Pattler News

Latest Post

                     


  ಅಲ್ಲಿ ಪುತ್ತೂರು ತಾಲೂಕು ಆಡಳಿತಕ್ಕೆ ಒಳಪಟ್ಟ, ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ, ವಳಾಲು, ಮುಗೇರಡ್ಕ, ಮಠದ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ, ನಿರಂತರವಾಗಿ, ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ, ಈ ಬಗ್ಗೆ ಪತ್ರಿಕೆಗಳು, ಜಾಲತಾಣಗಳು ಸುದ್ದಿ ವೈರಲ್ ಮಾಡಿದರೂ  ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಶಿಖಂಡಿ ವರ್ತನೆ ತೋರಿದ ಕಾರಣ ಇದೀಗ ಈ ಒಂದು ಅಕ್ರಮ ವಹಿವಾಟಿನ ಬಗ್ಗೆ ಲೋಕಾಯುಕ್ತರ ಟೇಬಲ್ ಗೆ ದೂರು ಹೋಗಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನ ಟೇಬಲಿಗೂ ಒಂದು ಪ್ರತಿ ದೂರು ಸಲ್ಲಿಸಲಾಗಿದೆ.






ಅಲ್ಲಿ ನೇತ್ರಾವತಿ ತೀರದ ವಳಾಲು ಮತ್ತು ಮುಗೇರಡ್ಕಗಳಲ್ಲಿ ಯಾವುದೇ ಪರ್ಮಿಶನ್ ಇಲ್ಲದೆ, ಗಣಿ ಇಲಾಖೆಯ ಅಧಿಕಾರಿಗಳಿಗೆ ಪಾರ್ಲೆ ಜಿ ಬಿಸಾಡಿ ನಿರಂತರವಾಗಿ ದೊಡ್ಡ ಮಟ್ಟದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ಅಡ್ಡೆಯಲ್ಲಿ ಮರಳು ಕ್ಲೀನಿಂಗ್ ಕೂಡ ನಡೆಸಲಾಗುತ್ತಿದ್ದು ಇದು ಕೂಡ ಡಬ್ಬಲ್ ಕಾನೂನು ಬಾಹಿರವೇ. ದಿನ ನಿತ್ಯ ನೂರಾರು ಟಿಪ್ಪರ್ ಗಳು, ಲಾರಿಗಳನ್ನು ಬಳಸಿ ಇಲ್ಲಿಂದ ಮರಳು ಸಾಗಿಸಲಾಗುತ್ತಿದೆ. ಹಿಟಾಚಿಗಳು, ಜೆಸಿಬಿಗಳನ್ನು ಬಳಸಿ ಮರಳು ತೆಗೆದು, ಬಗೆದು ನೇತ್ರಾವತಿಯನ್ನು ಬರಿದು ಮಾಡಲಾಗುತ್ತಿದೆ. ತಾಲೂಕು ಆಡಳಿತವನ್ನು ಕ್ಯಾರೇ ಅನ್ನದೆ ಈ ವಹಿವಾಟು ನಡೆಯುತ್ತಿದೆ. ಯಾವುದೇ ಕಾಗದ ಪತ್ರಗಳು ಇಲ್ಲದೆ, ನೇತ್ರಾವತಿಯನ್ನು ಡ್ಯಾಡೀಸ್ ಪ್ರಾಪರ್ಟಿ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವ ಒಂದು ಕಳ್ಳಕಾಕರ ಗ್ಯಾಂಗ್ ಇದರ ಹಿಂದೆ ಕೆಲಸ ಮಾಡುತ್ತಿದ್ದು ರೌಡಿಸಂ, ಪೊಲಿಟಿಕಲ್ ಪವರ್ ಮತ್ತು ದೊಡ್ಡ ದುಡ್ಡು ಬಳಸಿ ಈ  ವಹಿವಾಟು ನಡೆಸಲಾಗುತ್ತಿದೆ. ಇದೀಗ ಈ ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಡಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಕಲೆಕ್ಟರನಿಗೂ ದೂರಾಗಿದ್ದು ಅವರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡ ಬೇಕಾಗಿದೆ.


ಒಂದು ಅಕ್ರಮ ಗಣಿಗಾರಿಕೆ ಬಗ್ಗೆ ಊರಿಡೀ ಡಂಗುರ ಸಾರಿದರೂ ಅದಕ್ಕೆ ಸಂಬಂಧಪಟ್ಟ ಗಣಿ ಇಲಾಖೆಗೆ ಬಾರಿ ಬಾರಿ ದೂರು ಕೊಟ್ಟರೂ, ಕಾಲ್ ಮಾಡಿ ಹೇಳಿದರೂ, ತಳ್ಳಿ ಅರ್ಜಿಗಳ ಸುರಿಮಳೆ ಸುರಿಸಿದರೂ ಗಣಿ ಇಲಾಖೆ ಪೊಟ್ಟರಂತೆ,ಕೆಪ್ಪರಂತೆ ವರ್ತಿಸಿದ್ದು ಮಾತ್ರ ದುರದೃಷ್ಟಕರ. ಲಕ್ಷಗಟ್ಟಲೆ ಇಲಾಖೆಗೆ ಕಟ್ಟಿ ಪರ್ಮಿಟ್ ತೆಗೆದು ಮರಳು ತೆಗೆಯುವ ಮಂದಿಗೆ ದಿನಕ್ಕೊಂದು, ಗಂಟೆಗೊಂದು ಅಂಡಿಗುಂಡಿ ಕಾನೂನು ಮಾಡುವ ಗಣಿ  ಇಲಾಖೆ, ಅಂಥಹ ಅಧಿಕೃತ ಮರಳುಗಾರಿಕೆಯ ಅಡ್ಡೆಗಳ ಮೇಲೆ ಹದ್ದಿನ ಕಣ್ಣಿಡುವ ಇಲಾಖೆ ಅದೇ ಯಾವುದೇ ಪರ್ಮಿಶನ್ ಇಲ್ಲದೆ ನಡೆಯುವ ಕಳ್ಳಕಾಕರ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಗಣಿ ಕಾನೂನು ಜಾರಿ ಮಾಡುವುದೇ ಇಲ್ಲ. ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಗಣಿ ಅಧಿಕಾರಿಗಳೂ ಪಾಲುದಾರರು ಎಂಬ ಮಾಹಿತಿ ಇದೆ. ಇಂತಹ ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಲೆಕ್ಕದಲ್ಲಿ ಲಾಸ್ ಆಗುತ್ತಿದ್ದರೂ ಗಣಿ ಅಧಿಕಾರಿಗಳು ಮಾತ್ರ ತಮ್ಮ ಶೇರ್ ತಗೊಂಡು ಹಾಯಾಗಿದ್ದಾರೆ. ಗಣಿ ಇಲಾಖೆ ಮುಂದೆ ಮರಳು ತೆಗೆಯುವ ಪರ್ಮಿಶನ್ ಗೆ ಬರುವ ಅಮಾಯಕರನ್ನು ಆ ರೂಲ್ಸ್ ಈ ರೂಲ್ಸ್ ಎಂದು ನಟ್ಟ ತಿರ್ಗಿಸಿ ಬಿಡುವ ಅಧಿಕಾರಿಗಳು ಕಳ್ಳಕಾಕರಿಗೆ ಮಾತ್ರ ಯಾವುದೇ ರೂಲ್ಸ್ ಹೇಳುವುದೇ ಇಲ್ಲ. ಗಣಿ ಅಧಿಕಾರಿಗಳು ಮತ್ತು ಕಳ್ಳಕಾಕರು ಒಂದು ರೀತಿಯಲ್ಲಿ ಕಸಿನ್ ಬ್ರದರ್ಸ್ ಇದ್ದ ಹಾಗೆ.


ಆಯಿತು, ಗಣಿ ಇಲಾಖೆಯವರು ವಳಾಲು ಮತ್ತು ಮುಗೇರಡ್ಕದ ಅಕ್ರಮ ಮರಳುಗಾರಿಕೆಯಲ್ಲಿ ಪಾಲುದಾರರು ಎಂದೇ ಇಟ್ಟುಕೊಳ್ಳೋಣ ಸಾರ್ವಜನಿಕರು ಉಪ್ಪಿನಂಗಡಿ ಪೋಲಿಸರಿಗೆ ಕೂಡ ಬೇಸಿಗೆ ಶುರುವಿನಿಂದಲೇ ಮಾಹಿತಿ ಕೊಟ್ಟಿದ್ದರು. ಆದರೆ ಉಪ್ಪಿನಂಗಡಿ ಪೊಲೀಸರು ಮಾತಿನಲ್ಲಿ ಮಂಜುನಾಥ ದುಡ್ಡಿನಲ್ಲಿ ತಿಮ್ಮಪ್ಪ. ಅಕ್ರಮ ಮರಳುಗಾರಿಕೆ ಬಗ್ಗೆ ದೂರು ಬಂದಾಗ ಪೋಲಿಸರು ಓ... ಎಂದು ಗುಳಿಗ್ಗ ಬೊಬ್ಬೆ ಹೊಡೆದರು. ಅರ್ಥ ಮಾಡಿಕ್ಕೊಂಡ ಅಕ್ರಮ ಮರಳುಗಾರಿಕೆಯ ಕಳ್ಳಕಾಕರು ಉಪ್ಪಿನಂಗಡಿ ಪೋಲಿಸರಿಗೆ ಡಾರ್ಕ್ ಫೇಂಟಸಿ ಕೊಟ್ಟು ಸಮಾಧಾನ ಮಾಡಿದರು. ಇನ್ನು ಸ್ಥಳೀಯ ವಿ.ಎ, ಪಿ.ಡಿ.ಒ ಮುಂತಾದ ಸಹಭೂತಗಳಿಗೆ ಕೋಳಿ ಮಂಡೆ ಕೊಡಲಾಯಿತು. ಪುತ್ತೂರು ತಾಲೂಕು ಆಡಳಿತ ಸ್ಪಾಟಿಗೆ ಬರಲೇ ಇಲ್ಲ. ಇದೀಗ ಸ್ಥಳೀಯ ಪಂಚಾಯತ್ ಅಧ್ಯಕ್ಷರೊಬ್ಬರು ಲೋಕಾಯುಕ್ತ ಮತ್ತು ಜಿಲ್ಲಾ ಕಲೆಕ್ಟರನಿಗೆ ದೂರು ಕೊಟ್ಟಿದ್ದು action ಆಗುತ್ತಾ ಎಂಬುದು ದೇವರಿಗೇ ಗೊತ್ತು. ಆದರೆ ಲೋಕಾಯುಕ್ತರಿಗೆ ಕಂಪ್ಲೈಂಟ್ ಆಗಿದೆ ಎಂದು ಗೊತ್ತಾಗುತ್ತಲೇ ನೇತ್ರಾವತಿಯ ಎರಡೂ ದಡಗಳಿಂದ ಎಲ್ಲಾ ಜೆಸಿಬಿ, ಹಿಟಾಚಿ, ಟಿಪ್ಪರ್ ಗಳನ್ನ ಸ್ಥಳಾಂತರ ಮಾಡಲಾಗಿ ಸೈಟ್ ಕ್ಲೀನ್ ಮಾಡಲಾಗಿದೆ.
ಈ ಅಕ್ರಮ ಮರಳುಗಾರಿಕೆ ಬಗ್ಗೆ ಇನ್ನೊಂದು ದೂರು ಏನೆಂದರೆ ಪುತ್ತೂರಿನ ಆನೆಮಜಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಈ ಮರಳು ತೆಗೆಯಲಾಗುತ್ತಿದೆ ಎಂದು ಸುಳ್ಳು ನೆಪ ಹೇಳಿ ಇಲಾಖೆಗಳನ್ನು ಹೆದರಿಸಲಾಗಿತ್ತು ಎಂದು ತಿಳಿದುಬಂದಿದೆ. ನ್ಯಾಯಾಲಯ ನಿರ್ಮಾಣದ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಈ ಬಗ್ಗೆ ಸಾ....ಸೂ....ಅನ್ನದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪಿಡಬ್ಲ್ಯೂಡಿ ಅಧಿಕಾರಿಗಳಿಗೂ ಪಾರ್ಲೆ ಜಿ ಬಿಸಾಡಿರುವ ಸಂಶಯಗಳಿವೆ. ಇಲ್ಲಿ ಇಂತಹ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ನಡೆದರೂ ಯಾವುದೇ ಇಲಾಖೆ ಅಕ್ರಮದ ಬಗ್ಗೆ ಕಾನೂನು ಕ್ರಮ ಜರುಗಿಸಿಲ್ಲ ಅಂದರೆ ಇನ್ನು ಮರಳುಗಾರಿಕೆಗೆ ಅಧಿಕೃತ ಪರ್ಮಿಶನ್ ತೆಗೆಯುವುದಾದರೂ ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅಧಿಕೃತವಾಗಿ ಕೆಲಸ ಮಾಡಲು ಸರಕಾರದ ಅಂಡಿಗುಂಡಿ ರೂಲ್ಸ್ ಅಡ್ಡ ಬರುವುದಾದರೆ, ಅಕ್ರಮಗಳು ಸಲೀಸಾಗಿ, ರಾಜಾರೋಷವಾಗಿ ನಡೆಯುವುದಾದರೆ  ಇಲಾಖೆಗಳೇ ಕಳ್ಳರ ಗುರುಕುಲ ಆಗುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದ ನಾನ್ ಕರಫ್ಟ್ ಅಧಿಕಾರಿ ಗಾನ ಮ್ಯಾಡಂ ಒಂದು ಭಾರಿ ವಳಾಲಿಗೆ ಬಂದರೂ ಸಾಕು ಬೇಟೆ ಸಿಕ್ಕಿ ಬಿಡುತ್ತದೆ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                    


  ತಲೆ ಸರಿ ಇಲ್ಲ ಯಾರಿಗೆ ಅಂತಾನೇ ಅರ್ಥ ಆಗುತ್ತಿಲ್ಲ. ಅಲ್ಲ ಮಾರಾಯ್ರೆ ಅಲ್ಲಿ ಎಸ್ಸೆಸ್ಸೆಲ್ಸಿ ಎಂಬ ಮಕ್ಕಳ ವಿಧ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟದ ಪರೀಕ್ಷೆಗಳು ನಡೆಯುತ್ತಿದೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಟ್ವೆಂಟಿ ಫೋರ್ ಇನ್ ಟು ಸೆವೆನ್ ಓದಿ ಓಡಿ ಓಡಿ ಪರೀಕ್ಷೆ ಬರೆಯಲು ಬಂದಿದ್ದಾರೆ, ಏನಾಗುತ್ತೋ, ಎಂಥದಾಗುತ್ತೋ ಎಂಬ ದುಗುಡದಲ್ಲಿ ವಿದ್ಯಾರ್ಥಿಗಳು ಇದ್ದರೆ ಅಲ್ಲೇ ಪರೀಕ್ಷೆ ಕೇಂದ್ರದ ಹೊರಗೆ ಸಿನಿಮಾ ಶೂಟಿಂಗ್ ಮಾರಾಯ್ರೇ. ಇದು ಪುತ್ತೂರಿನ ಕತೆ.




ಅಲ್ಲಿ ಕೋಟಿ ಚೆನ್ನಯ ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸ್ ನಿಲ್ದಾಣದ ಫ್ರಂಟಲ್ಲಿ ಇರುವ ಸಂತ ವಿಕ್ಟರನ ಹೈಸ್ಕೂಲ್ ಬಹಳ ಹಿಂದಿನದು. ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ, ಗಾಂಭೀರ್ಯ ಇದೆ. ಆದರೆ ಇವತ್ತು ಮಾತ್ರ ಹೈಸ್ಕೂಲ್ ಆಡಳಿತ ಮಂಡಳಿ ತಗೊಂಡ ಒಂದು ನಿರ್ಧಾರಕ್ಕೆ ಮಾತ್ರ ಜನ ಬೊಬ್ಬೆ ಹೊಡೆದಿದ್ದಾರೆ. ಇವತ್ತು ಕೂಡ ಇದೇ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೆ. ಆದರೆ ಹೈಸ್ಕೂಲು ಎದುರಿನ ಅಂಗಳದಲ್ಲಿ ಇವತ್ತು ಬೆಳಿಗ್ಗೆ ಜನವೋ ಜನ. ಯಾಕೆಂದರೆ ಹೈಸ್ಕೂಲ್ ಗ್ರೌಂಡಿಗೆ ತಾಗಿಕೊಂಡೇ ಒಂದು ಚರ್ಚ್ ಕೂಡ ಇದೆ. ಆ ಚರ್ಚ್ ನದೇ ಶಿಕ್ಷಣ ಸಂಸ್ಥೆ ಈ ಹೈಸ್ಕೂಲ್ ಸಹ. ಜನ ಯಾಕೆ ಅಂತ ಕೇಳಿದರೆ ಒಂದು ಮದುವೆ. ಹಾಗಾಗಿ ಹುಡುಗಿ ಕಡೆಯವರು, ಹುಡುಗ ಕಡೆಯವರು, ದೊಡ್ಡ ದೊಡ್ಡ ಕ್ಯಾಮೆರಾಗಳು, ಬ್ಯಾಂಡ್ ಸೆಟ್ ಹೀಗೆ ಒಂದು ಮದುವೆಗೆ ಬೇಕಾದ ಎಲ್ಲಾ ಅರೇಂಜ್ ಹೈಸ್ಕೂಲ್ ಎದುರಿನ ಅಂಗಳದಲ್ಲಿ. ಮದುವೆ ಚರ್ಚ್ ನಲ್ಲಿ. ಹಾಗೆಂದು ಇದೊಂದು ಒರಿಜಿನಲ್ ಮದುವೆ ಅಲ್ಲ. ಸಿನಿಮಾ ಶೂಟಿಂಗ್. ಎಂಥ ತಲೆ ಕೆಟ್ಟವರು ಮಾರಾಯ್ರೆ. ಮೆಮೊರಿ ಕಂಪ್ಲೀಟ್ ಲ್ಯಾಪ್ಸ್ ಆಗಿರುವ ಅಪಾಯಗಳಿವೆ ಆಡಳಿತ ಮಂಡಳಿಗೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಆಜುಬಾಜಿನಲ್ಲಿ ಒರಿಜಿನಲ್ ಮದುವೆ ಮಾಡಲೇ ನೋ ಪರ್ಮಿಶನ್ ಇರುವಾಗ  ಈ ಮೆಮೊರಿ ಲಾಸ್ ಆಗಿರುವ ಆಡಳಿತ ಮಂಡಳಿ ಸಿನಿಮಾ ಮದುವೆಯ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದೆ. ಎಂಥ ಸಾಮಾನುಗಳು ಮಾರಾಯ್ರೆ ಇವರು.






ಹಾಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹೈಸ್ಕೂಲ್ ಅಂಗಳದಲ್ಲಿ ಮದುವೆ ದಿಬ್ಬಣದ ಜನ ಸೇರಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಕಾಲ್ ಹೋಗಿದೆ. ಓಡೋಡಿ ಬಂದ ಶಿಕ್ಷಣಾಧಿಕಾರಿ "ಎಂಕ್ ದಾಲ ಗೊತ್ತೇ ಇಜ್ಜಿ" ಅಂತ ಹೇಳೀದ್ದಾರೆ. ಬೆಳಿಗ್ಗೆ ಇದೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ಶಿಕ್ಷಣಾಧಿಕಾರಿ ಅಲ್ಲಿ ನಡೆಯುತ್ತಿದ್ದ ಮದುವೆ ಡೆಕೋರೇಶನ್ ಗಮನಿಸಿದ್ದಾರೆ. ಕಣ್ಣು ಇದ್ದವರು ಗಮನಿಸಲೇ ಬೇಕಾಗುತ್ತದೆ ಯಾಕೆಂದರೆ ಚರ್ಚ್ ಗೆ ಮತ್ತು ಹೈಸ್ಕೂಲಿಗೆ ಒಂದೇ ಅಂಗಳ. ಈಗ ನೋಡಿದರೆ ನನಗೆ ಗೊತ್ತೇ ಇಲ್ಲ ಎಂಬ ವಾದ. ಆಯ್ತು ಶಿಕ್ಷಣಾಧಿಕಾರಿ ಆಫೀಸ್ ದೂರದಲ್ಲಿದೆ, ಹೈಸ್ಕೂಲ್ ಹೆಡ್ಮಿಸ್ ರೋಸ್ಲೀ ಬಾಯಮ್ಮರವರಲ್ಲಿ ಕೇಳಿದರೆ "ಮಕ ಗೊತ್ತುನಾ" ಎಂದು ಅವರೂ ತಲೆ ಅಡ್ಡ ಹಾಕಿದ್ದಾರೆ. ಅಯ್ಯೋ ದೇವುಡು ದೇವುಡು ತನ್ನದೇ ಹೈಸ್ಕೂಲಿನ ಅಂಗಳದಲ್ಲಿ ಸಿನೆಮಾ ಶೂಟಿಂಗ್ ಮಾಡಲು ಅಷ್ಟೇಲ್ಲ ರೆಡಿಯಾಗಿದ್ದರೂ, ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದರೂ ಈ ಬಗ್ಗೆ "ಮಕ ಗೊತ್ತುನಾ"ಎಂದು ಹೇಳುತ್ತಿರುವ ಹೆಡ್ಮಿಸ್ಸು ಇನ್ನು ಹೈಸ್ಕೂಲ್ ಒಳಗೆ ನುಗ್ಗಿ ಹೆಣ್ಮಕ್ಕಳನ್ನು ಎಳೆದಾಡಿದರೂ "ಮಕ ಗೊತ್ತುನಾ" ಎಂದು ಹೇಳಿದರೆ ಹೆಣ್ಣು ಮಕ್ಕಳನ್ನು ಈ ಹೈಸ್ಕೂಲಿಗೆ ಕಳಿಸುವುದಾದರೂ ಹೇಗೆ? ಆವತ್ತು ಸಾಂಬಾರ್ ಟೀಚರ್ ಸಾಂಬಾರ್ ಅಂಡೆಗೆ ಬಿದ್ದು ಟಿಕೆಟ್ ತೆಗೆದಾಗಲೂ ಇದೇ ರೋಸ್ಲೀ "ಮಕ ಗೊತ್ತುನಾ" ಎಂದು ಹೇಳಿ ಬಚಾವ್ ಆಗಿದ್ದರು. ಅದೂ ಅಲ್ಲದೆ ಯಾವಾಗಲೂ ಶಾಲೆಗೆ ಆಗಮಿಸುವ ಅಕ್ಷರ ದಾಸೋಹದ ಹೆಡ್ಡುಗೆ ಈ ಹೆಡ್ಮಿಸ್ಸು ರಾಜ ಮರ್ಯಾದೆ ಕೊಡುವುದು ಯಾಕೆ ಎಂಬ ಪ್ರಶ್ನೆ ಕೂಡ  ಹೈಸ್ಕೂಲ್ ಅಂಗಳದಲ್ಲಿದೆ. ರೊಸ್ಲಿಯ ಈ ಎಲ್ಲಾ ವರ್ತನೆಗಳಿಂದ ಜನ ರೋಸಿ ರೋಸಿ ಹೋಗಿದ್ದು ಬೇಜವಾಬ್ದಾರಿ ಹೆಡ್ಮಿಸ್ಸು ಎಂಬ ಪಟ್ಟ ಕಟ್ಟುವ ಅಂದಾಜಿನಲ್ಲಿದ್ದಾರೆ.


ಹಾಗೆಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಹೊರಗೆ ಸಿನಿಮಾ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಅಲ್ಲ, ರೋಸ್ಲೀ ಮೇಡಂ " ಮಕ ಗೊತ್ತುನಾ". ಹಾಗಾದರೆ ಯಾರು? ಅಲ್ಲಿದೆ ಗುಟ್ಟು. ತನ್ನ ಚರ್ಚ್ ನಲ್ಲಿ ಸಿನಿಮಾ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದ್ದು ಚರ್ಚ್ ಫಾದರ್. ಈ ಫಾದರ್ ಹೈಸ್ಕೂಲಿಗೆ ಸಂಚಾಲಕರೂ ಆಗಿರುವ ಕಾರಣ ಕಣ್ಣು ಮುಚ್ಚಿ ಶೂಟ್ ಮಾಡಲು ಪರ್ಮಿಶನ್ ಕೊಟ್ಟಿದ್ದಾರೆ ಅದೂ ಹೈಸ್ಕೂಲ್ ಅಂಗಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವಾಗ. ಫಾದರ್ ಯಾಕೆ ಮಾರಾಯ್ರೆ ಹೀಗೆ ಮಾಡಿದರು ಎಂದು ಅವರನ್ನು ಹುಡುಕಿದರೆ ಅವರು ಸದ್ಯಕ್ಕೆ ನೆಟ್ ವರ್ಕ್ ಏರಿಯಾದಿಂದ ದೂರ ಇದ್ದಾರೆ ಎಂಬ ಮಾಹಿತಿ. ಹಾಗಾದರೆ ವಿಕ್ಟರ್ ಹೈಸ್ಕೂಲ್ ಅಂಗಳದಲ್ಲಿ ನೆಟ್ ವರ್ಕ್ ಸಮಸ್ಯೆ ಕೂಡ ಇದೆಯಾ?


ಪುತ್ತೂರಿನ ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳು ಅಂದರೆ ಅಷ್ಟು ಹೆಸರು, ಅಷ್ಟೇ ಸ್ಟಿಕ್ಟು. ಈ ಸಂಸ್ಥೆಗಳು ಯಾವತ್ತೂ ವಿವಾದಗಳಿಗೆ ಕಾರಣವಾದ ಉದಾಹರಣೆಗಳೇ ಇಲ್ಲ. ಸಾರ್ವಜನಿಕರು ಕೂಡ ಈ ಶಿಕ್ಷಣ ಸಂಸ್ಥೆಗಳ  ಬಗ್ಗೆ ಭಾರೀ ಗೌರವ ಇಟ್ಟುಕೊಂಡವರು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ರಾಯರ ಕುದುರೆ ಕತ್ತೆಯಾದರೂ ತೊಂದರೆ ಇಲ್ಲ ಆದರೆ ಕತ್ತೆಗಿಂತ ಕೆಳಗಿನ ಡಿ ಗ್ರೇಡ್ ಪ್ರಾಣಿಗಳ ಕೆಟಗರಿಗೆ ಸೇರುವ ಮುನ್ನ ಆಡಳಿತ ಮಂಡಳಿ ಒಮ್ಮೆ ಗಾಳಿ ಚೆಕ್ ಮಾಡೋದು ಒಳ್ಳೇದು.
ಲಾಸ್ಟ್ ಜೋಕ್: ಹೈಸ್ಕೂಲ್ ಅಂಗಳದಲ್ಲಿ ಸಿನೆಮಾ ಶೂಟಿಂಗಿಗೆ ರೆಡಿಯಾಗುತ್ತಿದೆ, ಹೈಸ್ಕೂಲ್ ಒಳಗೆ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ರೆಡಿಯಾಗುತ್ತಿದ್ದಾರೆ. ಅಷ್ಟರಲ್ಲಿ ಎರಡ್ಮೂರು ಆಟೋಗಳಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಬಂದಿದ್ದಾರೆ. ಆದರೆ ಹೈಸ್ಕೂಲು ಗೇಟ್ ಬಂದ್. ಗೇಟಿನಲ್ಲಿ ಪೋಲಿಸ್. ಒಳಗೆ ಬಿಡಿ ಅಂದರೆ ಬಿಡಲ್ಲ. ಯಾಕೆಂದು ಕೇಳಿದರೆ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂಬ ಉತ್ತರ. ಎಲ್ಲಿಗೆ ಮುಟ್ಟಿದೆ, ಮುಟ್ಟಿಸಿದ್ದಾರೆ ಮಾರಾಯ್ರೆ ಪರಿಸ್ಥಿತಿಯನ್ನು.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                   


  ಕಷ್ಟದ ಸಮಯದಲ್ಲಿ, ಜೀವ ಹೋಗುವ ಟೈಮಲ್ಲಿ ಜನ ಎಂಥ ನಕಲಿಗಳನ್ನೂ ನಂಬಿ ಬಿಡುತ್ತಾರೆ. ಬಾವಿಗೆ ಬಿದ್ದವರಿಗೆ ಹುಲುಕಡ್ಡಿ ಆಸರೆ ಎಂಬಂತೆ "ಕೆಲಸ ಆಗಬಹುದು" ಎಂಬ ನಂಬಿಕೆಯಿಂದ ಜನ ನಕಲಿ ಮಂತ್ರವಾದಿ ಬಳಿ ಹೋಗಿ ಮೋಸ ಹೋಗುತ್ತಾರೆ. ಈ ನಕ್ಲಿಗಳು ಇಂಥ ಜನರನ್ನೇ ಕಾಯುತ್ತಾ ಇರುತ್ತಾರೆ ಮತ್ತು ಬಂದ ಕೂಡಲೇ ಕಡಿದು ಬಿಡುತ್ತಾರೆ. ಇದೀಗ ಪುತ್ತೂರು ಕೋಟಿ ಚೆನ್ನಯ ಇಂಟರ್ ನ್ಯಾಷನಲ್ ಬಸ್ ನಿಲ್ದಾಣದಲ್ಲಿ ಒಬ್ಬ ನಕಲಿ ಮಂತ್ರವಾದಿ ಮಂಡಲವಿಟ್ಟು ನಾಗವಲ್ಲಿಯನ್ನು ಯಾರು ತರುತ್ತಾರೆ ಎಂದು ಕಾಯುತ್ತಾ ಇದ್ದಾನೆ. ಕಾಲ್ ಮಾಡಿದರೂ ಸಾಕು, ಮಂತ್ರವಾದಿ ನುಂಗಿ ಬಿಡುತ್ತಾನೆ.
ಇವರು ಮಂತ್ರವಾದಿ ಕಿಷ್ಣಣ್ಣ. ಸದ್ಯಕ್ಕೆ ಪುತ್ತೂರು ಕೋಟಿ ಚೆನ್ನಯ ಬಸ್ ನಿಲ್ದಾಣದಲ್ಲಿ ಒಂದು ಅಂಡಿಗುಂಡಿ ಅಂಗಡಿ ಇಟ್ಟುಕ್ಕೊಂಡು ಸೈಡ್ ಬಿಸಿನೆಸ್ ಅಂತ ಶ್ರೀ ದೇವಿ ದರ್ಶನದ ಮೂಲಕ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ಮಂಗ ಮಾಡುತ್ತಿದ್ದಾರೆ. ನೀವು ಕೇವಲ ಪೋನ್ ಮಾಡಿದರೂ ಸಾಕು ಫೋನಿನಲ್ಲೇ ದೇವಿ ದರ್ಶನ ಬಂದು ಸಮಸ್ಯೆ ಪರಿಹರಿಸುವ ವ್ಯವಸ್ಥೆಯನ್ನೂ ಶನಿ ಹಿಡಿದಿರುವ ಗ್ರಾಹಕರಿಗಾಗಿ ಮಾಡಲಾಗಿದೆ.  ಒಂದು ಶನಿ ಹಿಡಿದಿರುವ ಕುಟುಂಬ ಮತ್ತು ಮಾಟ ದಾಟಿರುವ ವ್ಯಕ್ತಿಗೆ ಸಂಬಂಧ ಪಟ್ಟಂತೆ ಭೂತ ಬಾಧೆ, ದೇವರ ಉಪದ್ರ, ನಾಗಪ್ಪಣ್ಣನ ದೋಸಗಳ ಬಗ್ಗೆ ಅಲ್ಲೇ ಅಂಬಟೆ ಮೂಲೆಗೆ ಹೋಗುವ ಬಸ್ಸಿನ ಮೂಲೆಯಲ್ಲಿ ಪ್ರಶ್ನೆ ಚಿಂತನೆ ನಡೆಸಿ ಶಾಶ್ವತ ದೋಸೆ ನಿವಾರಣೆ ಮಾಡಲಾಗುತ್ತದೆ. ಇನ್ನು ನಿಮ್ಮ ಮನೆ, ಕಟ್ಟಡ, ಜಮೀನಿನಲ್ಲಿ ಬಾಡಿಗೆ ಬಾಕಿ ಇಟ್ಟು ಅನಧಿಕೃತವಾಗಿ ವಾಸಿಸಿ ಉಪದ್ರ ಮಾಡುತ್ತಿರುವ ಬ್ರಹ್ಮ ರಕ್ಕಸ, ಪರ ಕುಲೆ, ಪೀಡೆ, ಗುಳಿಗ್ಗ ರಾವ್, ರಣ, ಮೋಹಿನಿ, ಮೋಹನ ಮುಂತಾದವರನ್ನು ಕಿಷ್ಣಣ್ಣ ದರ್ಶನದ ಮೂಲಕ ಗುಂಡ್ಯ ಚೆಕ್ ಪೋಸ್ಟ್ ತನಕ ಓಡಿಸಿ ಬಿಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಆರಂಭದಲ್ಲಿ ನೀವು ಒಂದು ಪೋನ್ ಕರೆ ಮಾಡಿ ಮನೆಯ ಸಮಸ್ಯೆ ಹೇಳಿದರೂ ಸಾಕು ಕಿಷ್ಣಣ್ಣ ಫೋನಿನಲ್ಲೇ ಓಡಿಸಿ ಬಿಡುತ್ತಾರೆ ಮತ್ತು ಓಡಿಸಿದ ಚಾರ್ಜ್ ಫೋನ್ ಪೇ ಮಾಡಿದರೆ ಕತೆ ಮುಗಿಯಿತು.






ಹಾಗೆಂದು ನಿಮ್ಮ ಜಾಗದಲ್ಲಿ ನಾಗಪ್ಪಣ್ಣನ ಯಾವುದೇ ಕಿರಿಕ್ ಇರಲಿ ಸುಬ್ರಹ್ಮಣ್ಯದಲ್ಲಿ ಮುಗಿಸಬಹುದಾದ  ಸಮಸ್ಯೆಯನ್ನು ಕಿಷ್ಣಣ್ಣ ಪುತ್ತೂರು ಬಸ್ ಸ್ಟ್ಯಾಂಡಲ್ಲೇ ಘಳಿಗ್ಗೆಯಲ್ಲಿ ಮುಗಿಸಿ ಬಿಡುತ್ತಾರೆ. ಇನ್ನು ನೀವು ಹೊಸ ಮನೆ, ಜಾಗೆ,ಕಟ್ಟಡ ಪರ್ಚೆಸ್ ಮಾಡುವುದಿದ್ದರೆ ಕಿಷ್ಣಣ್ಣನಲ್ಲಿ ಒಂದು ಮಾತು ಕೇಳಲೇ ಬೇಕು. ಇಲ್ಲದಿದ್ದರೆ ವಾಸ್ತು ಸರಿ ಬರಲ್ಲ. ಇನ್ನು ಕಿಷ್ಣಣ್ಣನಲ್ಲಿ ಬಾವಿಗೆ, ಕೆರೆಗೆ, ಬೋರಿಗೆ ನೀರು ನೋಡುವ ಒಂದು ವಿಶೇಷ ಟೆಕ್ನಿಕ್ ಕೂಡ ಇದ್ದು ಕರಿ ಪಾದೆ ಎಲ್ಲಿದೆ ಎಂದು ಕುಂತಲ್ಲಿಂದಲೇ ನೋಡುವ ಒಂದು ಸಿದ್ದಿ ಇದೆ. ಇನ್ನು ಕಿಷ್ಣಣ್ಣನ ಇನ್ನೊಂದು ವಿಶಿಷ್ಟ ಸಿದ್ದಿ ಏನೆಂದರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ. ಈ ಕೇಸಲ್ಲಿ ಹಂಡ್ರೆಡ್ ಪರ್ಸೆಂಟ್ ಕಿಷ್ಣಣ್ಣನ ಬೆರಿ ಪೊಡಿಯಾಗುವ ಚಾನ್ಸಸ್ ಇದ್ದು ಸಂತಾನ ಹೇಗೆ ದಯಪಾಲಿಸುತ್ತಾರೆಂದು ಅದನ್ನು ಪಡೆದವರಿಗೇ ಗೊತ್ತು. ಏಕಾಂತ ಪೂಜೆ ಏನಾದರೂ ಮಾಡಲು ಹೋದರೆ ಕಿಷ್ಣಣ್ಣನ ಬೆಂಡ್ ತೆಗೆದರೂ ದೊಡ್ಡ ವಿಷಯವಲ್ಲ. ಮತ್ತೆ ಕಿಷ್ಣಣ್ಣ ಕಂಕಣ ಭಾಗ್ಯ ಸ್ಪೆಷಲಿಸ್ಟ್ ಕೂಡ ಆಗಿದ್ದು ಕೆಲವು ಗುಜುರಿಗಳಿಗೆ "ಅವುಪೋವು" ತನಕ ಮುಟ್ಟಿಸಿದ ಉದಾಹರಣೆಗಳಿವೆ.


ಹಾಗೆಂದು ಕಿಷ್ಣಣ್ಣ ಕುಲೆ ಮದುವೆಯಲ್ಲಿ ಕೂಡ ದೊಡ್ಡ ಪರಿಣತಿ ಪಡೆದಿದ್ದಾರೆ. ಈ  ಬಗ್ಗೆ ಬೀರಮಲೆ ಗುಡ್ಡೆಯಲ್ಲಿ ಒಂಟಿ ಕಾರಲ್ಲಿ ಕುಂತು ತಪಸ್ಸು ಮಾಡಿ ಕುಲೆ ಮದುವೆಯಲ್ಲಿ ಹೈಯರ್ ಸ್ಟಡೀಸ್ ಮಾಡಿದ್ದಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಮದುವೆಗೆ ಮುನ್ನ ಟಿಕೆಟ್ ತೆಗೆದಿದ್ದರೆ, ಅವರ ಕುಲೆ ನಿಮ್ಮ ಮದುವೆ ತಪ್ಪಿಸುತ್ತಿದ್ದರೆ ನೀವು ಸೀದಾ ಕಿಷ್ಣಣ್ಣನನ್ನು ಭೇಟಿಯಾದರೆ ಸಾಕು. ಅವರು ನಿಮ್ಮ ಅಣ್ಣ ಕುಲೆಗೆ ಅತ್ತಿಗೆ ಕುಲೆ ಹುಡುಕಿ ಮದುವೆ ಮಾಡಿಸಿ ನಿಮ್ಮ ಮದುವೆಗೆ ಇರುವ ವಿಘ್ನಗಳ ನಿವಾರಣೆ ಮಾಡುತ್ತಾರೆ. ಇನ್ನು ನಿಮ್ಮ ಕುಟುಂಬದಲ್ಲಿ ಟಿಕೆಟ್ ತೆಗೆದರೂ ಮೋಕ್ಷ ಸಿಗದೆ ವೈಟಿಂಗ್ ಲಿಸ್ಟಲ್ಲಿ ಇರುವ ಮತ್ತು ಭೂತಗಳ ಕೈಯಲ್ಲಿರುವ ಪ್ರೇತಾತ್ಮಗಳಿಗೆ ಕಿಷ್ಣಣ್ಣ ಶಾಶ್ವತ ಸದ್ಗತಿ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಹಾಗೆಂದು ಬಸ್ ಸ್ಟ್ಯಾಂಡ್ ಕಿಷ್ಣಣ್ಣನ ಬಾಡಿ ಒಂಥರಾ ಕುಲ್ ಕುಲೆ, ಪೀಡೆ, ಪಿಶಾಚಿ, ಭೂತ, ಬ್ರಹ್ಮ ರಕ್ಕಸ ಮತ್ತು ಎಲ್ಲಾ ಜಾತಿಯ ದೈವ ದೇವರುಗಳ ನೆಲೆವೀಡು ಇದ್ದಂತೆ. ಒಂಥರಾ ಭೂತಗಳ ಹಾಸ್ಟೆಲ್ ಇದ್ದಂತೆ. ಯಾಕೆಂದರೆ ನಿಮಗೆ ರಕ್ತೇಶ್ವರಿಯ ಬಾಧೆ ಇದ್ದರೆ ಕಿಷ್ಣಣ್ಣ ತನ್ನ ಬಾಡಿಗೆ ರಕ್ತೇಶ್ವರಿಯನ್ನು ಆವಾಹನೆ ಮಾಡಿಕ್ಕೊಂಡು ರಕ್ತೇಶ್ವರಿಗೆ ನಿಮ್ಮಿಂದ ಏನಾಗ ಬೇಕು ಎಂದು ತಿಳಿಸಿ ಭೂತ ಇಳಿಸಿ ಬಿಡುತ್ತಾರೆ. ಬ್ರಹ್ಮ ರಕ್ಕಸ ಬಂದಿದ್ದರೆ ಕಿಷ್ಣಣ್ಣ ಕೂಡ ಬ್ರಹ್ಮ ರಕ್ಕಸ ಹತ್ತಿಸಿಕೊಂಡು ನಿಮ್ಮಿಂದ ಇಳಿಸಿ ಬಿಡುತ್ತಾರೆ.ಇನ್ನು ನಿಮಗೆ ಯಾವುದೇ ಶಕ್ತಿಗಳಿಂದ ತೊಂದರೆ ಇದ್ದರೂ ಕಿಷ್ಣಣ್ಣನ ಹತ್ತಿರ ಆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ಆಕಸ್ಮಾತ್ ನಿಮ್ಮ ಬಾಡಿಯಲ್ಲಿ ದೇವರು ಬಂದಿದ್ದರೆ, ಯಾವುದೋ ಕಿರಿಕ್ ಪಾರ್ಟಿ ಭೂತ ಬಂದಿದ್ದರೆ ನಿಮ್ಮನ್ನು ಕಿಷ್ಣಣ್ಣ ಹೇಗಾದರೂ ಮಾಡಿ ಮಂಡಲದಲ್ಲಿ ಕೂರಿಸಿ ನಿಮ್ಮ ಬಾಡಿಯಿಂದ ಭೂತ ಇಳಿಸಿ ಬಿಡುತ್ತಾರೆ. ಇನ್ನು ದೈವ ಹಾಗೂ ನಾಗದೇವರ ಕೈಯಲ್ಲಿರುವ ಆತ್ಮಗಳನ್ನೂ ಕಿಷ್ಣಣ್ಣ ಹತ್ತಿಸಿಕೊಂಡು ಸಮಸ್ಯೆಗಳನ್ನು ಕ್ಲೀಯರ್ ಮಾಡಿ ಬಿಡುತ್ತಾರೆ. ಇನ್ನು ಕಡೆಯದಾಗಿ ಕಿಷ್ಣಣ್ಣ ಸರ್ವ ಧರ್ಮೀಯರ ಸರ್ವ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಮಾಡುವುದಾಗಿ ಘೋಷಿಸಿ ಕೊಂಡಿದ್ದಾರೆ. ಇವರ ಕತೆ ಹೀಗೆಯೇ ಮುಂದುವರೆದರೆ ದಕ್ಷಿಣ ಕನ್ನಡಕ್ಕೆ ಹೊಸತೊಂದು ಬಸ್ ಸ್ಟ್ಯಾಂಡ್ ಬಾಬ ಅಥವಾ ಬಸ್ ಸ್ಟ್ಯಾಂಡ್ ಸ್ವಾಮಿಯ ದರ್ಶನ ಆಗುವುದರಲ್ಲಿ ಸಂಶಯವೇ ಇಲ್ಲ.


ಅಲ್ಲ ಮಾರಾಯ್ರೆ ಸುನೀತಾ ವಿಲಿಯಮ್ಸ್ ಅಂತರಿಕ್ಷ ನಿಲ್ದಾಣದಲ್ಲಿ ಎಷ್ಟೋ ಸಮಯ ಇದ್ದು ಭೂಮಿಗೆ ಬಂದಿದ್ದರೆ ಇಲ್ಲಿ ಕಿಷ್ಣಣ್ಣ ಬಸ್ ನಿಲ್ದಾಣದಲ್ಲಿ ಭೂತ, ಪ್ರೇತ, ಕುಲೆ, ಪೀಡೆ, ಪಿಚಾಚಿ ಎಂದು ಜನರನ್ನು ಮಂಗನ ಮೇಲೆ ಮಂಗ ಮಾಡುತ್ತಿದ್ದಾರೆ. ಹೀಗೆಲ್ಲ ಮಾಡಲು ಒಂದು ನಾಚಿಕೆ ಕೂಡ ಆಗಲ್ವಾ ಮಾರಾಯ್ರೆ. ಭೂತದ ಹೆಸರಲ್ಲಿ, ದುಷ್ಟ ಶಕ್ತಿಗಳ ಹೆಸರಲ್ಲಿ ಅಮಾಯಕರ ಮಂಡೆ ಸವಾರಿ ದುಡ್ಡು ಮಾಡುವ ಇಂತಹ ನಕಲಿ ಮಂತ್ರವಾದಿಗಳನ್ನು ಬಾಟ್ಲಿಯಲ್ಲಿ ತುಂಬಿಸಿ ಬೂಚಿ ಬಂದ್ ಮಾಡಿ ಉಬಾರ್ ಸಂಗಮದಲ್ಲಿ ಬೊಲ್ಲಕ್ಕೆ ಬಿಡಬೇಕು. ಇಲ್ಲದಿದ್ದರೆ ಅಮಾಯಕರಿಗೆ ಉಳಿಗಾಲವಿಲ್ಲ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





                   


   ಮಾರ್ಚ್ 1 ಹಾಗೂ 2 
ಅಬ್ಬಾ ..ಗುತ್ತಿಗಾರಿನಲ್ಲಿ ಓ ಮೊನ್ನೆ ನಡೆದದ್ದು ದೇವಶ್ಯ ಗೌಡ ಕಪ್ ಕ್ರಿಕೆಟ್ ಪಂದ್ಯಾಟವೋ..ಅಥವಾ ಗೌಡ್ರುಗಳ  ಕ್ರಿಕೆಟ್ ಹಬ್ಬವೋ
ಇದು ಸುಳ್ಯ ತಾಲೂಕಿನ ಗುತ್ತಿಗಾರು...





ಎಲ್ಲಾ ಜಿಲ್ಲೆಯ ಗೌಡ್ರುಗಳ ಕಣ್ಣು ಒಂದೊಮ್ಮೆ ಗುತ್ತಿಗಾರಿನತ್ತ ಬಂದುಬಿಟ್ಟಿತು... ಎರಡು ದಿನ ಕ್ರಿಕೆಟ್.. ಗೌಡ್ರುಗಳ ನಿಜವಾದ ಒಗ್ಗಟ್ಟು, ತಾಕತ್‌ ವೈಭವ ಎಲ್ಲಾ ಒಂದೇ ಪಂದ್ಯಾಟದಲ್ಲಿ ಕಣ್ಣ ಮುಂದೆ ಬಂದು ಬಿಟ್ಟಿತು...ಡೋಲು ಚೆಂಡೆ, ಸಿಡಿಮದ್ದು, ಗಣ್ಯ ಅತಿಥಿಗಳ ಆಗಮನ,‌ ಭೋಜನ,‌ ಕಂಗೊಳಿಸಿದ  ಕ್ರೀಡಾಂಗಣ.
ದಿವಂಗತ ಡಿ.ಜೆ ರಾಧಾಕ್ರಷ್ಣ ದೇವಶ್ಯ ಇವರ ಸುಪುತ್ರ ವೀಕ್ಷಕವಿವರಣೆಗಾರ ನಿರಂತ್ ದೇವಶ್ಯ ಸಾರಥ್ಯದಲ್ಲಿ ದೇವಶ್ಯ ಮನೆತನದ ಸಹಕಾರದೊಂದಿಗೆ , ಅನೇಕ‌‌ ಮಂದಿ‌ ನಿರಂತ್ ದೇವಶ್ಯ ಇವರ ಗೆಳೆಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟ...ಗೌಡ್ರುಗಳ ಪವರ್ ಏನೆಂಬುದನ್ನು ತೋರ್ಪಡಿಸಿದ‌ ಏಕೈಕ ಪಂದ್ಯಾಟ ಅಂದರೆ ಖಂಡಿತ ತಪ್ಪಾಗಲಿಕ್ಕಿಲ್ಲ‌‌..ಆ ರೀತಿಯ ಒಂದು ಹಲವಾರ ವಿಶೇಷತೆಗಳಿಗೆ ಸಾಕ್ಷಿಯಾದ ಪಂದ್ಯಾಟ.




ಈತ ಹಿಂದೆ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಒಂದು ಪಂದ್ಯಾಟ ನಡೆಸಿಬಿಟ್ಟ...ಅನೇಕ‌ ಯುವ ಪ್ರತಿಭೆಗಳಿಗೆ ಕೂಡ ಅವಕಾಸ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿಬಿಟ್ಟ....ಎಲ್ಲರಿಗೂ ಮಾದರಿಯಾಗಿ ಬಿಟ್ಟ..... ವರ್ಷಂಪ್ರತಿ ಕ್ರಿಕೆಟ್ ಪಂದ್ಯಾಟದಲ್ಲಿ ಸಾದಕರಿಗೆ ಸನ್ಮಾನ‌ ಮಾಡುವ ದೊಡ್ಡ ಮಟ್ಟದ ಗೌಡ್ರುಗಳ ಕ್ರಿಕೆಟ್..ಈ ಬಾರಿ ದೊಡ್ಡಣ್ಣ ಗೌಡ ಚಿಕ್ಮುಳಿ ಹಾಗೂ ರಾಷ್ಟ್ರೀಯ ಯೋಗಪಟು ಮಣಿಪ್ರಕಾಶ್ ಕಡೋಡಿ ಇವರಿಗೆ ಸನ್ಮಾನ ಮಾಡಿದ ಪಂದ್ಯಾಟ..




ದಂಬೆಕೋಡಿ ಕುಟುಂಬ ಚಾಂಪಿಯನ್ ಆಗಿ ಬಿಟ್ಟಿತು... ಇಂತಹ ಅದ್ದೂರಿಯ ಪಂದ್ಯಾಟ ಕಣ್ತುಂಬಿಸಿಕೊಳ್ಳಲು ಇಡೀ‌ ಗೌಡ ಸಮುದಾಯ ಮಾತ್ರ ಅಲ್ಲ ಎಲ್ಲಾ ಸಮುದಾಯವರು ಕೂಡ ಮೈದಾನಕ್ಕೆ ಆಗಮಿಸಿಬಿಟ್ಟಿದ್ದರು...ಎತ್ತ ನೋಡಿದರು ಜನಸ್ತೋಮ...



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 






                  


 ಓ ಮೊನ್ನೆ ತಾನೇ ಬೊಳ್ಳೂರು ರಾಧಾ ಕೃಷ್ಣರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮೇಲಿಂದ ಮಾಡಲಾಗಿತ್ತು. ಅವರ ನೇಮಕಾತಿ ಹೊರಬೀಳುತ್ತಿದ್ದಂತೆ ಇಡೀ ಸುಳ್ಯ ಕಾಂಗ್ರೆಸ್ಸಿನಲ್ಲಿ ಭಿನ್ನಮತದ ಹೊಗೆ ಎದ್ದು ವಾಯು ಮಾಲಿನ್ಯ ಶುರುವಾಗಿ ಹೋಯ್ತು. ಭಿನ್ನಮತೀಯ ಮೀಟಿಂಗ್ ಕಾಂಗ್ರೇಸಿಗರ ಮನೆ ಮನೆಯಲ್ಲಿ ನಡೆಯಿತು. ಬೊಳ್ಳೂರು ಮೊನ್ನೆ ತಾನೇ ಕಾಂಗ್ರೆಸ್ ಗೆ ಬಂದಿದ್ದು ಹಾಗಾಗಿ ಇಷ್ಟು ಬೇಗ ಅಧ್ಯಕ್ಷ ಕುರ್ಚಿ ಕೊಡುವುದು ಯಾವ ನ್ಯಾಯ, ಸ್ವಲ್ಪ ಕಾಂಗ್ರೆಸ್ ಪೋಸ್ಟರ್ ಅಂಟಿಸಿ, ಬ್ಯಾನರ್ ಕಟ್ಟಲಿ ಆಮೇಲೆ ಕುರ್ಚಿ ಎಂಬುದು ಪರಬ್ಬ ಕಾಂಗ್ರೇಸಿಗರ ವಾದ. ಅದರಲ್ಲೂ ಸ್ಥಳೀಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೇಳದೆ ಏಕಾಏಕಿ ಅಧ್ಯಕ್ಷರ  ನೇಮಕಾತಿ ನಡೆದಿದ್ದು ತಪ್ಪು ಎಂದು ಆ ನೇಮಕಾತಿಗೆ ತಡೆ ತರಲಾಗಿತ್ತು. ಹಾಗಾದರೆ ಅಧ್ಯಕ್ಷ ಯಾರಾಗ ಬಹುದು?
ಹಾಗೆಂದು ಸುಳ್ಯದ ಮಟ್ಟಿಗೆ ಗೌಡ್ರುಗಳನ್ನೇ ಬ್ಲಾಕ್ ಅಧ್ಯಕ್ಷರ ಕುರ್ಚಿಯಲ್ಲಿ ಕೂರಿಸ ಬೇಕು ಎಂಬುದು ಕಾಂಗ್ರೆಸ್ ಪಕ್ಷದ ಅಂಡಿಗುಂಡಿ ರೂಲ್ಸ್. ಯಾಕೆಂದರೆ ಸುಳ್ಯ ಗೌಡ್ರುಗಳ ಭದ್ರಕೋಟೆ ಮತ್ತು ಮೆಜಾರಿಟಿ ಜನ ಅವರೇ. ಆದರೆ ಅಷ್ಟು ದೊಡ್ಡ ಮೆಜಾರಿಟಿಯಲ್ಲಿ ನೈಂಟಿ ಫೈವ್ ಪರ್ಸೆಂಟ್ ಜನ ಬಿಜೆಪಿಗೆ ಹೋಗಿಯಾಗಿದೆ. ಉಳಿದ ಐದು ಪರ್ಸೆಂಟ್ ಗೌಡ್ರುಗಳಿಗೆ ಕಾಂಗ್ರೆಸ್ ಅಧ್ಯಕ್ಷರ ಪಟ್ಟ ಯಾಕೆ ಕಟ್ಟುತ್ತಿದ್ದಾರೆ ಎಂದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಗೌಡ್ರುಗಳ ಬೆಲ್ಟ್ ನಲ್ಲಿ ಈಗಾಗಲೆ ದೊಡ್ಡ ಮುಂಡೋಡಿ, ಚಿಕ್ಕ ಮುಂಡೋಡಿಗಳಿಗೆ ಸುಳ್ಯ ಕಾಂಗ್ರೆಸನ್ನೇ ಎಷ್ಟೋ ವರ್ಷಗಳ ಕಾಲ ಕೊಡಲಾಗಿತ್ತು. ಕಡೇ ಪಕ್ಷ ಗುತ್ತಿಗಾರು ಉಳಿಸಿಕೊಳ್ಳಲಾಗಲಿಲ್ಲ ಅವರಿಗೆ. ನಂತರ ಪಿ.ಸಿಗೆ ಕೊಡಲಾಯಿತು,ಮಡಪ್ಪಾಡಿ ಸೊಸೈಟಿ ಢಮಾರ್ ಆಯ್ತು. ಅಡ್ಪಂಗಾಯರಿಗೆ ಕಾಂಗ್ರೇಸಿನಲ್ಲೇ ಉಸಿರು ಕಟ್ಟಿಸುವ ಸ್ಥಿತಿ, ಜ್ಯೂನಿಯರ್ ವಕೀಲರಿಗೆ ಕೊಟ್ಟರೆ ನಗರ ಪಂಚಾಯತೂ ಉಳಿಸಿಕೊಳ್ಳಲಾಗಲಿಲ್ಲ. ಇದಕ್ಕೆಲ್ಲ ಕಾರಣ ಬಿಜೆಪಿ ಪ್ರಭಾವ. ಬಿಜೆಪಿ ಮುಂದೆ ಇವರಿಗೆ ಬ್ಯಾಟಿಂಗ್ ಮಾಡಲು ಆಗುತ್ತಿಲ್ಲ. ಹಾಗೆ ಜಿ ಬೆಲ್ಟ್ ನ ಎಲ್ಲಾ ಗ್ರಾಮಗಳೂ ಬಿಜೆಪಿ ಕಡೆ ಹೋಗಿರುವಾಗ ಗೌಡ್ರುಗಳು ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರು. ಹಾಗಾಗಿ ಸುಳ್ಯ ಕಾಂಗ್ರೆಸನ್ನು ಜಿ ಬೆಲ್ಟ್ ಗೆ ಕೊಟ್ಟರೆ ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಯೇ ಹೊರತು ದೊಡ್ಡ ಲಾಭ ಇಲ್ಲ. ಯಾಕೆಂದರೆ ತಮಗೆ ಚಾನ್ಸೇ ಇಲ್ಲ, ಯಾವಾಗ ನೋಡಿದರೂ ಅಧ್ಯಕ್ಷ ಪಟ್ಟ ಗೌಡ್ರುಗಳಿಗೆ ಎಂದು ಅಸಮಾಧಾನಗೊಂಡು ಇತರೇ ಬೆಲ್ಟ್ ಜನ ಸಾಮೂಹಿಕವಾಗಿ ಬಿಜೆಪಿ ಕಡೆ ಹೋದರೆ ಸುಳ್ಯದಲ್ಲಿ ಕಾಂಗ್ರೆಸ್ ಸ್ಟ್ರೈಕ್ ರೇಟ್ ಪಾತಾಳಕ್ಕೆ ಇಳಿಯಬಹುದು.




ಇನ್ನು ಇತರೇ ಬೆಲ್ಟ್ ಗಳ ಕಡೆ ನೋಡುವುದಾದರೆ ಬಂಟ ಸಮುದಾಯದ ಜೆ.ಪಿಗೆ ಕೊಟ್ಟು ನೋಡಲಾಯಿತು. ಏನೂ ಪ್ರಯೋಜನವಾಗಲೇ ಇಲ್ಲ. ಬಂಟ ಸಮುದಾಯದಲ್ಲಿ ಬೆಳ್ಳಾರೆ ಕಡೆ ಉತ್ತಮ ಸಂಘಟಕರಿದ್ದರೂ ಅವರನ್ನು ಮೂಲೆಗುಂಪು ನಾಯಕ ಮಾಡಲಾಯಿತು. ಹಾಗೆ ನೋಡುವುದಾದರೆ ಸುಳ್ಯದಲ್ಲಿ ಕಾಂಗ್ರೆಸಿಗೆ ಗೌಡ್ರುಗಳಿಗಿಂತ ಜಾಸ್ತಿ ಬಂಟ ಸಮುದಾಯದ ಮತದಾರರು ಇದ್ದಾರೆ. ಹಾಗೆಂದು ಬಂಟ ಸಮುದಾಯವೇ ಪ್ರಬಲವಾಗಿರುವ ಬೆಳ್ಳಾರೆಯಲ್ಲಿ ಮೊದಲು ಗ್ರಾಮ ಪಂಚಾಯತಿ ಢಮಾರ್ ಆಯ್ತು ನಂತರ ಓ ಮೊನ್ನೆ ಮೊನ್ನೆ ಸೊಸೈಟಿಯೂ ಢಂ ಢಮಾರ್ ಆಗಿ ಹೋಯ್ತು. ಶಬ್ದ ಕೇಳಿರ ಬೇಕು ನಿಮಗೆ. ಆದರೂ ಒಂದು ಕೈ ಬಂಟ ಸಮುದಾಯದ ಯಾವುದಾದರೂ ಡ್ಯಾಶಿಂಗ್ ನಾಯಕನಿಗೆ ಲೀಡರ್ ಶಿಪ್ ಕೊಟ್ಟು ನೋಡಬಹುದು. ಇನ್ನು ಜೆ.ಪಿಗೆಲ್ಲ ಸುಳ್ಯ ಕಾಂಗ್ರೆಸನ್ನು ಟ್ಯಾಕಲ್ ಮಾಡಲು ಸಾಧ್ಯವಿಲ್ಲ.
ಮತ್ತೆ ಬ್ರಾಹ್ಮಣ ಬೆಲ್ಟ್ ಕಡೆ ನೋಡುವುದಾದರೆ ಅದು ಕೂಡ ಸೇಮ್ ಜಿ ಬೆಲ್ಟ್ ಪರಿಸ್ಥಿತಿಯಲ್ಲಿಯೇ ಇದೆ. ಲೀಡರ್ಸ್ ಇದ್ದಾರೆ ಆದರೆ ಕಾಂಗ್ರೆಸ್ಗೆ ಬ್ರಾಹ್ಮಣ ಮತದಾರರಿಲ್ಲ. ಕಲ್ಮಡ್ಕದ ಉದಯಣ್ಣ ಮತ್ತು ಕರಿಕ್ಕಳದ  ಅಜಾನುಬಾಹು ಕಲ್ಮಡ್ಕ ಸೊಸೈಟಿ ಮತ್ತು ಕಲ್ಮಡ್ಕ ಪಂಚಾಯ್ತಿಯನ್ನು ಇಲ್ಲಿ ತನಕ ಫ್ರಿಡ್ಜ್ ನಲ್ಲಿ ಇಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಸುಬ್ರಹ್ಮಣ್ಯದಲ್ಲಿ ರುದ್ರಪಾದರು ದೇಶಭಕ್ತರ ಭದ್ರಕೋಟೆಯಲ್ಲಿ ಒಮ್ಮೊಮ್ಮೆ ಮ್ಯಾಕ್ಸ್ ವೆಲ್ ಅವತಾರ ಎತ್ತಿ ಬಿಡುತ್ತಾರೆ. ಇನ್ನು ಕ್ರಿಶ್ಚಿಯನ್ ಬೆಲ್ಟ್ ಇಲ್ಲಿ ಮತದಾರರ ಪಟ್ಟಿಯಲ್ಲಿ ಮಾತ್ರ. ಇನ್ನು ಒಬಿಸಿ ಕಡೆ ನೋಡುವುದಾದರೆ ಕಾಂಗ್ರೆಸಿಗೆ ಅಲ್ಲೂ ಗಟ್ಟಿ ಲೀಡರ್ ಸಿಗೋದು ಡೌಟು. ಮತ್ತೆ ಲೇಡಿ ಲೀಡರ್ ಗಳ ಪೈಕಿ ಈಗಾಗಲೇ ಚಿಲ್ತಡ್ಕದ ನಾಯಕಿ ಜೆಡಿಎಸ್ ಗೆ ಹಾರಿ ರಾಜಕೀಯವಾಗಿ ಮುಗಿದು ಹೋಗಿದ್ದಾರೆ. ಮುಸ್ಲಿಂ ನಾಯಕಿ ವಹಿದೆ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.ಮತ್ತೆ ಉಳಿದಿರುವುದು ಝೆಡ್.ಪಿ ಮಾಜಿ ಮೆಂಬರ್ ಗಳಾದ ಸರಸ್ವತಿ ಕಾಮತ್ ಮತ್ತು ರಾಜೀವಿ ರೈ. ಇವರಲ್ಲಿ ಸರಸ್ವತಿ ಕಾಮತ್ ಅಧ್ಯಕ್ಷ ಪಟ್ಟದ ಆಕಾಂಕ್ಷಿಯಾಗಿದ್ದು ಡಿ.ಕೆ ಮೊನ್ನೆ ಸಿಕ್ಕಿದಾಗ "ಏನಮ್ಮಾ ಸುಳ್ಯದಲ್ಲಿ ಕಾಂಗ್ರೆಸ್ ಜವಾಬ್ದಾರಿ ವಹಿಸಿಕೊಳ್ಳಬಹುದಾ" ಎಂದು ಕೇಳಿದ್ದರಂತೆ. ಮಹಿಳಾ ಮಣಿಗಳಿಗೆ ಒಂದು ಚಾನ್ಸ್ ಕೊಟ್ಟು ನೋಡಬಹುದು.



ಇನ್ನು ಉಳಿದಿರುವುದು ಮುಸ್ಲಿಂ ಬೆಲ್ಟ್. ಈ ಬೆಲ್ಟ್ ನಲ್ಲಿ ನೈಂಟಿ ಫೈವ್ ಪರ್ಸೆಂಟ್ ಓಟರ್ಸ್ ಕೂಡ ಇದ್ದಾರೆ, ಲೀಡರ್ಸ್ ಕೂಡ ಇದ್ದಾರೆ. ಪರಬ್ಬ ಲೀಡರ್ಸ್ ಕೂಡ ಇದ್ದಾರೆ, ಬಾಲಕ್ಕಾರ್ ಲೀಡರ್ಸ್ ಕೂಡ ಇದ್ದಾರೆ. ಆದರೆ ಅವರಿಗೆ ಒಂದು ಬಗೆ ಅಧ್ಯಕ್ಷ ಪಟ್ಟ ಕನಸಿನ ಮಾತು. ಹಾಗಾಗಿ ಅವರು ಅವರ ಹೆಸರು ತೇಲಿ ಕೂಡ ಬಿಡಲ್ಲ.ಇದೀಗ ಸುಳ್ಯದ ಈ ಅಧ್ಯಕ್ಷ ಮ್ಯಾಟರ್ ಬೆಂಗಳೂರಿಗೆ ಶಿಫ್ಟ್ ಆಗಿದೆ ಎಂದು ತಿಳಿದುಬಂದಿದೆ. ಸುಳ್ಯ ಸಂಪಾಜೆಯ ಕಾಂಗ್ರೆಸ್ ನಾಯಕ ಸೋಮಣ್ಣನಿಗೆ ಅಧ್ಯಕ್ಷ ಪಟ್ಟ ಕಟ್ಟ ಬೇಕೆಂದು ಜಿ ಬೆಲ್ಟ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದೆ. ಹಾಗೆಂದು ಸೋಮಣ್ಣ ಸಕ್ರೀಯ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ವರ್ಷಗಳ ಹಿಂದೆಯೇ ಹೇಳಿದ್ದರು. ಈಗಲೂ ಬೇಡ ಬೇಡ ಎಂದು ಹೇಳಿದರೂ ಕೇವಲ ಜಿ ಬೆಲ್ಟಿಗಾಗಿ ಅವರನ್ನು ಹೊತ್ತುಕೊಂಡು ಬೆಂಗಳೂರಿಗೆ ಹೋಗಲಾಗಿದೆ ಎಂದು ಸುದ್ದಿ. ಹಾಗೆಂದು ಸಂಪಾಜೆಯಲ್ಲಿ ಜಿ ಬೆಲ್ಟ್ ಇಲ್ಲ. ಸಂಪಾಜೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ತಮಿಳರು, ಒಬಿಸಿ ಮತ್ತು ಎಸ್ಸಿ ಎಸ್ಟಿಗಳು ಜಾಸ್ತಿ ಇರುವ ಕಾರಣ ಇಲ್ಲಿ ನಿರಂತರವಾಗಿ ಪಂಚಾಯ್ತಿ ಮತ್ತು ಸೊಸೈಟಿಯಲ್ಲಿ ಕಾಂಗ್ರೆಸ್ ಬರುತ್ತದೆಯೇ ಹೊರತು ಯಾವುದೇ ಲೀಡರ್ ಗಳ ಲೀಡರ್ ಶಿಪ್ ನಲ್ಲಿ ಅಲ್ಲ. ಹಾಗೆಂದು ಸೋಮಣ್ಣ ನಾನ್ ಕರಫ್ಟ್, ಒಳ್ಳೇ ಲೀಡರ್. ಆದರೆ ಸಂಪಾಜೆಯಲ್ಲಿ ಸೋಮಣ್ಣನಿಂದಾಗಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಮಾತನ್ನು ತಳ್ಳಿಹಾಕಬಹುದು. ಇದೀಗ ಸುಳ್ಯ ಕಾಂಗ್ರೆಸ್ ನ ಒಂದು ಟೀಮ್ ಬೆಂಗಳೂರಿಗೆ ಶಿಫ್ಟ್ ಆಗಿದ್ದು ಎಕ್ಸ್ ಝೆಡ್ ಪಿ ಲೇಡಿ ಲೀಡರ್, ಕಲ್ಮಡ್ಕದ  ಪರಮೊಚ್ಚ ಮುಸ್ಲಿಂ ನಾಯಕ, ಸೋಮಣ್ಣ, ಲೀಡರ್ ಆಫ್ ಗೂನಡ್ಕ, ಜಾನ್ ಜಾನಿ ಮುಂತಾದವರು ಶತಪ್ರಯತ್ನದಲ್ಲಿದ್ದಾರೆ. ಸುಳ್ಯದಲ್ಲಿ ಯಾರು ಅಧ್ಯಕ್ಷರಾದರೂ ಒಬ್ಬ ಕಾಂಗ್ರೆಸ್ ಎಮ್ಮೆಲ್ಲೆಯನ್ನು ಬೆಂಗಳೂರು ಬಸ್ ಹತ್ತಿಸಲು ಭಗೀರಥ ಪ್ರಯತ್ನ ಬೇಕು. ಆದರೆ ಭಾಗೀರಥಿ ಬಿಡಬೇಕಲ್ಲ.
..............................................
ಒಂದು ಸಣ್ಣ ಸಹಾಯ :


  ಮೇಲಿನ ವಿಡಿಯೋದಲ್ಲಿ ಕಾಣುತ್ತಿರುವುದು ತಾಯಿ ಮತ್ತು ಮಗು.   ಚಿಕ್ಕ ಮಗುವಿನ ಲಾಲನೆ ಪಾಲನೆ ಮಾಡಬೇಕಾದ ಅಮ್ಮನೇ ಹಾಸಿಗೆ ಹಿಡಿದು ಮಲಗಿದ್ದಾಳೆ. ಮಗುವಿನ ಭವಿಷ್ಯ ತೂಗುಯ್ಯಾಲೆಯಲ್ಲಿ. ಇವಳು ಯಶಸ್ವಿನಿ. ಗುತ್ತಿಗಾರು ಗ್ರಾಮದ ಕಮಿಲ ದಲ್ಲಿ ಮನೆ. 23 ವರ್ಷ ಪ್ರಾಯ. ಮದುವೆಯಾಗಿ ಒಂದು ಚಿಕ್ಕ ಮಗು ಇದೆ. ಒಂದು ವರ್ಷದ ಹಿಂದೆ ಯಶಸ್ವಿನಿಗೆ ವಿಷಪೂರಿತ ಹಾವು ಕಡಿದು ಹಾಸಿಗೆ ಹಿಡಿದವಳು ಇವತ್ತಿಗೂ ಎದ್ದಿಲ್ಲ. ಹಾವು ಕಡಿತ ಯಶಸ್ವಿನಿಯ ನರಗಳ ಮೇಲೆ ಪರಿಣಾಮ ಬೀರಿದ್ದು ಅವಳ ಕೈಕಾಲುಗಳು ಕೊಕ್ಕೆ ಕಟ್ಟಿ ವೈಬ್ರೇಷನ್ ಆಗುತ್ತಿದೆ. ಮಂಗಳೂರಿನಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಲಕ್ಷಾಂತರ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಕೆಳ ಮಧ್ಯಮ ವರ್ಗದ ಮನೆ ಮಗಳಾಗಿರುವ ಯಶಸ್ವಿನಿಯನ್ನು ಈ ಪರಿಸ್ಥಿತಿಯಲ್ಲಿ ನೋಡಲಾಗುತ್ತಿಲ್ಲ. ಅದರಲ್ಲೂ ಅವಳ ಮಗುವಿನ ಮುಂದಿನ ಭವಿಷ್ಯ ಹಾಳಾಗಬಾರದು. ಆದ್ದರಿಂದ ಸಹೃದಯಿಗಳು ತಮ್ಮಿಂದಾದ ಆರ್ಥಿಕ ಸಹಾಯವನ್ನು ಮಾಡಬೇಕೆಂಬುದು ಅವಳದ್ದೊಂದು ಪುಟ್ಟ ಕುಟುಂಬದ ಯಾಚನೆ. ಇಲ್ಲಿ ಕೆಳಗೆ ಅಕೌಂಟ್ ನಂಬರ್ ಮತ್ತು ಸ್ಕ್ಯಾನರ್ ಕೊಡಲಾಗಿದೆ. ಬಡವಿ ತಂಗಿಗೆ ಏನಾದರೂ ನೀವು ತೆಗೆದಿಟ್ಟಿದ್ದರೆ ಅದನ್ನು ಯಶಸ್ವಿನಿಗೆ ಕೊಟ್ಟರೆ ಅವಳ ಮುಂದಿನ ಚಿಕಿತ್ಸೆಗೆ ಸಹಾಯ ಆಗಬಹುದು.ಇನ್ನು ಆ ಅಮಾಯಕ ಪುಟ್ಟ ಮಗುವಿನ ಮುಖ ನೋಡಿ ಆ ನಗು ಶಾಶ್ವತವಾಗಿರಲಾದರೂ ಒಂದು ಸಣ್ಣ ಸಹಾಯ ಮಾಡಿ.


S/b ac.no 83680100010772
Bank of Baroda.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 







MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget