October 2023

                                                     



  ಅಲ್ಲಿ ಪುತ್ತೂರು ತಾಲೂಕಿನ ವೀರಮಂಗಲ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರ ಸಾಗುವಾನಿ ಮರಗಳ ಮಾರಣ ಹೋಮ ನಡೆದಿದೆ ಎಂದು ತಿಳಿದುಬಂದಿದೆ. ಲೋಕಲ್ ಅರಣ್ಯ ಇಲಾಖೆ ಖಾಕಿಗಳನ್ನು ಸೆಟ್ ಮಾಡಿಕ್ಕೊಂಡು ಅವರಿಗೆ ತಂಬಿಲ ಮಾಡಿ ಅಗೆಲು ಕೊಟ್ಟು ಸಾಗುವಾನಿ ಮರಗಳಿಗೆ ಟಿಕೆಟ್ ಕೊಡಲಾಗಿತ್ತು. 
   ಆದರೆ ಯಾರೋ ಪುಣ್ಯಾತ್ಮರು ಅರಣ್ಯ ಸಂಚಾರಿ ದಳಕ್ಕೆ ಕೂಕುಲು ಹಾಕಿದ ಕಾರಣ ಅವರೂ ಈವತ್ತು ನಟ್ಟ ಮಧ್ಯಾಹ್ನ ವೀರಮಂಗಲಕ್ಕೆ ಬಂದಿದ್ದು ಅವರಿಗೂ ಬಡಿಸಿ ಅವರನ್ನೂ ಚಪ್ಪೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಸಾಗುವಾನಿ ಲೋಡ್ ಅಂದಾಜು ಯಾವಾಗ ಹೋಗಬಹುದು ಎಂಬ ಅಂದಾಜು ಸಾರ್ವಜನಿಕರಿಗೆ ಸಿಕ್ಕಿದ್ದು ಒಂದು ಕಾಲ್ DFOಗೆ ಕೂಡ ಹೋಗಿದೆ ಎಂದು ತಿಳಿದುಬಂದಿದೆ. ಅವರು ಬರುವ ಮೊದಲು ಸ್ಪಾಟ್ ಕ್ಲೀನ್ ಮಾಡಿ ಕುತ್ತಿಗೆ ಸೂ ಹಾಕಿ ಬೊನ್ಯ ಮಾಡಿದ್ರೆ ಮರದ ಕತೆ ಮುಗಿಯುತ್ತದೆ.
    







                                                    


  ಸುಳ್ಯ ತಾಲೂಕಿನ ಈ ಗ್ರಾಮದ ಹೆಸರಿನಲ್ಲಿ ದೇವರಿದ್ದರೂ ಈ ಗ್ರಾಮದ ಅಮಾಯಕರನ್ನು ಕಂಕಣೆ ಮಾಡಿ ತಾವು ದುಡ್ಡು ಮಾಡಿಕೊಳ್ಳುವ ಬಿಸಿನೆಸ್ಗೆ ಅರಣ್ಯ ಇಲಾಖೆ ಇಳಿದದ್ದು ಮಾತ್ರ ವಿಪರ್ಯಾಸವೇ ಸರಿ. ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳು ಲಾರಿ ಹತ್ತಿ ಹೋದದ್ದು ಯಾರಿಗೂ ಗೊತ್ತಾಗದ್ದು ದೊಡ್ಡ ಸೋಜಿಗವಾಗಿದೆ. ದೇವಚಳ್ಳ ಗ್ರಾಮ ಯಾವ ರೇಂಜ್ ಅಂಡರ್ ಬರ್ತದೆ? ಸುಳ್ಯ ರೇಂಜ್ OR ಸುಬ್ರಹ್ಮಣ್ಯ ರೇಂಜ್? ಕೇಳಿದರೆ ಅರಣ್ಯ ಇಲಾಖೆಗೇ ಗೊತ್ತಿಲ್ಲ.
   ಇದು ದೇವಾ. ಇಲ್ಲಿನ ಅರಿಯಣ್ಣ, ಬಾಚಣ್ಣ,ಕಿಷ್ಣಣ್ಣ, ಚಂದಣ್ಣ ಮುಂತಾದದವರ ಕುಮ್ಕಿಯಿಂದ ಮತ್ತು ಕಂಡಕಜೆ, ಕುಂಬಾರ ಕೇರಿ,ಕುಚ್ಯಾಲದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಸಮ್ಮಿ ಯಾನೆ  ಸಮೀರ್ ಎಂಬುವನು ಲೋಡ್ ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ರೇಂಜ್ ನಲ್ಲಿ ಕೇಳಿದರೆ ದೇವಚಳ್ಳ, ದೇವಾ ನಮಗೆ ಬರಲ್ಲ ಅಂತ ಹೇಳುತ್ತಾರೆ. ಸುಬ್ರಹ್ಮಣ್ಯ ರೇಂಜ್ ನವರಲ್ಲಿ  ದೇವಚಳ್ಳದ ಬಗ್ಗೆ ಕೇಳಿದರೆ ಅವರ ಪಿತ್ತ್ ನೆತ್ತಿಗೇರಿ ಅದರ ಬಗ್ಗೆ ನಮ್ಮಲ್ಲಿ ಕೇಳಬೇಡಿ ಎಂದು ಹೇಳುತ್ತಾರೆ. ಹಾಗಾದರೆ ದೇವಚಳ್ಳದ ಮರಗಳ್ಳರನ್ನು ಹಿಡಿಯೋದು ಯಾರು? ಪೋಲಿಸರಲ್ಲಿ ಹೇಳಲಾ?
   ಹಾಗೆಂದು ನಮ್ಮ ಮಾಹಿತಿದಾರರ ಪ್ರಕಾರ ದೇವಾ ಸುಬ್ರಹ್ಮಣ್ಯ ರೇಂಜ್ ಅಡಿಯಲ್ಲಿ ಬರುತ್ತವೆ ಎಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಕಡೆಯಿಂದ ದೇವಚಳ್ಳ ಗ್ರಾಮಕ್ಕೆ ಅಪಗಪಗ ಒಂದು ಬಸವ ಬಂದು ಹೋಗಿ ಮಾಡುತ್ತಿರುವ ವಿಷಯ ಈಗ ಲೀಕ್ ಆಗಿದ್ದು ಬಸವನಿಗೆ ಮರ ತಿನ್ನುವ ಬ್ಯಾಡ್ ಹ್ಯಾಬಿಟ್ ಇದೆ ಎಂದು ತಿಳಿದುಬಂದಿದೆ. ಮರ ತಿಂದು ತಿಂದು ತಿಂದು ಬಸವ ಹೀಟ್ ಗೆ ಬರುವ ಮೊದಲು ಸಂಬಂಧ ಪಟ್ಟವರು ಬಸವನಿಗೆ ಒಂದು ಬಕ್ಕಿನ ಬಲ್ಲಿನ ಮೂಗು ದಾರವಾದರೂ ಹಾಕುವುದು ಒಳ್ಳೆಯದು.
    







                                                   


   ಅಲ್ಲಿ ಗುತ್ತಿಗಾರು ಕಾಲೇಜು ಓಣಿಯಲ್ಲಿ ಹಗಲಿಡೀ ಕಾಲೇಜು ಮಕ್ಕಳ ಕಲರವ ಕೇಳಿ ಬಂದರೆ ಅತ್ತ ಸೂರ್ಯ ಅಡ್ಡ ಹೋಗುತ್ತಿದ್ದಂತೆ ಓಣಿ ರಂಗೇರಿ ಬಿಡುತ್ತದೆ ಎಂದು ನಮ್ಮ ಗುತ್ತಿಗಾರು ಟವರ್ ವರದಿ ಓದಿದೆ. ಈ ಓಣಿ ಕಾಲೇಜು ಮಕ್ಕಳು ಮನೆಗೆ  ಹೋಗಿ ಕಾಲೇಜು ಅಟೆಂಡರ್ ಕಾಲೇಜಿಗೆ ಕೊನೆಯ ಬೀಗ ಹಾಕಿದ ಮೇಲೆ ಅನಾಥವಾಗಿ ಬಿಡುತ್ತದೆ. ಹಾಗೇ ಕತ್ತಲು ಕವಿಯುತ್ತಾ ಓಣಿ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಇಲ್ಲಿ ಮೋಹಿನಿ ಬಾಧೆ ಶುರುವಾಗುತ್ತದೆ ಎಂದು ಬಚ್ಚಿರೆ ಬಲಿಮೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಂಜೆ ಏಳೂವರೆಯಿಂದ ನೈಟ್ ಹತ್ತರ ತನಕ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಕೆಲವು ಲೋಕಲ್ ಮೋಹಿನಿಗಳು ಇಲ್ಲಿ ರಾತ್ರಿ ವಿದ್ಯಾಭ್ಯಾಸ ಮಾಡುತ್ತಿದ್ದು ಏಳರಿಂದ ಎಂಟು, ಎಂಟರಿಂದ ಒಂಭತ್ತು, ಕೊನೆಗೆ ಹತ್ತು ತನಕ ಜಲಜನಕದ ಬಗ್ಗೆ ಥಿಯರಿ ಸ್ಟಡಿ ನಂತರ ಭಟ್ಟಿ ಇಳಿಸುವ ಪುಣ್ಯ ಕಾರ್ಯಗಳು ನಡೆಯುತ್ತವೆ ಎಂದು ತಿಳಿದುಬಂದಿದೆ. ಇದರ ಪರಿಣಾಮ ಮರುದಿನ ಬೆಳಿಗ್ಗೆ ಓಣಿಯಲ್ಲಿ, ಓಣಿ ಆಸುಪಾಸಿನಲ್ಲಿ ಬೀಡಿ ಸಿಗರೇಟು ಕುತ್ತಿಗಳು, ಪಿಂಟಿದ ಪಿಂಟ್ ಬಾಟ್ಲಿಗಳು, ಕ್ವಾಟ್ರು ಬಾಟ್ಲಿಗಳು, ಪುಗ್ಗೆಯಂತಹ ವಸ್ತುಗಳು, ಮಾರುತಿ, ಪಾನ್ ಮಸಾಲ ಪ್ಯಾಕೆಟ್ ಗಳು ಮತ್ತು ಅರ್ಜೆಂಟ್ ಅರ್ಜೆಂಟಲ್ಲಿ ಬಿಟ್ಟು ಹೋದ ಡೆಡ್ಲಿ ಚೆಡ್ಡಿಗಳು ಅಲ್ಲಲ್ಲಿ ಬಿದ್ದಿರುತ್ತದೆ. ಈ ವಸ್ತುಗಳು ಹಿಂದಿನ ನೈಟಿನಲ್ಲಿ ನೈಂಟಿ ಹಾಕಿ ನೈಟಿ ಮೇಲೆ ನಡೆಸಿದ ದಾಳಿಗೆ ಸಾಕ್ಷಿಯಾಗಿದೆ. ಒಬ್ಬರದ್ದು ಫಸ್ಟ್ ಶೋ ಮುಗಿದ ಮೇಲೆ ಇನ್ನೊಬ್ಬರದ್ದು ಸೆಕೆಂಡ್ ಶೋ.
   ಹಾಗೆಂದು ಈ ಓಣಿಗೆ ನೈಟ್ ಕುಲೆಗಳು ಬರಲೂ ಹೆದರಿಕೊಳ್ಳುತ್ತವೆ ಮತ್ತು ನಾಚಿಕೊಳ್ಳುತ್ತದೆ. ಯಾಕೆಂದರೆ ಅವು ಅಪ್ಪಿ ತಪ್ಪಿ ಬಂದರೂ ವಯಸ್ಕರ ಸಿನಿಮಾಗಳ ಅಬ್ಬರ ಈ ಓಣಿಯಲ್ಲಿ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ ನಾಚಿಕೆ ಪಟ್ಟುಕೊಂಡು ಬಂದ ದಾರಿಯಲ್ಲೇ ಛೀ.. ಥೂ... ಎಬೂ... ಎಂದು ಹೋಗ ಬೇಕಾಗುತ್ತದೆ. ಅಷ್ಟು ನಿರ್ಜನ ‌ಈ ಓಣಿ. ಹಾಗೆಂದು ಈ ಓಣಿಗೆ ಪೋಲಿಸರೂ ಬರಲ್ಲ. ಯಾಕೆಂದರೆ ಅಗತ್ಯ ಇಲ್ಲ ಎಂದು. ಆದರೆ ಈ ಓಣಿ ಗುತ್ತಿಗಾರಿನಿಂದ ಬಳ್ಪಕ್ಕೆ ಓಡಲು ಕಳ್ಳ ದಾರಿಯಾಗಿದೆ. ಕಳ್ಳರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಓಣಿ ಹೇಳಿ ಮಾಡಿಸಿ ದಂತಿದೆ. ಆದ್ದರಿಂದ ಪೋಲಿಸರು ನೈಟ್ರೌಂಡ್ಸ್ ಗೆ ಬಂದಾಗ ಒಮ್ಮೆ ಈ ಓಣಿಗೆ ಲೈಟ್ ಹಾಕಿದರೂ ಸಾಕು ಹುಟ್ಟುಡುಗೆಯಲ್ಲಿ  ಮಹಾನುಭಾವರು ಮತ್ತು ಭಾವಿಯರು ಓಡುವ ಸೀನ್ ಕಣ್ತುಂಬಿಸಿ ಕೊಳ್ಳ ಬಹುದು. ಪೋಲಿಸರು ಈ ಓಣಿಗೆ ಮೋಹೀನಿ ಕಾಟದಿಂದ ಮುಕ್ತಿ ಕೊಡಿಸ ಬೇಕಾಗಿದೆ.

    







                                                  


     ಅವಿಭಜಿತ ದಕ್ಷಿಣಕನ್ನಡದ ಗೌಡ್ರುಗಳ ರಾಜಧಾನಿ ಸುಳ್ಯದಲ್ಲಿ ಸದ್ದಿಲ್ಲದೆ ಅನಧಿಕೃತವಾಗಿ ಸರ್ಕಾರಿ ಬೋರ್ಡ್ ನ ಅಡಿಯಲ್ಲಿ ಶಿಶು ಪಾಲನಾ ಕೇಂದ್ರವೊಂದು ಕಾರ್ಯಾ ಚರಿಸುತ್ತಿದೆ.
   ಕೆಲವು ಸಮಯಗಳ ಹಿಂದೆ ಸರ್ಕಾರ ತಾನೇ ಪ್ರಾರಂಭಿಸಿದ್ದ ಕೆಲವು ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಿತ್ತು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರವೇ ನಡೆಸುತ್ತಿದ್ದ ಶಿಶು ಪಾಲನಾ ಕೇಂದ್ರಗಳನ್ನು ಅಂಡಿಗುಂಡಿ ಕಾರಣ  ಕೊಟ್ಟು ಸರ್ಕಾರವೇ ಬಂದ್ ಮಾಡಿತ್ತು. ಈ ಬಗ್ಗೆ ಜಿಲ್ಲಾ ಕೋರ್ಡಿನೇಟರ್ ಎಲ್ಲಾ ಶಿಶು ಪಾಲನಾ ಕೇಂದ್ರಕ್ಕೆ ಬಂದ್ ಮಾಡುವಂತೆ ತಿಳಿಸಿದ್ದರು. ಅವರ ಸೂಚನೆಯಂತೆ ಎಲ್ಲಾ ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಲಾಗಿತ್ತು ಸಹ. ಆದರೆ ಅಲ್ಲಿ ಸುಳ್ಯದ ಗಾಂಧಿ ನಗರ ನಾವೂರು ಎಂಬಲ್ಲಿನ ಶಿಶು ಪಾಲನಾ ಕೇಂದ್ರ ಮಾತ್ರ ಇವತ್ತಿಗೂ ಸರ್ಕಾರದ ಬೋರ್ಡ್ ಅಡಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಾ ಚರಿಸುತ್ತಿದೆ. ಅಲ್ಲಿ ನಾವೂರಿನಲ್ಲಿ ಶಿಶು ಪಾಲನಾ ಕೇಂದ್ರವನ್ನು ನಡೆಸುತ್ತಿರುವುದು ಅಕ್ರಮವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ‌ಕೈಗೊಳ್ಳಲೇ ಬೇಕಾಗಿದೆ. ಅದೂ ಅಲ್ಲದೆ ಸದ್ರಿ ಶಿಶು ಪಾಲನಾ ಕೇಂದ್ರದಲ್ಲಿ ಪ್ರತಿ ಮಕ್ಕಳಿಗೆ ಮಂಡೆಗೆ  ಆರು ನೂರು ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
   ಹಾಗೆಂದು ಶಿಶು ಪಾಲನಾ ಕೇಂದ್ರಗಳನ್ನು ಸರ್ಕಾರದ ಬೋರ್ಡ್ ಅಡಿಯಲ್ಲಿ ನಡೆಸುತ್ತಿದ್ದರೆ ಅಲ್ಲಿ ದುಡ್ಡು ವಸೂಲಿಗೆ ಆಸ್ಪದವಿಲ್ಲ. ಹಾಗೇನಾದರೂ ವಸೂಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಕೂಡ. ಆದರೂ ನಾವೂರು ಶಿಶು ಪಾಲನಾ ಕೇಂದ್ರದಲ್ಲಿ ಆರು ನೂರು ರೂಪಾಯಿ ಪ್ರತಿ ಮಂಡೆಗೆ ವಸೂಲಿ ಮಾಡಲಾಗುತ್ತಿದೆ. ಟೀಚರನ್ನು ಕೇಳುವವರೇ ಇಲ್ಲ. ಅದೆಂತಾ ಬೇಬಿ  ಸಿಟ್ಟಿಂಗ?

    







                                                


   ಹಾಗೆಂದು ಕಾಣಿಯೂರು ಎಂಬ ಮಠದ ಊರಿನಲ್ಲಿ ಲೋಕಲ್ ಕಳ್ಳರು, ಕಾಕರು ಕಡಿಮೆ. ಇಲ್ಲಿಗೆ ಹೊರಗಿನಿಂದ ಕಳ್ಳರು ಬಿನ್ನೆರ್ ಕಟ್ಟಿಕ್ಕೊಂಡು ಬರಬೇಕಷ್ಟೆ. ಹೊರಗಿನಿಂದ ಬಂದ ಬಿನ್ನೆರ್ ಕಳ್ಳರು ಇಲ್ಲಿ ಫೋರ್, ಸಿಕ್ಸ್ ಬಡಿದ ಉದಾಹರಣೆಗಳಿವೆ. ಆದರೆ ಇದೀಗ  ಒಂದು ಕೇಸ್ ಕಾಣಿ ಯೂರಿನಲ್ಲಿ ನಡೆದಿದ್ದು ಈ ಕೇಸಿನಲ್ಲಿ ಲೋಕಲ್ ಕಳ್ಳರ ಕೈಚಳಕ ಇದೆ ಎಂದು ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬೊಬ್ಬೆ ಹಾಕಲಾಗಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಯಾರಿಗೂ ಕೆಬಿ ಕೇನುಜಿ.
   ಹಾಗೆಂದು ಕಾಣಿಯೂರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಸದ್ರಿ ಆರೋಗ್ಯ ಕೇಂದ್ರದ ಅಂದಾಜು ಎರಡು ಸಾವಿರ ಹೆಂಚುಗಳನ್ನು ಹೇಳದೆ ಕೇಳದೆ ಯಾರೋ ಪುಣ್ಯಾತ್ಮರು ತಮ್ಮ ಮನೆಗೆ ಸಾಗಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೊನ್ನೆ ನಡೆದ ಗ್ರಾಮ ಸಭೆಯಲ್ಲಿ ಲೋಕಲ್ ವಾರ್ಡ್ ಸದಸ್ಯರೊಬ್ಬರು ಬೊಬ್ಬೆ ಹೊಡೆದಿದ್ದರು. ಆದರೆ ಅದೇ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು. ಹಾಗಾದರೆ ಹೆಂಚು ಕದ್ದಿದ್ದು ಯಾರು? ಯಾರು?
   ಹಾಗೆಂದು ಆರೋಗ್ಯ ಕೇಂದ್ರದ ಹೆಂಚು ತೆಗೆದದ್ದು ಯಾರು ಮ್ಯಾಡಂ, ನಿಮಗೇನಾದರೂ ಗೊತ್ತಿದೆಯಾ ಎಂದು ಡಾಕ್ಟರ ರಲ್ಲಿ ಕೇಳಿದರೆ ಅವರಿಗೆ ವಿಷಯವೇ ಗೊತ್ತಿಲ್ಲ. ಆರೋಗ್ಯ ಕೇಂದ್ರದ ಜಾಗದಲ್ಲಿ ಅದೇನೋ ಕಾಮಗಾರಿ ನಡೆಯುತ್ತಿದ್ದಾಗ ಆ ಹೆಂಚುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತು ಮತ್ತು ಈ ಬಗ್ಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರಲ್ಲಿ ಮಾಹಿತಿ ಕೇಳಿ ಎಂದು ಡಾಕ್ಟರ್ ತಮ್ಮ ಭಾರ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
   ಹಾಗಾದರೆ ಆರೋಗ್ಯ ಕೇಂದ್ರದ ಹೆಂಚು ಎಲ್ಲಿಗೆ ಹೋಯ್ತು? ಕಾಣಿಯೂರಿನ ಬಲಿಮ್ಮೆಯವರ ಪ್ರಕಾರ ಹೆಂಚು ಪಂಜದ ಪಿಕಪ್ ಒಂದರಲ್ಲಿ ಸಾಗಾಟ ಮಾಡಲಾಗಿದ್ದು ಮೂರು ಫೀಟಿನ ಜನವೊಂದರ ನೆರಳು ಈ ಪ್ರಕರಣದಲ್ಲಿ ಮಸ್ಕ್ ಮಸ್ಕಾಗಿ ಬಚ್ಚಿರೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಯಾರೂ ಬೆಳ್ಳಾರೆ ಕಡೆ ಹೋಗದಿರುವ ಕಾರಣ ಪೋಲಿಸರೂ ಈ ಕಡೆ ಬರದಿರುವ ಕಾರಣ ಓಡು ಕಲ್ಲರು ಸದ್ಯಕ್ಕೆ ಸೇಫ್ ಆಗಿದ್ದಾರೆಂದು ತಿಳಿದುಬಂದಿದೆ.



   

    







MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget