ಪುತ್ತೂರು: ದೇಶಭಕ್ತರಿಂದಲೇ ಹಿಂದೂ ನಾಯಕನಿಗೆ ಆನೆ ತುಳಿತ

                        


   ಇವರು ಪೈ ವಿಸ್ಟಾ ಹೋಟೆಲ್ ಗೆ ಹೋದದ್ದು ಯಾಕೆ ಮಾರಾಯ್ರೆ? ಇವರನ್ನೇನು ಪುತ್ತಿಲ ಪರಿವಾರದವರು ಅಥವಾ ಪುತ್ತಿಲರ ಗೂಂಡಾಗಳು, ಪುತ್ತಿಲ ದೋಸ್ತಿಗಳು  ಇವರ ಮನೆಗೆ ಬಂದು ಇವರಿಗೆ ಹೊಡೆದು, ಬಡಿದು, ಕೈಕಾಲು ಕಟ್ಟಿ, ಕಿಡ್ನಾಪ್ ಮಾಡಿ ಪೈ ವಿಸ್ಟಾ ಹೋಟೆಲಿಗೆ ಕರಕ್ಕೊಂಡು ಹೋದದ್ದು ಅಲ್ಲ, ಪುತ್ತಿಲನೇ ಖುದ್ದು ಇವರ ಮನೆಗೆ ಬಂದು ಜ್ಯೂಸಿಗೆ ಮತಿ ತಪ್ಪುವ ಮಾತ್ರೆ ಹಾಕಿ ಇವರ ಮತಿ ತಪ್ಪಿಸಿ ಇವರ ಬಾಡಿಯನ್ನು ಡಿಕ್ಕಿಗೆ ಹಾಕಿ ಪೈ ವಿಸ್ಟಾ ಹೋಟೆಲಿಗೆ ತಂದದ್ದು ಅಲ್ಲ, ಇನ್ನು ಪುತ್ತಿಲ ವಿರೋಧಿಗಳು ಇವರಿಗೆ ದುಡ್ಡು ಕೊಟ್ಟು ಆಗ ಪೈ ವಿಸ್ಟಾ ಹೋಟೆಲಿಗೆ ಕಳಿಸಿದ್ದೂ ಅಲ್ಲ, ಹಾಗೆಲ್ಲ ಪುತ್ತಿಲ ಕರೆದ ಅಂತ ಪೈ ವಿಸ್ಟಾ ಹೋಟೆಲಿಗೆ ಹೋಗಲು ಇವರು ಪುತ್ತಿಲನ ಕುಟುಂಬದವರು, ಸಂಬಂಧಿಕರೂ ಅಲ್ಲ, ಪುತ್ತಿಲನೊಂದಿಗೆ ಇವರಿಗೆ ವ್ಯಾಪಾರ ವಹಿವಾಟು ಇಲ್ಲ, ಇವರಿಬ್ಬರು ಪಾರ್ಟ್ನರ್ ಗಳು ಇಲ್ಲ, ಇವರು ಪುತ್ತಿಲ ಪರಿವಾರದ ಪದಾಧಿಕಾರಿಗಳೂ ಅಲ್ಲ, ಇವರು ಪುತ್ತಿಲನ ಊರಿನವರೂ ಅಲ್ಲ. ಅದು ಯಾವುದೂ ಅಲ್ಲ ಅಂದ ಮೇಲೆ ಇವರು ಪೈ ವಿಸ್ಟಾ ಹೋಟೆಲಿಗೆ ಹೋದದ್ದಾದರೂ ಯಾಕೆ?  ಯಾಕೆಂದರೆ ಅದಕ್ಕೆ ಮಾತ್ರ ಹೋದರಾ? ಅದಕ್ಕೆಂದೇ ಹೋಗಿದ್ದರೆ ಒಂದು ವರ್ಷ ಕಳೆದ ಮೇಲೆ ಯಾಕೆ ರೇಪ್ ಕೇಸ್? ಆವತ್ತು ರೇಪ್ ಆಗಿದ್ದರೆ ಆವತ್ತೇ ಚಡ್ಡಿ ಒಣಗುವ ಮೊದಲೇ ಕೇಸ್ ಕೊಡಬೇಕಿತ್ತು. ಸಮ್ಮತಿ ಸೆಕ್ಸ್ ನಡೆಸಿ ಈಗ ಅತ್ಯಾಚಾರ ಅಂದರೆ ಹೇಗೆ ಮಾರಾಯ್ರೆ? ಸಮ್ಮತಿ ಸೆಕ್ಸ್ ಬಗ್ಗೆ ಸುಮ್ಮನೆ ಕೇಸ್ ಬೇಡ ಎಂದು ಸುಪ್ರೀಂ ಕೂಡ ಹೇಳಿದೆ. ಈಗ ನೋಡಿದರೆ ಅರುಣ್ ಪುತ್ತಿಲ ಎಂಬ ಹಿಂದೂ ನಾಯಕನನ್ನು ಪೊಕ್ಕಡೆ ಕೇಸ್ ಜಡಿದು ಸ್ವಿಚ್ಡ್ ಆಫ್ ಮಾಡಲಾಗಿದೆ. ಪರದೆ ಮೇಲೆ ಆಂಟಿ ಕುಣಿದರೂ ಪರದೆ ಹಿಂದೆ ಬೇಟೆಗಾರ ದೇಶಭಕ್ತರ ಪ್ರೊಡಕ್ಷನ್, ಡೈರೆಕ್ಷನ್, ಸ್ಕ್ರೀನ್ ಪ್ಲೇ, ಹಿನ್ನೆಲೆ ಸಂಗೀತ ಎಲ್ಲಾ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪುತ್ತೂರಿನಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಬೇಟೆಗಾರ ದೇಶಭಕ್ತರ ಗಿಫ್ಟ್ ಇದು ಎಂದು ಹೇಳಿದರೂ ತಪ್ಪಾಗಲಾರದು. ಇಷ್ಟು ಮಾಡ್ಲಿಕ್ಕೆ ದೇಶಭಕ್ತರು ಅವಿರತ ಶ್ರಮ ಪಟ್ಟಿದ್ದಾರೆ, ಬೆವರಿಳಿಸಿದ್ದಾರೆ. ಯಾಕೆಂದರೆ ಹಿಂದೂ ಹುಲಿಯನ್ನು ಪುಳಿ ಮಾಡಿ ಶರಬತ್ತ್ ಮಾಡಿ ಕುಡಿಯುವುದು ಚಿಕ್ಕ ಕೆಲಸ ಏನಲ್ಲ.


  ಹಾಗೆಂದು ಅರುಣ್ ಪುತ್ತಿಲ ಎಂಬ ಹಿಂದೂ ನಾಯಕನನ್ನು ಈ ರೀತಿ ಪೊಕ್ಕಡೆ ಕೇಸ್ ಜಡಿದು ಸ್ವಿಚ್ ಆಫ್ ಮಾಡಿಸಿದ್ದು ಮುಸ್ಲಿಮರಲ್ಲ. ಇದರಲ್ಲಿ ಅವರ ಪಾತ್ರವಿಲ್ಲ, ಎಸ್ಡಿಪಿಐ, ಪಿಎಫ್ಐಗಳ ಬಲೆ ಇಲ್ಲ, ಸ್ಕೆಚ್ಚಿಲ್ಲ. ದೇಶದ್ರೋಹಿ ಸಂಘಟನೆಗಳು, ಭಯೋತ್ಪಾದಕರು ಇತ್ಲ ಕಡೇ ಬಂದೇ ಇಲ್ಲ. ಮುಗ್ಧ ಕಾಂಗ್ರೆಸಿಗರ ಐಡಿಯಾ ಇಲ್ಲಿಲ್ಲ. ಇನ್ನು ಜೆಡಿಎಸ್, ಕಮ್ಮುನಿಷ್ಟರು, ಸಮಾಜವಾದಿಗಳು, ಬುದ್ಧಿ ಜೀವಿಗಳಿಗೆಲ್ಲ ಇಂಥ ಐಡಿಯಾ ಹೊಳೆಯಲ್ಲ.ಆದರೆ ಇಂಥ ಹಲ್ಕಟ್ ಕೆಲಸ ಯಾರಾದರೂ ಮಾಡುವುದಿದ್ದರೆ ಅದು ಬೇಟೆಗಾರ ದೇಶಭಕ್ತರಿಂದ ಮಾತ್ರ ಸಾಧ್ಯ. ಹಾಗೆಂದು ಯಾವುದೇ ಧರ್ಮಗಳು ತಮ್ಮದೇ ನಾಯಕನನ್ನು ನೀರಾಕಿ, ರಸಗೊಬ್ಬರ ಸುರಿದು ಪೋಷಿಸಿ ಬೆಳೆಸಿ ಬಿಡುತ್ತದೆ. ಆದರೆ ಇವರು ಮಾಡಿದ್ದೇನು, ಮಾಡುತ್ತಿರುವುದೇನು? ಇಲ್ಲಿ ಹುಲಿಗಳನ್ನು ಸದೆ ಬಡಿದು ಇಲಿಗಳನ್ನು ಹುಲಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ, ಪ್ರಯೋಗಗಳನ್ನು ಮಾಡಲಾಗುತ್ತಿದೆ. ಹುಲಿ ಜೀನ್ಸ್ ತೆಗೆದು ಇಲಿಗೆ ಇಂಜೆಕ್ಟ್ ಮಾಡಿದರೆ ಇಲಿ ಹುಲಿ ಆಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ದೇಶ ಭಕ್ತರು. ಭಯೋತ್ಪಾದಕರು ಬೆಚ್ಚ ನೀರು ಕಾಯಿಸುವಾಗ ಗೊತ್ತಾಗುತ್ತೆ. ಈಗ ಅದೆಲ್ಲ ಗೊತ್ತಾಗಲ್ಲ.
   

   ಹಾಗೆಂದು ಈಗೀನ ಮಾಡರ್ನ್ ರೇಪ್ ಕೇಸ್ ಗಳು ಹೇಗೆಂದೇ ಅರ್ಥ ಆಗುತ್ತಿಲ್ಲ ಮಾರಾಯ್ರೆ. ಈಗ ರೇಪ್ ಕೇಸ್ ಆಗಲು ಹುಡುಗಿಯ ಬಟ್ಟೆಬರೆ ಹರಿಯ ಬೇಕೆಂದಿಲ್ಲ, ಪರಚಿದ ಗಾಯ, ನಾಯಿ ಕಚ್ಚಿದ ಹಾಗೆ ಕಚ್ಚಿದ ಗಾಯ ಆಗಬೇಕೆಂದಿಲ್ಲ. ಹುಡುಗಿಯ ಬಳೆಗಳು (ಇದ್ದರೆ) ಒಡೆಯ ಬೇಕೆಂದಿಲ್ಲ, ತಲೆಗೂದಲು ಅಸ್ತವ್ಯಸ್ತ ಆಗಬೇಕೆಂದಿಲ್ಲ. ಅದೆಲ್ಲ ಓಲ್ಡ್ ಸ್ಟೈಲ್. ಈಗಿನ ಕಾಲದಲ್ಲಿ ಹುಡುಗಿ ಬ್ಯೂಟಿ ಪಾರ್ಲರ್ ಹೋಗಿ ಟಿಪ್ ಟಾಪ್ ಆಗಿ ಸ್ಟೇಷನ್ ಗೆ ಬಂದು ಓಬಿರಾಯನ ಕಾಲದಲ್ಲೆಲ್ಲೊ ಸೈಕಲ್ ಬ್ಯಾಲೆನ್ಸ್ ಮಾಡಿದ ಸವಿ ನೆನಪುಗಳನ್ನು ಪೋಲಿಸರೊಂದಿಗೆ ಹಂಚಿಕೊಂಡರೆ ಅದು ರೇಪ್ ಕೇಸ್ ಆಗುತ್ತದೆ ಮತ್ತು ಇಡೀ ವ್ಯವಸ್ಥೆ ಅವಳ ಪರವಾಗಿ ನಿಂತು ಬಿಡುತ್ತದೆ. ಅದೊಂದು ಪ್ರಪಂಚವೇ ಮುಳುಗಿ ಹೋದ, ದೇಶದ್ರೋ‌ಹದ, ದೇಶದ ಭದ್ರತೆ, ಸಮಗ್ರತೆಗೆ ಧಕ್ಕೆ ಆಗುವಂತಹ ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಎಲ್ಲಿಯಾದರೂ ವೀಕ್ ಮೈಂಡೆಡ್ ಹುಡುಗ ಓಡಿ ಹೋಗಿ ಉಳ್ಳಾಲ ಸಂಕದ ಮೇಲಿಂದ ಹಾರಿದರೆ ಅದಕ್ಕೆ ಯಾರು ಹೊಣೆ ಕಾರ್ಯಾಂಗನ, ನ್ಯಾಯಾಂಗನ, ಶಾಸಕಾಂಗನ ಅಥವಾ ಪೊಕ್ಕಡೆ ಕೇಸ್ ಕೊಟ್ಟ ಹುಡುಗಿಯಾ? "ಪುತ್ತಿಲ ನನ್ನನ್ನು ಪೈ ವಿಸ್ಟಾ ಹೋಟೆಲಿಗೆ ಕಳೆದ ವರ್ಷ ಕರೆಸಿಕೊಂಡು ಬಿಡದಿದ್ದರೆ ಸಾಯುತ್ತೇನೆ ಎಂದು ಹೆದರಿಸಿ, ಲೈಂಗಿಕ ಸಂಪರ್ಕ ನಡೆಸಿದ್ದಾರೆ" ಎಂದು ಹುಡುಗಿ ಹೇಳಿದೆ. ಸಾಯುತ್ತೇನೆ ಎಂದು ಹೇಳಿದರೆ ಸೈಲ ಅಂತ ಹೇಳೋದು ಬಿಟ್ಟು ಪೈ ವಿಸ್ಟಾವನ್ನು ಅನುಭವಿಸಿ ಒಂದು ವರ್ಷ ಕಳೆದು ಈಗ ತನ್ನ ಶೀಲ ಶೀಲ ಎಂದು ರೋಧಿಸುತ್ತಿರುವ ಹುಡುಗಿಯ ದೂರಿನ ಒಳ ಮರ್ಮ ಅರ್ಥವಾಗುತ್ತದ ಮೂಢರು ಅಂತ ಯಾರಾದರೂ ಇದ್ದರೆ ಅದು ಪೋಲಿಸರು ಮಾತ್ರ ಎಂದು ಒಂದು ಕಡೆಯಿಂದ ಮಾತ್ರ ಹೇಳಬಹುದು. ಇನ್ನೊಂದು ಕಡೆಯಿಂದ ಪಾಪ ಅವರಿಗೂ ಮೇಲಿಂದ ಕೆಳಗಿಂದ ಹೈ ಪ್ರೆಷರ್ ಗಳೂ ಇರುತ್ತದೆ. ಅವರೂ ಏನು ಮಾಡಕ್ಕಾಗಲ್ಲ.
   ಆಯಿತ್ತಲ್ಲ, ಮುಗಿಯಿತ್ತಲ್ಲ, ಮುಗಿಸಿದೆವಲ್ಲ ಪುತ್ತಿಲನ ಕತೆ. ಇನ್ನು ಪುತ್ತೂರಿನ ದೇಶಭಕ್ತರ ಪಾರ್ಟಿಯಲ್ಲಿ ಯಾರಿದ್ದಾರೆ? ಒಳ್ಳೆ ವಿಕೆಟ್ ಗಳೇ ಇಲ್ಲ. ಎಲ್ಲಾ ಅವರವರೇ ರನೌಟ್ ಮಾಡಿಕೊಂಡಿದ್ದಾರೆ.ಇನ್ನು ಉಳಿದಿರುವುದು ಅಳಿದ ಊರಿಗೆ ಉಳಿದವನೇ ಗೌಡ ಕ್ಯಾರೆಕ್ಟರ್ ಗಳು.
ಇಲ್ಲಿ ನಮ್ಮ ಕತೆಯನ್ನು ನಾವೇ ಮುಗಿಸಿ ಕೊಂಡಿದ್ದೇವೆ. ಬಾಕಿ ಎಲ್ಲಾ ಧರ್ಮಗಳ ಕತೆಗಳಲ್ಲಿ ಅವರ ಧರ್ಮ ವಿರೋಧಿಗಳ ಕತೆ ಮುಗಿಸಿದರೆ ನಮ್ಮ ಧರ್ಮದಲ್ಲಿ ಧರ್ಮಕ್ಕೆ ಹೋರಾಡುವ ವರನ್ನು ನಾವೇ ಮುಗಿಸಿ ಬಿಡುತ್ತೆವೆ. ಅಲ್ಲಿ ವಿಲನ್ ಗಳನ್ನು ಮುಗಿಸುತ್ತಾರೆ, ನಮ್ಮಲ್ಲಿ ಹೀರೋಗಳನ್ನು ನಾವೇ ಮುಗಿಸುತ್ತಿದ್ದೇವೆ. ಮತ್ತೆಲ್ಲಿ 274 ಸೀಟು ಬರಬೇಕು?
..........................................

ನೀವೂ ಮಾಹಿತಿ ಕಳಿಸಿ:
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget