ಪುತ್ತೂರು: ಚಿಕ್ಪುಟ್ಟ, ಸಣ್ಪುಟ್ಟ ನ್ಯೂಸುಗಳು

            


                ಅಲ್ಲಿ ಪುತ್ತೂರು ರಿಜಿಸ್ಟ್ರೀ ಆಫೀಸಿನಲ್ಲಿ ಒಂದು ಜೆರಾಕ್ಸ್ ಮಿಸನ್ ಇಲ್ವಾ ಮಾರಾಯ್ರೆ. ಬಹುಶಃ ಸ್ವಾತಂತ್ರ್ಯ ಪೂರ್ವದಿಂದಲೂ ಈ ರಿಜಿಸ್ಟ್ರೀ ಆಫೀಸ್ ಪುತ್ತೂರಿನಲ್ಲಿದೆ. ಈಗ ಆಧುನಿಕತೆಯನ್ನೂ ಮೈಗೂಡಿಸಿಕೊಂಡು ಮಿನಿ ವಿಧಾನಸೌಧದ ಫಸ್ಟ್ ಫ್ಲೋರಲ್ಲಿ ಇದೆ. ಆದರೆ ಇಲ್ಲಿ ಒಂದು ಜೆರಾಕ್ಸ್ ಮಿಸನ್ ಗೆ ಗತಿ ಇಲ್ಲ ಎಂದು ತಿಳಿದುಬಂದಿದೆ. ಈ ಆಫೀಸಿನಲ್ಲಿ ರಿಜಿಸ್ಟ್ರೀ ಆದ ಎಲ್ಲಾ ದಾಖಲೆಗಳನ್ನು ವಿಟ್ಟಣ್ಣನ ಜೆರಾಕ್ಸ್ ಅಂಗಡಿಯಲ್ಲಿ ಜೆರಾಕ್ಸ್ ತೆಗೆಯಲಾಗುತ್ತದೆ. ಅಲ್ಲಿ ಜೆರಾಕ್ಸ್ ತೆಗೆದು ಬುಕ್ಕೊ, ಮಧ್ಯಾಹ್ನ, ಬಯ್ಯಗ್,ಎಲ್ಲೆ ತಂದು ರಿಜಿಸ್ಟ್ರೀ ಆಫೀಸಿಗೆ ಮುಟ್ಟಿಸಲಾಗುತ್ತದೆ. ಏನಾದರೂ ಹೆಚ್ಚು ಕಡಿಮೆಯಾದರೆ ಗತಿ ಯಾರು ಮಾರಾಯ್ರೆ? ರೆಕಾರ್ಡ್ಸನ್ನು  ಪೆತ್ತ ತಿಂದರೆ?


ಪುತ್ತೂರು ನಗರ ಸಭೆಯಲ್ಲಿ ರಾಮ..ರಾಮ.. ರಾಮಣ್ಣ: ಇವನ ಹೆಲ್ತೇ ಸರಿ ಇಲ್ಲ ಮಾರಾಯ್ರೆ. ಪರಮ ಸೋಮಾರಿ, ಟೈಟ್, ಕ್ಲಬ್ಬು, ಉಡಾಫೆ, ಚಾಡಿ ಮತ್ತು PM ಮುಂತಾದ ಸದ್ಗುಣ ಸಂಪನ್ನ ಅಂತ ಇವನ ದರ್ಶನ ಮಾಡಿದವರು ಹೇಳುತ್ತಾರೆ. ನಗರ ಸಭೆಗೆ ಕೆಲಸದ ಮೇಲೆ ಬರುವ ಲೇಡೀಸ್ ಗಳ ನಂಬರ್ ಕೇಳೋದು ನಂತರ ಅವರಿಗೆ ಗುಡ್ನೈಟ್, ಗುಡ್ ಮಾರ್ನಿಂಗ್, ಗುಡುರ್ನು ಹೇಳೋದು ಇವನ ಹಾಬಿ. ಈಗಾಗಲೇ ಲೋಕಾಯುಕ್ತ ಕೇಸ್ ಇದೆ. ಆ ಮಧ್ಯೆ ತನ್ನ ಪರ್ಮನೆಂಟ್ ಸ್ಟೆಪಿನಿಯೊಂದಕ್ಕೆ ಮನೆ ಕಟ್ಟಿಸಿ ಕೊಟ್ಟ ನಗರ ಸಭೆಯ ಶಿಲ್ಪಿ ಇವನು. ಈ ನಡುವೆ ಸಹೋದ್ಯೋಗಿಯೊಬ್ಬಳ ಗಂಡ ಬಂದು ಕೋರ್ಟು ಮೈದಾನದಲ್ಲಿ, ನಗರ ಸಭೆಯ ಮುಂದೆಯೇ ಇವನಿಗೆ ಎರಡ್ಡು ಕೊಟ್ಟಿದ್ದಾನೆ ಎಂದು ಸುದ್ದಿ. ಯಾಕೆಂತ ಗೊತ್ತಿಲ್ಲ. ರಾಮ..ರಾಮ.. ಏನಿದು ನಿನ್ನಯ ಲೀಲೆ. ಬರೆದರೆ ಕಾದಂಬರಿ, ಓದಿದರೆ ಪುರಾಣ.


ಕಲ್ಲುಗುಂಡಿ ಪೋಲಿಸರಿಗೆ ಒಂದು‌ ಜೀಪು ಕೊಡಿ ಮಾರಾಯ್ರೆ: ಪಾಪ ಅವರು. ಮುಟ್ಟಿದರೆ ಮುನಿ ಅಂತವರು. ಇವರು ಕಲ್ಲುಗುಂಡಿ ಚೆಕ್ ಪೋಸ್ಟ್ ಪೋಲಿಸರು. ಸುಳ್ಯ ಪೋಲಿಸ್ ಸ್ಟೇಷನ್ ಸರಹದ್ದಿನಲ್ಲಿ ಬರುತ್ತಾರೆ ಇವರು. ಅವರಿಗೆ ಅಂಚಿಂಚಿ ಹೋಗಲು ಒಂದು ಸರಿಕಟ್ಟಾದ ಜೀಪು ಇಲ್ಲ ಮಾರಾಯ್ರೆ. ಹಿಂದೆ ರಾಧಾಕೃಷ್ಣ ಪೋಲಿಸಣ್ಣ ಇರುವಾಗ‌ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಯಾವ ಸ್ಟೇಷನ್ ಗೂ ಬೇಡವಾದ ಒಂದು ಬಸಳೆ ದೊಂಪದಂತಿದ್ದ ಜೀಪು ಕೊಡಲಾಗಿತ್ತು. ರಾಧಣ್ಣ ಅದೇ ಪರಬ್ಬು ಜೀಪಿಗೆ ಮದುಮಗಳ ಶೃಂಗಾರ ಮಾಡಿ ಅಂಚಿಂಚಿ ಹೋಗುತ್ತಿದ್ದರು. ಆಮೇಲೆ ರಾಧಣ್ಣ ಟ್ರಾನ್ಸ್ ಫರ್ ಆಗಿ ಹೋದರು. ನಂತರ ಬಂದ ಪೋಲಿಸರೂ ಅದೇ ಜೀಪಿನಲ್ಲಿ ಡ್ಯೂಟಿ ಮಾಡಿದರು. ಆದರೆ ಈಗ ಆ ಜೀಪು ತುಂಬಾ ಹಳೆಯದಾಗಿ ಅದರಲ್ಲಿ ಓಡಾಡಲೂ ಪೋಲಿಸರಿಗೆ ನಾಚಿಕೆ ನಾಚಿಕೆ ಆಗುತ್ತಿದೆ. ಜೀಪಿಗೆ ಈಗಾಗಲೇ ಶುಗರು, ಹಾರ್ಟ್ ಪ್ರಾಬ್ಲಂ, ಶ್ವಾಸಕೋಶದ ಸಮಸ್ಯೆ ಎಲ್ಲಾ ಇದೆ. ಕಲ್ಲುಗುಂಡಿ ಪೋಲಿಸರು ಕಳ್ಳರನ್ನು ಹಿಡಿಬೇಕಲ್ಲ ಮಾರಾಯ್ರೆ.  ಈ ಜೀಪಿನಲ್ಲಿ ಹೇಗೆ? ಇದರಲ್ಲಿ ರಿವರ್ಸ್ ಗೇರ್ ಹಾಕಿದರೆ ಟಾಪಿಗೆ ಬೀಳುತ್ತದೆ, ಬಾಳಿಗೆರ್ ಹಾಕಿದರೆ ಆರಿಗೆರ್ ಬೀಳುತ್ತದೆ. SP ಮನಸು ಮಾಡಿದರೆ ಕಲ್ಲುಗುಂಡಿ ಪೋಲಿಸರಿಗೆ ಟಾಪೆಂಡ್ ಟಾಪಲ್ಲಿ ಹೋಗಬಹುದು.


ಕಟ್ಟಕ್ಕೆ ಸುಳ್ಯ ಬಸ್ಸು ಬರಲಿ: ಹಾಗೆ ನೋಡಿದರೆ ಈ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರ ಎಲ್ಲಾ ಅಂಡಮಾನ್ ಇದ್ದ ಹಾಗೇ. ಸರಿಯಾಗಿ ಬಸ್ ವ್ಯವಸ್ಥೆ, ವಾಹನ ವ್ಯವಸ್ಥೆ ಈ ಊರುಗಳಲ್ಲಿ ಕಮ್ಮಿ. ಸುಬ್ರಹ್ಮಣ್ಯ ಸುಳ್ಯಗಳಿಂದ ಏರುತ ಇಳಿಯುತ‌ ಬಸ್ ಇಲ್ಲಿಗೆಂತಲೇ ಬರಬೇಕು ಮತ್ತು ತಿರ್ಗಿ ಹೋಗಬೇಕು. ಇಲ್ಲಿಂದ ಮುಂದೆ ಮಾರ್ಗ ಇಲ್ಲ. ಈಗ ವಿಷಯ ಏನಪ್ಪಾ ಅಂದರೆ ಬೆಳಿಗ್ಗೆ ಕಲ್ಮಕಾರಿನಿಂದ ಸುಳ್ಯಕ್ಕೆ ಹೋಗುವ   ಸರ್ಕಾರಿ ಸಾರಿಗೆ ಬಸ್ಸು ಕಲ್ಮಕಾರಿನಿಂದ ಹೊರಟು ಕಟ್ಟ ಗೋವಿಂದ ನಗರಕ್ಕೂ ಬಂದು ಹೋಗಲಿ ಎಂಬುದು ಕಟ್ಟದ ಕಟ್ಟಾಳುಗಳ ಬೇಡಿಕೆ. ಕಟ್ಟದಲ್ಲಿ ಕಾಲೇಜು ಮಕ್ಕಳು ಉಟ್ಟು ಗಡ. ಈಗ ಕಾಲೇಜು ಮಕ್ಕಳು ಕಟ್ಟ ಕ್ರಾಸ್ ತನಕ ಅರ್ಧ ಗಂಟೆ ನಡೆದು ಬಂದು ಬಸ್ ಹಿಡಿಯ ಬೇಕು. ಅದೂ ಅಲ್ಲದೆ ಗೋವಿಂದ ನಗರದ ಜನರಿಗೆ ಸುಳ್ಯಕ್ಕೆ ಅದಕ್ಕೆ ಇದಕ್ಕೆ ಅಂತ ಅರ್ಜೆಂಟ್ ಹೋಗ್ಲಿಕ್ಕೆ ಬರ್ಲಿಕ್ಕೆ ಇರ್ತದೆ. ಅವರೂ ಕಟ್ಟ ಕ್ರಾಸ್ ತನಕ ನಡೆದೇ ಹೋಗಬೇಕು. ಹಾಗೆಂದು ಕಲ್ಮಕಾರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ಸು ಬೆಳಿಗ್ಗೆ ಮತ್ತು ಸಂಜೆಗೆ ಮರೆಯದೆ ಗೋವಿಂದ ನಗರಕ್ಕೆ ಬಂದು ಹೋಗುತ್ತದೆ. ಆದರೆ ಸುಳ್ಯ ಬಸ್ ಬರಲ್ಲ. ಬಸ್ಸುಗಳು ಎರಡಾದರೂ ಡಿಪೋ ಒಂದೇ ಅಲ್ವಾ ಎಂಬುದು ಕಟ್ಟಾ ಜನರ ಅಭಿಪ್ರಾಯ. ಆದ್ದರಿಂದ ಸುಳ್ಯ ಬಸ್ಸಿನ ಡ್ರೈವರ್ ಇನ್ನಾದರೂ ಕಟ್ಟ ಕಡೆಗೆ ಸೆಮಿಗೆ ಮಣೆಯ ಸ್ಟೇರಿಂಗ್ ತಿರುಗಿಸಿದ ಹಾಗೆ ಬಸ್ ಸ್ಟೇರಿಂಗ್ ತಿರುಗಿಸಿ ಪ್ರಯಾಣವನ್ನು ಚಂದಗಾಣಿಸಿ ಕೊಡಬೇಕೆಂಬುದು ಕಟ್ಟ ಜನರ ಆಶಯ. ಈ ಬಗ್ಗೆ ಡಿಪೋ ಮ್ಯಾನೇಜರ್ ಗೆ ಒಂದು ಮನವಿ ಕೊಟ್ಟರೆ ಒಳ್ಳೆಯದು. KSRTC DC ಕೂಡ ಈಗ ಪುತ್ತೂರಿನಲ್ಲಿಯೇ‌ ಇದ್ದಾರೆ ಎಂದು ಸುಳ್ಯ ಬಸ್ ಡ್ರೈವರ್ ಗೆ ಯಾರಾದರೂ ಹೇಳುವುದು ಉತ್ತಮ.

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget