ಇದು ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಂಡು ಬಂದ ಭೀಕರ ಚಿತ್ರ. ಇಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ. ಕಬ್ಬಿಣದ ಹಾಲನ್ನು ಮಾರಲು ಇಟ್ಟು ಇಲ್ಲಿ ಇನ್ನೊಂದು ತಪ್ಪು ಮಾಡಲಾಗಿದೆ. ಇದು ಕಬ್ಬಿನ ಹಾಲೋ ಅಥವಾ ಕಬ್ಬಿಣದ ಹಾಲೋ ಎಂಬ ಡೌಟು ಜನರಿಗೂ ಕ್ರಿಯೇಟಾಗಿದೆ.
ಅದಕ್ಕಿಂತಲೂ ಹೆಚ್ಚಾಗಿ ಈ ಬೋರ್ಡ್ ಬರೆದ ಮಹಾನುಭಾವ ಮತ್ತು ಅದನ್ನು ಸಿಕ್ಕಿಸಿಕೊಂಡು ವ್ಯಾಪಾರಕ್ಕೆ ಕುಂತಿರುವ ಐರನ್ ಮನುಷ್ಯನನ್ನು ಕರೆದು ಯಾವುದಾದರೂ ಸಂಘ ಸಂಸ್ಥೆಗಳು ಸನ್ಮಾನ ಮಾಡಿದ್ರೆ ಒಳ್ಳೆದಿತ್ತು. ಅದರಲ್ಲೂ ಈ ಬೋರ್ಡ್ ಬರೆದ ಮಹಾನುಭಾವನಿಗೆ ಇಂಗ್ಲೀಷ್ ಬರ್ತದೆ ಮಾರಾಯ್ರೆ. ಆದರೆ ಕನ್ನಡ ಅಪ್ಡಿಪ್ಪಿಡಿ. ಕಬ್ಬಿಣ ಯಾವುದು ಕಬ್ಬು ಯಾವುದು ಎಂದು ಗೊತ್ತಾಗಲ್ಲ. ಕುರ್ಡನ ಎಲ್ಲಿಯಾದರೂ? ಗೊತ್ತಿಲ್ಲ. ಎಂಥೆಂಥ ಪ್ರತಿಭೆಗಳೆಲ್ಲ ಇದ್ದಾರೆ ಮಾರಾಯ್ರೆ ಈ ಲೋಕದಲ್ಲಿ. ಶಾಲು ಹೊದಿಸಿ ಸನ್ಮಾನಿಸುವ ಅಂಥ ಆಗ್ತಿದೆ.
Post a Comment