ಅಲ್ಲಿ ಗುತ್ತಿಗಾರು ಸಮೀಪದ ಕಂದ್ರಪಾಡಿಯಲ್ಲಿ ದೊಡ್ಡ ಕೊರ್ದ ಕಟ್ಟ ಆಗುತ್ತಿದ್ದು ಸುಳ್ಯ, ಪುತ್ತೂರು ಭಾಗದ ಕಟ್ಟವೀರರು ಜಮಾವಣೆ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಕಂದ್ರಪಾಡಿಯಲ್ಲಿ ರಾಜದೈವ ಪುರುಷ ದೈವಗಳ ಕೋಲ ನಡೆದಿದ್ದು ಆ ಲೆಕ್ಕದಲ್ಲಿ ಒಮ್ಮೆ ದೊಡ್ಡ ಸೈಜಿನ ಕಟ್ಟ ನಡೆದಿತ್ತು. ಈವತ್ತು ಪುನಃ ಬಿರಿ ಕಟ್ಟ ನಡೆಯುತ್ತಿದೆ. ಕೋಳಿ ಅಂಕ ನಡೆಸಲು ಪರ್ಮಿಷನ್ ಕೊಡಬಾರದು ಎಂದು ದಕ್ಷಿಣ ಕನ್ನಡ ಪೋಲಿಸ್ ವರಿಷ್ಠನ ಖಡಕ್ ಆದೇಶವಿದ್ದರೂ ಅವೆಲ್ಲ ಲೆಕ್ಕಕ್ಕೇ ಇಲ್ಲ. ಆಯ್ತು ಕಂದ್ರಪಾಡಿಯಲ್ಲಿ ಒಮ್ಮೆ ಕಟ್ಟ ನಡೆದಿದೆ ಈಗ ಪುನಃ ಬಿರಿ ಕಟ್ಪ ಯಾತಕ್ಕೆ? ಈಗಾಗಲೇ ಕಂದ್ರಪಾಡಿಯಲ್ಲಿ ರಾಜಾರೋಷವಾಗಿ ಕಟ್ಟ ನಡೆಯುತ್ತಿದ್ದು ಕುಪುಳೆ, ಉರಿಯೆ, ಬೊಳ್ಳೆ, ಮೈಪೆ, ಗಿಡಿಯೆ, ಪೆರಡಿಂಗೆ, ಕಕ್ಕೆ, ಕೆಮೈಪೆ ಮುಂತಾದ ಪೆಟ್ಟಿಸ್ಟ್ ಕೋಳಿಗಳ ಯುದ್ಧ ಶುರುವಾಗಿದೆ. ಈ ನ್ಯೂಸ್ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮೊಬೈಲ್ ಗೆ ಮತ್ತು ಪುತ್ತೂರು ಉಪವಿಭಾಗದ ಪೋಲಿಸ್ ವರಿಷ್ಠನ ಮೊಬೈಲ್ ಗೆ ಸೆಂಡ್ ಮಾಡಲಾಗುತ್ತದೆ.
ಆದ್ದರಿಂದ ಅವರ ಜನರು ಬರುವ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ಸೇಫ್ ಆಗೋದು ಒಳ್ಳೆಯದು. ಇಲ್ಲದಿದ್ದರೆ ಮತ್ತೆ ನೂರು ಮೀಟರ್, ಇನ್ನೂರು ಮೀಟರ್, ಹೈಜಂಪು, ಲಾಂಗ್ ಜಂಪು ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ.
ಓಡಿ....ಓಡಿ...ಈಗಲೇ ಓಡಿ.
ಪೋಲಿಸರಿಗೆ ವಿ.ಸೂ: ಈವತ್ತು ಕಂದ್ರಪಾಡಿಯಲ್ಲಿ ಕೋಳಿ ಕಟ್ಟ ಮುಗಿದ ಕೂಡಲೇ ಅಲ್ಲಿ ಜುಗಾರಿ ಕುಮಾರಣ್ಣನ ರಬ್ಬರ್ ಕೂಪಿನಲ್ಲಿ ತಾಲೂಕು ಮಟ್ಟದ ಜುಗಾರಿ ಕಾರಂಜಿ ನಡೆಯಲಿದೆ. ಎ.ಬಿ, ಬೈರಾಸ್ ಗೊಬ್ಬು, ಡುಗು ಡುಗು ಮುಂತಾದ ವಿವಿಧ ರೀತಿಯ ಜುಗಾರಿ ಗೊಬ್ಬು ನಡೆಯಲಿದೆ.
Post a Comment