ಸುಬ್ರಹ್ಮಣ್ಯ: ಬ್ರಹ್ಮ ರಥದ ಹತ್ತಿರ ಅನುಮಾನಾಸ್ಪದ ಕಾರು ಪತ್ತೆ!

                         


   ಕರ್ನಾಟಕದ ನಂಬರ್ ವನ್ ದೇವರ ಊರಿನಲ್ಲಿ ಈಗ ಹೊಸ ಹೊಸ ರೂಲ್ಸ್.  ಇಲ್ಲೀಗ ರಥಬೀದಿಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೂ ಕೆಲವು ದಿನಗಳಿಂದ ಈ ರಥಬೀದಿಯಲ್ಲಿ ಕಾರೊಂದು ರಾಜಾರೋಷವಾಗಿ ಎಂಟ್ರಿ, ಎಕ್ಸಿಟ್ ಆಗುತ್ತಿದೆ. ಯಾರ ಕಾರೆಂದು ಗೊತ್ತಿಲ್ಲ. ಕಾಗೆ ಕಲರ್ ಕಾರು. ನೋ ಎಂಟ್ರಿ ರಥಬೀದಿಯಲ್ಲಿ ಬಂದು ರಥದ ಶೆಡ್ ಹತ್ತಿರವೇ ಪಾರ್ಕ್ ಮಾಡಲಾಗುತ್ತಿದೆ. ಏನು ಪುಳಿ ಮಾರಾಯ್ರೆ ಇವನಿಗೆ ದೇವರ ರಥದ ಹತ್ತಿರ ಕಾರು ನಿಲ್ಲಿಸಲು.


  ಹಾಗೆಂದು ಕುಕ್ಕೆ ಪ್ರೈವೇಟ್ ದೇವಸ್ಥಾನ ಅಲ್ಲ. ಪ್ರೈವೇಟ್ ಆಗಿದ್ದರೆ ದೇವಸ್ಥಾನದ ಮೊಕ್ತೇಸರ ಅಂತ ಹೇಳ ಬಹುದಿತ್ತು. ಆದರೆ ಕುಕ್ಕೆ ಸರ್ಕಾರದ ದೇವಸ್ಥಾನ. ಇಲ್ಲಿ ರಾಮ ದೂಮ ಚೋಮ ಎಲ್ಲರೂ ಒಂದೇ. ಎಲ್ಲರಿಗೂ ಒಂದೇ ರೂಲ್ಸು. ಆದರೂ ನೋ ಎಂಟ್ರಿಯಲ್ಲಿ ಎಂಟ್ರಿ, ನೊ ಪಾರ್ಕಿಂಗ್ ನಲ್ಲಿ ಪಾರ್ಕಿಂಗ್. ಈ ಮಹಾನುಭಾವರು ಯಾರು? ಇಲ್ಲಿ ಇನ್ನೂ ಆಡಳಿತ ಮಂಡಳಿ ಆಗಿಲ್ಲ. ಅದಕ್ಕೆ ಮೊದಲೇ ಈ ಸೈಜಿನ ಕಾರು ಬಾರು. ದನಗಳ್ಳರ ಕಾರಾ ಅಥವಾ ಹಣಗಳ್ಳರ ಕಾರಾ? ಎಲ್ಲಿದ್ದಾರೆ ನೋ ಎಂಟ್ರಿ, ನೋ ಪಾರ್ಕಿಂಗ್ ಮಾಡಿದವರು?
   
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget