ನೇರಳಕಟ್ಟೆ: ಸ್ವಾಮಿಗೇಕೆ ಭೂಮಿ? ಭೂಮಿ ಏಕೆ ಸ್ವಾಮಿ?

                


  ಹಾಗೆಂದು ಸ್ವಾಮಿಗಳು ಹೇಗೆ ಇರಬೇಕು ಅಂದ್ರೆ ಎಲ್ಲ ಬಿಟ್ಟವರಂತೆ ಇರಬೇಕು. ಆದರೆ ಈಗಿನ ಸ್ವಾಮಿಗಳು ಹೇಗೆ ಇದ್ದಾರೆಂದರೆ ಎಲ್ಲವನ್ನೂ ಬಿಟ್ಟವರಂತೆ ಇದ್ದಾರೆ. ಈಗಿನ ಸ್ವಾಮಿಗಳತ್ರ ಯಾವುದುಂಟು ಯಾವುದಿಲ್ಲ? ದುಡ್ಡಿದೆ, ಬಿಸಿನೆಸ್ ಇದೆ, ಲಕ್ಸುರಿ ಕಾರುಗಳಿವೆ, ಆಸ್ತಿ ಇದೆ ಮತ್ತು ಎಲ್ಲಾ ಬಿಟ್ಟು ಮಠ ತುಂಬಾ ರಂಭೆ, ಊರ್ವಶಿ ಮೇನಕೆ ಸೈಜಿನ ಸೇವಕಿಯರನ್ನೂ ಇಟ್ಟುಕೊಳ್ಳಲಾಗುತ್ತಿದೆ. ಈಗಿನ ಸ್ವಾಮಿಗಳನ್ನು ಯಾವ ಸೈಡಿಂದ ನೋಡಿದರೂ ಸ್ವಾಮಿ ಥರ ಕಾಣೋದೇ ಇಲ್ಲ ಮಾರಾಯ್ರೆ.


   ಇದೀಗ ನೇರಳಕಟ್ಟೆಯ ಸೂಜಿ ಸ್ವಾಮಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹಾಗೆಂದು ಈ ಸೂಜಿ ಸ್ವಾಮಿಗಳಿಗೆ ಮಠವಿಲ್ಲ, ಆಶ್ರಮ ಇಲ್ಲ, ಧಾಮ ಇಲ್ಲ, ದೇವಸ್ಥಾನ ಇಲ್ಲ, ಮಂದಿರ ಇಲ್ಲ. ಒಂದು ಎ.ಸಿ ಮನೆ ಮತ್ತು‌ ಆ ಮನೆಯಲ್ಲಿ ಮೂರ್ನಾಲ್ಕು ಅಜ್ಜಿಗಳನ್ನು ಬಿಟ್ಟರೆ ಬೇರೆಂತ ಕೂಡ ಇಲ್ಲ. ಸ್ವಾಮಿಗಳನ್ನು ತಂದು ಯಾರೋ ನೇರಳಕಟ್ಟೆಯಲ್ಲಿ ಇಳಿಸಿ ಹೋದದ್ದು ಬಿಟ್ಟರೆ ಅವರೇನು ಹಿಮಾಲಯದಿಂದ ಇಳಿದೂ ಬಂದವರಲ್ಲ. ಆದರೂ ಸ್ವಾಮಿಗೆ ಜನ ಸೇರಿತು, ಸ್ವಾಮೀಜಿ ಹಿಟ್ ಆಗಿ ಹೋದರು. ನೇರಳ ಕಟ್ಟೆಗೆ ಉಟ್ಟ ಬಟ್ಟೆಯಲ್ಲಿ ಬಂದಿದ್ದ ಸ್ವಾಮೀಜಿ ಇದೀಗ ಕೋಟಿ ಬೆಲೆಯ ಒಂದು ಲ್ಯಾಂಡ್ ಪರ್ಚೆಸ್ ಮಾಡಿದ್ದಾರೆ ಎಂದು ಸುದ್ದಿ ಓಡಿ ಬಂದಿದೆ. ಸ್ವಾಮಿಗೆ ಈ ಲ್ಯಾಂಡ್ ಪರ್ಚೆಸ್ ಮಾಡಲು ಕೋಟಿ ದುಡ್ಡು ಎಲ್ಲಿಂದ ಬಂತು ಎಂದು ಎಂದು ಕೆದಕಿದರೆ ಅದರ ಹಿಂದೆ ಒಂದು ಕತೆ ಮತ್ತು ಕೆಲವು ಉಪ ಕತೆಗಳಿವೆ. ಸೂಜಿ ಸ್ವಾಮಿ ಬಗ್ಗೆ ಈಗೀಗ ಭಾರೀ ವಿರೋಧಗಳು ಎದ್ದಿದ್ದು ನೇರಳಕಟ್ಟೆಯಿಂದ ಸ್ವಾಮಿಗಳಿಗೆ ಬೇಗದಲ್ಲೇ ಸೆಂಡಾಫ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಇಷ್ಟಕ್ಕೂ ಸೂಜಿ ಸ್ವಾಮಿಗಳಿಗೆ ಭೂಮಿ ಏಕೆ ಮಾರಾಯ್ರೆ? ಇಂಟರ್ಸಿ ಮಂಗಳ ಹಾಕ್ತಾರ?


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget