December 2023

                                      


           ಇದು ಕಡಬ ಸಮೀಪದ ನೆಟ್ಟಣದ ಕತೆ. ಸದ್ರಿ ಊರಿನಲ್ಲಿ ಊರವರ ಪುಣ್ಯಕ್ಕೆ ಒಬ್ಬಡಾಕ್ಟರ್ ಹುಟ್ಟಿಕೊಂಡಿದ್ದಾನೆ. ಹೆಸರು ಡಾ! ಬೆನ್ನಿSSLC (fail) at Nettana university. ನೆಟ್ಟಣದಲ್ಲಿ ಇದೀಗ ಬೆನ್ನಿ ಹವಾ ಜೋರಾಗಿದೆ.  ಬೆನ್ನುನೋವು, ಸೊಂಟ ನೋವು, ಕೀಲು ನೋವು, ಕಾರು ಅಡಿ ಮಗ್ರಿದ್ದು, ಪುಳೆವು, ಉಳುಕು,ಕೊಳ್ಪು ಮುಂತಾದ ಜಂಡೂಬಾಂಬ್, ಟೈಗರ್ ಬಾಂಬ್ ಸೀಕ್ ಗಳ ಆರೋಪಿಗಳನ್ನು ಇವನು ತಿಕ್ಕಿ ತಿಕ್ಕಿಯೇ ಒಂಜೆ ಲೆಕ ಮಾಡಿ ಸಮಾಧಾನ ಮಾಡುತ್ತಿದ್ದ ಕಾರಣ ಜನ ಬೆನ್ನಿಯ ಐರನ್ ಹ್ಯಾಂಡಿನಲ್ಲಿ ತಿಕ್ಕಿ ತಿಕ್ಕಿ ತಿಕ್ಕಿಸಿ ಕೊಳ್ಳಲು ಕ್ಯೂ ನಿಂತು ಬಿಟ್ಟರು. ಡಾಕ್ಟರ್ ಗೆ ಗಮ್ಮತ್ತಾಯಿತು.
     ಹಾಗೆ ತನ್ನ ಮಸಾಜ್ ನೆಟ್ಟಣದಲ್ಲಿ ಕ್ಲಿಕ್ ಆಗುತ್ತಿದ್ದಂತೆ ಬೆನ್ನಿ ಡಾಕ್ಟರ್ ಈಗ ಸಾಧಾರಣ ಎಲ್ಲಾ ಕೆಎಂಸಿ ‌ಸೀಕುಗಳಿಗೂ ಮೆಡಿಕಲ್ ಗೆ ಚೀಟಿ ಕೊಡುವಷ್ಟು ಬೆಳೆದಿದ್ದಾನೆ ಎಂದು ತಿಳಿದುಬಂದಿದೆ. ತಿಕ್ಕಿಸಲು ಬಂದವರಿಗೆ ಬೇರೆನಾದರೂ ಮಂಡೆ ಸೀಕುಗಳು ಉಂಟಾ ಎಂದು ತಿಳಿದು  ಕೊಳ್ಳುವ ಬೆನ್ನಿ ಡಾಕ್ಟರ್ ಹಾಗೇನಾದರೂ ಇದ್ದರೆ ಅಂಥವರಿಗೆ  ಮೆಡಿಕಲ್ ಗೆ ಚೀಟಿ ಕೊಡುತ್ತಾನೆ. ಮೆಡಿಕಲ್ ನವರು ಬೆನ್ನಿ ಚೀಟಿ ಪ್ರಕಾರ ಗುಳಿಗೆ ಕೊಡುತ್ತಾರೆ. ಜನ ಗುಳಿಗೆ ನುಂಗಿ ಹುಷಾರಾಗುತ್ತಾರೆ. ಆದರೆ ಕಿಡ್ನಿ? ಈಗಾಗಲೇ ನೆಟ್ಟಣದಲ್ಲಿ ಒಂದು ಹದಿನೈದು ಪರ್ಸೆಂಟ್ ಜನ ಬೆನ್ನಿ ಕೊಟ್ಟ ಗುಳಿಗೆ  ನುಂಗಿ ಕಿಡ್ನಿ ಡ್ಯಾಮೇಜ್ ಮಾಡಿಕೊಂಡಿದ್ದಾರೆ, ತಿಕ್ಕಿಸಿ ತಿಕ್ಕಿಸಿ ಸೊಂಟ ಸೋಬಾನೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪಕ್ಷಪಾತದ ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹುಷಾರಾಗಿ ಮನೆಗೆ ಬಂದಿದ್ದ.    ಎಕ್ಸ್ ಟ್ರಾ ಎನರ್ಜಿ ಇರಲಿ ಎಂದು ಬೆನ್ನಿ ಕೈಯಲ್ಲಿ ಬೆನ್ನು, ಸೊಂಟ ಗಿಂಟ ‌ಎಂದೆಲ್ಲ ಸಿಕ್ಕ ಸಿಕ್ಕ ಕಡೆಯೆಲ್ಲಾ ತಿಕ್ಕಿಸಿಕೊಂಡಿದ್ದ ಮತ್ತು ಬೆನ್ನಿ ಕೊಟ್ಟ ಗುಳಿಗೆ ಗುಳುಂ ಮಾಡಿದ್ದ. ಅಷ್ಟೇ. ಎರಡೇ ದಿನದಲ್ಲಿ ಪಡ್ಚ!
     ಹಾಗೆಂದು ಈ ಬೆನ್ನಿ ಡಾಕ್ಟರ್ ಕೂಡ ಒಬ್ಬ ಪೇಶೇಂಟೇ. ಹಲವು ವರ್ಷಗಳ ಹಿಂದೆ ಇದೇ ಬೆನ್ನಿ ವಿಚಿತ್ರ  ಚರ್ಮ ರೋಗದಿಂದ ಬಳಲುತ್ತಿದ್ದ. ಆಗ ಅದ್ಯಾರೋ ಪುಣ್ಯಾತ್ಮರು ಕೊಟ್ಟಿದ್ದ ಎಣ್ಣೆಯನ್ನು ತಿಕ್ಕಿ ತಿಕ್ಕಿ ಇವನು ಬಚಾವಾಗಿದ್ದ. ಈಗ ಅದೇ ಎಣ್ಣೆಯಲ್ಲಿ ಇಡೀ ನೆಟ್ಟಣಕ್ಕೆ ಮಸಾಜ್ ಮಾಡುತ್ತಿದ್ದಾನೆ. ಹಾಗೆಂದು ಇವನ ತಿಕ್ಕಾಟ ಏನೇ ಇರಲಿ ಆದರೆ ಮೆಡಿಕಲ್ ಗೆ ಚೀಟಿ ಕೊಟ್ಟು ಜನರ ಕಿಡ್ನಿಯೊಂದಿಗೆ ಆಟ ಆಡೋದು ಮಾತ್ರ ಅಕ್ಷಮ್ಯ ಅಪರಾಧ. ಮೆಡಿಕಲ್ ಅಸೋಸಿಯೇಶನ್ನವರಿಗೆ ಎಲ್ಲಿಯಾದರೂ ಗೊತ್ತಾದರೆ ಇವನ ತಲೆಗೆ ಬೆಂಕಿ ಕೊಟ್ಟಾರು. ಅದಕ್ಕೂ ಮೊದಲು ಕಡಬ ಪೊಲೀಸರು ಒಮ್ಮೆ ಇವನಿಗೆ ಎಣ್ಣೆ ಮಸಾಜ್ ಕೊಟ್ಟು ಬೆಂಡ್ ತೆಗೆದರೆ ಎಲ್ಲಾ ಸರಿ ಹೋಗುತ್ತದೆ. ಇಲ್ಲದಿದ್ದರೆ ಬೆನ್ನಿ ಇನ್ನು ಆಪ್ರೆಷನ್ ಗೀಪ್ರೆಷನ್ ಎಂದೆಲ್ಲಾ ಶುರು ಹಚ್ಕೊಂಡು ಬಂಜಿಯ ಒಳಗಡೆ ಕತ್ರಿ ಬಾಕಿಯಾದರೆ ಹೊಣೆ ಆಗೋದು ಯಾರು? ಹೆಣ ಆಗೋದು ಯಾರು?








                                     



           ಹಾಗೆಂದು ಹಳ್ಳಿಗಾಡಿನ ಅಂಡಮಾನ್ ಗಳಲ್ಲಿ ಈವತ್ತು ‌ಸಾಯಲು ಕೆರೆ ಬಾವಿಗಳು, ಬೀಜದ ಮರಗಳು, ರೈಲು ಮಾರ್ಗಗಳು ಇಲ್ಲದಿದ್ದರೆ ಏನಂತೆ ಧರ್ಮಕ್ಕೆ ಸಾಯಲು ಅಥವಾ ನಾವೇ ಟಿಕೆಟ್ ತೆಗೆದು ಕೊಳ್ಳಲು ಪ್ರತೀ ಹಳ್ಳಿಯಲ್ಲೂ ಕೋರೆಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಟಿಕೆಟ್ ತೆಗೆದುಕೊಳ್ಳಲು ಕ್ಯೂ ನಿಲ್ಲಬೇಕಿಲ್ಲ.
   ಈವತ್ತು ಹಳ್ಳಿಗಾಡಿನ ಮುಚ್ಚದ ಕಲ್ಲಿನ ಕೋರೆಗಳಿಗೆ ಆಕಸ್ಮಿಕವಾಗಿ ಬಿದ್ದು ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವವರಂತೂ ಉಳ್ಳಾಲ ‌ಸಂಕದ ತನಕ ಹೋಗಲೇ ಬೇಕಿಲ್ಲ. ಇಲ್ಲೇ ತೇಲಾಡ ಬಹುದು. ಇಷ್ಟಿದ್ದರೂ ಜಿಲ್ಲಾಡಳಿತಗಳು, ತಾಲೂಕ ಆಡಳಿತಗಳು ಸದ್ರಿ ಕೋರೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳ ಎಂಬಲ್ಲಿ ಕಲ್ಲಿನ ಕೋರೆಗೆ ಬಿದ್ದು ಕೂಲಿ ಕಾರ್ಮಿಕನೊಬ್ಬ ಸ್ವರ್ಗ ಪಾಲಾಗಿದ್ದಾನೆ. ಅಮಾಯಕನ ಜೀವಕ್ಕೆ ಈಗ ಚಿಲ್ಲರೆಗಳು ಸೇರಿ ಚಿಲ್ಲರೆ ಬೆಲೆ ಕಟ್ಟಿದ್ದು ಮಾತ್ರ ವಿಪರ್ಯಾಸವೇ ಸರಿ.



    ಇವನು ಕಾರ್ತಿಕ್. ವಿಟ್ಲ ಮುಡ್ನೂರು  ‌ಗ್ರಾಮದ ಅಲಂಗಾರು ಅಡ್ಡದ ಪಾದೆ ನಿವಾಸಿ. ಕಾರ್ತಿಕ್ ಅಳಿಕೆ ಗ್ರಾಮದ ಕಾಡುಪಾಪನ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ    ಕೋರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ತಿಕ್ ಬ್ರದರು ವಿಟ್ಲ ಪೋಲಿಸರಿಗೆ ದೂರು ನೀಡಿದ್ದು ಯುಡಿಆರ್ 53/2023 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿದೆ. ಇನ್ನು ಕೋರೆ ಮಾಲೀಕ ಕಾಡುಪಾಪ ಮಾತ್ರ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬವರೊಂದಿಗೆ ಸೇರಿಕ್ಕೊಂಡು ಕಾರ್ತಿ ಮನೆಯವರಿಗೆ ಚಿಲ್ಲರೆ ಪರಿಹಾರ ಕೊಟ್ಟು ಕೇಸ್ ಮುಗಿಸಿ ಕೊಳ್ಳಲು ಪಂಚಾತಿಕೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲ ಮಾರಾಯ್ರೆ ಆ ಕಾಡುಪಾಪ ದೊಡ್ಡ ದುಡ್ಡಿನ ಮರ. ಈತನಿಗೆ ಕೇರಳ ಗಡಿಯಲ್ಲಿ ಒಂದು ಪಂಪು ಮತ್ತು ಒಂದು ವೈನ್ ಶಾಪೆಲ್ಲ ಇದೆ. ಇವನನ್ನು ಒಮ್ಮೆ ಅಲುಗಾಡಿಸಿದರೂ ಸಾಕು ಕಾಟು ಕುಕ್ಕಿನ ಮರ ಅಲುಗಾಡಿಸಿದಾಗ ಕುಕ್ಕು ಬೀಳುವ ಹಾಗೆ ದುಡ್ಡು ಬೀಳ ಬಹುದು. ಆದರೂ ಸತ್ತವರಿಗೆ ಪರಿ‌ಹಾರ ಕೊಡುವ ವಿಷಯದಲ್ಲಿ ಕುರೆ ಕಟ್ಟುತ್ತಿದ್ದಾರೆ. ಅದಕ್ಕಾಗಿ  ಈತ ಒಬ್ಬ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬ ನಿರುದ್ಯೋಗಿಯನ್ನು ಛೂ ಬಿಟ್ಟಿದ್ದು ಅವರು ಕಾರ್ತಿ ಕುಟುಂಬಕ್ಕೆ ಚಿಲ್ಲರೆ ನೆಕ್ಕಿಸಿ ರಾಜಿಯಲ್ಲಿ ಫೈಲ್ ಕ್ಲೋಸ್ ಮಾಡಲು ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲ ಕಣ್ರೀ ಒಂದು  ಪಂಚಾಯಿತಿ ಅಧ್ಯಕ್ಷ ಆಗಿದ್ದುಕ್ಕೊಂಡು ಒಬ್ಬ ಬಡಪಾಯಿ ಗೆ ನ್ಯಾಯ ದೊರಕಿಸಿ ಕೊಡುವ ಬದಲು ಇವನೇ ಹೋಗಿ ಕಾಡುಪಾಪನೊಂದಿಗೆ ಸೇರಿಕೊಂಡಿದ್ದು ವಿಪರ್ಯಾಸವೇ ಸರಿ. ಜನ ಇಂಥವನಿಗೂ ಓಟು ಕೊಟ್ಟಿದ್ದಾರಲ್ಲ. ಅದರಲ್ಲೂ ಅಧ್ಯಕ್ಷನ ಕುರ್ಚಿ ಬೇರೆ. ಇವನ ಬಗ್ಗೆ ಜನರಿಗೆ ಬೆಚ್ಚ ಆಗಿದೆ. ಆದ್ದರಿಂದ ಇನ್ನಾದರೂ ಸ್ಥಳೀಯ ಆಡಳಿತಗಳು ಇಂಥ ಅಪಾಯಕಾರಿ ಕೋರೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಪಾಲಿಸದ ಕೋರೆ ಮಾಲೀಕರು ಮತ್ತು ಕಾನೂನು ಜಾರಿ ಮಾಡದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಅನೇಕ ಸಾವು ನೋವುಗಳು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಅಮಾಯಕರ ಪ್ರಾಣದೊಂದಿಗೆ ಆಟವಾಡುವವರನ್ನೇ ಕೋರೆಗೆ ದೂಡಿ ಹಾಕಬೇಕು. ಭಂಡಾರ ಹೋಗಲಿ ಅಂಥವರದ್ದು.






MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget