ಸುಳ್ಯ: ಚೊಕ್ಕಾಡಿ- ಕುಕ್ಕುಜಡ್ಕ ಭಾಗದ‌ ಪ್ರಭಾವೀ ದೇಶಭಕ್ತ ಕಾಂಗ್ರೆಸ್ ‌ಗೆ?

                                                          




    ವೇದಿಕೆ ರೆಡಿಯಾಗುತ್ತಿದೆ. ಮೈಕ ಸೆಟ್, ಬ್ಯಾಂಡ್ ಸೆಟ್, ಶಾಮೀಯಾನದವರಿಗೆ ಹೇಳಲು ಬಚ್ಚಿರೆ ಕೊಯ್ಯಲಾಗಿದೆ. ಇನ್ನೇನು ಚಡ್ಡಿ ಕಳಚಿ ಗರಿ ಗರಿ ಖಾದಿ ಧರಿಸಲು ದಿನ ಫಿಕ್ಸ್ ಆದರೆ ಮುಗೀತು. ಚೊಕ್ಕಾಡಿ-ಕುಕ್ಕುಜಡ್ಕ ಭಾಗದ ಪ್ರಭಾವೀ ದೇಶಭಕ್ತನೊಬ್ಬ ಕಾಂಗ್ರೆಸ್ ‌ಗೆ ಸೇರ್ಪಡೆ ಆಗುವ ಕರಾಳ ದಿನ ಹತ್ತಿರದಲ್ಲೇ ಇದೆ.
   ಹೌದು ಸ್ವಾಮಿ ! ಸುಳ್ಯ ತಾಲೂಕಿನ ಚೊಕ್ಕಾಡಿ- ಕುಕ್ಕುಜಡ್ಕ‌ ಏರಿಯಾದ ಪ್ರಭಾವೀ ದೇಶಭಕ್ತನೊಬ್ಬ ಬಿಜೆಪಿಗೆ ವಂದನಾರ್ಪಣೆ ಹೇಳಿ ಕಾಂಗ್ರೆಸ್ ನಲ್ಲಿ ಸ್ವಾಗತ ಭಾಷಣಕ್ಕೆ ರೆಡಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆ ಮೂಲಕ ಇಲ್ಲಿ ದೇಶ ಭಕ್ತರ ಟೀಮು ವಿರಾಟ್ ಕೊಹ್ಲಿ ವಿಕೆಟನ್ನೇ ಕಳೆದು ಕೊಳ್ಳಲಿದೆ.
    ಹಾಗೆಂದು ಚೊಕ್ಕಾಡಿ ಭಾಗದಲ್ಲಿ ಈ ದೇಶ ಭಕ್ತ ಪವರ್ ಫುಲ್ ಲೀಡರ್. ಸುಳ್ಯ ದೇಶಭಕ್ತರ ಗ್ಯಾಂಗಿನಲ್ಲೂ ಈ ನಾಯಕ ಟಾಪ್ ಲೆವೆಲ್ ಲೀಡರು. ದೇಶಭಕ್ತರ ಪಕ್ಷದಿಂದ ಈ ನಾಯಕ ಜನಪ್ರತಿನಿಧಿಯೂ ಆಗಿದ್ದು ತಾಲೂಕು ಲೆವೆಲ್ ನ ಎಲ್ಲಾ ಸೀಟುಗಳನ್ನು  ಅಲಂಕರಿಸಿಯಾಗಿದೆ. ಇದೀಗ ಈ ನಾಯಕ ಅದ್ಯಾಕೋ ದೇಶ ಭಕ್ತರ ಮೇಲೆ ಕೋಪಗೊಂಡಿದ್ದು ಪಕ್ಷಕ್ಕೆ ಡೈವೊರ್ಸ್ ಕೊಡಲು ನಿರ್ಧರಿಸಿದ್ದಾರೆ ಎಂದು ನಮ್ಮ ಚೊಕ್ಕಾಡಿ ಟವರ್ ಡುಂಯಿ ಡುಂಯಿ ಮಾಡಿದೆ. ಆಯಿತು ಈ ನಾಯಕರು ಹೋದರೆ ಹೋಗಲಿ ಎಂದು ದೇಶಭಕ್ತರು ಸುಮ್ಮನಿರಬಹುದಿತ್ತು. ಆದರೆ ಸದ್ರಿಯವರು "ನೀ ಬಂದಿಯನ.... ನೀ ಬಂದಿಯನ" ಎಂದು ಸುಳ್ಯ ಬಿಜೆಪಿಯ ಅಷ್ಟೂ ಆತ್ರಪ್ತ ಆತ್ಮಗಳಿಗೆ ಕಾಲ್ ಮಾಡಿ ಅವರನ್ನೂ ಕಾಂಗ್ರೆಸ್ ಸೇರಿಕೊಳ್ಳಲು ಒತ್ತಾಯಿಸುತ್ತಿದ್ದಾರೆ.   ಮಂಕಿ ತಾನೂ ಕೆಟ್ಟಿತ್ತಲ್ಲದೆ ಫಾರೆಸ್ಟನ್ನೆಲ್ಲ ಕೆಡಿಸಿತು ಎಂಬ ಪರಿಸ್ಥಿತಿ ಸದ್ಯಕ್ಕೆ ದೇಶಭಕ್ತರ ಗ್ಯಾಂಗಿನಲ್ಲಿದೆ. ಕೊಹ್ಲಿ ಹೋದರೆ ಹೋಗಲಿ ರಾಹುಲ್, ಜಡ್ಡೂ, ಸೂರ್ಯ ಇದ್ದಾರೆ. ಇಷ್ಟಕ್ಕೂ ಈ ನಾಯಕರಿಗೆ ದೇಶಭಕ್ತರ ಗ್ಯಾಂಗಿನಲ್ಲಿ ಎಲ್ಲಿ ವಯರ್ ಶಾರ್ಟ್  ಆಗಿದೆ ಎಂದೇ ಅರ್ಥವಾಗುತ್ತಿಲ್ಲ.


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget