ಕೊಂಬಾರು ಗ್ರಾಮದ ಕೆಂಜಾಲದಿಂದ ಪ್ರಾರಂಭಗೊಂಡು, ಕೊಲ್ಕಜೆ, ಓಡೋಳಿ, ನಾರಡ್ಕ, ಸುಬ್ರಹ್ಮಣ್ಯ ರೇಲ್ವೆ ಸ್ಟೇಷನ್ ಮೂಲಕ ಹಾದು ನೆಟ್ಟಣವನ್ನು ಸೇರುವ ಈ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯೂ ದ.ಕ. ಜಿಲ್ಲಾ ಪಂಚಾಯತಿನ ಅಧೀನದಲ್ಲಿ ಬರುವ ರಸ್ತೆಯಾಗಿರುತ್ತದೆ, ಸುಮಾರು ಹದಿನೈದು ವರ್ಷಗಳಿಂದಲೂ ಕೂಡ ಈ ರಸ್ತೆ ತುಂಬಾ ಹದಗೆಟ್ಟಿ ಜನರಿಗೆ ಸಂಚಾರಿಸಲು ಕೂಡ ಪರದಾಡುವಂತಹ ಪರಿಸ್ಥಿತಿ ಇದೆ.
ಮಾತ್ರವಲ್ಲದೆ ಇದೆ ರಸ್ತೆಯ ಮಧ್ಯ ಭಾಗದ ಓಡೋಳಿ ಎಂಬ ಸ್ಥಳದಲ್ಲಿ ರೈಲ್ವೇ ಇಲಾಖೆಯವರು ನಿರ್ಮಿಸಿದ ಓಬಿರಾಯನ ಕಾಲದ ಕಬ್ಬಿಣದ ತಗಡು ಶೀಟ್ ಹಾಸಿ ನಿರ್ಮಿಸಿದ ಒಂದು ಸೇತುವೆ ಇದ್ದು ಈ ಸಂಕದಲ್ಲಿ ಸಂಚಾರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ.ಇದರಿಂದ ಈ ಭಾಗದ ಜನರು ಅಸಮಾಧಾನಗೊಂಡು ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನನ್ನು ಬಹಿಷ್ಕಾರ ಮಾಡುವುದೆಂದು ಅಲ್ಲಲ್ಲಿ ಬ್ಯಾನರ್ಗಳನ್ನು ಕೂಡ ಹಾಕಿ ಪ್ರತಿಭಟಿಸಿದ್ದರು, ಇದರಿಂದ ಎಚ್ಚೆತ್ತುಕೊಂಡ ಪ್ರಮುಖ ರಾಜಕೀಯ ಪಕ್ಷಗಳ ಧುರಿಣರುಗಳು ಮತ್ತು ಅಧಿಕಾರಿಗಳು ಮತದಾನ ಬಹಿಷ್ಕರಿಸುವಂತೆ ಕರೆ ನೀಡಿದ ಊರಿನ ಪ್ರಮುಖ ರೊಂದಿಗೆ ಮಾತುಕತೆ ನಡೆಸಿ ಚುನಾವಣೆ ಕಳೆದ ತಕ್ಷಣವೇ ಈ ರಸ್ತೆ ಮತ್ತು ಅಪಾಯದಂಚಿನಲ್ಲಿರುವ ಮೋರಿ ಮತ್ತು ಸಂಕವನ್ನು ಸಂಪೂರ್ಣ ದುರಸ್ತಿ ಮಾಡಿ ಜನರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದರ ಸಲುವಾಗಿ ಮತದಾನ ಬಹಿಷ್ಕಾರವನ್ನು ಹಿಂಪಡೆಯಲಾಗಿತ್ತು.
ಕಮಾತ್ರವಲ್ಲದೆಊರಿನವರು ಸೇರಿಕೊಂಡು ಶ್ರಮದಾನ ಎಂಬ ಒಂದು ವಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡು ಆ ಮೂಲಕ ಕಳೆದ ಬೇಸಿಗೆಯಲ್ಲಿ ಜನರು ಓಡಾಡುವಂತೆ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿ ಕೊಂಡಿರುತ್ತಾರೆ, ಮತ್ತು ಈಗ ಮುಳುಗಡೆಯಾಗಿರುವ ಕಾರು ಇರುವ ಸ್ಥಳದಲ್ಲಿ ಊರಿನವರು ಸೇರಿ ಮರದ ದಿಮ್ಮಿಗಳನ್ನು ಜೋಡಿಸಿ ತಾತ್ಕಾಲಿಕವಾದ ಪಾಲ ತರಹದ ಸಂಕವನ್ನು ನಿರ್ಮಿಸಿದ್ದು ಈ ಸಂಕದಲ್ಲಿ ಕಾರು ಚಲಾಯಿಸಲು ಭಯಗೊಂಡು ಕಾರಿನ ಚಾಲಕ ಹೊಳೆ ದಾಟಿಸಲು ಮುಂದಾದ ಸಂದರ್ಭದಲ್ಲಿ ಕಾರು ನೀರಲ್ಲಿ ಮುಳುಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಭಾರತದ ಹವಾಮಾನ ಇಲಾಖೆ ಮಳೆಯ ಗಂಭೀರತೆಯನ್ನು ಅರಿತು ಮುನ್ಸೂಚನೆ ನೀಡಿರುವುದು ಜನಪ್ರತಿನಿಧಿಗಳಿಗೂ ಮತ್ತು ಅಧಿಕಾರಿ ವಲಯಕ್ಕೂ ತಿಳಿದಿದ್ದರೂ ಕೂಡ ಜನರ ಸಂಕಷ್ಟಕ್ಕೆ ಸ್ಪಂದಿಸದ ನಿಟ್ಟಿನಲ್ಲಿ ಜನ ಆಕ್ರೋಶಿತರಾಗಿದ್ದಾರೆ.ಇನ್ನಾದರೂ ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು,ಇಲ್ಲದೆ ಇದ್ದಲ್ಲಿ ಕಡಬ ತಹಸ್ಸಿಲ್ದಾರ್ ಕಚೇರಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
Post a Comment