ಧರ್ಮಸ್ಥಳ ಫೈಲ್ಸ್

                                  


      ಒಬ್ಬ ಪ್ರವಾದಿಯ ಬಗ್ಗೆ ಕೇವಲ ಒಂದು ವಾಕ್ಯ ಬರೆದಿದ್ದಕ್ಕೆ ಪ್ರಜಾಪ್ರಭುತ್ವದ ಒಬ್ಬ ಹಿಂದೂ ಶಾಸಕನ ಮನೆಯನ್ನೇ ಹೊತ್ತಿಸಲಾಯಿತು. ಪೋಲಿಸ್ ಠಾಣೆಗಳನ್ನು ಪುಡಿ ಮಾಡಲಾ ಯಿತು. ಪೋಲಿಸ್ ವಾಹನಗಳನ್ನು ಜಖಂ ಮಾಡಲಾಯಿತು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಲಾಯಿತು. ಸೆಂಟ್ರ ಲ್‌ನಲ್ಲಿ, ಸ್ಟೇಟ್‌ನಲ್ಲಿ ಹಿಂದೂ ಸರಕಾರಗಳಿದ್ದರೂ ಏನೂ ಮಾಡಲಾಗಲಿಲ್ಲ. ಮನೆ ಕಳಕ್ಕೊಂಡು ಬೀದಿಗೆ ಬಿದ್ದ ಹಿಂದೂ ಶಾಸಕನಿಗೆ ಈವತ್ತಿಗೂ ನಮಗೊಂದು ನ್ಯಾಯ ಒದಗಿಸಿ ಕೊಡಲಾಗಲಿಲ್ಲ. ಒಬ್ಬ ರಜಪೂತ ರಾಣಿ ಪದ್ಮಿನಿಗೆ ಈ ಹಿಂದೂ ದೇಶದಲ್ಲಿ ನಮಗೆ ರಕ್ಷಣೆ ಕೊಡಲಾಗಲಿಲ್ಲ. ಅವಳು ತನ್ನ ಮಾನವನ್ನು ಕಾಪಾಡಿಕೊಳ್ಳಲು ಗಂಡನ ಚಿತೆಗೆ ಹಾರಿ ಪ್ರಾಣ ತ್ಯಾಗ ಮಾಡಿಕೊಂಡಳು. ಅವಳ ಶಾಪ ಈ ಹಿಂದೂ ದೇಶಕ್ಕೆ ಈವತ್ತಿಗೂ ಬಾಧಿಸುತ್ತಿದೆ. ಇಷ್ಟಾಗಿಯೂ ನಮಗೆ ನಮ್ಮ ಧರ್ಮ ವಿರೋಧಿಗಳನ್ನು ಏನೂ ಮಾಡಲಾಗುತ್ತಿಲ್ಲ. ಯಾಕೆಂ ದರೆ ಅವರ ಪ್ರವಾದಿಯ ಧರ್ಮದಲ್ಲಿ ಪ್ರವಾದಿಯೇ ಮತ್ತೆ ಮತ್ತೇ ಹುಟ್ಟಿ ಬಂದು ಧರ್ಮವನ್ನು ಜಾಗೃತಗೊಳಿಸುತ್ತಾನೆ. ಕ್ರಿಸ್ತ ಧರ್ಮದಲ್ಲಿ ಜೀಸಸ್ ಮತ್ತೆ ಮತ್ತೇ ಹುಟ್ಟಿ ಬಂದು ಧರ್ಮದ ರಕ್ಷಣೆ ಮಾಡುತ್ತಾನೆ. ಆದರೆ ಮಹಾವೀರನ ಧರ್ಮದಲ್ಲಿ ಮಹಾವೀರ ಮತ್ತೇ ಹುಟ್ಟಿ ಬರಲೇ ಇಲ್ಲ. ಆದ್ದ ರಿಂದ ಜೈನ ಧರ್ಮ ನಶಿಸುತ್ತಾ ಹೋಯ್ತು. 



    ಇನ್ನು ರಾಮನ ಧರ್ಮದಲ್ಲಿ? ರಾಮನ ಧರ್ಮದಲ್ಲಿಯೂ ರಾಮ ಮತ್ತೇ ಹುಟ್ಟಿ ಬರಲೇ ಇಲ್ಲ. ಇಲ್ಲಿ ರಾಮನ ಬದಲಾಗಿ ಹಿಂದೂ ಧರ್ಮದಲ್ಲಿ ನಾವು ನೀವೆಲ್ಲ ಹುಟ್ಟಿಕ್ಕೊಂಡಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಅಂದರೆ ಹಿಂದೂ ಧರ್ಮದ ಆರಾಧ್ಯ ದೈವ ಮಂಜುನಾಥನ ದೇಗುಲವನ್ನು, ಅಣ್ಣಪ್ಪನ ಗುಡಿಯನ್ನು ಜೆಸಿಬಿ ತಂದು ಪುಡಿ ಮಾಡಬೇಕು ಎಂದು ಹೇಳುವವರ ಹಿಂದೆ ಮೆರವಣಿಗೆ ಹೊರಟಿದ್ದೇವೆ. ರಾಮನ  ಧರ್ಮಕ್ಕೆ ಹಾಲೆರೆದ ಪುಣ್ಯಕೋಟಿಯನ್ನು ಹಿಡಿಯಲು ನಾವು ಹಿಂದೂ ಹುಲಿಯನ್ನು ಬಿಟ್ಟಿದ್ದೇವೆ. ನಮ್ಮ ವಿರೋಧಿಗಳ ಟಾರ್ಗೆಟ್ ೨೦೪೦ಕ್ಕೆ ನಮ್ಮ ತಯಾರಿ ಇಷ್ಟು ಸಾಕು. ಜೈನರ ಪರಿಸ್ಥಿತಿಯೇ ಹಿಂದೂಗಳಿಗೆ ಬರುವ ದಿನ ದೂರದಲ್ಲಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಮಿಷನ್ ೨೦೪೦ಕ್ಕೆ ಪೂರಕ ವಾಗಿದೆ. ಕೇವಲ ಒಂದು ಕೊಲೆಯ ನೆವದಲ್ಲಿ ಹಿಂದೂ ಸಂಸ್ಕೃತಿಯ ಪಿಲ್ಲರನ್ನೇ ಒಡೆದು ಹಾಕಲು ನಿತ್ಯ ಹೋರಾಡು ತ್ತಿರುವ ನಮಗೆ ಹಿಂದೂ ಧರ್ಮದಲ್ಲಿ ಬುದ್ಧಿ ಹೇಳುವವರೇ ಇಲ್ಲವಾಗಿದ್ದು ವಿಪರ್ಯಾಸವೇ ಸರಿ. ಹಿಂದೂತ್ವದ ಅಮಲು ಏರಬೇಕು ಆದರೆ ತಲೆಗೆ ಏರಬಾರದು. ತಲೆಗೆ ಏರಿದರೆ ನಮಗೇ ಅಪಾಯ. ಇದಕ್ಕೆಲ್ಲ ಮೂಲ ಕಾರಣ ಆ ಹುಡುಗಿಯ ಕೊಲೆಯೂ ಅಲ್ಲ, ಅತ್ಯಾಚಾರವೂ ಅಲ್ಲ. ಬದಲಾಗಿ ಒಂದು ದೇವಸ್ಥಾನ. ನಮ್ಮ ಕಣ್ಣು ಆ ದೇವಸ್ಥಾನದ ಮೇಲೆ, ಅದೆರ ಕಾಣಿಕೆ ಡಬ್ಬಿಯ ಮೇಲೆ. ನಮ್ಮ ಗುರಿ ಆ ಧರ್ಮಾಧಿಕಾರಿ. ಅದನ್ನೊಂದು ವಶಪಡಿಸಿಕ್ಕೊಂಡರೆ ಅಡ್ಡ ಪಂಕ್ತಿ, ನೀಟ ಪಂಕ್ತಿಯಲ್ಲಿ ಕುಂತು ಸಹಭೋಜನ, ಸಾಮೂಹಿಕ ಭೋಜನ ಮಾಡಬಹುದು ಎಂಬುದು ನಮ್ಮ ಕನಸು. ಅದು ನನಸಾಗಲ್ಲ ಬಿಡಿ. ಇತಿಹಾಸ ಮಾಡಿದವರ ಮುಂದೆ ಇತಿಹಾಸ ಓದಿದವರ ಆಟ ನಡೆಯಲ್ಲ. ಬನ್ನಿ ಧರ್ಮಸ್ಥಳಕ್ಕೆ ಊಟ ಮಾಡಿ ಹೋಗು ವಿರಂತೆ. ಆಮೇಲೆ ದೇವಸ್ಥಾನದ ಕತೆ ಹೇಳುತ್ತೇನೆ.








Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget