ಹಾಗೆಂದು ಸುಬ್ರಹ್ಮಣ್ಯ ಎಂಬ ಊರು ಇರೋದೇ ನಿತ್ಯ ಹರಿದ್ವರ್ಣದ ದಟ್ಟ ಕಾಡಿನ ಮಧ್ಯದಲ್ಲಿ, ಕುಮಾರ ಪರ್ವತದ ತಪ್ಪಲಿನಲ್ಲಿ. ಇಲ್ಲಿ ಪ್ರಕೃತಿಯೇ ಒಂದು ದೊಡ್ಡ ಪಾರ್ಕ್ ಮತ್ತು ಆ ಪಾರ್ಕ್ ಮಧ್ಯೆ ಕುಮಾರಧಾರನ ಜುಳು ಜುಳು. ಇದು ಸಾಲದಕ್ಕೆ ಅಧಿಕಪ್ರಸಂಗಿ ಮನುಷ್ಯ ದುಡ್ಡು ಮಾಡ್ಲಿಕ್ಕೆ ತನ್ನದೂ ಒಂದಿರ್ಲಿ ಎಂದು ಪ್ರಕೃತಿಯ ಪಾರ್ಕಿನ ಮಧ್ಯೆ ಒಂದು ಅಂಡಿಗುಂಡಿ ಪಾರ್ಕ್ ಮಾಡಿದ್ದಾನೆ. ಆ ಪಾರ್ಕಿಗೆ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಹೆಸರು ಕೂಡ ಇಟ್ಟಿದ್ದಾನೆ. ಆದರೆ ಪಾರ್ಕಿನಲ್ಲಿ ನಡೆಯುತ್ತಿರುವುದೇನು?
ಇದು ಸುಬ್ರಹ್ಮಣ್ಯದ ತಿಮ್ಮಕ್ಕ ಪಾರ್ಕ್. ಕುಲ್ಕುಂದ ಕಡೆ ಇದೆ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಗೌರವಾರ್ಥವಾಗಿ ಸರ್ಕಾರ ಇದನ್ನು ನಿರ್ಮಾಣ ಮಾಡಿದೆ. ಕೋಟಿ ಲೆಕ್ಕದ ಬಜೆಟ್ ಸುರಿದಿದೆ ಈ ಪಾರ್ಕಿಗೆ. ಆದರೆ ಇಲ್ಲಿ ಪಾರ್ಕ್ ನಿರ್ಮಾಣದಲ್ಲಿಯೇ ಕೋಟಿ ನುಂಗಿ ಲಕ್ಷಗಳನ್ನು ಮಾತ್ರ ಹಾಕಲಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಈ ಪಾರ್ಕ್ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ಅದರ ಮೈಂಟೇನೆನ್ಸ್ ಎಲ್ಲಾ ಅವರಿಗೇ ವಹಿಸಿ ಕೊಡಲಾಗಿದೆ. ಆದರೆ ಈ ಪಾರ್ಕ್ ಈಗಾಗಲೇ ಕಂಟ್ರೋಲ್ ತಪ್ಪಿ ಜುಳು ಜುಳು ಕುಮಾರಧಾರಕ್ಕೆ ಬಿದ್ದು ಬೊಳ್ಳಕ್ಕೆ ಹೋಗುವ ತಯಾರಿಯಲ್ಲಿದೆ.
ಸುಬ್ರಹ್ಮಣ್ಯದ ಸಾಲು ಮರದ ತಿಮ್ಮಕ್ಕ ಪಾರ್ಕಿನಲ್ಲಿ ನಿರಂತರ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಪಾರ್ಕ್ ಇರುವುದೇ ಅನೈತಿಕ ಚಟುವಟಿಕೆ ನಡೆಸಲು ಎಂದು ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಸುಬ್ರಹ್ಮಣ್ಯದ ಕೆಲವು ಪಡ್ಡೆಗಳು ಮತ್ತು ಪಡ್ಡಿಗಳು ಈ ಪಾರ್ಕನ್ನೇ ತಮ್ಮ ಬೆಡ್ ರೂಮನ್ನಾಗಿ ಮಾಡಿಕ್ಕೊಂಡು ಪಾರ್ಕಿನ ಕುಲ ಕೆಡಿಸಿ ಬಿಟ್ಟಿದ್ದಾವೆ. ಇವರ ಯೌವನದ ತೆವಲುಗಳಿಂದಾಗಿ ಪಾರ್ಕಿಗೆ ಮರ್ಯಾಧಸ್ಥರು ಬರುವುದೇ ದುಸ್ತರವಾಗಿದೆ. ಬಂದರೆ ಪ್ರೀಶೋ ಗ್ಯಾರೆಂಟಿ. ಇನ್ನು ಸುಬ್ರಹ್ಮಣ್ಯ ಕಾಲೇಜಿನ ಕ್ಲಾಸ್ ಲವರ್ಸ್, ಇಂಟರ್ ಕ್ಲಾಸ್ ಲವರ್ಸ್, ಕಾಲೇಜ್ ಲವರ್ಸ್, ಓಲ್ಡ್ ಸ್ಟೂಡೆಂಟ್ ಪರಬ್ಬ ಪರಬ್ಬು ಲವರ್ಸ್ ಗಳಿಗೆಲ್ಲ ಈ ಪಾರ್ಕ್ ಸ್ವರ್ಗ ಇದ್ದ ಹಾಗೆ. ಚೀಪು & ಬೆಸ್ಟು. ಇವರ ಯೌವನದ ಚುಟು ಚುಟು ಚಟುವಟಿಕೆಗಳ ಪರಿಣಾಮವಾಗಿ ಪಾರ್ಕ್ ತುಂಬಾ ನೀರಿದ್ದು, ಬೀರಿದ್ದು, ಕೂಲ್ ಡ್ರಿಂಕ್ಸಿದ್ದು ಬಾಟಲಿಗಳು, ಇನ್ನು ನೋಡಬಾರದ ಚೈಲ್ಡ್ ಕಂಟ್ರೋಲರ್ ವಸ್ತುಗಳು ಪಾರ್ಕಿನಲ್ಲಿ ಕಾಣ ಸಿಗುವುದು ಸರ್ವೇ ಸಾಮಾನ್ಯವಾಗಿದೆ. ಈ ಪಾರ್ಕಿನ ಸುತ್ತ ಮುತ್ತ ಅರಣ್ಯವೇ ಇದ್ದು ಇದು ಪ್ರಾಜೆಕ್ಟ್ ವಿದ್ ಪ್ರಾಕ್ಟಿಕಲ್ಸ್ ಮಾಡಲು ಬರುವ ಸುಬ್ರಹ್ಮಣ್ಯ ಕಾಲೇಜಿನ ಜೋಕುಲೆಗ್ ವರದಾನವಾಗಿ ಪರಿಣಮಿಸಿದೆ. ಸೊಳ್ಳೆ ಕಡಿಯಲ್ವಾ ಮಾರಾಯ್ರೆ ಇವರಿಗೆ?
ಇನ್ನು ಪಾರ್ಕಿನ ಮೈಂಟೇನೆನ್ಸ್ ಬಗ್ಗೆ ಬರೆದರೆ ಅದರ ಬಗ್ಗೆ ಕತೆಗಳಿವೆ ಮತ್ತು ಉಪ ಕತೆಗಳೂ ಕೂಡ ಇದೆ ಎಂದು ಗುಸುಗುಸು ಗುಸುಗುಸು ಇದೆ. ಈ ಪಾರ್ಕಿಗೆ ಒಬ್ಬಳು ಕ್ಯಾಷಿಯರ್ ಇದ್ದು ಅವಳದ್ದು ಡೈರೆಕ್ಟ್ ಅಪಾಯಿಂಟ್ಮೆಂಟಾ ಅಥವಾ ರಾಜ್ಯ ಸಭಾ ಸದಸ್ಯೆಯಾ ಎಂದು ಸುಬ್ರಹ್ಮಣ್ಯದಲ್ಲಿ ಯಾರನ್ನು ಕೇಳಿದರೂ ಗೊತ್ತಿಲ್ಲ. ಅವಳಿಗೆ ಸಂಬ್ಳ ಕೊಡೋದು ಯಾರು ಎಂಬ ಪ್ರಶ್ನೆ ಕುಮಾರ ಪರ್ವತದಷ್ಟು ದೊಡ್ಡದಾಗಿ ಬೆಳೆದು ನಿಂತಿದೆ.
ಇನ್ನುಳಿದಂತೆ ಈ ಪಾರ್ಕಿಗೆ ಎಂಟ್ರಿ ಫೀ ಅಂತ ಪ್ರತೀ ಬಾಡಿಗೆ ಇಪ್ಪತ್ತು ಕೀಳಲಾಗುತ್ತದೆ. ಇನ್ನು ನಿಮ್ಮ ಕಾರಿಗೆ ಪಾರ್ಕಿಂಗ್ ಶುಲ್ಕ ಇಪ್ಪತ್ತು. ಈ ದುಡ್ಡು ಯಾರ ಡಬ್ಬಿಗೆ ಬೀಳುತ್ತದೆ ಎಂದು ಗೊತ್ತಿಲ್ಲ. ಹಾಗೆಂದು ಇದೇನು ದೊಡ್ಡ ಕಬ್ಬನ್ ಪಾರ್ಕ್ ಅಲ್ಲ. ಯಾಕೆ ಈ ಪಾರ್ಕಿಗೆ ದುಡ್ಡು ಸುರಿಯುತ್ತಾರೋ ಅದೂ ಗೊತ್ತಿಲ್ಲ. ಇಷ್ಟೆಲ್ಲಾ ದುಡ್ಡು ಸುರಿದು ಈ ಪಾರ್ಕನ್ನು ಅನೈತಿಕ ಚಟುವಟಿಕೆಗಳ ಅಡ್ಡೆ ಮಾಡುವುದಕ್ಕಿಂತ ದೈಯರ ಅಂಗಡಿಯಿಂದ ಒಂದು ಬೀಗ ತಂದು ಹಾಕುವುದು ಒಳ್ಳೆಯದು.
ಯುವರ್ ಆನರ್,
ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಯಾಕೆ ಸಾಲು ಮರ ಬೆಳೆಸಿದಳೆಂದರೆ ಆ ಮರಗಳಿಂದ ಸಮಾಜಕ್ಕೆ ನೆರಳಾಗಿ ಆ ಮೂಲಕ ಜೀವಸಂಕುಲದ ಅಭಿವೃದ್ಧಿಗೆ, ಬೆಳವಣಿಗೆಗೆ ಸಹಕಾರಿಯಾಗಲೆಂದು. ಆದರೆ ನಾವು ಅದೇ ನೆರಳಲ್ಲಿ ಅನೈತಿಕ ಚಟುವಟಿಕೆಗಳ ಮಾಡುತ್ತಿದ್ದೇವೆ. ಒಂದು ಕೆಟ್ಟ ವ್ಯವಸ್ಥೆ, ಕೆಟ್ಟ ಇಲಾಖೆ, ಕೆಟ್ಟ ಜನ ಇದ್ದರೆ ಈ ಸಮಾಜ ಎಂದೂ ಉದ್ಧಾರ ಆಗದು. ಇಲ್ಲಿ ಮಹಾನ್ ವ್ಯಕ್ತಿಗಳ ಮಾರ್ಗದಲ್ಲಿ ಕೆಟ್ಟ ಜನರ, ಕೆಟ್ಟ ಸಾಧನೆಗಳ ಮೆರವಣಿಗೆ ಹೋಗುತ್ತಿದೆ. ಕಳ್ಳನಿಗೆ ಸನ್ಮಾನ ಮಾಡುವ ಸಮಾಜದಿಂದ, ವಂಚಕರಿಗೆ ಡಾಕ್ಟರೇಟ್ ಕೊಡುವ ವಿಶ್ವ ವಿದ್ಯಾಲಯದಿಂದ, ಕಾಲೇಜು ಜೀವನದಲ್ಲಿಯೇ ಅನೈತಿಕ ಚಟುವಟಿಕೆ ಮಾಡುವ ವಿದ್ಯಾರ್ಥಿಗಳಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ?
Post a Comment