ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಕಾಫಿ ಬೀಜಗಳನ್ನು ಕೊಂಡೊಯ್ಯುತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ತುಂಬಿದ್ದ ಗೋಣಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಟೌನ್ ಪೋಲಿಸರು ಒಂದು ಭಟ್ರ ಗ್ಯಾಂಗನ್ನು ಲಿಫ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ನೆಹರೂ ನಗರದ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸೀಸ್ ಮೂಲಕ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ಮಂಗಳೂರು ಬಂದರಿಗೆ ಕಾಫಿ ಬೀಜಗಳ ಲೋಡ್ ಕೊಂಡೋಗುತ್ತಿದ್ದರು. ಈ ಮಧ್ಯೆ ಪುತ್ತೂರು ನೆಹರೂ ನಗರದ ಬಳಿ ಮನೆ ಇರುವ ಕಾರಣ ನೈಟ್ ಲಾರಿಯನ್ನು ನೆಹರೂ ನಗರದ ಬಳಿ ಬದಿಗೆ ಹಾಕಿ ಮನೆಗೆ ಹೋಗಿ ಚಾಚಿ ಮಾಡಿದ್ದರು. ಮರುದಿನ ಬೆಳಿಗ್ಗೆ ಎದ್ದು ಬಂದು ಲೋಡ್ ಮಂಗಳೂರು ತಲುಪಿತ್ತು. ಆದರೆ ಮಂಗಳೂರಲ್ಲಿ ಕಟ್ಟ್ ಬಿಚ್ಚಿಸುವಾಗ ಕಾಫಿ ಗೋಣಿಗಳು ಕಳವಾಗಿರುವ ಬಗ್ಗೆ ಗೊತ್ತಾಗಿದೆ. ಲೆಕ್ಕ ಮಾಡಿದಾಗ 320 ಕಾಫಿ ಗೋಣಿಗಳ ಪೈಕಿ 80 ಗೋಣಿಗಳು ಕಳವಾಗಿರುವ ಬಗ್ಗೆ ಗೊತ್ತಾಗಿದೆ. ಕಳವಾಗಿರುವ ಕಾಫಿ ಬೀಜಗಳ ಅಂದಾಜು ರೇಟ್ 21 ಲಕ್ಷದ 44 ಸಾವಿರ ಎಂದು ಪೋಲಿಸರಿಗೆ ತಿಳಿಸಲಾಗಿದೆ. ಈ ಬಗ್ಗೆ ಪುತ್ತೂರು ಟೌನ್ ಪೋಲಿಸರಿಗೆ ಕಂಪ್ಲೈಂಟ್ ಆಗಿತ್ತು.
ಹಾಗೆ ಪ್ರಕರಣ ಕೈಗೆತ್ತಿಕೊಂಡ ಪುತ್ತೂರು ಟೌನ್ ಪೋಲಿಸರು ನಗರದಲ್ಲಿ ನಿಂತೇ ಒಂದು ಧಮ್ಮು ನಾಲಕ್ಕು ಸುತ್ತಲೂ ಮೂಸಿ ನೋಡಿ ಕಾಫಿ ಪರಿಮಳಾದ ಜಾಡು ಹಿಡಿದು ಕಾಫಿ ಕಳ್ಳರನ್ನು ಹೋಗಿ ಎತ್ತಾಕಿಕೊಂಡು ಬಂದಿದ್ದಾರೆ. ಇದೀಗ ಪುತ್ತೂರು ಟೌನ್ ಠಾಣೆಯಲ್ಲಿ ಕಾಫಿ ಕಳ್ಳರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸದ್ರಿ ಕಾಫಿ ಕಳವು ಪ್ರಕರಣದಲ್ಲಿ ಪೆರ್ನಾಜೆ ಸೈಡಿನ ಒಂದು ಭಟ್ರ ಗ್ಯಾಂಗ್ ಒಳಗೆ ಹೋಗಿದೆ ಎಂದು ಗುಸುಗುಸು ಇದೆ. ಭಟ್ರು ಅಡಿಕೆ ಬಿಟ್ಟು ಕಾಫಿಗೆ ಯಾಕೆ ಕೈಹಾಕಿದರೋ ಆ ದೇವರಿಗೇ ಗೊತ್ತು.
LATEST
ಏನೆಕಲ್ಲು – ಕಡೆಂಬಿಲ ರಸ್ತೆಯಲ್ಲಿ ನಿತ್ಯ ಕೆಸರ್ಡ್ ಒಂಜಿ ದಿನ!ಮಠಂತಬೆಟ್ಟು ಟೆಂಪಲ್ ಮೇಲೆ ಪ್ರಯೋಗ? ತಗಡ್, ಭಸ್ಮ ಸಿಕ್ಕಿದೆ !ಸುಳ್ಯದಲ್ಲಿ ಧರ್ಮಸ್ಥಳದ ಜಾಗ ಗುಳುಂ ಪ್ರಕರಣ! ಕಕ್ಕಿಸಿದ ವ್ಯವಸ್ಥಾಪಕರು!ಬೆಳ್ಳೂರು ಬೈಲು ಸೇತುವೆ ಬಳಿ ಅಕ್ರಮ ಪೊಯ್ಯೆ ಅಡ್ಡೆಗೆ ಪೊಲೀಸ್ ದಾಳಿ 3 ಟಿಪ್ಪರ್ ವಾಹನಗಳು ವಶಕ್ಕೆಬೆಳ್ತಂಗಡಿ ಪೊಯ್ಯೆ ಅಡ್ಡೆಗೆ ಪೋಲಿಸ್ ಧಾಳಿ?ತ್ಯಾಗರಾಜದ ಬೋರಿರಾಜಅಪ್ರಾಪ್ತ ಹುಡುಗಿಯ ಜೊತೆ ಮುಕ್ತರಾಕ. ಕಾಪಿನಬಾಗಿಲಿನಲ್ಲಿ ಪೆಟ್ಟಿನ ಬರ್ಸ!ಸುಬ್ರಹ್ಮಣ್ಯದಲ್ಲಿ ಅಪಘಾತದ ಪ್ರಸಾದ!ಕಲ್ಲುಗುಂಡಿಗೆ ಕೌ ಡಾಕ್ಟರ್ ಇಲ್ಲ!ಮರ್ಧಾಳ ಕುಂಡಡ್ಕ ಫಾಲ್ಸ್ ನಲ್ಲಿ ಅನೈತಿಕ ಪೋಲಿಸರು!
ಪುತ್ತೂರು: ಕಾಫಿ ಕಳ್ಳರು ಅಂದರ್?
Pattler News
Bureau Report