2024

                                


    ಈಗ ಸಾಲ ತೆಗೆಯೋದು ಭಾರೀ ಕಷ್ಟ ಮಾರಾಯ್ರೆ. ಸಾಲಗಾರರಿಗೆಲ್ಲ ಸಿಬಿಲ್ ಬಡಿದು ಬ್ಯಾಂಕ್ ಕಡೆ ತಲೆ ಹಾಕಿ ಮಲಗ್ಲಿಕ್ಕೂ ಆಗದ ಪರಿಸ್ಥಿತಿ. ಸಾಲಗಾರರ ಸಿಬಿಲ್ ರೇಟು ತೋರಿಸುವ ಮುಳ್ಳು ಲೆಫ್ಟಿಗೆ ಕೆಳಗೆ ಬಂದು ಬೀಳುವ ಪರಿಸ್ಥಿತಿ ಇದೆ. ಹಾಗಾಗಿ ಈಗ ಹೆಚ್ಚಿನ ಸಾಲಗಾರರು ಹೆಂಡತಿಗೆ ದಮ್ಮಯ್ಯ ದಕ್ಕಯ್ಯ ಹಾಕಿ, ಅವಳ ಕೈಕಾಲು ಹಿಡಿದು ಅವಳ ಕುತ್ತಿಗೆದ್ದು, ಕೈಯಿದ್ದು, ಕೆಬಿತ್ತವು, ಮೂಂಕುದ ಟಿಕ್ಕಿ, ಮಾಟಿ, ಉಲಿಂಗಿಲ ಹೀಗೆ ಎಲ್ಲವನ್ನೂ ತಂದು ತಿಂದಾಗಿದೆ.
.........................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
.........................................
  ಬ್ಯಾಂಕುಗಳು, ಸೊಸೈಟಿಗಳು ಸಾಲಗಾರರ ಅಡಗುದಾಣಗಳ ಮೇಲೆ ನಿರಂತರ ಧಾಳಿ ನಡೆಸಿದರೂ ಸಾಲ ವಸೂಲಾತಿ ಆಗುತ್ತಿಲ್ಲ. ಇದೀಗ ಈ ಸಾಲಗಾರರ ಕಷ್ಟಕ್ಕೆ ಕರ ಕರ ಕರಗಿರುವ ಬಿಳಿನೆಲೆಯ ಸೊಸೈಟಿಯೊಂದು ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆ, ಯೋಚನೆಯಲ್ಲಿದೆ. ಈ ಯೋಜನೆ ಪ್ರಾಯೋಗಿಕವಾಗಿ ಈಗಾಗಲೇ ನಡೆದಿದ್ದು ಸೊಸೈಟಿ ಅದರಲ್ಲಿ ಯಶಸ್ವಿಯೂ ಆಗಿದೆ ಎಂದು ತಿಳಿದುಬಂದಿದೆ.
  
   

ಹಾಗೆಂದು ಬಿಳಿನೆಲೆ ಊರಿನಲ್ಲಿ ಒಂದು ಚಿಕ್ಕ ಸೊಸೈಟಿ ಇದೆ. ಈ ಸೊಸೈಟಿ ಇದೀಗ ವನ್ ಗ್ರಾಂ ಚಿನ್ನಕ್ಕೆ ಸಾಲ ಕೊಡುವ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಿದೆ. ಸದ್ರಿ ಸೊಸೈಟಿಯ ದೇಶಭಕ್ತರ ಡೈರೆಕ್ಟರ್ ದೇವರ ಪಾಲಿನ ಚಿದಣ್ಣ ಅಂದಾಜು ಎಪ್ಪತ್ತು ಸಾವ್ರ ರೂಪಾಯಿಗಳ ವನ್ ಗ್ರಾಂ ಚಿನ್ನ ತಂದು ವರ್ಷದ ಹಿಂದೆ ಅಡವಿಟ್ಟು ದುಡ್ಡು ಕ್ಯಾಶ್ ಮಾಡಿ ಕಿಸೆಗೆ ಹಾಕಿದ್ದರು. ಯಾರದ್ದೂ ಸುದ್ದಿ ಇಲ್ಲ. ವರ್ಷ ನಂತರ ಮೂರು ತಿಂಗಳ ಹಿಂದೆ ಲೋನ್ ರಿನಿವಲ್ ಗೆ ಬಂದಾಗ ಚಿದಣ್ಣನ ಪಿತ್ತಳೆ ಪಿದಾಯಿ ಬಿದ್ದಿದೆ. Inspection ಗೆ ಬಂದ್ದಿದ್ದ ಮೇಲಿನವರು ಚಿದಣ್ಣನ ಚಿನ್ನವನ್ನು ತಿಕ್ಕಿ ತಿಕ್ಕಿ ನೋಡಿದರೆ ಚಿನ್ನ ಸಿಕ್ಕಿಬಿದ್ದಿದೆ. ಕೂಡಲೇ ಬೋರ್ಡ್ ಮೀಟಿಂಗ್ ನಡೆಸಿದ ದೇಶಭಕ್ತರು ಕೇಸನ್ನು ಸಿಂಗಲ್ ಟೀ ಮತ್ತು ಬಿಸ್ಕತ್ತಿನಲ್ಲಿ ಮುಗಿಸಿ ಸುದ್ದಿ ಪಿದಾಯಿ ಹೋಗದ ಹಾಗೆ ತಡೆ ಕಟ್ಟಿ ತಗಡಲ್ಲಿ ಬರೆಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ಈ ಬಗ್ಗೆ ಚಿದಣ್ಣನಲ್ಲಿ ಪ್ರಶ್ನೆ ಇಟ್ಟರೆ " ನನಗೇನೂ ಗೊತ್ತಿಲ್ಲದ ಬಾಲೆ ನಾನು. ಪಾ...ಪ.  ನಾನು.ಕೊಂಬ ಬೆರಳು ಚೀಪುವ ನನಗೆ ಈ ಚಿನ್ನವನ್ನು ನನ್ನ ಹೆಂಡತಿ ಕಡೆಯವರು ಕೊಟ್ಟಿದ್ದು, ಅದನ್ನು ನಾನು ಹಾಗೆ ತಂದು ಸೊಸೈಟಿಯಲ್ಲಿ ಇಟ್ಟಿದ್ದೇನೆ". ಎಂದು ಆಕಾಶವಾಣಿಯಲ್ಲಿ ಬಿಟ್ಟಿದ್ದಾರೆ. ಹಾಗಾದರೆ ತಪ್ಪು ಯಾರದ್ದು ಮಾರಾಯ್ರೆ? ರಾಂಪಣ್ಣದ್ದಾ?
...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.


ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

....................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.




                               


    "ಹಾಗೆಂದು ಪುತ್ತೂರಿನಲ್ಲಿ ನಾಯಕರಿಗಿಂತ ಮೂಲೆ ಗುಂಪು ನಾಯಕರೇ ಜಾಸ್ತಿ. ಇದರಲ್ಲಿ ಬಿಜೆಪಿಯವರ ಕತೆ ಬಿಡಿ,  ಅದರಲ್ಲಿ ನಾಯಕನಾಗೋದೇ ಮೂಲೆಗುಂಪು ನಾಯಕನಾಗಲು. ಇನ್ನು ಕಾಂಗ್ರೆಸಿನವರ ಕತೆಯೂ ಇದಕ್ಕೆ ಹೊರತಾಗಿಲ್ಲ. ಆದರೆ ಪುತ್ತೂರು ಕಾಂಗ್ರೆಸ್ಸಿನಲ್ಲಿ ಬೆಳೆದು ಹೆಮ್ಮರವಾಗಿರುವ "ಅಣ್ಣಾ ಸಂಸ್ಕೃತಿ" ಮಾತ್ರ ಬಾಕಿ ಯಾವ ನಾಯಕರನ್ನೂ ಬೆಳೆಯಲು ಬಿಡುತ್ತಿಲ್ಲ. ಅದರಲ್ಲೂ ವಿನಯ್ ಕುಮಾರ್ ಸೊರಕೆ ಎಂಬ ಬಿಲ್ಲವ ನಾಯಕನನ್ನು ಹೇಗೆ ಸೋಲಿಸಲಾಯಿತೆಂದರೆ ಆ ನಾಯಕ ಪುತ್ತೂರನ್ನೇ ಬಿಡಬೇಕಾಯಿತು. ಸಿ.ಪಿ ಜಯರಾಮ ಗೌಡ ಎಂಬ ಒಕ್ಕಲಿಗ ಗೌಡ ನಾಯಕನನ್ನು ಹೇಗೆ ತುಳಿಯಲಾಯಿತೆಂದರೆ ಜಯರಾಮ ಗೌಡರು ಕಡೇ ಪಕ್ಷ ಜಿಲ್ಲಾ ಪಂಚಾಯಿತಿ ಸೀಟಲ್ಲೂ ಗೆಲ್ಲದ ಹಾಗೆ ನೋಡಿಕೊಳ್ಳಲಾಯಿತು. ಇನ್ನೊಬ್ಬ ಪ್ರಬಲ ಮುಸ್ಲಿಂ ನಾಯಕ ಕೆ.ಪಿ ಅಬ್ದುಲ್ಲ ರನ್ನು ವಿಟ್ಲಕ್ಕೆ ಶಿಫ್ಟ್ ಮಾಡಿ ಅಲ್ಲಿ ದಯಾನೀಯವಾಗಿ ಸೋಲಿಸಲಾಯಿತು. ಈ ಅಣ್ಣಾ ಸಂಸ್ಕೃತಿಯನ್ನು ಕ್ಯಾರೇ ಮಾಡದ, ಅಣ್ಣಾಗಳಿಗೆ "ದೊಡ್ಡಣ್ಣ ನಾನು" ಎಂದು ಘರ್ಜಿಸಿದ ಜೀವನ್ ಭಂಡಾರಿಯನ್ನೂ ವ್ಯವಸ್ಥಿತವಾಗಿ ಮೂಲೆಗುಂಪು ನಾಯಕನನ್ನಾಗಿ ಮಾಡಲಾಯಿತು. ಆ ಎಲ್ಲಾ ಕಾಲಘಟ್ಟದಲ್ಲೂ ಕಾಂಗ್ರೆಸ್ಸ್ ಟೀಮಲ್ಲಿ ಭದ್ರವಾಗಿ ನಿಂತು, ಪ್ರತೀ ಚುನಾವಣೆಗಳಲ್ಲೂ ಕಾಂಗ್ರೆಸ್ ಪರ ಸಿಕ್ಸರ್, ಬೌಂಡರಿ ಬಾರಿಸಿ ಕಾಂಗ್ರೆಸಿಗೆ ಒಂದು stand ಕೊಟ್ಟ ಮೊಹಮ್ಮದ್ ಆಲಿಯನ್ನೂ ಕಾಲ ಕಾಲಕ್ಕೆ ತುಳಿಯುತ್ತಾ ಬಂದ ಅಣ್ಣಾ ಸಂಸ್ಕೃತಿ ಯಾವ ಕಾರಣಕ್ಕೂ ಆಲಿಯನ್ನು ಬೆಳೆಯಲು ಬಿಡಬಾರದು ಎಂಬ ಹಠಕ್ಕೆ ಬಿದ್ದಂತಿದೆ. ಯಾಕೆಂದರೆ ಆಲಿ ಯಾವುದೇ ಸೀಟಲ್ಲಿ ಕುಂತರೂ ತಮ್ಮ ಜಾತಕ ಬಿಡಿಸುತ್ತಾರೆ ಎಂಬ ಹೆದರಿಕೆ ಕಾಂಗ್ರೆಸಿಗರಿಗೆ. ಹಾಗಾಗಿ ಬಲಿಗೆ ವಾಮನ ತುಳಿದ ಹಾಗೆ ತುಳಿಯುವುದು. ಆಲಿಯನ್ನೂ ಮೂಲೆ ಗುಂಪು ನಾಯಕ ಮಾಡಿ ಬಿಟ್ಟರೆ ಎಲ್ಲಾ ಕುರ್ಚಿಗಳಲ್ಲೂ ತಮ್ಮದೇ ಜನ ಕೂರಬಹುದು ಎಂಬುದು ಪೊಕ್ಕಡೆ ಕಾಂಗ್ರೆಸಿಗರ ಹಗಲು ಕನಸು.


  ಮೊಹಮ್ಮದ್ ಆಲಿ! ಪುತ್ತೂರು ಕಂಡ ಏಬಲ್,ಎ ವನ್ ಕಾಂಗ್ರೆಸ್ ನಾಯಕ. ಫರ್ಫೆಕ್ಟ್ ಲೀಡರ್ ಶಿಪ್, ನಾನ್ ಕರಫ್ಟ್, ಜನಪರ, ಹಂಡ್ರೆಡ್ ಪರ್ಸೆಂಟ್ ಸೆಕ್ಯುಲರ್, ದೂರಗಾಮಿ ಚಿಂತನೆ, ಎಲ್ಲಾ ಜಾತಿಗಳನ್ನು ಒಗ್ಗೂಡಿಸಿ ಮುನ್ನಡೆಸುವ ಚಾತಿ, ಬಡವರ ದೀನ ದಲಿತರ, ಶೋಷನೆಗೊಳಗಾದವರ ಸಮಾನ ಮನಸ್ಕ, ಅನುಭವಿ ರಾಜಕಾರಣಿ, ರಾಜಕೀಯದ ಮದಗಜಗಳೊಂದಿಗೆ ಹೋರಾಡಿದ, ಹೋರಾಡುವ ಧೈರ್ಯ, ಛಲ ಇರುವ ಆಲಿಯನ್ನು ಕೂಡ ಅಣ್ಣಾ ಸಂಸ್ಕೃತಿ ಮೂಲೆ ಗುಂಪು ನಾಯಕ ಮಾಡಲು ಕಳೆದ ಹಲವು ದಶಕಗಳಿಂದ ಪ್ರಯತ್ನಿಸಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. ಯಾಕೆಂದರೆ ಯೂ.ಟಿ ಖಾದರ್ ವಾಟರ್ ಬ್ಯಾಗ್ ಹಿಡ್ಕೊಂಡು ಶಾಲೆ ಕಡೆ ಹೋಗುವಾಗಲೇ ಆಲಿ ಸಕ್ರೀಯ ರಾಜಕಾರಣದಲ್ಲಿ ಇದ್ದರು. ಆದರೆ ಈಗ ಯೂ.ಟಿ ಎಲ್ಲಿದ್ದಾರೆ, ಆಲಿ ಎಲ್ಲಿದ್ದಾರೆ. ರಾಜಕಾರಣದಲ್ಲಿ ಆಲಿ ಇಷ್ಟೆಲ್ಲಾ ಪರದಾಡಲು ಕಾರಣ ಪುತ್ತೂರಿನ ಅಣ್ಣಾ ಸಂಸ್ಕೃತಿ.
ಹಾಗೆಂದು ಆಲಿ ಹತ್ತು ವರ್ಷಗಳ ಚಿಕ್ಕ ಹುಡುಗನಿರುವಾಗಲೇ ಚರ್ಚ್ ಬಿಲ್ಡಿಂಗ್ ನಲ್ಲಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದವರು. ಎಂಟನೇ ಕ್ಲಾಸಿಗೇ ಚಡ್ಡಿ ಸಿಕ್ಕಿಸಿಕೊಂಡು ಜನಾರ್ದನ ಪೂಜಾರಿಯ ಫಸ್ಟ್ ಎಲೆಕ್ಷನ್ ಗೆ ಮಂಜಲ್ಪಡ್ಪುನ ಬೂತ್ ಜವಾಬ್ದಾರಿ ಹೊತ್ತ ಆಲಿ ಒಂಭತ್ತನೇ ತರಗತಿಯಲ್ಲಿ ಪುತ್ತೂರು ನಗರ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ. ನಂತರ ವಿನಯ್ ಕುಮಾರ್ ಸೊರಕೆ ಟೈಮಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಕೆ.ಪಿ ಅಬ್ದುಲ್ಲಾ ಕಾಲದಲ್ಲಿ ಆಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. 86-87ರಲ್ಲಿ ಆರ್ಯಾಪು, ಕೆಮ್ಮಿಂಜೆ,ಕುರಿಯ ಮೂರು ದೊಡ್ಡ ದೊಡ್ಡ ಗ್ರಾಮಗಳ ಒಗ್ಗೂಡಿಸಿ ಸಂಪ್ಯ ಮಂಡಲ ಪಂಚಾಯ್ತಿ ರಚನೆ ಆದಾಗ ಆಲಿ ಅದರ ಮೊದಲ ಮಂಡಲ ಪ್ರಧಾನ ಮತ್ತು ಆಗ ಆಲಿಗೆ 21ವರ್ಷ. ಕರ್ನಾಟಕ ರಾಜ್ಯದ ಯಂಗೆಸ್ಟ್ ಮಂಡಲ ಪ್ರಧಾನ ಎಂಬ ಹೆಗ್ಗಳಿಕೆ ಆಲಿದ್ದು. ಆಮೇಲೆ ಕೆಮ್ಮಿಂಜೆ ಪಂಚಾಯ್ತಿ ಆದಾಗಲೂ ಹದಿನೇಳು ಸೀಟುಗಳಲ್ಲಿ ಹದಿನೇಳನ್ನೂ ಬಿಜೆಪಿಗೆ ಒಂದು ಪೀಸನ್ನೂ ಬಿಡದೆ ಕಾಂಗ್ರೆಸ್ ಅಕೌಂಟಿಗೆ ಹಾಕಿಸಿದ ಯುವ ನಾಯಕ ಆಲಿ. ನಂತರ ಕೆಮ್ಮಿಂಜೆ ಗ್ರಾಮ ಮುನ್ಸಿಪಾಲಿಟಿಗೆ ಸೇರಿದ ನಂತರವೂ ಆಲಿ ನಿರಂತರವಾಗಿ ಪುರಸಭಾ ಸದಸ್ಯರಾಗಿ ಆರಿಸಿ ಬಂದಿದ್ದಾರೆ. ನಾಲ್ಕು ಬಾರಿ ಪುರಸಭಾ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಪುರಸಭಾ ವಿರೋಧ ಪಕ್ಷದ ನಾಯಕ ಹೀಗೆ ಪುರಸಭೆಯಲ್ಲಿ ಆಲಿ ಅಲಂಕರಿಸದ ಕುರ್ಚಿಗಳೇ ಇಲ್ಲ. ಪುರಸಭೆಯಲ್ಲಿ ಇಷ್ಟು ಕೆಲಸ ಮಾಡಿಯೂ ಆಲಿಯವರಿಗೆ ಸಿಗದ ಕುರ್ಚಿ ಅಂದರೆ ಅದು ಪುರಸಭಾ ಅಧ್ಯಕ್ಷರ ಕುರ್ಚಿ. ಪುತ್ತೂರು ಪುರಸಭೆಯಲ್ಲಿ ಕಾಂಗ್ರೆಸ್ ಎರಡೆರಡು ಬಾರಿ ಅಧಿಕಾರಕ್ಕೆ ಬಂದರೂ ಮತ್ತು ಆ ಗೆದ್ದ ಎಲ್ಲಾ ಸೀಟುಗಳೂ ಆಲಿ ಕೇರ್ ಆಫ್ ನಲ್ಲಿ ಬಂದಿದ್ದರೂ ಆಲಿಯವರನ್ನು ಅಧ್ಯಕ್ಷಗಾದಿಯಿಂದ ದೂರ ಇಡಲಾಯಿತು ಮತ್ತು ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ಅಣ್ಣಾ ಸಂಸ್ಕೃತಿ ಸಕ್ರೀಯವಾಗಿತ್ತು.
   

ಹಾಗೆಂದು ಸುಧಾಕರ ಶೆಟ್ಟಿ ಕಾಲದಿಂದಲೂ ಆಲಿಯವರನ್ನು ವ್ಯವಸ್ಥಿತವಾಗಿ ತುಳಿಯಲಾಯಿತು. ಆಲಿಯ ನಾನ್ ಕರಫ್ಟ್, ನೇರ ಮಾತು, ಭ್ರಷ್ಟಾಚಾರಿಗಳೊಂದಿಗೆ ನೋ ಕಾಂಪ್ರಮೈಸ್, ಡ್ಯಾಶಿಂಗ್ ನೇಚರ್ ಹಲವು ಕಾಂಗ್ರೆಸಿಗರ ನಿದ್ದೆಗೆಡಿಸಿತ್ತು.ಕಾಂಗ್ರೇಸಿನಲ್ಲಿದ್ದ ಬ್ರೋಕರ್ ಗಳು, ವಂಚಕರು, ಕಮಿಷನ್ ಏಜೆಂಟ್ ಗಳು, ಭೂಗಳ್ಳರು, ಮರಗಳ್ಳರು ಹೀಗೆ ಬೇರೆ ಬೇರೆ ಸೈಜಿನ ಕಳ್ಳಕಾಕರೆಲ್ಲ ಹೋಗಿ ಆಲಿ ಬಗ್ಗೆ ಸುಧಾಕರ ಶೆಟ್ಟಿಯ ಕಿವಿ ತುಂಬಿಸಿ ಬಿಡುತ್ತಿದ್ದರು ಮತ್ತು ಆಲಿಗೆ ಪರ್ಯಾಯವಾಗಿ ಮೊಹಮ್ಮದ್ ಹಟ್ಟಾ ಎಂಬ ಸೌಮ್ಯವಾದಿ ನಾಯಕನನ್ನು ರೀಪ್ಲೇಸ್ಮೆಂಟ್ ಮಾಡಲಾಯಿತು. ಅನಂತರ ಹಟ್ಟಾರಿಗೆ ಪೂಡಾ ಅಧ್ಯಕ್ಷ ಪಟ್ಟ ಕೂಡ ಕಟ್ಟಲಾಯಿತು. ನಂತರ ಕಾಂಗ್ರೆಸ್ ಸರ್ಕಾರ ಬಂದಾಗಲೂ, ಪಕ್ಷದಲ್ಲೂ ಆಲಿಗೆ ಯಾವುದೇ ಸ್ಥಾನಮಾನಗಳನ್ನು ನಿರಾಕರಿಸುತ್ತಾ ಬರಲಾಯಿತು. ಆಲಿಯವರಿಗೆ ರಾಜ್ಯ ,ಜಿಲ್ಲಾ ಕಾಂಗ್ರೆಸ್ ನಾಯಕರ ಬೆಂಬಲ ಇದ್ದರೂ ಬ್ಲಾಕ್ ಕಾಂಗ್ರೆಸ್ ಮಾತ್ರ ಅಣ್ಣಾ ಸಂಸ್ಕೃತಿಯ ಹಿಡಿತದಲ್ಲಿ ಇದ್ದ ಕಾರಣ ಆಲಿ ಬಗ್ಗೆ ಕಾಲ ಕಾಲಕ್ಕೆ ನೆಗೆಟಿವ್ ಮಾಹಿತಿಗಳನ್ನು ನೀಡಿ ಜಿಲ್ಲಾ, ರಾಜ್ಯ ನಾಯಕರ ದಾರಿ ತಪ್ಪಿಸುವ ಮೂಲಕ ಆಲಿಯವರ ರೆಕ್ಕೆ ಪುಕ್ಕ ಕಟ್ ಮಾಡಲಾಗುತ್ತಿತ್ತು.
ಆವತ್ತು ಪುತ್ತೂರು ಪುರಸಭೆಯಲ್ಲಿ ಎರಡೆರಡು ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ನಿರ್ದಾಕ್ಷಿಣ್ಯವಾಗಿ ಆಲಿಯವರಿಗೆ ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. 2014 ರಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ವಾಣಿ ಶ್ರೀಧರ್ ಎಂಬ ಕಾಂಗ್ರೆಸ್ ಸದಸ್ಯೆಯನ್ನು ಪಕ್ಷಾಂತರ ಮಾಡಿಸಿ ದೇಶಭಕ್ತರು ಅಧಿಕಾರಕ್ಕೆ ಬರುವಂತೆ ಸ್ಕೆಚ್ ಮಾಡಿ ಆಲಿ ಕೈಗೆ ಅಧಿಕಾರ ಸಿಗದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನವಾಗಿ ಜಂಟಿ ಕಾರ್ಯಾಚರಣೆ ಮಾಡಿದ್ದವು. ಅಣ್ಣಾ ಸಂಸ್ಕೃತಿಯ ಕಾಂಗ್ರೆಸ್ ಮೆಂಟಾಲಿಟಿ ಹೇಗೆ ಅಂದರೆ ಬಿಜೆಪಿ ಆದರೂ ಅಧಿಕಾರಕ್ಕೆ ಬರಲಿ ಆದರೆ ಆಲಿ ಸಿಗಬಾರದು ಅಂದರೆ ಮಗ ಸತ್ತರೂ ಪರವಾಗಿಲ್ಲ ಸೊಸೆ ವಿಧವೆ ಆಗಲೇ ಬೇಕು ಎಂಬಂತೆ. ನಂತರ ಈ ಬಗ್ಗೆ ಆಲಿಯವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಕೋರ್ಟಿಗೆ ಹೋಗಿ ಜಯಶಾಲಿಯಾಗಿ ಮತ್ತೇ ಪುರಸಭೆಯಲ್ಲಿ ಅಧಿಕಾರ ‌ಹಿಡಿಯಲು ಬಂದರೆ ಒಮ್ಮೆಗೇ ಸ್ವಪಕ್ಷದ ಆರು ಸದಸ್ಯರು ರೆಬೆಲ್ ಆಗಿ ದೇಶಭಕ್ತರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರುತ್ತಾರೆ. ಒಬ್ಬ ಜನ ನಾಯಕನಿಗೆ ಮಾಡಿದ ಈ ವಿಶ್ವಾಸ ದ್ರೋಹ ಮಾತ್ರ ಪುತ್ತೂರಿನ ರಾಜಕೀಯ ಇತಿಹಾಸದಲ್ಲಿ ಬರೆದಿಡಬೇಕಂತಹ ಒಂದು ಪ್ರಮುಖ ಘಟ್ಟ. ನಂತರದ ಪುರಸಭಾ ಎಲೆಕ್ಷನ್ ಗಳಲ್ಲಿ ಕಾಂಗ್ರೆಸ್ ಮೆಜಾರಿಟಿ ಬಂದರೂ ಆಲಿಗೆ ಪ್ರತಿಕೂಲ ಆಗುವಂತಹ ಮೀಸಲಾತಿ ತಂದು ಅಧ್ಯಕ್ಷ ಪಟ್ಟ ತಪ್ಪಿಸಲಾಯಿತು. ಕಳೆದ ನಗರ ಸಭೆಯ ಎಲೆಕ್ಷನ್ ಟೈಮಲ್ಲಿ ಸಿಟ್ಟಿಂಗ್ ಕೌನ್ಸಿಲರ್ಸ್ ಗಳಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ಆದೇಶ ಇದ್ದರೂ ಆಲಿಯವರಿಗೆ ಇದೇ ಅಣ್ಣಾ ಸಂಸ್ಕೃತಿ ಕುಂಟು ನೆಪ ಹೇಳಿ ಟಿಕೆಟ್ ತಪ್ಪಿಸಿತು. ಅಣ್ಣಾ ಸಂಸ್ಕೃತಿಗೆ ಸೆಡ್ಡು ಹೊಡೆಯುವ, ಸೈಡ್ ಹೊಡೆಯುವ, ಸರೆಂಡರ್ ಆಗದ ಯಾವುದೇ ನಾಯಕನನ್ನು ಸೈಲೆಂಟಾಗಿ ಸೈಡಿಗೆ ಹಾಕಿ ಬಿಡಲಾಗುತ್ತಿದೆ. ಇದಕ್ಕೆ ದಿನ ಬೆಸ್ಟ್ ಉದಾಹರಣೆ ಮೊ‌ಹಮ್ಮದ್ ಆಲಿ.
....................................................
ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.
...................................................
ಹಾಗೆಂದು ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತಾ ಬಂದಿದ್ದೇ ಈ ಅಣ್ಣಾ ಸಂಸ್ಕೃತಿಯ ಕರಾಳ ಛಾಯೆಯಿಂದ. ಅಣ್ಣಾ ಸಂಸ್ಕೃತಿಯಿಂದ ರೋಸಿ ರೋಸಿ ಹೋದವರೆಲ್ಲ ಹೋಗಿ ಬಿಜೆಪಿಗೆ ಓಟು ಹಾಕಿ ಗೆಲ್ಲಿಸಿ ಬಿಟ್ಟರು. ಈ ಖತರ್ನಾಕ್ ಅಣ್ಣಾ ಸಂಸ್ಕೃತಿ ಇದ್ದ ಕಾರಣದಿಂದಲೇ ಸಂಕಪ್ಪ ರೈ ರಾಮಭಟ್ ರಂತಹ ವೀಕ್ ಕ್ಯಾಂಡಿಡೇಟ್ ಮುಂದೆ ಸೋಲಬೇಕಾಯಿತು. ಇದೇ ಅಣ್ಣಾ ಸಂಸ್ಕೃತಿ ವಿನಯ್ ಕುಮಾರ್ ಸೊರಕೆಗೆ  ಮೀರ್ ಜಾಫರ್ ನಂತೆ ಬೆನ್ನಿಗೆ ಇರಿಯಿತು. ಇದೇ ಅಣ್ಣಾ ಸಂಸ್ಕೃತಿ ಸುಧಾಕರ ಶೆಟ್ಟಿಯನ್ನು ಎರಡೆರಡು ಸಲ ಸೋಲಿಸಿ ಸುಣ್ಣ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಆವತ್ತು ಬಿಜೆಪಿಯಲ್ಲಿ ಶಕ್ವಕ್ಕೆಯ ದೊಡ್ಡ ಬಂಡಾಯ ಇದ್ದರೂ ಬೊಂಡಾಲ ಜಗನ್ನಾಥ ಶೆಟ್ಟಿ ಎಂಬ ಯುವ ನಾಯಕನನ್ನು ಸೋಲಿಸಿ ದೇಶ ಭಕ್ತರ ಮಲ್ಲಿಕಕ್ಕೆ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿತು. ಇದೇ ಅಣ್ಣಾ ಸಂಸ್ಕೃತಿ ಸಿಟ್ಟಿಂಗ್ ಎಂಎಲ್ಎ ಶಕ್ವಕ್ಕೆ ವಿನಾಕಾರಣ ಸೋಲುವಂತೆ ಮಾಡಿತು. ಇದೇ ಅಣ್ಣಾ ಸಂಸ್ಕೃತಿ ಹೇಮನಾಥ ಶೆಟ್ಟಿಯನ್ನು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಬಿಟ್ಟಿತು. ಇದೀಗ ಪೂಡಾ ಅಧ್ಯಕ್ಷ ಪಟ್ಟಕ್ಕೆ ಫೈಟ್. ಆಲಿ ಹೆಸರಿನ ಜೊತೆಗೆ ಚಿಕ್ಕ ಚಿಕ್ಕ ಹೆಸರುಗಳ ದೊಡ್ಡ ಪಟ್ಟಿ. ಆಲಿಯನ್ನು ಮುಗಿಸಲು ಇನ್ನಿಲ್ಲದ ಪ್ರಯತ್ನ. ಇಡೀ ಅಣ್ಣಾ ಲೋಕಕ್ಕೆ ನೈಟ್ ನಿದ್ದೆ ಇಲ್ಲ. ಅಣ್ಣಾ ಸಂಸ್ಕೃತಿಯ ವಿಕಿರಣದಿಂದ ಹೊರಗಿರುವ ಜನನಾಯಕ ಶಾಸಕರ ನಿರ್ಧಾರ ಯಾವ ರೀತಿ ಇದೆ ಎಂದು ಕಾದು ನೋಡಬೇಕಿದೆ.
ಯುವರ್ ಆನರ್,
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳ ಗ್ಲೂಕೋಸ್ ನಿಂದ ಐಸಿಯೂನಲ್ಲಿರುವ ಪುತ್ತೂರು ಕಾಂಗ್ರೆಸ್ ಅಣ್ಣಾ ಸಂಸ್ಕೃತಿ ಎಂಬ ಭೀಕರ ಕಾಯಿಲೆಯಿಂದ ಬಳಲಿ ಬೆಂಡಾಗಿದೆ. ಇಷ್ಟು ವರ್ಷಗಳ ಕಾಲವೂ ಮುಸ್ಲಿಂ ಮತಗಳಿಂದಲೇ ಉಸಿರಾಡಿದ ಕಾಂಗ್ರೆಸ್ ಪಕ್ಷದ ಅಣ್ಣಾ ಸಂಸ್ಕೃತಿ ಇಲ್ಲಿ ತನಕ ಯಾವುದೇ ಮುಸ್ಲಿಂ ನಾಯಕನ ಬೆಳೆಯಲು ಬಿಡಲಿಲ್ಲ ಇನ್ನು ಬಿಡುವುದೂ ಇಲ್ಲ. ಅಣ್ಣಾ ಸಂಸ್ಕೃತಿಯ  ಅಷ್ಟೂ ಬೆದರಿಕೆಗಳನ್ನು ಮೆಟ್ಟಿ ನಿಂತ ಮೊಹಮ್ಮದ್ ಆಲಿಯಂತಹ ಡ್ಯಾಶಿಂಗ್ ಲೀಡರ್ ಪರವಾಗಿ ಪುತ್ತೂರಿನ ಅಷ್ಟೂ ಮುಸ್ಲಿಂ ಸಮುದಾಯ ನಿಲ್ಲಬೇಕಾಗಿದೆ. ಓಟ್ ಮಾಡಲು ಮುಸ್ಲಿಮರು ಬೇಕು ಆದರೆ ಅವರ ನಾಯಕನನ್ನು ಪಾತಾಳಕ್ಕೆ ತುಳಿಯುವುದು ಯಾವ ನ್ಯಾಯ ಎಂದು ಸಮಸ್ತ ಮುಸ್ಲಿಂ ಸಮುದಾಯವೂ ಆಲೋಚಿಸುವ ಸಮಯ ಬಂದಿದೆ. ವಿನಯ್ ಕುಮಾರ್ ಸೊರಕೆ ನಂತರ ಆಗ ಪವರ್ ಫುಲ್ ಆಗಿದ್ದ ಆಲಿಯವರನ್ನು ಬಿಟ್ಟು ಸುಧಾಕರ ಶೆಟ್ಟಿಗೆ ಪಟ್ಟ ಕಟ್ಟಲಾಯಿತು. ಶೆಟ್ರು ಎರಡೆರಡು ಸಲ ಸೋತರು. ಮುಸ್ಲಿಂ ಸಮುದಾಯದ ಮತ್ತು ಸರ್ವ ಸಮ್ಮತದ ಲೋಕಲ್ ಅಭ್ಯರ್ಥಿ ಆಲಿ ಇದ್ದರೂ ಮಲ್ಲಿಕಾ ಪ್ರಸಾದ್ ಮುಂದೆ ನಿಲ್ಲಲು ಬಂಟವಾಳದಿಂದ ಬೊಂಡಾಲ ಜಗನ್ನಾಥ ಶೆಟ್ಟಿಯನ್ನು ಬ್ಯಾಂಡ್ ವಾಲಗದಲ್ಲಿ ತರಲಾಯಿತು. ಸಮರ್ಥ ಅಭ್ಯರ್ಥಿ ಆಲಿಚ್ಚ ಇದ್ದರೂ ಶಕ್ವಕ್ಕೆಗೆ ಎರಡು ಸಲ ಟಿಕೆಟ್ ಕೊಡಲಾಯಿತು. ಇದೀಗ ಜನನಾಯಕ ಅಶೋಕ್ ರೈ ಎಂಎಲ್ಎ. ಹಾಗಾದರೆ ಅಣ್ಣಾ ಸಂಸ್ಕೃತಿಯ ಬಿಗಿ ಹಿಡಿತದಲ್ಲಿರುವ ಪುತ್ತೂರು ಕಾಂಗ್ರೆಸ್ಸಿಗೆ ಮುಸ್ಲಿಂ ಸಮುದಾಯದ ಓಟು ಮಾತ್ರ ಬೇಕಾಗಿತ್ತಾ? ಅದಿಲ್ಲದಿದ್ದರೆ ಪುತ್ತೂರು ಕಾಂಗ್ರೆಸ್ ಯಾಕೆ ಆಲಿ ವಿಷಯದಲ್ಲಿ ಹೀಗೆಲ್ಲ ವರ್ತಿಸುತ್ತಿದೆ? ಅವರನ್ನು ಯಾಕೆ ತುಳಿಯುತ್ತಿದೆ? ಅಣ್ಣಾ ಸಂಸ್ಕೃತಿ ಯ ಎರಡು ಟೀಂಗಳು ಯಾಕೆ ಆಲಿಯವರನ್ನು ಪುಟ್ಬಾಲ್ ಮಾಡುತ್ತಿದೆ? ಹಾಗಾದರೆ  ಕಳೆದ ನಾಲ್ಕು ದಶಕಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಹಗಲಿರುಳು ಪಕ್ಷಕ್ಕಾಗಿ ದುಡಿದ ಒಬ್ಬ ಮುಸ್ಲಿಂ ಸಮುದಾಯದ ನಾಯಕನಿಗೆ ಕಡೇ ಪಕ್ಷ ಪುರಸಭೆಯ ಅಧ್ಯಕ್ಷನಾಗುವ ಅರ್ಹತೆಯೂ ಇಲ್ವಾ? ನಾಲ್ಕು ದಶಕಗಳ ನಾಯಕನಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟದಿದ್ದರೆ ಆ ಪಟ್ಟವನ್ನು ಯಾರಿಗೆ ಮೀಸಲಿಡುತ್ತಾರೆ? ಎಂಟನೇ ಕ್ಲಾಸಿನಿಂದ ಕಾಂಗ್ರೆಸ್ ಜೊತೆ ಬಂದಿರುವ ಸರ್ವಧರ್ಮೀಯ, ಜಾತ್ಯತೀತ ನಾಯಕನಿಗೆ ಕೊಡದ ಕಾಂಗ್ರೆಸ್ ಟಿಕೆಟ್ ಪಡೆಯಲು ಬೇರೆ ಯಾರಿಗೆ ಅರ್ಹತೆ ಇದೆ. ಅಣ್ಣಾ ಸಂಸ್ಕೃತಿಯ ಪ್ರಕಾರ ಆಲಿ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪಾ? ಇದನ್ನೆಲ್ಲ ಕೇಳಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು. ಅವರು ಸುಮ್ಮನೆ ಕುಂತರೆ ಇವತ್ತು ಆಲಿ ಮುಂದೆ ಎಲ್ಲರೂ ಮೂಲೆ ಗುಂಪು ನಾಯಕರಾಗುವ ಅಪಾಯಗಳಿವೆ.
...................................................
   ಒಮ್ಮೆ ಹೊಸತೂ ಆಗದೆ, ಮತ್ತೊಮ್ಮೆ ಹಳತೂ ಆಗದೆ ಸದಾ ಉರಿವ ವಿಷಯವೆಂದರೆ ಅದೇ ಜ್ಯೋತಿ.


-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.


.....................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




                              


    "ಹಾಗೆಂದು ಸುಬ್ರಹ್ಮಣ್ಯನ ಊರಿಗೆ ಸದ್ಯಕ್ಕೆ ಸುಬ್ರಹ್ಮಣ್ಯ ಪೋಲಿಸರು ಸಾಕು ಅಂತ ಸಾರ್ವಜನಿಕ ಅಭಿಪ್ರಾಯವಿದೆ. ಖಡಕ್ ಎಸ್ಸೈ ಕಾರ್ತಿ & ಟೀಂ ಸುಬ್ರಹ್ಮಣ್ಯದಲ್ಲಿ ಒಳ್ಳೆ ಕೆಲಸ ಮಾಡುತ್ತಿದೆ. ಆದರೂ ಆವತ್ತು ಬೊಳ್ಳಕ್ಕೆ ಬಂದ SNDRF ಮತ್ತು ನಕ್ಸಲರನ್ನು ಓಡಿಸಲು ಬಂದ ANF ಪಡೆಗಳನ್ನು ಇನ್ನೂ ಸುಬ್ರಹ್ಮಣ್ಯದಲ್ಲಿ ಇಟ್ಟುಕ್ಕೊಂಡು ಗಿಳಿ ಸಾಕಿದ ಹಾಗೆ ಯಾಕೆ ಸಾಕುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ANF ಅಲ್ಲಿ ಬಿಳಿನೆಲೆಯಲ್ಲಿ ಬರುತ್ತಿದೆ ಎಂದು ಗೊತ್ತಾಗುತ್ತಲೇ ನಕ್ಸಲರು ಪದ್ರಾಡ್ ಹಾಕಿದ ಜಾಗೆಗಳಲ್ಲಿ ಇನ್ನು ಎರಡು ಮರ್ಯಲ ಪಂತಿ ಕೂಡ ಬರಲ್ಲ. ಆದರೂ ಇನ್ನೂ ANF ಸುಬ್ರಹ್ಮಣ್ಯದಲ್ಲಿದೆ. ಅವರಿಗೆ ವಸತಿ, ಊಟ ಉಪಚಾರ ನಡೆಯುತ್ತಿದೆ. ಹಾಗೆಂದು ಅವರು ಇರಬಾರದು ಎಂದಲ್ಲ. ಆದರೂ ಯಾಕೆ ಅಂತ ಒಂದು ಕುರೆ ಮನಸ್ಸು.


  ಇನ್ನು SNDRF. ಬೊಳ್ಳಕ್ಕೆ ಬಂದವರು. ಬೇಸ ಆಯಿತು, ಕಾರ್ತೆಲ್ ಆಯಿತು, ಆಟಿ,ಸೋಣ ಹಂಡ್ರೆಡ್ ಮೀಟರ್ಸ್ ನಲ್ಲಿ ಓಡಿ ಬಂದು ಬೊಳ್ಳದ ಮೇಲೆ ಬೊಳ್ಳ, ಲೋಡ್, ಲೋಡ್ ಬೊಳ್ಳ ಕೊಟ್ಟು ಅದೂ ಅರಬ್ಬೀಯ ಸಮುದ್ರದಲ್ಲಿ ಹೋಗಿ ಸ್ಟಾಕ್ ಆಯಿತು. ಇನ್ನು ಮಳೆ ಬಂದರೆ ಬೊಳ್ಳ ಬರ್ಪಿ ವರ್ಷ. ಹಾಗೆ ಬೊಳ್ಳದಲ್ಲಿ ಯಾರೂ ಬೊಳ್ಳಕ್ಕೆ ಹೋಗುವುದು ಬೇಡ ಎಂದು SNDRFನ್ನು‌ ಓಡದ ಸಮೇತ ತಂದಿಡಲಾಗಿತ್ತು. ಈಗ ಸದ್ಯಕ್ಕೆ ನಿರ್ನಲ ನಡೆಯುತ್ತಿದೆ. 


ಇನ್ನು ಮಾರ್ನೆಮಿಗೆ ಒಂದು ರೌಂಡು ಮತ್ತು ಬಲಿ ಚಕ್ರವರ್ತಿ ಭೂಲೋಕಕ್ಕೆ ಬರುವ ಟೈಮಲ್ಲಿ ಢಂ..ಢೀಂ ಎಂದು ಒಂದು ರೌಂಡು ಮಳೆ ಬಂದರೆ ಈ ವರ್ಷದ ಆಟ ಮುಗಿಯುತ್ತದೆ. ಆದರೂ ಸುಬ್ರಹ್ಮಣ್ಯದಲ್ಲಿ ಇನ್ನೂ SNDRFನ್ನು ಉಳಿಸಿಕೊಳ್ಳಲಾಗಿದೆ. ಯಾಕೆಂತ ಗೊತ್ತಿಲ್ಲ. ಅವರಿಗೂ ವಸತಿ ವ್ಯವಸ್ಥೆ ಮಾಡಲಾಗಿದ್ದು ಅವರನ್ನು ಅವರ ಹೆಡ್ ಕ್ವಾರ್ಟರ್ಸ್ ಗೆ ಕಳಿಸೋದು ಒಳ್ಳೆದು ಎಂದು ಸಾರ್ವಜನಿಕ ಅಭಿಪ್ರಾಯ ಇದೆ.   
   

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ANF and SNDRF ಯೋಧರಿಗೆ ತಂಗಲು ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಇನ್ನು ಚಳಿಗಾಲ ಕೂಡ ಹಂಡ್ರೆಡ್ ಮೀಟರ್ಸ್ ನಲ್ಲಿ ಬರಲಿದ್ದು ವಸತಿ ವ್ಯವಸ್ಥೆ ಇಲ್ಲದೆ ಸುಬ್ರಹ್ಮಣ್ಯದ ಬೀದಿಗಳಲ್ಲಿ ಮಲಗುವ ಭಕ್ತಾದಿಗಳಿಗೆ ಈ ವ್ಯವಸ್ಥೆ ಕೊಟ್ಟರೆ ಅಜ್ಜಿ ಪುಣ್ಯ ಆದರೂ ಸಿಗಬಹುದು ಎಂಬುದು ಸಾರ್ವಜನಿಕ ಆಶಯ. ಬಹುಶಃ ಜಿಲ್ಲಾಡಳಿತಕ್ಕೆ ಇವರನ್ನು ಇಂಚಿ ಕಳಿಸಿದ ವಿಷಯವೇ ಮರೆತು ಹೋಗಿದೆಯಾ ಹೇಗೆ?

...................................................
   ನಮ್ಮಿಂದ  ಇತರರಿಗೆ  ಅನೇಕ ಉಪಯೋಗಗಳು  ಇವೆ ಎಂದು ಮಾಡಿಕೊಳ್ಳುವುದೂ ನಾವೇ... ನಿಮ್ಮಿಂದ  ಇತರರಿಗೆ  ಏನೂ ಉಪಯೋಗವೇ ಇಲ್ಲ ಎಂದು ಮಾಡಿಕೊಳ್ಳುವುದೂ ನಾವೇ... ಈ  ಎರಡೂ ಪ್ರಕ್ರಿಯೆಗಳು ಒಂದು  ಮನುಷ್ಯ ತನ್ನ ಹೆಸರಿಗಾಗಿ ಮಾಡುತ್ತಾನೆ... ಎರಡನೆಯದು  ತನ್ನನ್ನೇ ಎಲ್ಲರೂ ಓಲೈಸಿಕೊಂಡು ಬರಲೆಂದು ಮಾಡಿಕೊಳ್ಳುತ್ತಾನೆ. 


-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಸ್ಪರ್ಧೆ ಸಂಖ್ಯೆ :೧೦,  ಶ್ರೀಮತಿ ಅಕ್ಷತಾ ನಾಗನಕಜೆ ಇವರ  ವೀಡಿಯೋ ವಾಚನ ೨೦೨೪.
ಶೀರ್ಷಿಕೆ : ಮನಸ್ಸೇ ವಿಚಿತ್ರ ನೋಡಲು ಈ ಕೆಳಗಿನ ಲಿಂಕ್ ಒತ್ತಿ.


.....................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.





                             


    "ಹಾಗೆಂದು ಬಂಟ್ವಾಳದಿಂದ ಪುಂಜಾಲಕಟ್ಟೆ ತನಕದ 21 ಕಿಲೋ  ಹೈವೇ ಫಿನಿಷ್ ಆಗಿದೆ. 21 ಕಿಲೋ ಹೈವೇ ಮಾಡಲು ಮೊದಲು 125 ಕೋಟಿ ಅಂದರು, ನಂತರ ಹೈವೇಗೆ ಸಂಬಂಧ ಪಟ್ಟ ಎಲ್ಲಾ ಭೂತ ಪ್ರೇತಾದಿಗಳಿಗೆ ಬಡಿಸಿ ಹೈವೇ ಫಿನಿಷ್ ಆಗುವಾಗ 215 ಕೋಟಿ ತನಕ ಬಿಲ್ ಬೆಳೆಯಿತು ಮತ್ತು ಸ್ಯಾಂಕ್ಷನ್ ಕೂಡ ಆಗಿತ್ತು. ಇಷ್ಟು ಸುರಿದು ಮಾಡಿದ ಹೈವೇ ಸರಿಯಾದರೂ ಉಂಟಾ? ಅದೂ ಅವೈಜ್ಞಾನಿಕ ಹೈವೇ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕುತ್ತಕಂಡೆ ಹೋದ ಹಾಗೆ, ಕುಡುಕರ ಹಾಗೆ ಮಾಲಿಕೊಂಡು, ವಾಲಿಕೊಂಡು ಹೋದ ಹಾಗೆ, ತಲೆ ತಿರುಗಿದ ಹಾಗೆ, ಬಗ್ಗಿಕೊಂಡು ಹೋದ ಹಾಗೆ, ಪರತ್ತೊಂದು ಹೋದ ಹಾಗೆ  ವಾಹನಗಳು ಈ ಹೈವೇಯಲ್ಲಿ ಹೋಗುತ್ತಿವೆ ಎಂದು ಯಾರೋ ಹೇಳಿದ ಹಾಗೆ ಆಗಿದೆ. ಇರ್ಲಿ ಆ ಕತೆ ಮುಗಿದಿದೆ. ಈಗ ಆ ಹೈವೇಯ ನಂತರದ ಕತೆ ಇನ್ನೂ ಗುಂಡಿ ಗುರುಂಪಿದೆ. ರೀಪೇರಿ ಆಗೋದೇ ಕಷ್ಟ ಕಷ್ಟ.
  ಹಾಗೆ ಬಂಟ್ವಾಳದಿಂದ ಹೊರಟ ಹೈವೇ ಪುಂಜಾಲಕಟ್ಟೆ ಮುಟ್ಟುವ ಹೊತ್ತಿಗೆ 215  ಕೋಟಿ ನುಂಗಿ ನೀರು ಕುಡಿಯಿತಲ್ಲ ಮುಂದಿನ ಚಾರ್ಮಾಡಿ ತನಕ ಮುಂದುವರಿಯಲು 32 ಕಿಲೋ ಮೀಟರ್ ಗೆ 375 ಕೋಟಿ ಕೇಳಿತು. ಅಂದರೆ ಒಂದು ಕಿಲೋ ಮೀಟರ್ ಗೆ  ಹನ್ನೊಂದುವರೆ ಕೋಟಿಯ ಹಾಗೆ. ಎಂಥ ಹಸಿವು ಮಾರಾಯ್ರೆ ಈ ಹೈವೇಗೆ.  ತಿಂದು ತಿಂದು ಹೈವೇಗೆ ಜುಲಾಬು ಶುರುವಾಗದಿದ್ದರೆ ಸಾಕು.


  ಹಾಗೆ ಪುಂಜಾಲಕಟ್ಟೆ to ಚಾರ್ಮಾಡಿ ತನಕದ ಹೈವೇ ಕೆಲಸವನ್ನು ಡಿ.ಪಿ ಜೈನ್ ಅಂಥ ಯಾರೋ ಮಾರ್ವಾಡಿ ಜೈನ್ ಗುತ್ತಿಗೆ ಪಡೆದು ಕೊಂಡಿದ್ದು ಆತ ಬ್ಯಾಟಿಂಗ್ ಗೆ ಇಳಿಯದೆ ಇಲ್ಲಿನ ಲೋಕಲ್ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ಕೊಟ್ಟು ಮನೆಯಲ್ಲೇ ಚಾಚಿ ಮಾಡಿ ಬಿಟ್ಟ. ಇತ್ತ ಈ ಸಬ್ ಕಾಂಟ್ರಕ್ಟರ್ ಗಳು ಏನು ಮಾಡಿದರೆಂದರೆ ಊರಿಗೆ ಮೊದಲೇ ಕೆಲಸ ಆರಂಭಿಸಿ ಬಿಟ್ಟರು. ಅವರು ಮಾಡಿದ ಮೊದಲ ಕೆಲಸವೇ ಕಲ್ತಪ್ಪ ಎಬ್ಬಿಸಿದ ಹಾಗೆ ಇದ್ದ ಡಾಂಬರ್ ಎಬ್ಬಿಸಿ ಬಿಟ್ಟು ರಸ್ತೆಯೆಲ್ಲಾ ಅಗೆದು ಹಾಕಿ ಬಿಟ್ಟರು. ಸಮಸ್ಯೆ ಶುರುವಾಗಿದ್ದೇ ಆವಾಗ. ಈಗ ಯಾವುದೇ ರಸ್ತೆ ಅಗಲೀಕರಣ ಮಾಡುವುದಿದ್ದರೆ ಮೊದಲು ಮಾಡ ಬೇಕಾದ ಕೆಲಸ ಏನೆಂದರೆ ರಸ್ತೆಗೆ ಬೇಕಾದ ಜಾಗ ಸ್ವಾಧೀನ ಪ್ರಕ್ರಿಯೆ ನಡೆಯ ಬೇಕು. ಆ ಕೆಲಸವನ್ನು ಇವರು ರಸ್ತೆ ಅಗೆದ ಮೇಲೆ  ಶುರು ಮಾಡಿದ್ದು. ಹಾಗೆಲ್ಲ ಕೇಳಿದಷ್ಟು ಜಾಗ ಜನ ಬಿಡ್ತಾರ, ಅವರು ಕೊರ್ಟು ಕಛೇರಿ ಎಂದು ಬಸ್ ಹತ್ತಿ ಬಿಟ್ಟರು. ಅದರಲ್ಲೂ ಈ ಗುತ್ತಿಗೆದಾರರು ಸರ್ಕಾರಿ ಜಾಗ ಇದ್ದ ಕಡೆ ಕೆಲಸ ಶುರು ಮಾಡುತ್ತಿದ್ದರೂ ಕೆಲಸ ಓ.ಕೆ ಆಗುತ್ತಿತ್ತು. ಅದೆಲ್ಲ ಬಿಟ್ಟು ಇವರು ಜೆಸಿಬಿ ಡ್ರೈವರ್ ಗೆ ಕೆಲಸ ಇಲ್ಲ ಅಂತ ಊರಿಡೀ ಅಗೆದು ಹಾಕಿ ಬಿಟ್ಟರು. ಈಗ ಕುತ್ತಿಗೆಗೆ ಬಂದಿದೆ.


ಇನ್ನು ಯಾವುದೇ ರಸ್ತೆ ಅಗಲೀಕರಣ, ರಿಪೇರಿ, ಹೊಸ ರಸ್ತೆ ಆಗುವುದಿದ್ದರೂ ಆ ಅರಣ್ಯ ಇಲಾಖೆ ಏಳರಾಷ್ಟ್ರ ಶನಿಯ ಹಾಗೆ ಅಡ್ಡ ಬಂದು ನಿಲ್ಲುತ್ತದೆ. ಇಲ್ಲೂ ಅದೇ ಕತೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಹೈವೇ ನಿರ್ಮಾಣಕ್ಕೆ ರಸ್ತೆ ಬದಿಯ ಬೆಲೆ ಬಾಳುವ ಮತ್ತು ಯಾವುದೇ ಮರಗಳನ್ನು ಕಡಿಯಲು, ಕದಿಯಲು ಅರಣ್ಯ ಇಲಾಖೆ ಪರ್ಮಿಶನ್ ಕೊಟ್ಟಿಲ್ಲ. ಹಾಗಾಗಿ ಗುತ್ತಿಗೆದಾರರು ಮರಗಳನ್ನು ನಡುವೆ ಬಿಟ್ಟು ಅದರ ಸುತ್ತ ಅಗೆದು ಮರಗಳ ಸುತ್ತ ಒಂದು ಕಟ್ಟೆ ನಿರ್ಮಾಣ ಮಾಡಿ ಬಿಟ್ಟರು. ಹಾಗಾಗಿ ರಸ್ತೆ ಬದಿಯಲ್ಲಿ ಅಮಾಯಕರನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ ದೊಡ್ಡ ದೊಡ್ಡ ಜಂಬೋ ಮರಗಳೆಲ್ಲ ಈಗ ಬಂದು ರಸ್ತೆ ಮಧ್ಯೆ ನಿಂತಿದೆ. ಅರಣ್ಯ ಇಲಾಖೆ ಮರ ಕಡಿಯಲೂ ಬಿಡುತ್ತಿಲ್ಲ, ಕದಿಯಲೂ ಬಿಡುತ್ತಿಲ್ಲ. ಗುತ್ತಿಗೆದಾರರಿಗೆ ಕುತ್ತಿಗೆಗೆ ಬಂದಿದೆ.
   

ಹಾಗೆ ಪುಂಜಾಲಕಟ್ಟೆ ಚಾರ್ಮಾಡಿ ಹೇವೇ ನಿರ್ಮಾಣಕ್ಕೆ ರಸ್ತೆ ಬದಿಯ 1376ಮರಗಳನ್ನು ಕಡಿಯಲು ಮತ್ತು ಉಳಿದ ಮರಗಳನ್ನು ಕದಿಯಲು ಮಾರ್ಕ್ ಮಾಡಲಾಗಿದೆ. ಆದರೆ ಕಟ್ಟಿಂಗ್ ಆಗಿಲ್ಲ. ಕಟ್ಟಿಂಗ್ ಆಗದೆ ಕೆಲಸ  ಮುಂದೆ ಹೋಗುತ್ತಿಲ್ಲ. ಇನ್ನು ಆ ಕರೆಂಟಿನವರು. ಅವರಿಗೆ ರಸ್ತೆಗಳು, ಹೈವೇಗಳು ಅಂದರೆ ಪಿತ್ರಾರ್ಜಿತ ಆಸ್ತಿ ಇದ್ದ ಹಾಗೆ. ರಸ್ತೆ ಬದಿಯಲ್ಲಿಯೇ ಅವರದ್ದೊಂದು ಕಂಬ. ಮರಗಳನ್ನಾದರೂ ಬೆಳಿಗ್ಗೆ ಆಗುವಾಗ ಒಂದು ಎಲೆ ಮೂಸ್ಲಿಕ್ಕೂ ಸಿಗದ ಹಾಗೆ ಕಡಿಯ ಬಹುದು,ಕದಿಯ ಬಹುದು. ಆದರೆ ಈ ಕರೆಂಟ್ ಕಂಬಗಳನ್ನು ಯಾರೂ ಮುಟ್ಟಕ್ಕೆ ಹೋಗಲ್ಲ ಮಾರಾಯ್ರೆ. ಇಲ್ಲೂ ಅದೇ ಕತೆ. ಹೈವೇ ಗುತ್ತಿಗೆದಾರರಿಗೆ ಕಂಬ ತೆಗೆಯಲು ಮೆಸ್ಕಾಂ ಪರ್ಮಿಶನ್ ಸಿಕ್ಕಿಲ್ಲ. ವನ್ಸ್ ಎಗೈನ್ ಜೆಸಿಬಿಗಳು ರಸ್ತೆ ಬದಿಯ ಕಂಬಗಳ ಸುತ್ತ ಅಗೆದು ಕಂಬಗಳಿಗೂ ಕಟ್ಟೆ ಮಾಡಲಾಗಿದೆ. ಈಗ ಲೈಟ್ ಕಂಬಗಳೂ ರಸ್ತೆಯಲ್ಲಿ, ಮರಗಳೂ ರಸ್ತೆಯಲ್ಲಿ. ಕೆಲಸ ಕೂಡ ನಿಂತಿದೆ. ಹೈವೇ ಬದಿಯ 70 ಪರ್ಸೆಂಟ್ ಸರ್ಕಾರಿ ಜಾಗದಲ್ಲಿ ಇವರು ಕಾಮಗಾರಿ ಶುರು ಮಾಡುವ ಬದಲು ಕೊಡಿಯಿಂದ ಕೊಡಿ ಇವರು ಅಗೆದು ಹಾಕಿದ್ರೆ ಈಗ ಗುತ್ತಿಗೆದಾರನ ಕುತ್ತಿಗೆಗೆ ಬಂದಿದೆ.
   ಹಾಗೆ ಪ್ರಾಥಮಿಕ ಹಂತದ ಯಾವುದೇ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿರುವ ಕಾರಣ ಹೈವೇ ಕಾಮಗಾರಿ ವೆಂಟಿಲೇಟರಿಗೆ ಹೋಗಿದೆ. ಎಲ್ಲಾ ಕಡೆ ರಸ್ತೆ ಅಗೆದ ಕಾರಣ ವಾಹನ ಸಂಚಾರವೇ ಡೇಂಜರಸ್ ಆಗಿದೆ, ಬಸ್ಸುಗಳಿಗೆ ಸೊಂಟನೋವು, ಮೈಕೈ ನೋವು ಶುರುವಾಗಿದೆ. ಹಾಗೆಂದು ಈ ಕೆಲಸ ಮಾಡಿದ ಸಬ್ ಕಾಂಟ್ರಾಕ್ಟರ್ ಗಳಿಗೆ ಅಷ್ಟೊಂದು ಅನುಭವ ಇಲ್ಲ. ಯಾರೋ ಹೈವೇ ಅಗಲೀಕರಣ ಅಂದರು ಇವನತ್ರ ಜೆಸಿಬಿ, ಹಿಟಾಚಿ ಇತ್ತು ಇಡೀ ಊರಿಗೆ ಊರೇ ಅಗೆದು ಹಾಕಿ ಬಿಟ್ಟ. ಇಷ್ಟು ಅಗೆದು ‌ಹಾಕಿದ್ದಕ್ಕೆ ಇವನಿಗೇನಾದರೂ ಬಿಲ್ ಬಂತಾ ಗೊತ್ತಿಲ್ಲ. ಆದರೆ ಮೂಲ ಗುತ್ತಿಗೆದಾರ ಇದ್ದಾನಲ್ಲ ಡಿ.ಪಿ ಜೈನ್ ಕಂಪೆನಿ ಅದು ಮಾತ್ರ 37 ಕೋಟಿ ಬಿಲ್ ಬಾಚಿದೆ. ಯಾಕೆಂತ ಗೊತ್ತಿಲ್ಲ. ಕೊಟ್ಟದ್ದು ಯಾರು, ಯಾವ ಕೆಲಸಕ್ಕೆ ಅಂತ ಹೈವೇ ಮಾರಿಯಮ್ಮನಿಗೇ ಗೊತ್ತು.
  ಈಗ ವಿಷಯಕ್ಕೆ ಬರೋಣ. ಕೇವಲ ಮೂವತ್ತೆರಡು ಕಿಮೀ ಉದ್ದದ ಹೈವೇ ನಿರ್ಮಾಣಕ್ಕೆ 375 ಕೋಟಿ ಬೇಕಾ ಎಂಬ ಪ್ರಶ್ನೆ ಯಾವ ಕೋತಿ ತಲೆಯಲ್ಲೂ ಹುಟ್ಟಿಯೇ ಹುಟ್ಟುತ್ತದೆ. ಈ ಮೂವತ್ತೆರಡು ಕಿಮೀಯಲ್ಲಿ ಘಾಟ್ ಸೆಕ್ಷನ್ ಬರಲ್ಲ, ಸಂಕಗಳು ಬರಲ್ಲ, ಪ್ರಪಾತಗಳು, ಸುರಂಗಗಳು ಯಾವುದೂ ಬರಲ್ಲ. ಈ ಹೈವೇಯಲ್ಲಿ ದೊಡ್ಡ ಸಂಕ ಅಂತ ಇದ್ದರೆ ಅದು ನಿಡಿಗಲ್ ಸಂಕ. ಅದನ್ನು ಈಗಾಗಲೇ ಹರೀಶಣ್ಣ ಅಗಲಗಲಗಲ ಮಾಡಿಸಿದ್ದಾರೆ. ಮತ್ಯಾಕೆ 375 ಕೋಟಿ? 32 ಕಿಮೀ ಗೆ 375 ಕೋಟಿ ಅಂದರೆ ಒಂದು ಕಿಮೀ ಗೆ ಹನ್ನೊಂದುವರೆ ಕೋಟಿ ಆಯ್ತು. ಇಷ್ಟು ದೊಡ್ಡ ದುಡ್ಡು ಯಾಕೆ ಮಾರಾಯ್ರೆ, ಮದುವೆಗೆ ಬಡಿಸ್ಲಿಕ್ಕೆ ಉಂಟಾ ಅಥವಾ ಕುಲೆಗಳಿಗೆ ಬಡಿಸ್ಲಿಕ್ಕೆ ಉಂಟಾ? ಒಂದು ಕಿಮೀ ಗೆ ಹನ್ನೊಂದುವರೆ ಕೋಟಿ ಅಂದರೆ ಹೈವೇಯನ್ನು ಕಡ್ಲೆ ಬಜಿಲ್ ಮಿಕ್ಸ್ ಮಾಡಿ ಗಟ್ಟಿಯಾಗಿ ಕಾಂಕ್ರೀಟೀಕರಣವೇ ಮಾಡಿಸಬಹುದಿತ್ತು. ರಾಷ್ಟ್ರೀಯ ಹೆದ್ದಾರಿ ವಿಭಾಗ ಏನು ಏಮಾ ಮಾಲಿನಿಯ ಕೆನ್ನೆಯಷ್ಟು ನುಣುಪಾದ ಹೈವೇ ನಿರ್ಮಾಣಕ್ಕೆ ಹೊರಟಿದೆಯಾ? 375 ಕೋಟಿಯಲ್ಲಿ ಯಾರಿಗೆಲ್ಲ ಎಷ್ಟೆಷ್ಟು ಎಂಬ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. 375 ಕ್ಕೆ ಸ್ವಲ್ಪ ಸೇರಿಸಿದ್ರೆ ಆಲೂಕಾಸ್ ನವರು ಬಂಗಾರದ್ದೇ ಏನಾದರೂ ಮಾಡಿ ಕೊಡುತ್ತಿದ್ದರು. ಹುಚ್ಚು ಮುಂಡೆ ರಿಸೆಪ್ಷನ್ ನಲ್ಲಿ ಉಂಡವನೇ ಜಾಣ ಎಂಬಂತೆ ಎಲ್ಲಮ್ಮನ ಜಾತ್ರೆ ನಡೆಯುತ್ತಾ ಇರುತ್ತದೆ. ನಾವು ಜಾತ್ರೆ ನೋಡಲು ಬಂದವರು ಅಷ್ಟೇ.
...................................................


ಮಂಗಳೂರು ಮಹಾವೀರ ಕ್ರೆಡಿಟ್ ಸೊಸೈಟಿಯ ಕೇಂದ್ರ ಕಚೇರಿಯು ನವೀಕರಣಗೊಂಡು ಇತ್ತೀಚೆಗೆ ಉದ್ಘಾಟನೆಗೊಂಡಿತು. ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷರಾದ ಪಿ.ಪಿ ಹೆಗ್ಡೆ, ಕಾಂಗ್ರೆಸ್ ನಾಯಕರಾದ ಸುರೇಶ್ ಬಲ್ಲಾಳ್, ಪುತ್ತೂರು ನಗರ ಸಭೆಯ ಮಾಜೀ ಅಧ್ಯಕ್ಷರಾದ ಜೀವಂಧರ್ ಜೈನ್, ಹಲವು ಉದ್ಯಮಿಗಳು, ಸೊಸೈಟಿಯ ಡೈರೆಕ್ಟರ್ ಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
...................................................

   ನಮ್ಮನ್ನು ಮುರಿಯಲು ಪ್ರಯತ್ನ ಪಡುವವರ ಎದುರು ನಾವು ಹೊಸತಾಗಿ ಬಾಡಿ ಹೋಗುವುದಕ್ಕಿಂತ ಹಳತಾಗಿ ಇರುವುದೇ ಒಳ್ಳೆಯದು.

-ಶ್ರೀಮತಿ ಶಾಂತಾ ಕುಂಟಿನಿ
...................................................

ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




                             


    "ಹಾಗೆಂದು ಈ ಸಹಕಾರ ಇಲಾಖೆಯಲ್ಲಿ ಇರುವಷ್ಟು ಕಂಡುಗಳು ಬಹುಶಃ ಬೇರೆ ಎಲ್ಲೂ ಕಾಣ ಸಿಗುವ ಛಾನ್ಸಸ್ ಕಡಿಮೆ. ಇಲ್ಲಿನ ಕಂಡುಗಳು ಸ್ಟ್ಯಾಂಡರ್ಡ್ ಕಂಡುಲು. ಎದುರೆದುರೇ ನುಂಗಿ ಬಿಡುತ್ತಾರೆ.‌ ಇಲ್ಲಿ ಕದಿಯುವುದಕ್ಕೆ ಕೇಟ್ ಕೇಳಿಯೇ ಇಲ್ಲ. ಇದೀಗ ಮೂಡಾಯಿ ಭಾಗದ ಹಂಡ್ರೆಡ್ ಹೊಡೆದ ಸೊಸೈಟಿಯ ಕತೆ ಬಂದಿದೆ. ಇದು ದೊಡ್ಡ ಕತೆಯಲ್ಲ. ದೊಡ್ಡ ಕತೆಯ ಉಪಕತೆ ಅಷ್ಟೇ.
   ಹಾಗೆಂದು ಕೊಲ್ಲಮೊಗ್ರ ಸೊಸೈಟಿಗೆ ಭರ್ತಿ ನೂರು ತುಂಬಿದೆ. ಭಾರೀ ಗಡದ್ದಾಗಿ ನೂರನೇ ಬರ್ತ್ ಡೇ ಕೂಡ ಆಚರಣೆ ಮಾಡಿಕೊಂಡಿತ್ತು. ಆ ಆಚರಣೆ ಬಗ್ಗೆ ಒಂದು ಪುಸ್ತಕವನ್ನೇ ಬರೆಯ ಬಹುದು, ಅಷ್ಟು ಗೌಜಿ ಮಾಡಿದ್ದಾರೆ. ಇಂಥ ಸೊಸೈಟಿಯಲ್ಲಿ ಕೆಲವು ಕಂಡುಗಳು ಸೇರಿಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಇದೀಗ ಸೊಸೈಟಿಯಲ್ಲಿ ಇಬ್ಬರು ಕಂಡುಗಳು ಸಿಕ್ಕಿ ಬಿದ್ದಿದ್ದು ಸೊಸೈಟಿಯ ಲಕ್ಷಾಂತರ ದುಡ್ಡನ್ನು ಇವರಿಬ್ಬರು ಬ್ರೇಕ್ ಫಾಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಿಂದದ್ದನ್ನು ಕಕ್ಕಿಸುವ ಕೆಲಸ ಆಗಬೇಕಾಗಿದೆ.


  ಹಾಗೆಂದು ಸೊಸೈಟಿ ಲೋಕಲ್ ಹುಡುಗರಿಗೆ ಲೋಕಲಲ್ಲೇ ಒಂದು ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲೋಕಲ್ ಹುಡುಗರನ್ನೇ ಸೊಸೈಟಿ ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಈ ಕಳ್ಳರು ಉಂಡ ಎಲೆಗೆ ಕಕ್ಕ ಮಾಡುತ್ತಾರೆ ಎಂಬ ವಿಷಯ ಸೊಸೈಟಿಗೆ ಗೊತ್ತಿರಲಿಲ್ಲ. ಇದೀಗ ಅದು ಸತ್ಯವಾಗಿದೆ. ಸೊಸೈಟಿಯ ಸೇಲ್ಸ್ ಮ್ಯಾನ್ ಗಳಿಬ್ಬರು ಸೊಸೈಟಿಗೆ ಟೊಪ್ಪಿ ಹಾಕಿ ಈಗ "ನಂಗೆ ಗೊತ್ಲೆ" ಎಂದು ಹೇಳುತ್ತಿದ್ದಾರೆ. ಸೊಸೈಟಿ ದುಡ್ಡು ಮಾರಾಯ್ರೆ ಅದು. ಅವರು ಅಷ್ಟು ದೊಡ್ಡ ಮೊತ್ತ ಕದಿಯುವಾಗ ಆಡಳಿತ ಮಂಡಳಿ, ಸೊಸೈಟಿ ಸೆಕ್ರೆಟರಿಗಳು ಎಲ್ಲಿ ಕೂಜಿಮಲೆಗೆ ಹೋಗಿದ್ದರ?


ಅವನೊಬ್ಬ ದೇಶಭಕ್ತರ ಹುಡುಗ ಮತ್ತೊಬ್ಬ ಕೊಲ್ಲಮೊಗ್ರದ ಹುಡುಗ. ಇವರಿಬ್ಬರೂ ಸೊಸೈಟಿಯಲ್ಲಿ ಸೇಲ್ಸ್ ಮ್ಯಾನ್ ಗಳು. ಇವರಿಬ್ಬರೂ ಸೊಸೈಟಿಯ ಮಾರಾಟ ವಿಭಾಗದಲ್ಲಿ ಅದೇನು ಸೇಲ್ ಮಾಡಿದ್ದಾರೋ ಆ ದುಡ್ಡನ್ನೆಲ್ಲ ಕಿಸೆಗೆ ಹಾಕ್ಕೊಂಡು ಮನೆಗೆ ಹೋಗಿದ್ದಾರೆ ಅಷ್ಟೇ. ಇದೆಲ್ಲ ಗೊತ್ತಾಗುವಾಗ ಪೊರ್ತಾಗಿದೆ. ಅದಾಗಲೇ ಲಕ್ಷಾಂತರ ರೂಪಾಯಿ ಕಳ್ಳರ ಪಾಲಾಗಿತ್ತು. ಸೊಸೈಟಿಯಲ್ಲಿ ಇವರಿಬ್ಬರೂ ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆಂದರೆ ಆದಿತ್ಯವಾರವೂ ಪೊಕ್ಕಡೆ ಪೊಕ್ಕಡೆ ಬಿಲ್ ಮಾಡಿ ಕಿಸೆಗೆ ಇಳಿಸಿದ್ದಾರೆ. ಹಾಗೆ ಇವರು ಕದಿಯುವಾಗ ಇಬ್ಬರು CEO ಗಳಿದ್ದರೂ ಅವರಿಗೆ ಗೊತ್ತಾಗಿಲ್ವಾ ಎಂಬ ಪ್ರಶ್ನೆ ಬರುತ್ತದೆ. ಆವರ್ಯಾಕೆ ಈ ಕದಿಯುವ ಕಾರ್ಯಕ್ರಮವನ್ನು ನೋಡುತ್ತಾ ಬಕ ಧ್ಯಾನ ಮಾಡಿದರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಅವರಿಗೂ ಮಂಡೆ ಪಾಲು ಏನಾದರೂ ಇದೆಯಾ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಇದೀಗ ಕಳ್ಳರಿಗೆ ಬೆಳಗಾಗಿದ್ದು ಇಬ್ಬರನ್ನೂ ಮನೆಗೆ ಕಳಿಸಲಾಗಿತ್ತು. ಅದರಲ್ಲಿ ಕೊಲ್ಲಮೊಗ್ರದ ಹುಡುಗ ಕದ್ದ ನಾಲ್ಕು ಲಕ್ಷವನ್ನು ಮರ್ಯಾದೆಯಿಂದ ಕಟ್ಟುತ್ತೇನೆ ಎಂದು ತಪ್ಪೊಪ್ಪಿಕ್ಕೊಂಡ ಕಾರಣ ಅವನ ಎಲೆಯನ್ನು ಒಳಗೆ ಎಳೆಯಲಾಗಿದೆ. ಮತ್ತೆ ಆ ಕೊಲ್ಲಮೊಗ್ರದ ಹುಡುಗ ಕಾಂಗ್ರೆಸ್ ಹುಡುಗ ಆದ ಕಾರಣ ಆಡಳಿತ ಮಂಡಳಿಗೆ ಅವನ ಮೇಲೆ ಕರುಣೆ, ಪ್ರೀತಿ ಉರ್ಕಿ ಹರಿದು ಹರಿಹರ ತೋಡಿನಲ್ಲಿ ಹರಿದ ಕಾರಣ ಅವನಿಗೆ ಮತ್ತೇ ಕದಿಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅವನು ಮತ್ತೊಬ್ಬ ಕಂಡು ಖಟ್ಟರ್ ದೇಶಭಕ್ತರ ಟೀಮಿನ ಜನ ಆದ ಕಾರಣ ಅವನಿಗೆ ಎಂಟು ಕಟ್ಟು ಎಂದು ಹೇಳಿ ಅವನ ಎಳೆಯನ್ನು ಹೊರಗೆ ಇಡಲಾಗಿದೆ. ಇಬ್ಬರು CEOಗಳು, ಆಡಳಿತ ಮಂಡಳಿ ಇದ್ದರೂ ಕೇವಲ ಸೇಲ್ಸ್ ಮ್ಯಾನ್ ಗಳೇ ಇಷ್ಟೆಲ್ಲಾ ಗುಳುಂ ಕಾರ್ಯಕ್ರಮ ಮಾಡಿದ್ದಾರೆಂದರೆ ಇನ್ನು ದೊಡ್ಡ ದೊಡ್ಡ  ತಿರ್ಗಿಸ್ ಕುರ್ಚಿಯಲ್ಲಿ ಕುಳಿತವರು ಸೊಸೈಟಿಯಲ್ಲಿ ಏನೆಲ್ಲ ತಿಂದಿರ ಬಹುದೆಂದು ನೆನಪಿಸಿ ಕೊಂಡರೇ ಜ್ವರ ಬರ್ತದೆ.‌ ಇನ್ನು ಆ ಜನ್ನಣ್ಣ ಯಾಕೆ ಮಾರಾಯ್ರೆ ಪೊಕ್ಕಡೆ ಆಡಿಟರ್? ತಿಂಗಳಿಗೆ ಹದಿನೆಂಟು ಅವರಿಗೆ ಬೇರೆ ಕೊಡಬೇಕು. ಅವರಿಗೆ ಗೊತ್ತಾಗಿಲ್ವಾ ಹುಡುಗರು ಕದಿಯುವಾಗ?
   
ಇನ್ನು ಆ ಪೆಟ್ರೋಲ್ ಪಂಪಲ್ಲಿ ಎಷ್ಟೆಲ್ಲ, ಯಾರೆಲ್ಲ, ಎಲ್ಲೆಲ್ಲ ಬ್ರೇಕ್ ಫಾಸ್ಟ್, ಡಿನ್ನರ್, ಲಂಚ್ ಮಾಡ ಬಹುದು ಎಂಬ ಒಂದು ನೀಲಿ ನಕ್ಷೆ ನಮಗೆ ಲಭಿಸಿದೆ. ಪಂಪ್ ಮಾಡುವ ಜಾಗ ಪರ್ಚೆಸಿಂಗ್ ನಲ್ಲಿಯೇ ಕಮಿಷನ್ ತಿಂದವರ ಪಾಸ್ಪೋರ್ಟ್ ಸೈಜಿನ ಭಾವಚಿತ್ರಗಳು ಅಲ್ಲಲ್ಲಿ ಲೀಕ್  ಆಗುವ ಸಾಧ್ಯತೆ ಬೇಗದಲ್ಲೇ ಇದೆ. ಯಾಕೆಂದರೆ ಅಂಡಮಾನ್ ರೇಟಿನ ಜಾಗಕ್ಕೆ ಹಂಪನಕಟ್ಟೆ ರೇಟು ಕೊಡಲಾಗಿದೆ. ಇನ್ನು ಗುಡ್ಡೆ ಅಗೆಯಲು, ಸಮತಟ್ಟು ಮಾಡಲು, ಅದಕ್ಕೆ ಇದಕ್ಕೆ ಅಂತ ದೊಡ್ಡ ದೊಡ್ಡ ದೊಡ್ಡ ಬಿಲ್ಲುಗಳು ಪಾಸಾಗಿದೆ. ಎಲ್ಲಾ ಬರೆದರೆ ಕತೆ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ಸೊಸೈಟಿ ಟೈಟಾನಿಕ್ ಆಗದಿದ್ದರೆ ಅಷ್ಟೇ ಸಾಕು.
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



                            


    "ಹಲೋ" ಅಂತ ಅತ್ಲಕಡೆಯಿಂದ ಇಂಪಾದ ಪೊಣ್ಣು ಸ್ವರ. ಆ ಇಂಪಿಗೆ ಎಂಬತ್ತರ ವಯಸ್ಸಿನ ಟಿಕೆಟ್ ರೆಡಿಯಾದವನೂ ಸರ್ತ ಆಗ ಬೇಕು. ಅಂಥ ಸ್ವರ. ಇತ್ಲಕಡೆಯಿಂದ ಯಾವುದೋ ಹುಡುಗ. ಅದೊಂದು ಮಿಸ್ಸಿಂಗ್ ಕಾಲ್. ಇಂಪಾದ ಸ್ವರ ಮಿಸ್ಸಾಗಿ ಬಂದ್ರೆ ಯಾವ ಹುಡುಗನೂ ಬಿಡಲ್ಲ. ಮರು ದಿನ ಪುನಃ ಅದೇ ಕೋಗಿಲೆ ಕಾಲ್. ಇತ್ಲಗಿನ ಹುಡುಗನಿಗೆ ಅನಾಯಾಸವಾಗಿ ಛಾನ್ಸ್ ಸಿಕ್ಕ ಸಂಭ್ರಮ. ಮೊದಲು ಪರಿಚಯ, ಆಮೇಲೆ ಯೋಗಕ್ಷೇಮ, ಅದರ ನಂತರ  ಉಭಯಕುಶಲೋಪರಿ. ನಂತರ ಫ್ರೆಂಡ್ ಶಿಪ್, ಆಮೇಲೆ ಲವ್ವು ಕಡೇಗೆ ಜೀವ. ಇಷ್ಟು ಫೋನಲ್ಲಿ ಆದ ಮೇಲೆ ಹುಡುಗನ ಕೈಕಾಲು ನೆಲದಲ್ಲಿ ನಿಲ್ಲಲ್ಲ. ಹುಡುಗ ರೈಲು ಬೇಕಾದರೂ ಬಿಟ್ಟಾನು ಆದರೆ ಆ ಮಿಸ್ ಕಾಲ್ ಹುಡುಗಿಯನ್ನು  ಬಿಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಬಂದಾಗ ಹುಡುಗನನ್ನು "ಮುಂದಿನ ಕೆಲಸಗಳಿಗೆ ಬಾ" ಎಂದು ಕೋಗಿಲೆ ಕರೆಯುತ್ತದೆ. ಹುಡುಗ ಸಲಕರಣೆಗಳನ್ನು ಹಿಡಿದುಕೊಂಡು ಹುಡುಗಿ ಹೇಳಿದ ಸ್ಪಾಟಿಗೆ ಬರುತ್ತಾನೆ.
  ಬೆಳ್ಳಾರೆ ಸಮೀಪದ ಪಂಜಿಗಾರು ಪರಿಸರದಲ್ಲಿ ಹನಿ ಟ್ರ್ಯಾಪ್ ಗ್ಯಾಂಗೊಂದು ಸಕ್ರೀಯವಾಗಿದೆ ಮತ್ತು ಕೆಲವು ಹುಡುಗರನ್ನು ಔಟ್ ಮಾಡಿದೆ ಎಂಬ ಸುದ್ದಿ ಇದೆ. ಬೆಳ್ಳಾರೆ ಪರಿಸರದ ಕೆಲವು ಪಡ್ಡೆಗಳನ್ನು ಅಥವಾ ಬೋರಿ ಕಂಜಿಗಳನ್ನು ಟಾರ್ಗೆಟ್ ಮಾಡಿ ಹುಡುಗಿ ಕೈಯಲ್ಲಿ ಕಾಲ್ ಮಾಡಿಸಲಾಗುತ್ತದೆ. ಹುಡುಗಿ ಕಾಲ್, ಅದರಲ್ಲೂ ಕೋಗಿಲೆ ಕಾಲ್ ಅಂದ ಕ್ಷಣ ಹುಡುಗ ಸರೆಂಡರ್ ಆಗಿ ಬಿಡುತ್ತಾನೆ. ಎರಡ್ಮೂರು ದಿವಸದಲ್ಲಿ ಅಥವಾ ವಾರದೊಳಗೆ ಕೋಗಿಲೆ ಹುಡುಗನನ್ನು ಪಂಜಿಗಾರಿಗೆ ಸ್ವಾಗತ ಸುಸ್ವಾಗತ ಮಾಡುತ್ತದೆ. "ನಾಳೆ ಪಂಜಿಗಾರಿಗೆ ಬಂದು ಕಾಲ್ ಮಾಡು" ಎಂಬ ಕೋಗಿಲೆಯ ಇಂಪಾದ ಆಹ್ವಾನಕ್ಕೆ ಹುಡುಗ ಸತ್ತೇ ಹೋಗುತ್ತಾನೆ. ಮರುದಿನ ಹುಡುಗ ಬಾಡಿಗೆ ಅಭ್ಯಂಜನ ಸ್ನಾನ ಮಾಡಿ, ಗಡ್ಡ ಟ್ರಿಂ ಮಾಡಿಸಿ, ಬಾಕ್ಸ್ ಕಟ್ ಮಾಡಿಸಿ, ಸೆಂಟು ಬಳಿದು, ಬಾಡಿ ಸ್ಪ್ರೇ ಮಾಡಿ, ಪೌಡರ್ ಹಾಕಿ ಜಾಮ್ ಜೂಮೆಂದು ಪಂಜಿಗಾರಿಗೆ ಚಿತ್ತೈಸಿ ಕೋಗಿಲೆಗೆ ಕಾಲ್ ಮಾಡುತ್ತಾನೆ. "ಗುಳಿಗ್ಗನ ಕಟ್ಟೆದಡೆ ಬಲೆ"  ಎಂದು ಕೋಗಿಲೆ ರಾಗವಾಗಿ ಹೇಳುತ್ತದೆ.  ಹುಡುಗ ಹಾರಿಕ್ಕೊಂಡು ಗುಳಿಗ್ಗನ ಕಟ್ಟೆಯತ್ರ ಬರುತ್ತಾನೆ. ಅಲ್ಲಿ ಬಲ್ಲೆ ಮಾರಾಯ್ರೆ, ಗುಳಿಗ್ಗ ಬೇರೆ ಇದ್ದಾನೆ. ಹುಡುಗನಿಗೆ ಧಸಕ್ಕೆಂದು ಆಗುವಷ್ಟರಲ್ಲಿ ಕೋಗಿಲೆ ಪ್ರತ್ಯಕ್ಷ. ಕಪುಡ ಕಾಳಿ, ಕಕ್ಕೆಯಷ್ಟು ಕಪ್ಪು ಹಲ್ಲು ಮಾತ್ರ ಬಿಳಿ, ಲೋಕಲ್ ಕಾಟು. ಆ ಕೋಗಿಲೆಯನ್ನು ನೋಡಿಯೇ ಹುಡುಗ ಧರೆಗಿಳಿದು ಹೋಗುತ್ತಾನೆ. ಮತ್ತೆಂಥ ಮಾಡೋದು, ಬಂದ ಕರ್ಮಕ್ಕೆ ಹುಳ ಬಿಟ್ಟು ಹೋಗುವ ಎಂದು ಹುಡುಗ ಕೋಗಿಲೆ ಹಿಡಕ್ಕೊಂಡು  ಬಲ್ಲೆಯಲ್ಲಿ ಮಾಯವಾಗುತ್ತಾನೆ. ಅಷ್ಟೇ.


  ಹಾಗೆ ಪಂಜಿಗಾರು ಗುಳಿಗ್ಗನ ಕಟ್ಟೆಯತ್ರ ಬಲ್ಲೆ ಅಲ್ಲಾಡಲು ರೆಡಿಯಾದಗ "ಏರ್ಯವು ಬಲ್ಲೆಡ್, ಪಿದಾಯಿ ಬಲೆ" ಎಂಬ ಕೂಗು ಬಲ್ಲೆ ಹೊರಗಿನಿಂದ. ಹುಡುಗನ ಸಲಕರಣೆಗಳನ್ನು ಮಡಚಿಟ್ಟು ಹೊರಗೆ ಬಂದು ನೋಡಿದರೆ ವೆಸ್ಟ್ ಇಂಡೀಸ್ ಟೀಮಿನಂಥ ಒಂದು ಟೀಮ್. ಎಲ್ಲರೂ ಕಪ್ಪು ಕಪ್ಪು, ಕರ್ರಗೆ. ನಂತರ ಹುಡುಗನ ವಿಚಾರಣೆ, ಕೆಬಿತ್ತಕಂಡೆಗೆ ಎರಡು, ಪೈಪ್ ಲೈನಿಗೆ ಒಂದು. ಒಂದೋ ಪೋಲಿಸ್ ಅಥವಾ ನಮಗೆ ಇಂತಿಷ್ಟು ಎಂದು ವೆಸ್ಟ್ ಇಂಡೀಸ್ ಟೀಂ ಬೆದರಿಕೆ ಹಾಕುತ್ತದೆ. ಪೋಲಿಸ್ ಗಿಂತ ಇವರೇ ಆಗಬಹುದು ಎಂದು ಹುಡುಗ ವೆಸ್ಟ್ ಇಂಡೀಸ್ ಟೀಂನೊಂದಿಗೆ ಸೆಟಲ್ ಮೆಂಟ್ ಮಾಡಿಕ್ಕೊಂಡು ಗುಳಿಗ್ಗನಿಗೆ ಒಂದು ನಮಸ್ಕಾರ ಮಾಡಿ ಪಂಜಿಗಾರು ಬಿಡುತ್ತಾನೆ.
  ಬೆಳ್ಳಾರೆ ಸಮೀಪದ ಪಂಜಿಗಾರು ಪರಿಸರದಲ್ಲಿ ಈ ಟೈಪಿನ ಒಂದು ನಾಟಕ ಹಲವು ಪ್ರದರ್ಶನಗಳನ್ನು ಕಂಡಿದೆ ಎಂದು ತಿಳಿದುಬಂದಿದೆ. ಆದರೆ ಯಾವ ಹುಡುಗನೂ ಮಾನ ಮರ್ಯಾದೆಗೆ ಅಂಜಿ ಈ ಬಗ್ಗೆ ಬೆಳ್ಳಾರೆ ಪೋಲಿಸರಿಗೆ ಕಂಪ್ಲೈಂಟ್ ಕೊಡದ ಕಾರಣ ಕೋಗಿಲೆ ಮತ್ತು ವೆಸ್ಟ್ ಇಂಡೀಸ್ ಟೀಮ್ ಮತ್ತೇ ಮತ್ತೇ ಸಕ್ರೀಯವಾಗುತ್ತಿದೆ ಎಂದು ತಿಳಿದುಬಂದಿದೆ. ಗುಳಿಗ್ಗನ ಕಟ್ಟೆಯಿಂದ ಕಾಲ್ ಮಾಡುವ ಕೋಗಿಲೆಯನ್ನು ಮೀಟ್ ಮಾಡಲು ಹೋಗುವ ಹುಡುಗನಿಗೆ ಅಲ್ಲಿ ವೆಸ್ಟ್ ಇಂಡೀಸ್ ಟೀಮ್ ಇರುತ್ತದೆ ಎಂಬ ಮಾಹಿತಿ ಇರೋದಿಲ್ಲ. ಹಾಗಾಗಿ ಅಲ್ಲಿ ಮ್ಯಾಚ್ ಸೋತು ಬರುತ್ತಾನೆ. ಹಾಗಾಗಿ ಇನ್ನು ಮುಂದೆ ಯಾರಿಗಾದರೂ ಗುಳಿಗ್ಗನ ಕಟ್ಟೆ ಕೋಗಿಲೆ ಕಾಲ್ ಮಾಡಿ ಕಟ್ಟೆ ಹತ್ರ ಬರ್ಲಿಕ್ಕೆ ಹೇಳಿದರೆ ಹಾಗೆ ಹೋಗಬೇಡಿ. ಯಾಕೆಂದರೆ ಅಲ್ಲಿ ವೆಸ್ಟ್ ಇಂಡೀಸ್ ಟೀಮ್ ಇದೆ. ನೀವು ಈಚೆಯಿಂದ ಹೋಗುವಾಗಲೇ ಬೆಳ್ಳಾರೆ ಪೋಲಿಸರ ಆಸ್ಟ್ರೇಲಿಯಾ ಟೀಮನ್ನು ಕರಕ್ಕೊಂಡೇ ಹೋಗಿ. ಅಲ್ಲಿ ಅವರು ಸಿಕ್ಸರ್, ಬೌಂಡರಿ ಬಾರಿಸುವಾಗ ಬಲ್ಲೆ ಟೀಂಗೆ ಬುದ್ಧಿ ಬರುತ್ತದೆ. ಇಲ್ಲದಿದ್ದರೆ ಇನ್ನೂ ಅನೇಕ ಅಮಾಯಕ ಬೋರಿಕಂಜಿಗಳು ಬೀಫ್ ಆಗುವ ಅಪಾಯಗಳಿವೆ.
   
............................................

ಗಿಡ ನಾಟಿ ಕಾರ್ಯಕ್ರಮ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ ಟ್ರಸ್ಟ್, ಪಂಜ ವಲಯ, ಸಾಮಾಜಿಕ ಅರಣಿಕರಣ ಕಾರ್ಯಕ್ರಮದಡಿಯಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು...


ಪಂಜ ವಿಪತ್ತು ಘಟಕ ಹಾಗೂ ಕೂತ್ಕುಂಜ ಒಕ್ಕೂಟದ ವತಿಯಿಂದ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಇವರು ಗಿಡ ನೆಡುವ ಮುಖಾಂತರ ಚಾಲನೆ ನೀಡಿದರು. ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾದ ಶ್ರೀಮತಿ ಪವಿತ್ರ,,ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ಮೋನಪ್ಪ ಗೌಡ ಬೊಳ್ಳಜೆ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಿ, ಸುಳ್ಯ ತಾಲ್ಲೂಕು ಯೋಜನಾಧಿಕಾರಿಯವರಾದ ಮಾಧವ ಗೌಡ, ತಾಲ್ಲೂಕು ಕೃಷಿ ಅಧಿಕಾರಿ ರಮೇಶ್,ಘಟಕ ಪ್ರತಿನಿಧಿ ವಿಶ್ವನಾಥ ಸಂಪ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಸೇವಾಪ್ರತಿನಿಧಿ ಕವಿತಾ, ಮೇಲ್ವಿಚಾರಕಕಿ ಕಲಾವತಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು..

..........................................

ನಿದ್ದೆ ಮಾಡುವವರ ಗಮನಕ್ಕೆ:
   ನಿದ್ದೆ ಮಾಡುತ್ತಿರುವವರ ಎಬ್ಬಿಸಬಾರದು ಎಂದು ಅಂದು ಹಿರಿಯರು ಹೇಳುತ್ತಿದ್ದರು. ಆದರೀಗ ಹಾಗಾಗುತ್ತಿಲ್ಲ. ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ನಿದ್ದೆ ಮಾಡಲು ಬಿಡದೆ ಎಬ್ಬಿಸಿಯಾದರೂ ಕೆಲಸ ಮಾಡುತ್ತಾರೆ. ಮಾಡಿಸುತ್ತಾರೆ... ನಿದ್ದೆಯಿಂದ ಯಾಕೆ ಎಬ್ಬಿಸಬಾರದು ? ಎಬ್ಬಿಸಿದರೆ ಏನಾಗುತ್ತದೆ ? ಅಂದು ಹಿರಿಯರು ನುಡಿದ ಈ ಮಾತಿನ ಅರ್ಥ ಏನಾಗಿರಬಹುದು ?
    ಯಾಕೆಂದರೆ ನಿದ್ದೆ ಎಂದರೆ, ಮಾನವನ ಬಾಳಿಗೆ ಮುತ್ತು, ರತ್ನ ವಜ್ರ ವೈಢೂರ್ಯಕ್ಕಿಂತಲೂ ಹಿರಿದು ಎನ್ನಬಹುದು.. ಆಯುರ್ವೇದ ಶಾಸ್ತ್ರದ ಪ್ರಕಾರ ನಿದ್ದೆ ಅಂದಾಜು 8 ಘಂಟೆ ಕಾಲ ಆದರೂ ಬೇಕೆಂದರೂ ಕೂಡಾ ಇಲ್ಲವೆಂದರೆ ಅನಾರೋಗ್ಯ ಕಾಡಬಹುದು ಎಂದು ಹೇಳುತ್ತಾರೆ.. ಇದು ಒಂದಾದರೆ ಇನ್ನೊಂದು ಏನೆಂದರೆ ಯಾರು ಯಾರನ್ನು ನಿದ್ದೆಯಿಂದ ಎಬ್ಬಿಸುತ್ತಾರೋ ಅವರೇ ನಿದ್ರಿಸುವವನ ಕರ್ಮಗಳನ್ನು ಹೊತ್ತು ಕೊಳ್ಳಬೇಕಾಗುತ್ತದೆ. ಹಾಗೆಯೇ ಅವನ ನಂತರದ ಮುಂದಿನ ಭವಿಷ್ಯವನ್ನೂ ಕೂಡಾ ನಿದ್ದೆಯಿಂದ ಎಬ್ಬಿಸಿದವರೇ ಪರೋಕ್ಷವಾಗಿ ಎದುರಿಸ ಬೇಕಾಗುತ್ತದೆ.. ಅದು ಕೆಲವರಿಗೆ ಪ್ಲಸ್ ಆಗಬಹುದು.. ಹೇಗೆಂದರೆ ನಿದ್ರಿಸುವವ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಕನಸು ಕಾಣುತ್ತಾ ನಿದ್ರಿಸುತ್ತಿದ್ದರೆ, ಎಬ್ಬಿಸಿದವ ಅದನ್ನು ಸಾಕ್ಷಾತ್ಕರಿಸಬಹುದು.. ಒಂದು ವೇಳೆ ನಿದ್ರಿಸುತ್ತಿರುವವ ಏನಾದರೂ ಕೆಟ್ಟ ಕೆಲಸಕ್ಕೆ ಯೋಚನೆ ಮಾಡುವವನಾಗಿದ್ದರೆ, ಎಬ್ಬಿಸಿದವ ಅವನ ಕೆಟ್ಟ ಕರ್ಮಗಳನ್ನು ಹೊತ್ತು ಕೊಳ್ಳಬೇಕಾಗುತ್ತದೆ.. ಇದರಿಂದ ತೊಂದರೆಗೊಳಪಡ ಬೇಕಾಗುತ್ತದೆ.. ಇದೇ ಕಾರಣಕ್ಕೆ ಹಿರಿಯರು ನಿದ್ರಿಸುವವನ ಮೈ ಮುಟ್ಟದಿರಿ.. ಎಚ್ಚರಿಸದಿರಿ ಎಂದರು..ಅದೇ ರೀತಿ ಅವರು ತಮ್ಮ ಸೂಕ್ಷ್ಮ ಶರೀರದಿಂದ ಇನ್ನಾವುದೋ ಲೋಕಕ್ಕೆ ಪಯಣಿಸುತ್ತಿರುತ್ತಾರೆ.. ಅದು ಅವರ ಕೆಲಸವಾಗಿರುತ್ತದೆ..ಆ ಸಮಯದಲ್ಲಿ ನಾವು ಎಚ್ಚರಿಸಿದಾಗ  ಸಿಡಿದೇಳಬಹುದು.. ಸೂಕ್ಷ್ಮ ಶರೀರದಲ್ಲಿರುವ ನೆಗೆಟಿವ್  ನಮಗೇ ಉಪದ್ರ ಕೊಡುವ ಸಂದರ್ಭ ಇರುತ್ತದೆ.. ಹಾಗಾಗಿ ಇಂತಹಾ ಸಂದರ್ಭವನ್ನು ನಾವು ಯಾರ್ಯಾರದನ್ನೋ ಅನುಭವಿಸುತ್ತಿರುತ್ತೇವೆ.. ಕೊನೆಗೆ ಹಣೆಬರಹ ಅನ್ನುತ್ತೇವೆ.. 


-ಶ್ರೀಮತಿ ಶಾಂತಾ ಕುಂಟಿನಿ
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



                          


   ಪುರಾಣ ಪ್ರಸಿದ್ಧ. ಪ್ರಪಂಚದ ಏಕೈಕ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಹರಿಯುವ ಪರಮ ಪವಿತ್ರ ಪುಣ್ಯ ನದಿ ಕುಮಾರಧಾರ ನದಿ ತಟದಲ್ಲಿ ರೈನ್ ಡ್ಯಾನ್ಸ್ ಮಾಡಲು ಶ್ರೀ ದೇವಳದ ವತಿಯಿಂದ ವ್ಯವಸ್ಥೆ ಆಗಿದೆ.
ಹೌದು ಸ್ವಾಮಿ.., ಸರ್ಪ ದೋಷ ನಿವಾರಣೆಗೆ ಶ್ರೀ ಕ್ಷೇತ್ರ ಎಷ್ಟು ಪ್ರಾಮುಖ್ಯವೋ.., ಅಷ್ಟೇ ಪ್ರಾಮುಖ್ಯ ಚರ್ಮ ರೋಗ ನಿವಾರಣೆಗೆ ಈ ಪುಣ್ಯ ನದಿ ಕುಮಾರಧಾರ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ ಕುಮಾರಧಾರ ನದಿ. ಕುಮಾರ ಪರ್ವತದಲ್ಲಿ ಹುಟ್ಟಿ. ಪರ್ವತ ತಪ್ಪಲಿನಲ್ಲಿ ಇರುವ ನೈಸರ್ಗಿಕ ಔಷಧೀಯ ಗುಣಗಳನ್ನು ಹೊಂದಿರುವ ಮರಗಳ ಬೇರನ್ನು ಮರ್ಧಿಸಿಕೊಂಡು ಬಂದು ಕುಕ್ಕೆ ಕ್ಷೇತ್ರಕ್ಕೆ ತಲುಪುವಾಗ ಸಂಪೂರ್ಣ ಔಷಧೀಯ ಗುಣಗಳ ನದಿಯಾಗಿ ಬದಲಾಗುತ್ತದೆ. ಈ ನದಿಯ ನೀರಿನಲ್ಲಿ ಮೂರು ಬಾರಿ ಮುಳುಗಿ ಎದ್ದರೆ. ಎಲ್ಲಾ ಚರ್ಮ ರೋಗಗಳ ಜೊತೆ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಸಿಗುತ್ತದೆ ಎಂಬುದು ಪುರಾಣ ಕಾಲದಿಂದಲೂ ನಂಬಿಕೊಂಡು ಬರುತ್ತಿರುವ ನಂಬಿಕೆ. ಪೌರಾಣಿಕ ಕಾಲದಲ್ಲಿ ಎಲ್ಲಿಯೂ ವಾಸಿ ಮಾಡಲಾಗದ ಕುಷ್ಠರೋಗ ನಿವಾರಣೆ ಮಾಡಿದ ಕಥೆ ನಮಗೆ ಸಿಗುತ್ತದೆ.
ನದಿ ಸ್ನಾನ ಎಂದರೆ‌, ನದಿ ತಟದಲ್ಲಿ ಹೋಗಿ ಕೃತಕ ಪೈಪ್ ಅಳವಡಿಸಿದ ಶವರ್ ಕೆಳಗೆ ನಿಂತು ಸ್ನಾನ ಮಾಡುವುದಲ್ಲ. ಪೂರ್ವಾಭಿಮುಖವಾಗಿ ನಿಂತು ದೇವರನ್ನು ಪ್ರಾರ್ಥಿಸಿ ಮೂರು ಬಾರಿ ಮುಳುಗೇಳುವುದು ಪವಿತ್ರ ನದಿ ಸ್ನಾನ. ಸೌಕರ್ಯದ ಹೆಸರಿನಲ್ಲಿ ನದಿ ತಟದಲ್ಲಿ ಈ ರೀತಿಯ ಶವರ್ ಸ್ನಾನಕ್ಕೆ ದೇವಳದ ವತಿಯಿಂದ ಅನುವು ಮಾಡಿಕೊಡುವುದು. ವಿಪರ್ಯಾಸವೇ ಸರಿ.


  ಅಲ್ಲ ಸ್ವಾಮಿ ಭಕ್ತಾದಿಗಳು ಶವರ್ ಕೆಳಗೆ ಸ್ನಾನ ಮಾಡುವುದಾದರೆ ಕುಮಾರಧಾರ ನದಿ ತಟಕ್ಕೆ ಯಾಕೆ ಹೋಗಬೇಕು...!? ದೇವಳದ ಎಲ್ಲಾ ಲಾಡ್ಜ್ ಗಳ ಹಾಗು ಕೆಲವೊಂದು ಖಾಸಗಿ ಲಾಡ್ಜ್ ಗಳ. ಬಾತ್ ರೂಮ್ ನಲ್ಲಿ ಬರುವುದು ಇದೇ ಕುಮಾರಧಾರ ನದಿಯ ನೀರು. ಅವರಿಗೆ ರೂಂ ನಲ್ಲೆ ಸ್ನಾನ ಮಾಡಬಹುದಲ್ವ..!?


ಸೌಕರ್ಯದ ನೆಪದಲ್ಲಿ ಎ.ಸಿ. ರೂಂ ನಲ್ಲಿ ಕೂತು ಇಂತಹ ಅಂಡಿ-ಗುಂಡಿ. ನಿರ್ಣಯದಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಅಭಿವೃದ್ಧಿ ಆಗಬೇಕೇ...? ಒಂದು ವೇಳೆ ನಿಮಗೆ ಭಕ್ತಾದಿಗಳ ಸೌಕರ್ಯವೇ ಪ್ರಮುಖ ಧ್ಯೇಯ ಎಂದಾದರೆ.., ಶನಿವಾರ, ಭಾನುವಾರ ಸಮರ್ಪಕ ರೂಂ ನ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಮಲಗುವ ಭಕ್ತಾಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ಕುಮಾರಧಾರ ದಲ್ಲೇ ಅಭಿವೃದ್ಧಿ ಮಾಡಬೇಕು ಎಂಬ ಹರಕೆ ಇದ್ದರೆ. ಸ್ನಾನಘಟ್ಟದ ಮೆಟ್ಟಿಲುಗಳಿಗೆ ಸೂಕ್ತ ಗ್ರಿಲ್ ಅಳವಡಿಸಿ ಭಕ್ತಾದಿಗಳಿಗೆ ಪವಿತ್ರ ನದಿ ಸ್ನಾನಕ್ಕೆ ಅವಕಾಶ ಮಾಡಿಕೊಡಿ. ಸುಸಜ್ಜಿತ ಬಟ್ಟೆ ಬದಲಾಯಿಸುವ ಕೊಠಡಿ ಕಟ್ಟಿಸಿ. ಇದೆಲ್ಲ ಬಿಟ್ಟು ಪರಮ ಪವಿತ್ರ ಪುಣ್ಯ ನದಿ ತಟದಲ್ಲಿ ಶವರ್ ಬಾತ್ ನಿರ್ಮಿಸಿ ರೈನ್ ಡ್ಯಾನ್ಸ್ ಮಾಡಲು ಅವಕಾಶ ಮಾಡಿಕೊಡಬೇಡಿ. ಪುಣ್ಯ ಕ್ಷೇತ್ರ. ಪುಣ್ಯ ಕ್ಷೇತ್ರವಾಗಿಯೇ ಇರಲಿ ಪ್ರವಾಸ ತಾಣ ಆಗುವುದು ಬೇಡ ಎಂದು ಸುಬ್ರಹ್ಮಣ್ಯನ ಭಕ್ತರಾದ ನಮ್ಮೆಲ್ಲರ ಆಶಯ.
   
..........................................

ಕವನ

ಪಾರ್ವತಿನ ಮೈತ್ತ ಬೆಗರ್ಡ್ ದ್ ಪುಟ್ಟ್ ದ್ ಬತ್ತೆಗೆ ಗಣಪೆ..
ಅಂಚಾದ್ ಆಯೆಗೇ ದುಂಬಾಯಿನ 
ಸುಗಿಪುನು ಕೊರ್ಪೆ

ಅಪ್ಪೆ ಅಮ್ಮೆನ  ಮೋಕೆದ ಕೊಂಡಾಟದ ಬಾಲೆ 
ಚೌತಿದಾಣಿದ  ಮೂರ್ತಿ ರೂಪೊಗು ಮಾತೆರ್ಲಾ 
ಕೈನ್ ಮುಗಿಯೊನ್ಲೆ

ವಿದ್ಯೆ, ಬುದ್ಧಿ,ತಿಳುವಳಿಕೆದ ಸಾರ ಬದುಕ್ ಗ್ ನಂಕ್ ಬೋಡು 
ತರೆತಗ್ಗಾದ್ ನಟ್ಟೊಂದ್ ಕೇನ್ಲೇ 
ದೇಬೆರೇ ಎಂಕ್ಲೆಗ್ ಅವೆನ್ ಕೊರೊಡು..

ಭಕ್ತಿ ದಿಂಜಿದ್ ಮಲ್ತೆರತ್ತೆ,ಮೋದಕ ಕಜ್ಜಾಯೊನು 
ತಿನೊಡು ಅವೆನ್ ಪ್ರಸಾದ ಪಂಡ್ ದ್ 
ಸಾರ್ಥಕನ್ ಪಡೆಪಿನೊ..

ಭಾರಿ ಗೌಜಿ ಪರ್ಬ ಮಾತ್ರ ಊರುಗಿಡೀ ಸಡಗರೊ
ಸಂತೋಷದ ನಲಿಪು ನಮಕ್ 
ಬರ್ಪುಂಡಿಗೆ ವರ್ಷಡೊರೊ

ಆಂಡ ದಾನೆ ಗಣಪತಿನ್ ಬುಡ್ನಗೊರ ಬೇಜಾರು
ನೀತಿ ಉಂಡು ಇಂದೆಟೆ  ತೆರಿಲೆ
ದೇರ್ತ್ನಕ್ಲೆ ತಿರ್ತ್ ಪಾಡ್ವೆರು

ರಚನೆ.. ಶ್ರೀಮತಿ ಶಾಂತಾ ಕುಂಟಿನಿ

..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



                         


   ಕರ್ನಾಟಕದ ನಂಬರ್ ವನ್ ದೇವರ ಊರಿನಲ್ಲಿ ಈಗ ಹೊಸ ಹೊಸ ರೂಲ್ಸ್.  ಇಲ್ಲೀಗ ರಥಬೀದಿಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೂ ಕೆಲವು ದಿನಗಳಿಂದ ಈ ರಥಬೀದಿಯಲ್ಲಿ ಕಾರೊಂದು ರಾಜಾರೋಷವಾಗಿ ಎಂಟ್ರಿ, ಎಕ್ಸಿಟ್ ಆಗುತ್ತಿದೆ. ಯಾರ ಕಾರೆಂದು ಗೊತ್ತಿಲ್ಲ. ಕಾಗೆ ಕಲರ್ ಕಾರು. ನೋ ಎಂಟ್ರಿ ರಥಬೀದಿಯಲ್ಲಿ ಬಂದು ರಥದ ಶೆಡ್ ಹತ್ತಿರವೇ ಪಾರ್ಕ್ ಮಾಡಲಾಗುತ್ತಿದೆ. ಏನು ಪುಳಿ ಮಾರಾಯ್ರೆ ಇವನಿಗೆ ದೇವರ ರಥದ ಹತ್ತಿರ ಕಾರು ನಿಲ್ಲಿಸಲು.


  ಹಾಗೆಂದು ಕುಕ್ಕೆ ಪ್ರೈವೇಟ್ ದೇವಸ್ಥಾನ ಅಲ್ಲ. ಪ್ರೈವೇಟ್ ಆಗಿದ್ದರೆ ದೇವಸ್ಥಾನದ ಮೊಕ್ತೇಸರ ಅಂತ ಹೇಳ ಬಹುದಿತ್ತು. ಆದರೆ ಕುಕ್ಕೆ ಸರ್ಕಾರದ ದೇವಸ್ಥಾನ. ಇಲ್ಲಿ ರಾಮ ದೂಮ ಚೋಮ ಎಲ್ಲರೂ ಒಂದೇ. ಎಲ್ಲರಿಗೂ ಒಂದೇ ರೂಲ್ಸು. ಆದರೂ ನೋ ಎಂಟ್ರಿಯಲ್ಲಿ ಎಂಟ್ರಿ, ನೊ ಪಾರ್ಕಿಂಗ್ ನಲ್ಲಿ ಪಾರ್ಕಿಂಗ್. ಈ ಮಹಾನುಭಾವರು ಯಾರು? ಇಲ್ಲಿ ಇನ್ನೂ ಆಡಳಿತ ಮಂಡಳಿ ಆಗಿಲ್ಲ. ಅದಕ್ಕೆ ಮೊದಲೇ ಈ ಸೈಜಿನ ಕಾರು ಬಾರು. ದನಗಳ್ಳರ ಕಾರಾ ಅಥವಾ ಹಣಗಳ್ಳರ ಕಾರಾ? ಎಲ್ಲಿದ್ದಾರೆ ನೋ ಎಂಟ್ರಿ, ನೋ ಪಾರ್ಕಿಂಗ್ ಮಾಡಿದವರು?
   
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



                        


   ಇವರು ಪೈ ವಿಸ್ಟಾ ಹೋಟೆಲ್ ಗೆ ಹೋದದ್ದು ಯಾಕೆ ಮಾರಾಯ್ರೆ? ಇವರನ್ನೇನು ಪುತ್ತಿಲ ಪರಿವಾರದವರು ಅಥವಾ ಪುತ್ತಿಲರ ಗೂಂಡಾಗಳು, ಪುತ್ತಿಲ ದೋಸ್ತಿಗಳು  ಇವರ ಮನೆಗೆ ಬಂದು ಇವರಿಗೆ ಹೊಡೆದು, ಬಡಿದು, ಕೈಕಾಲು ಕಟ್ಟಿ, ಕಿಡ್ನಾಪ್ ಮಾಡಿ ಪೈ ವಿಸ್ಟಾ ಹೋಟೆಲಿಗೆ ಕರಕ್ಕೊಂಡು ಹೋದದ್ದು ಅಲ್ಲ, ಪುತ್ತಿಲನೇ ಖುದ್ದು ಇವರ ಮನೆಗೆ ಬಂದು ಜ್ಯೂಸಿಗೆ ಮತಿ ತಪ್ಪುವ ಮಾತ್ರೆ ಹಾಕಿ ಇವರ ಮತಿ ತಪ್ಪಿಸಿ ಇವರ ಬಾಡಿಯನ್ನು ಡಿಕ್ಕಿಗೆ ಹಾಕಿ ಪೈ ವಿಸ್ಟಾ ಹೋಟೆಲಿಗೆ ತಂದದ್ದು ಅಲ್ಲ, ಇನ್ನು ಪುತ್ತಿಲ ವಿರೋಧಿಗಳು ಇವರಿಗೆ ದುಡ್ಡು ಕೊಟ್ಟು ಆಗ ಪೈ ವಿಸ್ಟಾ ಹೋಟೆಲಿಗೆ ಕಳಿಸಿದ್ದೂ ಅಲ್ಲ, ಹಾಗೆಲ್ಲ ಪುತ್ತಿಲ ಕರೆದ ಅಂತ ಪೈ ವಿಸ್ಟಾ ಹೋಟೆಲಿಗೆ ಹೋಗಲು ಇವರು ಪುತ್ತಿಲನ ಕುಟುಂಬದವರು, ಸಂಬಂಧಿಕರೂ ಅಲ್ಲ, ಪುತ್ತಿಲನೊಂದಿಗೆ ಇವರಿಗೆ ವ್ಯಾಪಾರ ವಹಿವಾಟು ಇಲ್ಲ, ಇವರಿಬ್ಬರು ಪಾರ್ಟ್ನರ್ ಗಳು ಇಲ್ಲ, ಇವರು ಪುತ್ತಿಲ ಪರಿವಾರದ ಪದಾಧಿಕಾರಿಗಳೂ ಅಲ್ಲ, ಇವರು ಪುತ್ತಿಲನ ಊರಿನವರೂ ಅಲ್ಲ. ಅದು ಯಾವುದೂ ಅಲ್ಲ ಅಂದ ಮೇಲೆ ಇವರು ಪೈ ವಿಸ್ಟಾ ಹೋಟೆಲಿಗೆ ಹೋದದ್ದಾದರೂ ಯಾಕೆ?  ಯಾಕೆಂದರೆ ಅದಕ್ಕೆ ಮಾತ್ರ ಹೋದರಾ? ಅದಕ್ಕೆಂದೇ ಹೋಗಿದ್ದರೆ ಒಂದು ವರ್ಷ ಕಳೆದ ಮೇಲೆ ಯಾಕೆ ರೇಪ್ ಕೇಸ್? ಆವತ್ತು ರೇಪ್ ಆಗಿದ್ದರೆ ಆವತ್ತೇ ಚಡ್ಡಿ ಒಣಗುವ ಮೊದಲೇ ಕೇಸ್ ಕೊಡಬೇಕಿತ್ತು. ಸಮ್ಮತಿ ಸೆಕ್ಸ್ ನಡೆಸಿ ಈಗ ಅತ್ಯಾಚಾರ ಅಂದರೆ ಹೇಗೆ ಮಾರಾಯ್ರೆ? ಸಮ್ಮತಿ ಸೆಕ್ಸ್ ಬಗ್ಗೆ ಸುಮ್ಮನೆ ಕೇಸ್ ಬೇಡ ಎಂದು ಸುಪ್ರೀಂ ಕೂಡ ಹೇಳಿದೆ. ಈಗ ನೋಡಿದರೆ ಅರುಣ್ ಪುತ್ತಿಲ ಎಂಬ ಹಿಂದೂ ನಾಯಕನನ್ನು ಪೊಕ್ಕಡೆ ಕೇಸ್ ಜಡಿದು ಸ್ವಿಚ್ಡ್ ಆಫ್ ಮಾಡಲಾಗಿದೆ. ಪರದೆ ಮೇಲೆ ಆಂಟಿ ಕುಣಿದರೂ ಪರದೆ ಹಿಂದೆ ಬೇಟೆಗಾರ ದೇಶಭಕ್ತರ ಪ್ರೊಡಕ್ಷನ್, ಡೈರೆಕ್ಷನ್, ಸ್ಕ್ರೀನ್ ಪ್ಲೇ, ಹಿನ್ನೆಲೆ ಸಂಗೀತ ಎಲ್ಲಾ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪುತ್ತೂರಿನಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಬೇಟೆಗಾರ ದೇಶಭಕ್ತರ ಗಿಫ್ಟ್ ಇದು ಎಂದು ಹೇಳಿದರೂ ತಪ್ಪಾಗಲಾರದು. ಇಷ್ಟು ಮಾಡ್ಲಿಕ್ಕೆ ದೇಶಭಕ್ತರು ಅವಿರತ ಶ್ರಮ ಪಟ್ಟಿದ್ದಾರೆ, ಬೆವರಿಳಿಸಿದ್ದಾರೆ. ಯಾಕೆಂದರೆ ಹಿಂದೂ ಹುಲಿಯನ್ನು ಪುಳಿ ಮಾಡಿ ಶರಬತ್ತ್ ಮಾಡಿ ಕುಡಿಯುವುದು ಚಿಕ್ಕ ಕೆಲಸ ಏನಲ್ಲ.


  ಹಾಗೆಂದು ಅರುಣ್ ಪುತ್ತಿಲ ಎಂಬ ಹಿಂದೂ ನಾಯಕನನ್ನು ಈ ರೀತಿ ಪೊಕ್ಕಡೆ ಕೇಸ್ ಜಡಿದು ಸ್ವಿಚ್ ಆಫ್ ಮಾಡಿಸಿದ್ದು ಮುಸ್ಲಿಮರಲ್ಲ. ಇದರಲ್ಲಿ ಅವರ ಪಾತ್ರವಿಲ್ಲ, ಎಸ್ಡಿಪಿಐ, ಪಿಎಫ್ಐಗಳ ಬಲೆ ಇಲ್ಲ, ಸ್ಕೆಚ್ಚಿಲ್ಲ. ದೇಶದ್ರೋಹಿ ಸಂಘಟನೆಗಳು, ಭಯೋತ್ಪಾದಕರು ಇತ್ಲ ಕಡೇ ಬಂದೇ ಇಲ್ಲ. ಮುಗ್ಧ ಕಾಂಗ್ರೆಸಿಗರ ಐಡಿಯಾ ಇಲ್ಲಿಲ್ಲ. ಇನ್ನು ಜೆಡಿಎಸ್, ಕಮ್ಮುನಿಷ್ಟರು, ಸಮಾಜವಾದಿಗಳು, ಬುದ್ಧಿ ಜೀವಿಗಳಿಗೆಲ್ಲ ಇಂಥ ಐಡಿಯಾ ಹೊಳೆಯಲ್ಲ.ಆದರೆ ಇಂಥ ಹಲ್ಕಟ್ ಕೆಲಸ ಯಾರಾದರೂ ಮಾಡುವುದಿದ್ದರೆ ಅದು ಬೇಟೆಗಾರ ದೇಶಭಕ್ತರಿಂದ ಮಾತ್ರ ಸಾಧ್ಯ. ಹಾಗೆಂದು ಯಾವುದೇ ಧರ್ಮಗಳು ತಮ್ಮದೇ ನಾಯಕನನ್ನು ನೀರಾಕಿ, ರಸಗೊಬ್ಬರ ಸುರಿದು ಪೋಷಿಸಿ ಬೆಳೆಸಿ ಬಿಡುತ್ತದೆ. ಆದರೆ ಇವರು ಮಾಡಿದ್ದೇನು, ಮಾಡುತ್ತಿರುವುದೇನು? ಇಲ್ಲಿ ಹುಲಿಗಳನ್ನು ಸದೆ ಬಡಿದು ಇಲಿಗಳನ್ನು ಹುಲಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ, ಪ್ರಯೋಗಗಳನ್ನು ಮಾಡಲಾಗುತ್ತಿದೆ. ಹುಲಿ ಜೀನ್ಸ್ ತೆಗೆದು ಇಲಿಗೆ ಇಂಜೆಕ್ಟ್ ಮಾಡಿದರೆ ಇಲಿ ಹುಲಿ ಆಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ದೇಶ ಭಕ್ತರು. ಭಯೋತ್ಪಾದಕರು ಬೆಚ್ಚ ನೀರು ಕಾಯಿಸುವಾಗ ಗೊತ್ತಾಗುತ್ತೆ. ಈಗ ಅದೆಲ್ಲ ಗೊತ್ತಾಗಲ್ಲ.
   

   ಹಾಗೆಂದು ಈಗೀನ ಮಾಡರ್ನ್ ರೇಪ್ ಕೇಸ್ ಗಳು ಹೇಗೆಂದೇ ಅರ್ಥ ಆಗುತ್ತಿಲ್ಲ ಮಾರಾಯ್ರೆ. ಈಗ ರೇಪ್ ಕೇಸ್ ಆಗಲು ಹುಡುಗಿಯ ಬಟ್ಟೆಬರೆ ಹರಿಯ ಬೇಕೆಂದಿಲ್ಲ, ಪರಚಿದ ಗಾಯ, ನಾಯಿ ಕಚ್ಚಿದ ಹಾಗೆ ಕಚ್ಚಿದ ಗಾಯ ಆಗಬೇಕೆಂದಿಲ್ಲ. ಹುಡುಗಿಯ ಬಳೆಗಳು (ಇದ್ದರೆ) ಒಡೆಯ ಬೇಕೆಂದಿಲ್ಲ, ತಲೆಗೂದಲು ಅಸ್ತವ್ಯಸ್ತ ಆಗಬೇಕೆಂದಿಲ್ಲ. ಅದೆಲ್ಲ ಓಲ್ಡ್ ಸ್ಟೈಲ್. ಈಗಿನ ಕಾಲದಲ್ಲಿ ಹುಡುಗಿ ಬ್ಯೂಟಿ ಪಾರ್ಲರ್ ಹೋಗಿ ಟಿಪ್ ಟಾಪ್ ಆಗಿ ಸ್ಟೇಷನ್ ಗೆ ಬಂದು ಓಬಿರಾಯನ ಕಾಲದಲ್ಲೆಲ್ಲೊ ಸೈಕಲ್ ಬ್ಯಾಲೆನ್ಸ್ ಮಾಡಿದ ಸವಿ ನೆನಪುಗಳನ್ನು ಪೋಲಿಸರೊಂದಿಗೆ ಹಂಚಿಕೊಂಡರೆ ಅದು ರೇಪ್ ಕೇಸ್ ಆಗುತ್ತದೆ ಮತ್ತು ಇಡೀ ವ್ಯವಸ್ಥೆ ಅವಳ ಪರವಾಗಿ ನಿಂತು ಬಿಡುತ್ತದೆ. ಅದೊಂದು ಪ್ರಪಂಚವೇ ಮುಳುಗಿ ಹೋದ, ದೇಶದ್ರೋ‌ಹದ, ದೇಶದ ಭದ್ರತೆ, ಸಮಗ್ರತೆಗೆ ಧಕ್ಕೆ ಆಗುವಂತಹ ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಎಲ್ಲಿಯಾದರೂ ವೀಕ್ ಮೈಂಡೆಡ್ ಹುಡುಗ ಓಡಿ ಹೋಗಿ ಉಳ್ಳಾಲ ಸಂಕದ ಮೇಲಿಂದ ಹಾರಿದರೆ ಅದಕ್ಕೆ ಯಾರು ಹೊಣೆ ಕಾರ್ಯಾಂಗನ, ನ್ಯಾಯಾಂಗನ, ಶಾಸಕಾಂಗನ ಅಥವಾ ಪೊಕ್ಕಡೆ ಕೇಸ್ ಕೊಟ್ಟ ಹುಡುಗಿಯಾ? "ಪುತ್ತಿಲ ನನ್ನನ್ನು ಪೈ ವಿಸ್ಟಾ ಹೋಟೆಲಿಗೆ ಕಳೆದ ವರ್ಷ ಕರೆಸಿಕೊಂಡು ಬಿಡದಿದ್ದರೆ ಸಾಯುತ್ತೇನೆ ಎಂದು ಹೆದರಿಸಿ, ಲೈಂಗಿಕ ಸಂಪರ್ಕ ನಡೆಸಿದ್ದಾರೆ" ಎಂದು ಹುಡುಗಿ ಹೇಳಿದೆ. ಸಾಯುತ್ತೇನೆ ಎಂದು ಹೇಳಿದರೆ ಸೈಲ ಅಂತ ಹೇಳೋದು ಬಿಟ್ಟು ಪೈ ವಿಸ್ಟಾವನ್ನು ಅನುಭವಿಸಿ ಒಂದು ವರ್ಷ ಕಳೆದು ಈಗ ತನ್ನ ಶೀಲ ಶೀಲ ಎಂದು ರೋಧಿಸುತ್ತಿರುವ ಹುಡುಗಿಯ ದೂರಿನ ಒಳ ಮರ್ಮ ಅರ್ಥವಾಗುತ್ತದ ಮೂಢರು ಅಂತ ಯಾರಾದರೂ ಇದ್ದರೆ ಅದು ಪೋಲಿಸರು ಮಾತ್ರ ಎಂದು ಒಂದು ಕಡೆಯಿಂದ ಮಾತ್ರ ಹೇಳಬಹುದು. ಇನ್ನೊಂದು ಕಡೆಯಿಂದ ಪಾಪ ಅವರಿಗೂ ಮೇಲಿಂದ ಕೆಳಗಿಂದ ಹೈ ಪ್ರೆಷರ್ ಗಳೂ ಇರುತ್ತದೆ. ಅವರೂ ಏನು ಮಾಡಕ್ಕಾಗಲ್ಲ.
   ಆಯಿತ್ತಲ್ಲ, ಮುಗಿಯಿತ್ತಲ್ಲ, ಮುಗಿಸಿದೆವಲ್ಲ ಪುತ್ತಿಲನ ಕತೆ. ಇನ್ನು ಪುತ್ತೂರಿನ ದೇಶಭಕ್ತರ ಪಾರ್ಟಿಯಲ್ಲಿ ಯಾರಿದ್ದಾರೆ? ಒಳ್ಳೆ ವಿಕೆಟ್ ಗಳೇ ಇಲ್ಲ. ಎಲ್ಲಾ ಅವರವರೇ ರನೌಟ್ ಮಾಡಿಕೊಂಡಿದ್ದಾರೆ.ಇನ್ನು ಉಳಿದಿರುವುದು ಅಳಿದ ಊರಿಗೆ ಉಳಿದವನೇ ಗೌಡ ಕ್ಯಾರೆಕ್ಟರ್ ಗಳು.
ಇಲ್ಲಿ ನಮ್ಮ ಕತೆಯನ್ನು ನಾವೇ ಮುಗಿಸಿ ಕೊಂಡಿದ್ದೇವೆ. ಬಾಕಿ ಎಲ್ಲಾ ಧರ್ಮಗಳ ಕತೆಗಳಲ್ಲಿ ಅವರ ಧರ್ಮ ವಿರೋಧಿಗಳ ಕತೆ ಮುಗಿಸಿದರೆ ನಮ್ಮ ಧರ್ಮದಲ್ಲಿ ಧರ್ಮಕ್ಕೆ ಹೋರಾಡುವ ವರನ್ನು ನಾವೇ ಮುಗಿಸಿ ಬಿಡುತ್ತೆವೆ. ಅಲ್ಲಿ ವಿಲನ್ ಗಳನ್ನು ಮುಗಿಸುತ್ತಾರೆ, ನಮ್ಮಲ್ಲಿ ಹೀರೋಗಳನ್ನು ನಾವೇ ಮುಗಿಸುತ್ತಿದ್ದೇವೆ. ಮತ್ತೆಲ್ಲಿ 274 ಸೀಟು ಬರಬೇಕು?
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



                      


   ಕಳೆದ ವರ್ಷವೇ ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಬಗ್ಗೆ ಬರೆದ್ದಿದ್ದೆವು. ಅದರಲ್ಲೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಮುಗ್ಧ ಯುವ ಜನರನ್ನು ಬೀದಿಪಾಲು ಮಾಡುವ ಈ ಆಟದ ಬಗ್ಗೆ ಯಾರೂ, ಯಾವ ಇಲಾಖೆಯೂ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವೇ ಸರಿ. ಇನ್ನು ಸುಳ್ಯದಲ್ಲಿ ಚಳಿ, ಬೇಸಿಗೆ ಸೀಸನ್ ಶುರುವಾಗಲಿದ್ದು ವಿವಿಧ ದೇವಸ್ಥಾನಗಳ ಜಾತ್ರೆ, ಬ್ರಹ್ಮ ರಥೋತ್ಸವ, ಬ್ರಹ್ಮ ಕಲಶ, ದೊಡ್ಡ ದೊಡ್ಡ ಭೂತ ಕೋಲಗಳು, ಬೈದರ್ಕಳ ನೇಮಗಳು, ಮೇಳಗಳು, ಉತ್ಸವಗಳಲ್ಲಿ ಕುಟು ಕುಟು ಗ್ಯಾಂಗ್ ಜನರನ್ನು ಲೂಟಲು ರೆಡಿಯಾಗಿ ನಿಂತಿದೆ. ಈ ಕುಟು ಕುಟು ಆಟಕ್ಕೆ ಸಂಬಂಧ ಪಟ್ಟ ದೇವಸ್ಥಾನಗಳ ಆಡಳಿತ ಮಂಡಳಿಗಳು, ದೈವಸ್ಥಾನಗಳ ಮೊಕ್ತೇಸರು, ವಿವಿಧ ಸಂಘಟನೆಗಳು ಮತ್ತು ಪೋಲಿಸರು ಪರ್ಮಿಶನ್ ಕೊಡುವುದೂ ವಿಪರ್ಯಾಸವೇ ಸರಿ.
  ಹಾಗೆಂದು ಈ ಮಳೆಗಾಲ ಇಡೀ ಸುಳ್ಯದಲ್ಲಿ ಕುಟು ಕುಟು ರಾಜಾರೋಷವಾಗಿ ನಡೆದಿದೆ. ಈ ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಕೋಳಿ ಕಟ್ಟದ ಪರ್ಮಿಶನ್ ನಲ್ಲಿ ನಡೆದಿದೆ. ಸುಳ್ಯ ತುಂಬಾ ಮಳೆಗಾಲದಲ್ಲಿ ನಡೆದ ಅಷ್ಟೂ ಕೋಳಿ ಅಂಕಗಳಲ್ಲಿ ಕುಟು ಕುಟು ಯಾವುದೇ ಹೆದರಿಕೆ ಇಲ್ಲದೆ ನಡೆದಿದೆ. ಕೋಳಿ ಕಟ್ಟದ ಸಂಘಟಕರು ಪೋಲಿಸರಲ್ಲಿ ಕೋಳಿ ಕಟ್ಟಕ್ಕೆ ಮಾತ್ರ ಪರ್ಮಿಶನ್ ಕೇಳುತ್ತಿದ್ದು ಪಾಪದ ಪೋಲಿಸರು ಕಟ್ಟಕ್ಕೆ ಮಾತ್ರ ಪರ್ಮಿಶನ್ ಕೊಟ್ಟು ಕೈ ತೊಳೆದು ಕೊಳ್ಳುತ್ತಿದ್ದರು. ಆದರೆ ನಂತರ ಕಟ್ಟ ಸಂಘಟಕರು ಕಟ್ಟದೊಳಗೆ ಕುಟು ಕುಟು ಆಟಕ್ಕೆ ಪರ್ಮಿಶನ್ ಕೊಟ್ಟು ತಮ್ಮ ಕಿಸೆ ಭರ್ತಿ ಮಾಡಿ ಕೊಳ್ಳುತ್ತಿದ್ದರು. ಇದು ಇಡೀ ಮಳೆಗಾಲದಲ್ಲಿ ಸುಳ್ಯದಲ್ಲಿ ನಡೆದಿದೆ. ಇವರ ಆಟದಲ್ಲಿ ಗ್ರಾಮೀಣ ಯುವ ಜನತೆ ಕೋಳಿ ಕಟ್ಟದೊಂದಿಗೆ ಕುಟು ಕುಟು ಆಡಿಯೂ ಬರ್ಬಾದ್ ಆಗುತ್ತಿದ್ದಾರೆ. ಕುಡಿತ, ಜುಗಾರಿ, ಕೋಳಿ ಕಟ್ಟ‌ ಅಂತ ಅಂಗಿ ಚಡ್ಡಿಯನ್ನೂ ಕಳೆದು ಕೊಳ್ಳುತ್ತಿದ್ದ ಯುವ ಜನತೆ ಇದೀಗ ಕುಟು ಕುಟು ಆಟದಲ್ಲಿ ಕೋಮಣವನ್ನೂ ಕಳೆದು ಕೊಳ್ಳುತ್ತಿದೆ. ಇನ್ನು ಸೀಸನ್ ಶುರುವಾದರಂತೂ ಕುಟು ಕುಟು ಗ್ಯಾಂಗ್ ಗೆ ಸುಗ್ಗಿ.
   

   ಹಾಗೆಂದು ಕೋಳಿ ಅಂಕದ ಸಂಘಟಕರ ಹಾಗೆ, ಜುಗಾರಿ ಸಂಘಟಕರ ಹಾಗೆ ಕುಟು ಕುಟು ಗ್ಯಾಂಗ್ ಪಾಪ ಪಾಂಡುಗಳಲ್ಲ, ಸಾಧು ಸನ್ಯಾಸಿಗಳಲ್ಲ. ಕುಟು ಕುಟು ಗ್ಯಾಂಗ್ ಹಂಡ್ರೆಡ್ ಪರ್ಸೆಂಟ್ ಕ್ರಿಮಿನಲ್ ಹಿನ್ನೆಲೆಯವರು ಮತ್ತು ಯಾವುದಕ್ಕೂ ಹೇಸದವರು. ಬರೀ ಚಪ್ಪಲಿಯಲ್ಲಿದ್ದ ಕುಟು ಕುಟು ಸಂಘಟಕರು ಇವತ್ತು ಇಡೀ ಸುಳ್ಯ ತಾಲೂಕಿನ ಕೋಳಿ ಅಂಕ, ಜುಗಾರಿ ಕಲ ಮತ್ತು ಕುಟು ಕುಟು ಟೇಬಲನ್ನು ಕಂಟ್ರೋಲಿಗೆ ತಗೊಂಡು ಕುಟು ಕುಟು ಸಾಮ್ರಾಜ್ಯ ಕಟ್ಟಲು ಸ್ಕೆಚ್ ರೂಪಿಸಿದ್ದಾರೆ. ಈ ಒಂದು ಸಾಮಾಜಿಕ ಪಿಡುಗಿನ ಬಗ್ಗೆ ಯುದ್ಧ ಸಾರ ಬೇಕಾಗಿದ್ದ ಪೋಲಿಸರನ್ನು ಕೋಳಿಕಟ್ಟದ ನೆಪದಲ್ಲಿ ಯಾಮಾರಿಸಲಾಗುತ್ತಿದೆ. ಅದರಲ್ಲೂ ಸುಳ್ಯ ಕುಟು ಕುಟು ಗ್ಯಾಂಗ್ ಥೇಟ್ ಲೋಕಲ್ ರೌಡಿಗಳಂತೆ ಅವರ ಆಟಕ್ಕೆ ಅಡ್ಡ ಬರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಮರ್ಕಂಜ‌ ಕಟ್ಟ ಬ್ಯಾನ್ ಆದಾಗ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚೌತಿ ಲೆಕ್ಕದಲ್ಲಿ ಬಾಳುಗೋಡು, ಉಬರಡ್ಕ ಮಿತ್ತೂರು ಕಡೆಗಳಲ್ಲಿ ಕೋಳಿ ಅಂಕ ನಡೆಸುವರೇ ತಯಾರಿಗಳು ನಡೆಯುತ್ತಿದ್ದು ಕುಟು ಕುಟು ಕೂಡ ಕೋಳಿ ಅಂಕದ ಪರ್ಮಿಶನ್ ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಸುಳ್ಯ ಪೋಲಿಸರು ಮತ್ತು ಸುಳ್ಯ ಸರ್ಕಲ್ ಗೆ ಸಂಬಂಧ ಪೋಲಿಸ್ ಠಾಣೆಗಳು ಕೋಳಿ  ಅಂಕಕ್ಕೆ ಗ್ರಾಮೀಣ ಕ್ರೀಡೆಯ ನೆಪದಲ್ಲಿ, ದೈವ ದೇವರುಗಳ ಜಾತ್ರೆ,ನೇಮ ನಡಾವಳಿಗಳ ಕಾರಣಕ್ಕೆ ಪರ್ಮಿಶನ್ ಕೊಡುವಾಗ ಕುಟು ಕುಟು ಕಂಡು ಬಂದರೆ ಒದ್ದು ಒಳಗೆ ಹಾಕುವ ಎಚ್ಚರಿಕೆ ಕೊಟ್ಟೇ ಕೋಳಿ ಅಂಕಕ್ಕೆ ಪರ್ಮಿಶನ್ ಕೊಡುವುದೂ ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ.
Copy to SP, DK,
copy to Inspector General of Police(IGP). west zone


                     


   ಹಂಚಿನ ಮಾಡಿನ, ನಾಲಕ್ಕು ಕಂಬ ಮತ್ತು ಒಂದು ಪೋಸ್ಟ್ ಆಫೀಸ್ ಇದ್ದ, ಮಸ್ಕ್ ಮಸ್ಕ್ ಕಲರಿನ, ಒಂದು ಬಸ್ ಸ್ಟ್ಯಾಂಡ್ ಸುಳ್ಯ ಸೋಣಂಗೇರಿಯಿಂದ ಪೋಸ್ಟ್ ಆಫೀಸ್ ಸಮೇತ ಕಾಣೆಯಾಗಿದೆ. ಬಸ್ ಸ್ಟ್ಯಾಂಡ್ ಸಿಕ್ಕಿದವರು ಖುದ್ದಾಗಿ ಜಾಲ್ಸೂರು ಪಂಚಾಯ್ತಿಗೆ ಒಂದು ಕಾಲ್ ಮಾಡಿ ವಿಷಯ ತಿಳಿಸಿ ಬಿಡಿ. ಬಸ್ ಸ್ಟ್ಯಾಂಡ್ ಇಲ್ಲದೆ ಸೋಣಂಗೇರಿಯಲ್ಲಿ ಬಸ್ ನಿಲ್ಲಲ್ಲ, ಸೋಮಾರಿಗಳು ಕುಂತಿಲ್ಲ, ಭಿಕ್ಷುಕರು ಮಲಗಿಲ್ಲ. "ಪ್ರೀತಿಯ ಬಸ್ ಸ್ಟ್ಯಾಂಡ್ ನೀನು ಎಲ್ಲಿದ್ದರೂ ಸೋಣಂಗೇರಿಗೆ ಬಾ. ನಿನಗೆ ದುಡ್ಡಿಲ್ಲದಿದ್ದರೆ ಜಾಲ್ಸೂರು ಪಂಚಾಯ್ತಿಗೆ ಕಾಲ್ ಮಾಡು. ಇಲ್ಲಿ ನಿನ್ನನ್ನು ಬಸ್ ನಿಲ್ಲಲು, ಸೋಮಾರಿಗಳು ಕೂರಲು, ಭಿಕ್ಷುಕರು ಮಲಗಲು ಕಾಯುತ್ತಿದ್ದಾರೆ, ನೀನು ಎಲ್ಲಿದ್ದರೂ ಬಾ"
   

   ಹಾಗೆಂದು ಸೋಣಂಗೇರಿ ಎಂಬ ಊರು ಜಾಲ್ಸೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತದೆ. ಅನಾಮತ್ತು ನಾಲ್ಕು ಮಾರ್ಗ ಸೇರುವ ಜಂಕ್ಷನ್. ಪೂರ್ವಕ್ಕೆ ಹೋದರೆ ಗುತ್ತಿಗಾರು, ಪಶ್ಚಿಮಕ್ಕೆ ಬಂದರೆ ಜಾಲ್ಸೂರು. ಉತ್ತರಕ್ಕೆ ಬೆಳ್ಳಾರೆ, ದಕ್ಷಿಣಕ್ಕೆ ಸುಳ್ಯ ಪೇಟೆ. ರೋಡೆಲ್ಲ ಅಗಲಗಲ ಆಗಿದೆ, ಒಂದು ಸರ್ಕಲ್ ಕೂಡ ಆಗಿದೆ. ಆದರೆ ಬಸ್ಸಿಗೆ ನಿಲ್ಲಲಿಕ್ಕೆ, ಕೂರಲಿಕ್ಕೆ ಒಂದು ಬಸ್ ಸ್ಟ್ಯಾಂಡ್ ಇಲ್ಲಿಲ್ಲ. ಹಾಗೆಂದು ಇಲ್ಲಿ ರೋಡ್ ಅಗೆಲ ಆಗುವಾಗ ಒಂದು ಬಸ್ ಸ್ಟ್ಯಾಂಡ್ ಇತ್ತು ಮತ್ತು ಅದರೊಳಗೆ ಒಂದು ಪೋಸ್ಟ್ ಆಫೀಸ್ ಕೂಡ ಇತ್ತು. ಆದರೆ ರೋಡ್ ಅಗಲದ ಕಾರಣ ಬಸ್ ಸ್ಟ್ಯಾಂಡ್ ಇಲ್ಲಿಂದ ತೆಗೆಯಲಾಯಿತು. ಆಮೇಲೆ ಸುದ್ದಿ ಇಲ್ಲ. ಬೇಸಿಗೆಯಲ್ಲೂ ಜನ  ನಟಕೋರಿ ದೊಂಬಿಗೆ ನಿಂತರು, ಮಳೆಗಾಲದಲ್ಲಿ ಜಿರಿಕೂಟ ಬರ್ಸವನ್ನೂ ತಡೆದುಕೊಂಡು ಬಸ್ಸಿಗೆ ಕಾದರು. ಇನ್ನು ಚಳಿಗಾಲ ಮಾರಾಯ್ರೆ, ಮೈಂದಿಗೆ ನಿಲ್ಲಬೇಕು. ಜನಗಳಿಗೆ ಶೀತ ಆದರೆ ಯಾರು ಜಾಲ್ಸೂರು ಪಂಚಾಯ್ತಿ ಮದ್ದು ಮಾಡುತ್ತಾ?
   ಹಾಗೆಂದು ಸೋಣಂಗೇರಿಯಿಂದ ನಿತ್ಯ ಜನ ಸುಳ್ಯ ಪೇಟೆಗೆ ಹೋಗಲು ಈ ಜಂಕ್ಷನ್ನಲ್ಲಿ ಬಸ್ ಹಿಡಿಯಬೇಕು. ಸೋಣಂಗೇರಿಯ ಅಷ್ಟೂ ವಿದ್ಯಾರ್ಥಿಗಳು ಇಲ್ಲಿಂದಲೇ ಶಾಲಾ ಕಾಲೇಜುಗಳಿಗೆ ಹೋಗಬೇಕು. ಗುತ್ತಿಗಾರು ಸೈಡಿಂದ, ಬೆಳ್ಳಾರೆಯಿಂದ, ಸುಳ್ಯದಿಂದ ಬರುವ ಪ್ರತೀ ಬಸ್ಸೂ ಇಲ್ಲಿ ಲ್ಯಾಂಡಿಂಗ್ ಇದೆ, ಟೇಕ್ ಆಫ್ ಇದೆ. ಆದರೆ ಬಸ್ ಸ್ಟ್ಯಾಂಡ್ ಇಲ್ಲ. ಆದರೆ ಸೋಣ ಇಡೀ ಸೋಣಂಗೇರಿಗೆ ಬಸ್ ಸ್ಟ್ಯಾಂಡ್ ಇಲ್ಲ ಮಾರಾಯ್ರೆ.
   ಈ ಬಗ್ಗೆ ಜಾಲ್ಸೂರು ಪಂಚಾಯ್ತಿಯ ಪರಮ ದೇಶಭಕ್ತ ಯುವ ನಾಯಕರೊಬ್ಬರಲ್ಲಿ ಪ್ರಶ್ನಿಸಿದಾಗ ಚೊಕ್ಕಾಡಿಯ ಸತ್ಯ ಸಾಯಿ ವಿದ್ಯಾ ಸಂಸ್ಥೆ ಇಲ್ಲಿ ಒಂದು ಸುಂದರ ಬಸ್ ಸ್ಟ್ಯಾಂಡ್ ನಿರ್ಮಿಸಲು ಪಂಚಾಯ್ತಿಗೆ ಅರ್ಜಿ ಹಾಕಿದ್ದು ಅದು ಓ.ಕೆ ಆಗಿದೆ ಎಂದು ಹೇಳಿದ್ದಾರೆ. ಇನ್ನು PWD ಎನ್ಒಸಿ ಕೂಡ ಸಿಕ್ಕಿದೆಯಂತೆ. ಮತ್ತೆ ಅರಣ್ಯ ಇಲಾಖೆಯವರದ್ದು ಚೂರು ಕಿರಿ ಕಿರಿ ಇದ್ದು ಅವರ ಎನ್ಒಸಿ ಸಿಗಬೇಗಷ್ಟೆ.  ಅದಕ್ಕೆ ACF ಪ್ರವೀಣಣ್ಣನಲ್ಲಿ ಒಂದು ರೌಂಡು ಮಾತಾಡಿದರೆ ಆಗುತ್ತದೆ. ಹಾಗಾಗಿ ಬರುವ ಸೋಣಕ್ಕಾದರೂ ಸೋಣಂಗೇರಿಗೆ ಒಂದು ಬಸ್ ಸ್ಟ್ಯಾಂಡ್ ಆಗಲಿ.


                    


    ಎಡಮಂಗಲ ನಿಂತಿಕಲ್ಲು ರಸ್ತೆಯ ಮಾಲಂಗೇರಿ ಕಿರು ಸೇತುವೆ 15 ದಿನ ಹಿಂದೆ ಮೆಗಾಸ್ಫೋಟಕ್ಕೆ ಕೊಚ್ಚಿ ಹೋದುದನ್ನು ಶಾಸಕರ ತುರ್ತು ಅನುದಾನದಿಂದ ದುರಸ್ತಿಗೊಳಿಸಲಾಯಿತು. ಆದರೆ ಸ್ಥಳಿಯ ಪಂಚಾಯತ್ ಹಾಗೂ  ನಾಯಕರ ಬೇಜವಾಬ್ದಾರಿಯಿಂದ ಅನುದಾನ ಬಳಕೆ ಸಮರ್ಪಕ ವಾಗದೆ ನಾಲ್ಕು ಮೋರಿಗಳು ಅಳವಡಿಕೆ ಆಗುವ ಜಾಗಕ್ಕೆ ಎರಡು ಮೂರಿ ಅಳವಡಿಸಿದ ಕಾರಣ ಸೇತುವೆಯ ಕೆಲವು ಅಂಗಗಳು ಉದ್ಘಾಟನೆ ನಂತರ ಕುಸಿಯಲು ಪ್ರಾರಂಭವಾಗಿದೆ.. ಸ್ಥಳಿಯ ಪಂಚಾಯತ್ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನೇತುವೆ ನಿರ್ಮಾಣಗೊಂಡರು ಶಾಲಾ ಮಕ್ಕಳಿಗೆ ದುಪ್ಪಟ್ಟು ಖರ್ಚು ಮಾಡಿ ಶಾಲೆಗೆ ಹೋಗುವಂತ ಪರಿಸ್ಥಿತಿ  ಇನ್ನು ತಪ್ಪಿಲ್ಲ ಹಾಗೂ ಬಸ್ಸುಗಳು ಇದರಲ್ಲಿ ಹೋಗದಂತ ಸೇತುವೆ ನಿರ್ಮಾಣವಾಗಿ ಮಂಗಗಳಿಂದ ಮಾಡಿದ ರಾಮ ಸೇತು ಎಂಬ ಮಾತು ಸ್ಥಳೀಯ ಜನರಲ್ಲಿ ಎಲ್ಲರೂ ಆಡಿಕೊಳ್ಳುವಂತಾಗಿದೆ.
   ಹಾಗೆಂದು ಈ ಸಂಕಕ್ಕೆ ಅರ್ಜೆಂಟ್ ಅನುದಾನ ಎಂದು ಒಂದೂವರೆ ಲಕ್ಷ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಕಕ್ಕೆ ಎಷ್ಟು ಹಾಕಿದರು, ಕಿಸೆಗೆ ಎಷ್ಟು ಹಾಕಿದರು ಎಂದು ಅಷ್ಟಮಂಗಲವೇ ಇಡಬೇಕಷ್ಟೆ. ಈ ಕಾಮಗಾರಿಯ ನಾಲಕ್ಕು ಮೋರಿಗಳಲ್ಲಿ ಎರಡನ್ನು ನುಂಗಲಾಗಿದೆ ಮತ್ತು ಎರಡನ್ನು ಹಾಕಲಾಗಿದೆ. ಅದರಲ್ಲಿ ನೀರು ಬ್ಲಾಕ್ ಆಗಿ ಹಾಕಿದ ಒಂದೂವರೆಯೂ ಕುಮಾರಧಾರನ ಪಾಲಾಗುವ ಲಕ್ಷಣಗಳಿವೆ. ಒಂದು ಕಾಮಗಾರಿಗೆ ಒಂದೂವರೆ ಲಕ್ಷ ಹಾಕಿದ ಮೇಲೆ ಕಡೇ ಪಕ್ಷ ಒಂದು ಬಸ್ಸಾದರೂ ಮುರ್ಲಿಕೊಂಡು ಹೋಗಬೇಕು. ಆದರೆ ಈ ಸಂಕದಲ್ಲಿ ಮೂರು ಚಕ್ರದ್ದು ಹೋಗುವುದು ಡೌಟು. ಎಂಥಾ ಒಂದು ಸಾಮಾನುಗಳೆಲ್ಲ ಇದ್ದಾರೆ ಮಾರಾಯ್ರೆ, ಇಷ್ಟು ಕಷ್ಟದಲ್ಲಿ ಬುಡೆದಿ ಜೋಕುಲು ಬೇಕಾ?
   

   .....................................................

    ಪಂಜ ಐವತ್ತೋಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿಯ ಅಕಾಲಿಕ ಮರಣದಿಂದ ಕಂಗೆಟ್ಟ ತಿಮ್ಮಪ್ಪ ಗೌಡರಿಗೆ  ಬೊಳ್ಳಾಜೆ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಪಂಜ ವಲಯ ಕಾಂಗ್ರೆಸ್ ಮತ್ತು ಊರಿನ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಈ ದಿನ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ bollaje, ಚಿನ್ನಪ್ಪ ಸಂಕಡ್ಕ, ದಿನೇಶ್ ಪುಂಡಿಮನೆ , ಕುಸುಮಾದರ ಕೆರೆಯಡ್ಕ, ಸತೀಶ್ ಪೂಜಾರಿ ಮನೆ ಉಪಸ್ಥಿತರಿದ್ದರು.



MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget