4

                                     


      ಅಧರ್ಮದ ವಿರುದ್ಧ ರೊಚ್ಚಿಗೆದ್ದಿರುವ ಹಿಂದೂ ಬಾಂಧವರ ‌ಹೋರಾಟ ಕೊನೆಗೂ ಅವರವರೊಳಗಿನ ಸ್ಪರ್ಧೆಯತ್ತ ನಿಧಾನವಾಗಿ ಹೊರಳುತ್ತಿದೆ. ಇದನ್ನೆಲ್ಲ ಮೊದಲೇ ‌ಊಹಿಸಲಾಗಿತ್ತು. ಈ ಬೆಳವಣಿಗೆಗಳು ಬಹಳ ಹಿಂದಿನಿಂ ದಲೂ ಈ ದೇಶದೊಳಗೆ ನಡೆದು ಕೊಂಡು ಬಂದಿದೆ.‌‌ ಹಾಗೇ ನಮ್ಮೊಳಗೆ ಸ್ಪರ್ಧೆ ಬಿದ್ದ ಕಾರಣದಿಂದಲೇ ಈ ದೇಶವನ್ನು ಅಫ್ಘಾನಿಸ್ತಾನದ ಮೊಗಲರು, ಇಂಗ್ಲೇಂಡ್ ನ ಇಂಗ್ಲೀಷರು ಆಳಿಹೋದರು, ದೋಚಿ ಹೋದರು. ಇದೀಗ ಧರ್ಮಸ್ಥಳದ ಅಧರ್ಮದ ವಿರುದ್ಧ ನಾವು ನೀವೆಲ್ಲ ‌ಮೆರವಣಿಗೆ ಹೊರ ಟ್ಟಿದ್ದೇವಲ್ಲ ಈ‌ ಹೋರಾಟ ಕೂಡ ರಾಯರ ಕುದುರೆಯ ಪರಿಸ್ಥಿತಿಯತ್ತ ವಾಲುತ್ತಿದೆ. ಯಾಕೆಂದರೆ ಈ‌ ಹೋರಾಟಕ್ಕೆ ಒಂದು ಗೊತ್ತಿಲ್ಲ, ಗುರಿಯಿಲ್ಲ. ಆ ಕೇಸ್ ಗಳನ್ನ ಲಗಾಡಿ ತೆಗೆ ದವರನ್ನ ಟಾರ್ಗೆಟ್ ಮಾಡಬೇಕೇ ವಿನಃ ನಾವು ನಮ್ಮ ಶ್ರದ್ಧಾ ‌ಕೇಂದ್ರವನ್ನೇ ಗುರಿಯಾಗಿಸಿಕೊಂಡು, ಅದನ್ನು ಜೆಸಿಬಿ ತಂದು ಒಡೆಯ ಬೇಕು ಅಂತ ಪ್ಲಾನ್ ಹಾಕುವುದು, ಅದನ್ನು ಒಳಗೆ ಹಾಕಲು ನೋಡುವುದು, ಅದರ ದಾಖಲೆಗಳ ಬಗ್ಗೆ ವಿಚಾರಣೆ ಮಾಡುವುದು, ಗಾಳಿಯಲ್ಲಿ ಕಂಡ ಕಂಡವರಿಗೆ ಗುಂಡು ಹೊಡೆ ಯೋದು ಇತ್ಯಾದಿ ಮಾಡುತ್ತಾ ನಮ್ಮ ಧರ್ಮ ದೇವರುಗಳ ಮೇಲೆಯೇ ಆಕ್ರಮಣ  ಮಾಡುತ್ತಿದ್ದೇವೆ. ಬೇರೆ ಜನ ಚಪ್ಪಾಳೆ ತಟ್ಟಿ ಹಿರಿ ಹಿರಿ ಹಿಗ್ಗುತ್ತಿದ್ದಾರೆ ನಮ್ಮ ನಿಮ್ಮ ಕೋಲ ನೋಡಿ.


   ಹಾಗೆಂದು ಈ ಕೇಸ್ ಹನ್ನೊಂದು ವರ್ಷಗಳ ಮೊದಲೇ ಹಳ್ಳ ಹಿಡಿದು ಹೋಗಿದೆ. ಮತ್ತೆ ಅದಕ್ಕೆ ಜೀವ ಕೊಡಲು ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ ಅದರ ಹಿಂದಿನ ಗುರಿ ಬೇರೆಯೇ. ಈ ಸಮೂಹ ಸನ್ನಿ ಹೋರಾಟದ ಅತಿರೇಕ ಎಲ್ಲಿ ತನಕ ಮುಟ್ಟಿದೆ ಅಂದರೆ ನಾವು ಧರ್ಮವನ್ನು ಅಧರ್ಮ ಅಂತಲೂ, ದೇವಸ್ಥಾನ ಒಡೆಯ ಬೇಕು ಅಂತ ಹೇಳುವ ಅಧರ್ಮೀಗಳನ್ನು  ಧರ್ಮೀಗಳೆಂದೂ ನಂಬಿದ್ದೇವೆ.
   ಧರ್ಮಸ್ಥಳದ ಬಗೆಗಿನ ನನ್ನ ಅಕ್ಷರಗಳ ಮೆರವಣಿಗೆಯನ್ನು ನೋಡಿ ಕೆಲವು ನನ್ನ ಫ್ರೆಂಡ್ಸ್ ಗಳೇ ದೇವಸ್ಥಾನಕ್ಕೂ ಕೊಲೆ ಕೇಸ್ ಗೂ ಯಾಕೆ ಲಿಂಕ್ ಮಾಡುತ್ತೀಯಾ, ಧರ್ಮಸ್ಥಳದವರು ಧರ್ಮ ರಕ್ಷಣೆಗಾಗಿ ಸುರಿದ ದುಡ್ಡಿನ ಲೆಕ್ಕಾಚಾರ ಈಗ ಯಾಕೆ ಎಂದೆಲ್ಲಾ ಕೇಳಿದ್ದರು. ಸೌಜನ್ಯ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಲಿಂಕ್ ಮೊದಲು ಕೊಟ್ಟಿದ್ದು ಯಾರು? ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ಜನ ಬೊಬ್ಬೆ ಹೊಡೆದದ್ದಕ್ಕೆ ಅಲ್ಲಿ ನಡೆದ ಧರ್ಮದ ಲೆಕ್ಕ ಕೊಟ್ಟಿದ್ದು ನಾನು ಎಂದು ಅವರಲ್ಲಿ ಹೇಳಿಲ್ಲ.ಹೇಳಿದ್ರೆ ವಿಷಯ ದೊಡ್ಡದಾಗಿ ಬಿಡುತ್ತದೆ. ಅವರಲ್ಲಿ ಮಾತೆತ್ತಿದರೆ ಪೆಟ್ಟಿಗೇ ಏಳುತ್ತಾರೆ. ನಾವು ಮಾಡುವ ಮನವರಿಕೆ ಕೇಳಲು ಅವರಿಗೆ ಮನಸಿಲ್ಲ. ಅದಕ್ಕೆ ಸಂಭಾಷಣೆ ನಡೆಸದಿದ್ದರೇ ಒಳ್ಳೆದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಟೋಟಲಿಯಾಗಿ ನಮ್ಮ ಅಜೆಂಡಾ ಒಂದೇ. ಅದು ಜೈನರ ಕೈಯಲ್ಲಿರುವ ಮಂಜುನಾಥನ ಆಲಯವನ್ನು ಗುಳುಂ ಮಾಡು ವುದು. ಆ ಮೂಲಕ ಜೈನರನ್ನು ಶಾಶ್ವತವಾಗಿ ಹಿಂದೂ ಧರ್ಮದ ಧಾರ್ಮಿಕ ವ್ಯವಸ್ಥೆಗಳಿಂದ ಹೊರಗಿಡುವುದು ಮತ್ತು ಆ ಕುರ್ಚಿಯನ್ನು ತಾವು ಅಲಂಕರಿಸುವುದು. ಇದು ಟಾರ್ಗೆಟ್. ಅಂದರೆ ಇದರ ಸೂಕ್ಷ್ಮ ಅರ್ಥ ಏನೆಂದರೆ ಈ "ಅಣ್ಣೆರ್" ಶಬ್ಧ ಉಂಟಲ್ಲ. ಈ "ಅಣ್ಣೆರ್" ಶಬ್ದದ ಮೂರು ಅಕ್ಷರಗಳಿಂದ ಕೊನೆಯ ಅಕ್ಷರ 'ರ್' ತೆಗೆದು ಬಿಟ್ಟರೆ  ಅಲ್ಲಿ ಉಳಿಯುವುದು ಎರಡೇ ಅಕ್ಷರ. "ಅಣ್ಣೆ" ಮಾತ್ರ. ಈಗ ನಾವು ಅಧರ್ಮದ ವಿರುದ್ಧ ಮೆರವಣಿಗೆ ಹೊರಟಿರುವುದು ಇದೇ ಎರಡಕ್ಷರದ "ಅಣ್ಣ" ನ ಜೊತೆ. ಯಾರ ವಿರುದ್ಧ? ಮೂರು ಅಕ್ಷರಗಳ "ಅಣ್ಣೆರ್" ವಿರುದ್ಧ. ಇರಲಿ ನಮಗೆ ಮೂರಕ್ಷರ ಹೇಳಲು ಕಷ್ಟವಾದರೆ ಎರಡೇ ಸಾಕು. ಅಣ್ಣೆರ್ ಬೇಡ ಅಣ್ಣ ಸಾಕು. ಅಣ್ಣೆರ್ ಹೇಗಿದ್ದರೂ ಬೇರೆ ಧರ್ಮದವರು, ಅಣ್ಣ ನಮ್ಮ ಧರ್ಮದವರೇ ಎಂಬ ಸಮಾಧಾನ ನಮಗೆ. ಇದರಲ್ಲಿ ನನಗೊಂದು ದೊಡ್ಡ ಹೆದರಿಕೆ ಇದೆ. ಈಗ ನಾವೆಲ್ಲ ಅಣ್ಣೆರ್ ಶಬ್ಧದಿಂದ ಒಂದು ಅಕ್ಷರ ತೆಗೆದು ಎರಡಕ್ಷರ ಅಣ್ಣೆ ಮಾತ್ರ ಉಳಿಸಿಕೊಳ್ಳಲು ತವಕದಲ್ಲಿದ್ದೇವೆ. ಆದರೆ ಈ ಎರಡಕ್ಷರದ ಅಣ್ಣೆಯಿಂದ ಇನ್ನೂ ಒಂದಕ್ಷರ "ಣ್ಣೆ" ಯಾರಾದರೂ ತೆಗೆದು ಬಿಟ್ಟರೆ ಉಳಿಯೋದು "ಅ" ಮಾತ್ರ. ಅ ಅಂದರೆ ಅಹಾಕಾರ. ಈ ಎರಡಕ್ಷರವನ್ನು ಒಂದಕ್ಷರ ಮಾಡಲು ನಾವು ನೀವು ಮೆರವಣಿಗೆ ಹೋಗ ಬೇಕೆಂದಿಲ್ಲ. ಅದರ ಕೆಲಸ ಅವರು ಮಾಡುತ್ತಾರೆ. ಹಾಗೇ ಮಾಡುವವರನ್ನು ನಾವೀಗ ಗಿಳಿ ಸಾಕಿದ ಹಾಗೇ ಸಾಕುತ್ತಿದ್ದೇವೆ. ಗಿಳಿ ಹದ್ದಾಗಿ ನಮ್ಮನ್ನು ಕುಕ್ಕುವ ಸಮಯ  ಯಾವಾಗ ಬರುತ್ತದೆ ಅಂದರೆ 2040 ಅಥವಾ 2050 ರಲ್ಲಿ. ಆ ಕಾಲದಲ್ಲಿ ನಮಗೆ ಒಂದೇ ಅಕ್ಷರ ಉಳಿದಿ ರುತ್ತದೆ. ಅ ಅಂದರೆ ಅಹಾಕಾರ.


     ಇದೀಗ ನಾಳೆ ಪುತ್ತೂರಿನಲ್ಲಿ ಪುತ್ತಿಲ  ಪರಿವಾರದ ಪ್ರತಿಭಟನೆ. ಅಧರ್ಮದ ವಿರುದ್ಧ. ಕೇವಲ ಸೌಜನ್ಯ ಎಂಬ ಹೆಣ್ಣು ಮಗಳ ಕೊಲೆಯ ನ್ಯಾಯಕ್ಕಾಗಿ ಎಂದು ಸಂಘಟಕರು ಎಷ್ಟು ಹೇಳಿಕೊಂಡರೂ ಅಲ್ಲಿ ಏಳುವುದು ಹಿಂದೂ ಸುನಾಮಿ. ಈಗ ಹಿಂದೂ ಬಿಸಿ ರಕ್ತದಲ್ಲಿ ಹರಿಯುವ ಕಣ ಕಣದಲ್ಲೂ ಮಂಜುನಾಥ ಇದ್ದಾನೆ. ಧರ್ಮಸ್ಥಳದಲ್ಲಿ ಅಧರ್ಮ ನಡೆ ಯುತ್ತಿದೆ ಎಂಬ ಮೆಂಟಾಲಿಟಿ ಇವರಲ್ಲಿ ಬೆಳೆದು ಬೆಳೆದು ಹೆಮ್ಮರವಾಗಿದೆ. ಈ ಮೆಂಟಾಲಿಟಿ ಹೀಗೆ ಹೆಮ್ಮರವಾಗಿ ಬೆಳೆಯಲು ನೀರು, ರಸಗೊಬ್ಬರ, ಸಾವಯವ ಎಲ್ಲಾ ಹಾಕಿ ಬೆಳೆಸಿದ್ದು ಜಾಲತಾಣಗಳು ಎಂಬ ಮೆಂಟಲ್ ಹಾಸ್ಪಿಟಲ್ ಗಳು. ಇಲ್ಲಿಗೆ ಅಡ್ಮಿಟ್ ಆದವನು ಕ್ಷಣ ಮಾತ್ರದಲ್ಲಿ ಚಾಣಕ್ಯನ ಮೊಮ್ಮಗ, ಬ್ರಹಸ್ಪತಿಯ ಮರಿ ಮಗನಾಗಿ ಬಿಡುತ್ತಾನೆ. ಹಾಗೇ ಈ ಹೋರಾಟಗಳು ಧರ್ಮದ ವಿರುದ್ಧ ನಡೆಯುತ್ತಿದ್ದೆಯೋ ಅಥವಾ ಅಧರ್ಮದ ವಿರುದ್ಧ ನಡೆಯುತ್ತಿದೆಯೋ ಎಂದು ಅರ್ಥವಾಗುತ್ತಿಲ್ಲ. ದ್ವಂದ್ವಕ್ಕೆ ಬಿದ್ದಿದ್ದೇನೆ. ಧರ್ಮಸ್ಥಳದಲ್ಲಿ ಅಧರ್ಮ ನಡೆಯುತ್ತಿದೆ ಎಂದು ನೀವೆಲ್ಲಿಯಾದರೂ ಅಂದು ಕೊಂಡಿದ್ದರೆ ಈ ಕೆಳಗೆ ಒಂದು ಲಿಸ್ಟ್ ಕೊಟ್ಟಿದ್ದೇನೆ. ಅದರಲ್ಲಿ ಪುತ್ತೂರು ತಾಲೂಕಿಗೆ ಧರ್ಮ ರಕ್ಷಣೆಗಾಗಿ ಧರ್ಮಸ್ಥಳದಿಂದ ಬಂದ ಹಣಕಾಸಿನ ಬಗ್ಗೆ ಡೀಟೈಲ್ಸ್ ಇದೆ. ಓದಿಕೊಳ್ಳಿ. ಅಲ್ಲಿ ಅಧರ್ಮವೇ ನಡೆದಿದ್ದರೆ ಲಿಸ್ಟ್ ನಲ್ಲಿರುವುದು ಏನು? ಓದಿಕೊಳ್ಳಿ ನಂತರ ಧರ್ಮಸ್ಥಳಕ್ಕೆ ಬನ್ನಿ. ಊಟ ಮಾಡಿ ಹೋಗುವಿರಂತೆ.











Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget