ಇವರೆಲ್ಲ ವೀಡಿಯೋ ಮಾಡೋದು ಯಾಕೆ ಮಾರಾಯ್ರೆ? ಹಾಗೆಂದು ಇವರು ಮಾಡುವ ಪುಣ್ಯ ಕಾರ್ಯಗಳ, ಸ್ವಮಜಾ ಸೇವೆಗಳ ಚಿತ್ರೀಕರಣ ಮಾಡಿಕೊಂಡು ಕೆರಿಯರ್ ಲಗಾಡಿ ತೆಗೆಯುವ ಸಾಕ್ಷಿಗಳನ್ನು ಯಾಕೆ ಕ್ರಿಯೇಟ್ ಮಾಡಿಕೊಳ್ಳುತ್ತಾರೆಂದೇ ಅರ್ಥವಾಗುತ್ತಿಲ್ಲ. ಪೋಪಿಕಾಲ ಮಾರಾಯ್ರೆ ಇವರಿಗೆಲ್ಲ. ಅದರಲ್ಲೂ ದೇಶಭಕ್ತರಿಗಂತೂ ಜಾಸ್ತಿ ಅಭ್ಯಾಸ. ಸ್ವಮಜಾ ಸೇವೆ ಮಾಡೋದೂ ಅವರೇ, ಕ್ರೀಯೆಗಳ ಶೂಟಿಂಗ್ ಮಾಡೋದೂ ಅವರೇ, ವೈರಲ್ ಆಗೋದೂ ಅವರಿಂದಲೇ, ತಮ್ಮ ಸ್ಥಾನಗಳಿಂದ ಡಿಸ್ಮಿಸ್ ಆಗೋದೂ ಅವರೇ, ನಂತರ ಪರಪ್ಪನ ಅಗ್ರಹಾರ ವಾಸಿ ಆಗೋದೂ ಅವರೇ. ಓಬಿರಾಯನ ಕಾಲದಲ್ಲಿ ಒಬ್ಬ ಒಲೆಯಲ್ಲಿ ಕಕ್ಕ ಮಾಡಿ ನನ್ನ ಕರ್ಮವೇ ಅಂದನಂತೆ. ದೇಶಭಕ್ತರ ಕತೆ ಇವನ ಹಾಗೇ ಆಗಿದೆ.
ಇದು ಕೊಂತೂರಿನ ಪರಮ ದೇಶ ಭಕ್ತನೊಬ್ಬನ ಕತೆ. ಹೆಸರು ರಾಧೇಶ್ ಜೀ. ದೇಶಭಕ್ತರ ಪಕ್ಷದಲ್ಲಿ, ಸಂಫ ಪರಿವಾರದ ಬೈಠಕ್ ಗಳಲ್ಲಿ ರಾಧೇಶ್ ಜೀಯ ಮಾತು, ಅಭಿಪ್ರಾಯಗಳು ಸುಗ್ರೀವಾಜ್ಞೆ ಇದ್ದ ಹಾಗೇ. ಮಂಗಳೂರು ಎಂಪಿಗೆ ಕ್ಯಾಂಡಿಡೇಟ್ ಯಾರಾಗಬೇಕು, ವಿಧಾನ ಸಭೆಗೆ ಯಾರನ್ನು ಸೆಂಡ್ ಮಾಡಬೇಕು, ಜಿ.ಪಗೆ, ತಾ.ಪಗೆ, ಗ್ರಾ.ಪಂಗೆ ಯಾರನ್ನು ನಿಲ್ಲಿಸ ಬೇಕು, ದೇಶಭಕ್ತರ ಜಿಲ್ಲಾ ಅಧ್ಯಕ್ಷ ಯಾರಾಗ ಬೇಕು, ಪರಿವಾರವನ್ನು ಯಾರ ಕೈಯಲ್ಲಿ ಕೊಡಬೇಕು, ಪೆತ್ತದ ಜವಾಬ್ದಾರಿ ಯಾರಿಗೆ ಮುಂತಾದ ದೇಶ ಭಕ್ತರ ಟೀಮಿನ ಪ್ರಮುಖ ನಿರ್ಧಾರಗಳ ಜ್ಯಾರಿಗೆ ರಾಧೇಶ್ ಜೀ ಒಪೀನಿಯನ್ ಇಂಪಾರ್ಟೆಂಟ್ ಆಗಿರುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಮೊರಂಪು ಬೇನೆಯ ಕ್ಯಾಂಡಿಡೇಟ್ ನಿಲ್ಲಿಸಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೂಡ ಇದೇ ರಾಧೇಶ್ ಜೀ ಎಂದು ಇವತ್ತಿಗೂ ಕಾಂಗ್ರೆಸಿಗರು ಇವರನ್ನು ಹಾಡಿ ಹೊಗಳುತ್ತಿದ್ದಾರೆ. ಹಾಗೇ ತನ್ನ ಸಂಘಟನೆಯ ಮತ್ತು ರಾಜಕೀಯದ ಉತ್ತುಂಗದಲ್ಲಿರುವಾಗಲೇ ರಾಧೇಶ್ ಜೀ ಗೆ ಗೇರ್ ಬಾಕ್ಸ್ ಪ್ರಾಬ್ಲಂ ಶುರುವಾಗಿ ಹೋಯ್ತು. ಇದೇ ಕಾರಣಕ್ಕೆ ಬಿಜೆಪಿ ಮತ್ತು ಪರಿವಾರಗಳು ರಾಧೇಶ್ ಜೀಯ ಹೆಗಲಿನಿಂದ ಜವಾಬ್ದಾರಿ ತೆಗೆದು ತೋಟಕ್ಕೆ ಮುದ್ದು ಬಿಡಲು ಸೆಂಡ್ ಮಾಡಿದೆ ಎಂದು ತಿಳಿದುಬಂದಿದೆ.
ಹಾಗೆಂದು ರಾಧೇಶ್ ಜೀ ದೊಡ್ಡ ದೊಡ್ಡ ತಪ್ಪೇನು ಮಾಡಿಲ್ಲ. ಅದ್ಯಾರೋ ಹುಡುಗಿಯೊಬ್ಬಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದು ಅಷ್ಟೇ. ಆದರೆ ವೀಡಿಯೋ ಕಾಲ್ ನಲ್ಲಿ ಹುಡುಗಿಯೊಂದಿಗೆ ಯೋಗಕ್ಷೇಮ ಮಾತ್ರ ಮಾತಾಡದೆ "ತೋರ್ಸು.. ತೋರ್ಸು" ಎಂದು ಹೇಳಿದ್ದು, ನಂತರ ತಾನೇ ಒಳಗೇ ಅಡಗಿಸಿಟ್ಟದ್ದನ್ನು ಹೊರಗೆಳೆದು ತೋರಿಸಿದ್ದು ಇದೆಲ್ಲ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೇವ್ ಆಗಿತ್ತು ಮತ್ತು ವೈರಲ್ ಆಗಿತ್ತು. ಇದು ದೇಶ ಭಕ್ತರ ಟೀಮಿಗೆ ಮತ್ತು ಪರಿವಾರಕ್ಕೆ ಭಾರೀ ಮುಜುಗರ ತಂದಿತ್ತು ಮತ್ತು ರಾಧೇಶ್ ಜೀ ವಿಷಯದಲ್ಲಿ ಏರ್ಯಲ್ ರೂಟ್ ತಗೊಂಡು ಅವರನ್ನು ದೊಡ್ಡ ದೊಡ್ಡ ಜವಾಬ್ದಾರಿಗಳಿಂದ ತೆಗೆದ್ದು ಬಿಸಾಡಿತ್ತು.
ಹಾಗೆಂದು ಒಂದು ನಿಮಿಷವೂ ಭರ್ತಿ ಇಲ್ಲದ ಈ ಕ್ಲಿಪ್ ನಲ್ಲಿ ಒಮ್ಮೆ ರಾಧೇಶ್ ಜೀ ಮಲಗಿಕೊಂಡು ಹುಡುಗಿ ಒಂದರ ಜೊತೆ ಮಾತಾಡುವ ಸೀನ್ ಇದೆ. ಇನ್ನೊಂದು ಸೀನಿನಲ್ಲಿ ಚಾಕಲೇಟ್ ಫ್ಲೇವರ್ ಕೋನ್ ಐಸ್ ಕ್ರೀಮ್ ನಂತಹ ವಸ್ತುವೊಂದನ್ನು ರಾಧೇಶ್ ಜೀಯೇ ತೋರಿಸುತ್ತಾರೆ ಅಷ್ಟೇ. ಕೇವಲ ಇಷ್ಟಕ್ಕೇ ಪರಿವಾರ ಮತ್ತು ದೇಶಭಕ್ತರು ರಾಧೇಶ್ ಜೀಗೆ ಏರ್ಯಲ್ ರೂಟ್ ತೋರಿಸಿದ್ದಾರೆ. ಇನ್ನೊಂದು ಮಾಹಿತಿ ಏನೆಂದರೆ ರಾಧೇಶ್ ಜೀದ್ದು ಮೂರ್ನಾಲ್ಕು ನಿಮಿಷದ ಇನ್ನೊಂದು ದೊಡ್ಡ ಫಿಲಂ ಇದ್ದು ದರ್ಶನ್ ಜೈಲಿಂದ ಬಂದ ಮೇಲೆ ರಿಲೀಸ್ ಆಗುವ ಅಪಾಯಗಳಿವೆ ಎಂದು ತಿಳಿದುಬಂದಿದೆ. ಅದಕ್ಕೆ ದೇಶಭಕ್ತರು ಮುಂಜಾಗ್ರತಾ ಕ್ರಮವಾಗಿ ರಾಧೇಶ್ ಜೀ ಯನ್ನು ಮದ್ದು ಬಿಡಲು ಕಳಿಸಿದ್ದು.
Post a Comment