲಲಿತಾನ ಹತ್ರ ದುಡ್ಡಿತ್ತಲ್ಲ. ಗೋಣಿ ಗೋಣಿ ಕೊಡಬಹುದಿತ್ತು. ನಡಿಯಿತಾ ಅವಳ ಆಟ? ಹಾಗೇ ಧರ್ಮ ಸ್ಥಳ ಕೂಡ. ಇಂಥ ಹೈಪ್ರೊಫೈಲ್ ಕೇಸ್ ಗಳಲ್ಲಿ ಕಾರ್ಯಾಂಗವನ್ನು ಪರ್ಚೇಸ್ ಮಾಡಲಾಗಲ್ಲ.


   ಇದೀಗ ಉಜಿರೆಯ ಹುಲಿ ಮನೆಗೆ ಧಾರವಾಡದ ಇನ್ನೊಂದು ಹುಲಿ ಬಂದು ಕೂತಿದೆ. ದೇಶಭಕ್ತರೂ ಯುದ್ಧ ಘೋಷಣೆ ಮಾಡಿದ್ದಾರೆ. ಎಲ್ಲರ ಬಾಯಲ್ಲೂ ಸೌಜನ್ಯ ಎಂಬ ಹೆಣ್ಣು ಮಗಳಿಗೆ ನ್ಯಾಯ ಒದಗಿಸುವ ಮಾತುಗಳು. ಯಾಕೆಂದರೆ ಲೋಕಸಭಾ ಚುನಾವಣೆ ಬಂತಲ್ಲ ಅದಕ್ಕೆ ಈಗಿಂದಲೇ ತಯಾರಿ. ಒಬ್ಬ ಹೆಣ್ಣು ಮಗಳ ಸಾವಿನ ಮೇಲೆ ಇಷ್ಟೊಂದು ರಾಜಕೀಯ ಮಾಡೋದು, ಅದನ್ನೇ  ತಮ್ಮ ರಾಜಕೀಯದ  ಮೆಟ್ಟಿಲುಗಳನ್ನಾಗಿ ಮಾಡಿ ಕೊಳ್ಳುವುದು, ಆ ಮಗಳ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಜೀವನದಲ್ಲಿ ಮೈಲೇಜ್ ಪಡಕೊಳ್ಳುವುದು ಮುಂತಾದ ಕೆಲಸ ಕಾರ್ಯಗಳು ಬಹುಷಃ ಈ ದೇಶದಲ್ಲಿ ಮಾತ್ರ ನಡೆಯುತ್ತಿದೆ. ಹಾಗೆಂದು ಹೆಣ್ಣಿನ ಕಾರಣಕ್ಕೆ ಅತೀ ಹೆಚ್ಚು ಗಲಾಟೆಗಳು ಆಗುವುದು ಬಹುಷಃ ಈ ದೇಶದಲ್ಲಿ ಮಾತ್ರ ಅಂತ ಅನ್ನಿಸ್ತಿದೆ. ಅದೆಲ್ಲ ತ್ರೇತಾಯುಗದಿಂದಲೇ ಶುರುವಾಗಿ ದ್ವಾಪರದಲ್ಲಿ ಮುಂದುವರೆದು ಈಗ ಕಲಿಯು ಗದಲ್ಲಿ ಅದರ ಪರಾಕಾಷ್ಠೆ ತಲುಪಿದೆ. ಸೀತೆಗೆ ನ್ಯಾಯ ಸಿಗದೆ ಅವಳು ಧರೆಗಿಳಿದು ಹೋದಳು, ದ್ರೌಪದಿಯ ಸಾರಿ ಎಳೆಯುವಾಗಲೇ ನಾವೆಲ್ಲ ಕೈ ಕಟ್ಟಿ ಕುಂತದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಸೀತೆಯನ್ನು ಭೂತಾಯಿಯೇ ಬಂದು ಕರಕ್ಕೊಂಡು ಹೋದರೆ, ದ್ರೌಪದಿಯನ್ನು ದೇವರೇ ಬಂದು ರಕ್ಷಿಸಿದ. ಆ ಎರಡು ಹೆಣ್ಣಿನ ಶಾಪ ಮುಂದಿನ ಕಲಿಯುಗದಲ್ಲಿಯೂ ಮುಂದುವರೆಯಿತು. ರಾಣಿ ಪದ್ಮಿನಿ  ಮುಸ್ಲಿಂ ದಂಡನಾಯಕನಿಂದ ತನ್ನ ಮಾನವನ್ನು ಕಾಪಾಡಿ ಕೊಳ್ಳಲು ಗಂಡನ ಚಿತೆಗೆ ಜೀವಂತ ಹಾರಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದಳು. ಆ ರಾಣಿ ಪದ್ಮಿನಿಯ ಶಾಪ ಉಂಟಲ್ಲ ಅದು ಈ ದೇಶಕ್ಕೆ ಇವತ್ತಿಗೂ ಬಾಧೆಯಾಗಿಯೇ ಉಳಿದಿದೆ. ಇವತ್ತಿಗೂ ಈ ದೇಶದಲ್ಲಿ ಪ್ರತಿ ದಿನ ಹುಡುಗಿ ವಿಷಯದಲ್ಲಿ ಗಲಾಟೆಗಳು ಆಗುತ್ತಲೇ ಇದೆ. ಹಿಂದೂ ಹುಡುಗಿಯರು ಅನ್ಯ ಕೋಮಿನ ಹುಡುಗರೊಂದಿಗೆ ಸಿಕ್ಕಿ ಬೀಳುತ್ತಲೇ ಇದ್ದಾರೆ ಪ್ರತೀ ದಿನ. ಆದರೂ ನಮಗೆ ಏನೂ ಮಾಡ ಕ್ಕಾಗಲ್ಲ. ರಾಣಿ ಪದ್ಮಿನಿಯ ಶಾಪಕ್ಕೆ ಹೀಗೆಲ್ಲ ಆಗುತ್ತಿ ದೆಯಾ?


     ಈಗ ಗಮ್ಮತ್ತು ಏನು ಗೊತ್ತಾ? ಈ ಹುಲಿಗಳು ಏನೆಲ್ಲಾ ಮಾಡುತ್ತವೆ ಎಂಬುದು. ಸೌಜನ್ಯ ಹೋರಾಟದಲ್ಲಿ ಒಂದು ಹುಲಿ ಇತ್ತು. ಈಗ ಎರಡಾಗಿದೆ. ಎಲ್ಲಾ ಹುಲಿಗಳ ಟಾರ್ಗೆಟ್ ಹಿಂದೂ ಧರ್ಮ ರಕ್ಷಣೆಗೆ ಹಾಲೆರೆದ ಪುಣ್ಯಕೋಟಿ. ಹುಲಿಗಳಿಗೆ ಬೇಟೆ ಆಡಲೇ ಬೇಕು. ಬೇಟೆ ಆಡಿದರೆ ಮಾತ್ರ ಹುಲಿ ಗಳ ಹೊಟ್ಟೆ ತುಂಬೋದು. ಬೇಟೆ ಬಿಟ್ಟು ಹುಲಿಗಳಿಗೆ ಬಿರಿಯಾನಿ ತಿಂದು ಅಭ್ಯಾಸ ಇಲ್ಲ. ಈ ಕಾರಣಕ್ಕಾಗಿಯೇ ದೇಶಭಕ್ತರು ಇಂತಹ ಹುಲಿಗಳ ಗಡ್ಡ ಮೀಸೆ ತೆಗೆದು, ಹಲ್ಲು ಕಿತ್ತು, ಉಗುರು ತೆಗೆದು ಪುಚ್ಚೆಯಂತೆ ಮಾಡಿದ್ದರು.ಇದೀಗ ಹುಲಿಗಳು ಸುಣ್ಣ ಬಣ್ಣ ಬಳಿದುಕ್ಕೊಂಡು ಸೌಜನ್ಯ ಹೋರಾ ಟದ ಹೆಸರಿನಲ್ಲಿ ಪುಣ್ಯಕೋಟಿಯ ಬೇಟೆಗೆ ಇಳಿದಿರುವುದು ವಿಪರ್ಯಾಸವೇ ಸರಿ.
     ಹಾಗೆಂದು ಸೌಜನ್ಯ ಕೊಲೆಗಡುಕರಿಗೆ ಮರಣ ದಂಡಣೆ ಆಗಲೇ ಬೇಕೆಂದು ನಾವು ಹೋರಾಟ ಮಾಡುತ್ತಿದ್ದೇವೆ. ಯಾಕೆಂದರೆ ನಮ್ಮಲ್ಲಿ ಇರೋದು ಅದೇ ದೊಡ್ಡ ಶಿಕ್ಷೆ. ಶಿಕ್ಷೆ ಅದಲ್ಲ ಅವರಿಗೆ. ಅವರಿಗೆ ನಾವು ಶಿಕ್ಷೆ ಕೊಡಬಾರದು. ಆ ವ್ಯವಸ್ಥೆಯನ್ನು ಅಣ್ಣಪ್ಪ ಸ್ವಾಮಿಗೆ ಬಿಡಬೇಕು. ಆ ಕೊಲೆಗ ಡುಕರನ್ನು ಹಾಗೇ ಅಣ್ಣಪ್ಪ ಸ್ವಾಮಿಗೆ ಬಿಟ್ಟು ಬಿಡಬೇಕು. ಅವರಿಗೆ ನಾಯಿಗಿಂತ ಕಡೆಯಾಗಿ ಹುಚ್ಚು ಹಿಡಿಯಬೇಕು. ಉಜಿರೆ-ಧರ್ಮಸ್ಥಳ- ಬೆಳ್ತಂಗಡಿ ಮಧ್ಯೆ ಅವರು ಭಯಂಕರ ಹುಚ್ಚಿನಲ್ಲಿ ಅಲೆದಾಡುತ್ತಾ ಇರಬೇಕು. ಆ ಹುಚ್ಚಿಗೆ ಕಿರೀಟ ಎಂಬಂತೆ ಅವನಿಗೆ ಕುಷ್ಠ ರೋಗವೂ ಆಂಟಿಕೊಳ್ಳ ಬೇಕು. ಅವನು ಅದರಿಂದ ಸಾಯ ಬಾರದು. ನರಕ ಬಂದು ಬಂದು ಪಶ್ಚಾತ್ತಾಪ ಪಡಬೇಕು. ಅವನನ್ನು ನೋಡಿದಾಗಲೆಲ್ಲ ನೀಚ ಸಮುದಾಯಕ್ಕೆ ಒಬ್ಬ ಅಮಾಯಕ ಹುಡುಗಿಯ ಮೈ ಮುಟ್ಟಿದರೆ ಏನೆಲ್ಲಾ ಆಗುತ್ತದೆ ಎಂಬ ಮನವರಿಕೆ ಆಗುವಂತಿ ರಬೇಕು. ಅಣ್ಣಪ್ಪ ಸ್ವಾಮಿ ಹಾಗೇ ಮಾಡಲಿ.
     ಹಾಗೆಂದು ಈ ಹೋರಾಟ ಈಗ ಒಂದು ಸಮೂಹ ಸನ್ನಿ ಆದದ್ದು ವಿಪರ್ಯಾಸವೇ ಸರಿ. ಸೌಜನ್ಯ ಪರ  ಅಂತ ಎಷ್ಟೇ ಹೇಳಿಕೊಂಡರೂ ಎಲ್ಲರೂ ಒಂದೊಂದು ಟಾರ್ಗೆಟ್ ಮಾಡಿ ಯೇ ಇಳಿಯುತ್ತಾರೆ. ಅದರಲ್ಲಿ ದೊಡ್ಡ ಟಾರ್ಗೆಟ್ ಮಂಜುನಾ ಥನ ಆಲಯ. ಕೂದಲು ಕಟ್ಟಿ ಹಿಮಾಲಯವನ್ನು ಎಳೆದಂತೆ. ಹೋದರೆ ಎರಡು ಕೂದಲು, ಬಂದರೆ ಇಡೀ ಹಿಮಾಲಯ. ಧರ್ಮಸ್ಥಳಕ್ಕೆ ಬನ್ನಿ, ಊಟ ಮಾಡಿ ಹೋಗುವಿರಂತೆ.








Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget