ಕಡಬ: ಪೊಯ್ಯೆ ಕೇಸಿನಲ್ಲಿ ಮೆದು ಫಿಕ್ಸಿಂಗ್ ಹಿಂದೆ ಕಾಣದ ಕೈಗಳು?



   ಹಾಗೆಂದು ಸುದೆಗಳಿಂದ ಪೊಯ್ಯೆ ತೆಗೆಯಬಾರದೆಂದು ಅದ್ಯಾವ ಲೋಫರ್ ನನ್ಮಗ ಹೇಳಿದನೋ ಗೊತ್ತಿಲ್ಲ ಅಂತೂ ಇಂತೂ ಮನೆ ಕಟ್ಟುವ ಕುಂತಿ ಮಕ್ಕಳಿಗಂತೂ ಪೊಯ್ಯೆಗೆ ರೇಟಾಗಿ ಮರತ್ತಡಿಯಲ್ಲಿ ಮಲಗುವ ಪರಿಸ್ಥಿತಿ ಬರುವುದಂತೂ ಗ್ಯಾರೆಂಟಿ. ಇದೀಗ ಸರ್ಕಾರ ಮತ್ತು ಪೊಯ್ಯೆ ಕಳ್ಳರ ನಡುವೆ ಒಯ್ತಬುಡಿ ತಾರಕಕ್ಕೇರಿದ್ದು ಪೊಯ್ಯೆಗೆ ಬಂಗಾರದ ರೇಟಾಗಿದೆ. ಸದ್ಯಕ್ಕೆ ಪೊಯ್ಯೆ ರಾಜಕೀಯ ಮತ್ತೇ ಮತ್ತೇ ಬಿಸಿಯಾಗುತ್ತಿದ್ದು ಒಬ್ಬರನ್ನೊಬ್ಬರು ಫಿಕ್ಸಿಂಗ್ ಮಾಡುವಲ್ಲಿ ತನಕ ಬಂದು ನಿಂತಿದೆ. ಇದೀಗ ಇದೇ ಪೊಯ್ಯೆ ವಿಷಯದಲ್ಲಿ ಮೊನ್ನೆ ಪುತ್ತೂರು ಎಪಿಎಂಸಿ ಮಾಜೀ ಅಧ್ಯಕ್ಷ, ದೇಶಭಕ್ತರ ಗಡಣದ ಪವರ್ ಫುಲ್ ಲೀಡರ್ ದಿನೇಶ್ ಮೆದು ಮೇಲೆ ಅನಾವಶ್ಯಕವಾಗಿ, ರಾಜಕೀಯ ಪ್ರೇರಿತವಾಗಿ ಐದು ಟೈಟ್ ಸೆಕ್ಷನ್ ಹಾಕಿ ಕೇಸು ಜಡಿಯಲಾಗಿದೆ. ಇದರ ಹಿಂದೆ ಪುತ್ತೂರಿನ ಕಾಣದ ಕೈಗಳ ಕೈಚಳಕ ಇದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದೆ. ಇದಕ್ಕೆ ಪರಿಹಾರ ಮಾತ್ರ ದೇಶ ಭಕ್ತರಿಗೆ ಅಧಿಕಾರ ಸಿಕ್ಕಿದ ಮೇಲೆ ಕ್ಷಿಪಣಿ ಗುರಿಯ ಗತಿ ಬದಲಾಯಿಸಿದರೆ ಮಾತ್ರ ಸಾಧ್ಯ ಎಂದು ತಿಳಿದುಬಂದಿದೆ.



ದಿನೇಶ್ ಮೆದು
     ಹಾಗೆಂದು ಅಲ್ಲಿ ಕಡಬ ತಾಲೂಕು ಕುದ್ಮಾರು ಗ್ರಾಮದ ನೂಜಿಯಲ್ಲಿ ಪೊಯ್ಯೆ ತೆಗೆಯುವ ಕೆಲಸ ಇಂದು ನಿನ್ನೆಯದಲ್ಲ. ಅಲ್ಲಿ ಚೆನ್ನಪ್ಪಣ್ಣನ ಪಟ್ಟಾ ಜಾಗದಿಂದ ಮಾರ್ಗ ಮಾಡಿಕ್ಕೊಂಡು ಕುಮಾರಧಾರದಿಂದ ಪೊಯ್ಯೆ ತೆಗೆಯಲಾಗುತ್ತಿತ್ತು. ಆಮೇಲೆ ಸರ್ಕಾರ ಪೊಯ್ಯೆ ತೆಗೆಯಬಾರದೆಂದು ಚೆನ್ನಪ್ಪಣ್ಣನಿಗೆ ವಾರ್ನ್ ಮಾಡಿದ ಮೇಲೆ ಚೆನ್ನಪ್ಪಣ್ಣ ಕುಮಾರಧಾರದಲ್ಲಿ ಒಮ್ಮೆ ಮುಳುಗೆದ್ದು ಪೊಯ್ಯೆ ವಹಿವಾಟು ನಿಲ್ಲಿಸಿ ಬೇತೆ ಬೇತೆ ವ್ಯವಹಾರಗಳಿಗೆ ಶಿಫ್ಟ್ ಆಗಿದ್ದರು. ಇದೀಗ ಬರೆಪ್ಪಾಡಿ ಪಂಚಲಿಂಗೇಶ್ವರ  ಮತ್ತು ಕೇಪುಳೇಶ್ವರ ದೇವರುಗಳಿಗೆ ಒಂದು ಸುಂದರ ಆಲಯ ನಿರ್ಮಿಸುವರೇ ತುಂಬಾ ಲೋಡ್ ಪೊಯ್ಯೆ ಬೇಕಾಗಿತ್ತು. ಆಗ ಕಂಡಿದ್ದು ನೂಜಿ ಚೆನ್ನಪ್ಪಣ್ಣನ ಜಾಗದಲ್ಲಿದ್ದ ಸೀಝ್ ಆದ ಪೊಯ್ಯೆ.


   ಹಾಗೆಂದು ಸರ್ಕಾರ ಚೆನ್ನಪ್ಪಣ್ಣನ ಪೊಯ್ಯೆ ವಹಿವಾಟು ಬ್ಯಾನ್ ಮಾಡುವ ಮೊದಲು ಕಳೆದ ಅರೆಗ್ಗಲದಲ್ಲಿ‌ ಅವರ ಎಷ್ಟೋ ಲೋಡ್ ನದಿ ದಂಡೆಯಲ್ಲಿ ಸ್ಟಾಕ್ ಮಾಡಿದ್ದ ಪೊಯ್ಯೆ ಸೀಝ್ ಮಾಡಿತ್ತು. ಈ ಸೀಝ್ ಮಾಡಿದ ಪೊಯ್ಯೆ ಬಗ್ಗೆ ಸರಕಾರದ ಕಾನೂನು ಏನಿದೆ ಅಂದರೆ ಸಾರ್ವಜನಿಕ ಕೆಲಸಗಳಿಗೆ, ಸರ್ಕಾರಿ ಕೆಲಸಗಳಿಗೆ, ಗುಡಿ ಗೋಪುರಗಳ ನಿರ್ಮಾಣಗಳಿಗೆ ಈ ಸೀಝ್ ಮಾಡಿದ ಪೊಯ್ಯೆಯನ್ನು ಸರ್ಕಾರಕ್ಕೆ ಪೆನಾಲ್ಟಿ ಕಟ್ಟಿ ತೆಗೆಯ ಬಹುದೆಂದು ನಿಯಮಗಳಿವೆ, ಸುತ್ತೋಲೆಗಳಿವೆ. ಹಾಗೇ ಬರೆಪ್ಪಾಡಿ  ಪಂಚಲಿಂಗೇಶ್ವರ ದೇವಸ್ಥಾನದ ವರಿಗೆ ಪೊಯ್ಯೆ ಬೇಕಿತ್ತಲ್ಲ ಅವರು ಪೊಯ್ಯೆ ಹುಡುಕಲಾಗಿ ಹತ್ತಿರದಲ್ಲೇ ಇರುವ ಚೆನ್ನಪ್ಪಣ್ಣನಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಅದಕ್ಕೆ ಚೆನ್ನಪ್ಪಣ್ಣ ಇಂಚಿಂಚ ಎಂದು ಕತೆ ಹೇಳಿ ದೇವಸ್ಥಾನದ ಲೆಟರ್ ಇದ್ದರೆ ಪೆನಾಲ್ಟಿ ಕಟ್ಟಿ ಪೊಯ್ಯೆ ತೆಗೆದು ಕೊಡ ಬಹುದು ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ್ದ ದೇವಸ್ಥಾನದವರು ದೇವಸ್ಥಾನದ ಕಾಮಗಾರಿಗಳ ಜರೂರತ್ತಿಗೆ ಪೊಯ್ಯೆ ಬೇಕೆಂದು ಲೆಟಲ್ ಕೊಟ್ಟಿದ್ದರು. ಆ ಲೆಟರ್ ಆಧಾರದಲ್ಲಿ ಚೆನ್ನಪ್ಪಣ್ಣ ಗಣಿ ಇಲಾಖೆಗೆ, ಕಂದಾಯದವರಿಗೆ ರಾಯಲ್ಟಿ ಪೆನಾಲ್ಟಿ ಸಾವು ಸುಡ್ಗಡ್ ಎಲ್ಲಾ ಕಟ್ಟಿಯೇ ಸುದೆಗೆ ಇಳಿದಿದ್ದು. ಈಗ ನೋಡಿದರೆ ಅದೇ ಪೆನಾಲ್ಟಿ ಕಟ್ಟಿ ತೆಗೆವ ಪೊಯ್ಯೆ ಅಡ್ಡೆ ಮೇಲೆ ಪಿದಾಯಿದ ಪೋಲಿಸ್ತಕುಲು ಬಂದು ರೈಡು ಬಿದ್ದು ಕೋಟಿ ತನಕ ಬೆಲೆ ಬಾಳುವ ಸೊತ್ತುಗಳನ್ನು ಸೀಝ್ ಮಾಡಿದ್ದಾರೆ. ಹಾಗಾದರೆ ಚೆನ್ನಪ್ಪಣ್ಣ ಗಣಿ ಇಲಾಖೆಗೆ, ಕಂದಾಯ ಇಲಾಖೆ ಗೆ ಕಟ್ಟಿದ ಪೆನಾಲ್ಟಿ ಏನಾಯ್ತು? ಅವರು ಕೊಟ್ಟ ಪರ್ಮಿಷನ್ ಎಲ್ಲಿ ಹೋಯ್ತು?
  ಹಾಗೆಂದು ಚೆನ್ನಪ್ಪಣ್ಣನ ರಾಯಲ್ಟಿ ಕಟ್ಟಿದ ಪೊಯ್ಯೆ ಅಡ್ಡೆ ಮೇಲೆ ಪಿದಾಯಿದ ಪೋಲಿಸ್ತಕುಲು ರೈಡು ಬೀಳಲೂ ಒಂದು ಚಿಕ್ಕ ಕಾರಣ ಇದೆ. ಅದರಲ್ಲೂ ಗಣಿ ನಿಯಮ ಏನೆಂದರೆ ಇಂಥ ಪೆನಾಲ್ಟಿ ಕೇಸುಗಳಲ್ಲಿ ಮೊದಲು ಇರ್ವ ಲೋಡ್ ಪೊಯ್ಯೆ ತೆಗೆಯಲು ಮಾತ್ರ ಪರ್ಮಿಟ್ ಕೊಡಲಾಗುತ್ತದೆ ಮತ್ತೆ "ಬುಕ್ಕ ಕೊರ್ಕ" ಎಂದು ಕಂದಾಯ ಇಲಾಖೆ ಹೇಳುತ್ತದೆ. ಅದರಲ್ಲೂ ಇನ್ನೊಂದು ಗಣಿ ನಿಯಮ ಏನೆಂದರೆ ಕುರುಕ್ಷೇತ್ರದ ಯುದ್ಧದ ಹಾಗೆ ಸೂರ್ಯ ಹುಟ್ಟಿದ ಮೇಲೆಯೇ ಸುದೆಗೆ ಇಳಿಯ ಬೇಕು ಮತ್ತು ಸೂರ್ಯ ಮುಳುಗುವ ಮೊದಲೇ ಸುದೆಯಿಂದ ಹತ್ತಬೇಕು ಎಂಬ ನಿಯಮ ಇದೆ. ಆದರೆ ಮೊನ್ನೆ ಚೆನ್ನಪ್ಪಣ್ಣನ ಬ್ಯಾಡ್ ಲಕ್ಕಿಗೆ ಪಿದಾಯಿದ ಪೋಲಿಸ್ತಕುಲು ರೈಡು ಬೀಳುವಾಗ ಪೋಲಿಸರಿಗೆ ತೋರಿಸಲು ಚೆನ್ನಪ್ಪಣ್ಣನಲ್ಲಿ ಒಂದು ತುಂಡು ಸೂರ್ಯ ಕೂಡ ಆಕಾಶದಲ್ಲಿರಲಿಲ್ಲ. ಸಂಪೂರ್ಣವಾಗಿ ಕತ್ತಲಾಗಿ ಮೂಡಾಯಿಯಲ್ಲಿ ಚಂದಿರ ಆಫೀಸಿಗೆ ಹೊರಟಿದ್ದ.  ಪೋಲಿಸರಿಗೆ ಅಷ್ಟು ಸಾಕಿತ್ತು. ಪೊಯ್ಯೆ ಟೀಮನ್ನು ಆಲೌಟ್ ಮಾಡಿ ಬಿಟ್ಟರು.


   ಹಾಗೆಂದು ಸದ್ರಿ ಕೇಸಲ್ಲಿ ಅಷ್ಟು ಸಾಕಿತ್ತು. ಎರಡು ಲಕ್ಷ ಚಿಲ್ರೆ ಪೆನಾಲ್ಟಿ ಕಟ್ಟಿದ್ದ ಚೆನ್ನಪ್ಪಣ್ಣ ನೈಟ್ ಪೊಯ್ಯೆ ತೆಗೆದರೆಂದು ಅವರ ಅಡ್ಡೆ ಮೇಲೆ ಧಾಳಿ, ಅವರ ಟಿಪ್ಪರ್ ಗಳು, ಹಿಟಾಚಿಗಳನ್ನು ಒಳಗೆ ಇಡೋದು, ಅವರ ಮೇಲೆ ಟೈಟ್ ಕೇಸು ಹಾಕೋದು ಇಷ್ಟು ಮಾಮೂಲು ಪ್ರಕ್ರಿಯೆ. ಅಗೆಲು ಸಿಗದ ಭೂತಗಳು ಹೀಗೆಲ್ಲ ಮಾಡಿಯೇ ಮಾಡುತ್ತದೆ. ಆದರೆ ಈ ಕೇಸಿನಲ್ಲಿ ದಿನೇಶ್ ಮೆದು ಮೇಲೂ ಯಾಕೆ ಎಫ್ಐಆರ್?  ಪಿದಾಯಿದ ಪೋಲಿಸ್ತಕುಲು ಅವರನ್ನು ಕೊಂಡೋಗಲು ಹುಡುಕಿದ್ದು, ಅವರ ಮೆದು ಮನೆ ಮೇಲೆ ರೈಡು ಬಿದ್ದಿದ್ದು ಯಾಕೆ ಅಂತಲೇ ಯಾರಿಗೂ ಶುರುವಿಗೆ ಅರ್ಥ ಆಗಿರಲಿಲ್ಲ. ಆದರೆ ಪ್ರಬಲ ಒಕ್ಕಲಿಗ  ನಾಯಕ ದಿನೇಶ್ ಮೆದುವನ್ನು ಈಗಲೇ ಚಿವುಟಿದರೆ ಮುಂದಿನ ಓಟಿನಲ್ಲಿ ಒಕ್ಕಲಿಗ ನಾಯಕರು ಕಾಣೆಯಾಗಿದ್ದಾರೆ ಎಂದು ಡಂಗುರ ಹೊಡೆಯ ಬಹುದೆಂದು ಪುತ್ತೂರಿನ ಕಾಣದ ಕೈಗಳು ಮೆದುವನ್ನು ಫಿಕ್ಸಿಂಗ್ ಮಾಡುವಲ್ಲಿ ತೆರೆಯ ಹಿಂದೆ ಓಡಾಡಿದ ಹೆಜ್ಜೆ ಗುರುತುಗಳಿವೆ. ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ದೇಶ ಭಕ್ತರ ಪಕ್ಷದ ಪವರ್ ಫುಲ್ ಲೀಡರ್ ಆಗಿ ಮೆದು ಪುತ್ತೂರು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಜನಪ್ರಿಯ ನಾಯಕ. ದಕ್ಷಿಣ ಕನ್ನಡ ಜಿಲ್ಲಾ ಮರಳು ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿಯೂ ಮೆದು ಚಿರಪರಿಚಿತರು. ಒಬ್ಬ ಧಾರ್ಮಿಕ ನಾಯಕನಾಗಿ, ಮರಳು ಸಂಘದ ಅಧ್ಯಕ್ಷನಾಗಿ ಬರೆಪ್ಪಾಡಿ ದೇವಸ್ಥಾನದವರಿಗೆ ಪೊಯ್ಯೆಗೆ ವ್ಯವಸ್ಥೆ ಮಾಡಿ ಕೊಡುವ ಲೀಗಲ್ ಜವಾಬ್ದಾರಿ ಹೊತ್ತು ಕೊಂಡಿದ್ದು ತಪ್ಪೇನಲ್ಲ. ಈ ಬಗ್ಗೆ ಚೆನ್ನಪ್ಪಣ್ಣನಿಗೆ ಗಣಿ ಇಲಾಖೆ, ಕಂದಾಯ ಇಲಾಖೆಯ ನಿಯಮಗಳ ಬಗ್ಗೆ ಮಾರ್ಗಸೂಚಿ ಹೇಳಿದ್ದು ಮತ್ತು ದೇವಸ್ಥಾನಕ್ಕೆ ಬೇಕಾಗಿ ಇಳಿದು ಕೆಲಸ ಮಾಡಿದ್ದ ಮೆದುವನ್ನು ಈ ಕೇಸಲ್ಲಿ ಫಿಕ್ಸಿಂಗ್ ಮಾಡಿದ್ದು ಅಕ್ಷಮ್ಯ. ಕೇವಲ ಮಾರ್ಗದರ್ಶನ ಮಾಡಿದ್ದಕ್ಕೆ ಈ ನಮೂನೆಯ ಫಿಕ್ಸಿಂಗ್ ಮಾಡುತ್ತಾರೆಂದರೆ ಕಾಣದ ಕೈಗಳ ಮೆಂಟಾಲೀಟಿ ಹೇಗಿರಬಹುದು ಎಂಬುದನ್ನು ನೀವೇ ಯೋಚಿಸಿ. ಇನ್ನು ಒಬ್ಬ ಎಪಿಎಂಸಿ ಮಾಜಿ ಅಧ್ಯಕ್ಷ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ, ಬಿಜೆಪಿಯ ಪ್ರಬಲ ನಾಯಕ ಪೋಲಿಸರು ಬಂದರೆಂದು ಓಡುವ ಪ್ರಮೇಯವೇ ಬರಲ್ಲ. ದಿನೇಶ್ ಮೆದು ಕೊಲೆ ಮಾಡಿಲ್ಲ, ಕೊಲೆ ಯತ್ನ ಮಾಡಿಲ್ಲ ,ರೇಪ್ ಮಾಡಿಲ್ಲ, ಸುಲಿಗೆ ಮಾಡಿಲ್ಲ, ವಂಚನೆ ಮಾಡಿಲ್ಲ ಮತ್ಯಾಕೆ ಪೋಲಿಸ್ ಬರುವಾಗ ಓಡಿ ಹೋಗಲಿ? ಓಡುವಾಗ ಕೈ ಮುರಿದು ಕೊಳ್ಳಲಿ. ಅದೆಲ್ಲ ಸುಳ್ಳು ಸುದ್ದಿ. ಟೋಟಲಿಯಾಗಿ ಹೇಳುವುದಾದರೆ ರಾಜಕೀಯ ಕಾರಣಗಳಿಗಾಗಿ ದಿನೇಶ್ ಮೆದುವನ್ನು ಈ ಕೇಸಿನಲ್ಲಿ ಫಿಕ್ಸಿಂಗ್ ಮಾಡಲಾಗಿದೆ.
   ಇನ್ನೊಂದು ವಿಷಯ ಏನೆಂದರೆ ಈ ಕೇಸಿನಲ್ಲಿ ಶಾಂತಿ ಮೊಗರು ಕಿಂಡಿ ಅಣೆಕಟ್ಟಿನ ಪಲಾಯಿ ತಪ್ಪಿಸಿದ ಮ್ಯಾಟರನ್ನೂ ಇವರ ತಲೆಗೆ ಕಟ್ಟಲಾಗಿದೆ. ಆದರೆ ಸತ್ಯ ಸಂಗತಿ ಏನೆಂದರೆ ಚೆನ್ನಪ್ಪಣ್ಣನ ಪೊಯ್ಯೆ ಅಡ್ಡೆ ಇರೋದು ಕಿಂಡಿ ಅಣೆಕಟ್ಟಿನ ಕೆಳಗಿನ ಭಾಗದಲ್ಲಿ. ಕೆಳಗಿನ ಭಾಗದವರಿಗೆ ಕಿಂಡಿ ಓಪನ್ ಆದರೇನೇ ಸಮಸ್ಯೆ. ಹಾಗಾಗಿ ಅವರಾಗಿಯೇ ಹೋಗಿ ಪಲಾಯಿ ತಪ್ಪಿಸಿ ಸೆಲ್ಫ್ ಸೂಸೈಡ್ ಮಾಡಿಕೊಳ್ಳಲು ಅವರಿಗೇನು ಕಂಕನಾಡಿಯ ಮರ್ಲ? ಕಿಂಡಿ ಅಣೆಕಟ್ಟಿನ ಮೇಲೆ ಪೊಯ್ಯೆ ತೆಗೆಯುವವರಿಗೆ ಅಣೆಕಟ್ಟಿನಲ್ಲಿ ನೀರು ನಿಂತರೆ ಪೊಯ್ಯೆ ದೆಪ್ಪೆರ ಭಾರೀ ಕಷ್ಟ. ಹಿನ್ನೀರಿನಲ್ಲಿ ಮುರ್ಕಿ ಪೊಯ್ಯೆ ತೆಗೆಯಬೇಕು. ಹಾಗಾಗಿ ಆಯೇರೆದ ಭಟ್ರು ಪಲಾಯಿ ತಪ್ಪಿಸಿದ್ದು ಎಂಬ ಗುಸುಗುಸು ಇದೆ.
      
Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget