Pattler News

Latest Post

    

 

 

  ವೆಹಿಕಲ್ ಡಾಕ್ಯುಮೆಂಟ್ ಚೆಕ್ ಮಾಡುವ ಕೆಲಸ‌ RTO ಗೆ ಸೇರಿದ್ದು. ಅನುಮಾನಾಸ್ಪದ ವಾಹನಗಳನ್ನು ಮಾತ್ರ ಪೋಲಿಸರು ನಿಲ್ಲಿಸಿ " ಅಣ್ಣೆ ಓಡೆ ಪೋಪರ್, ಸೌಕ್ಯನಾ? ಕಾಗಜಿ ದಾಲ ಉಂಡಾ ಗಾಡಿಡ್" ಎಂದು ವಿಚಾರಿಸ ಬಹುದು. ಇದು ಎಂಥ ಮಾರಾಯ್ರೆ ಗಾಡಿ ಕಂಡರೆ ಸಾಕು ಬದಿಗೆ ಬದಿಗೆ ಹಾಕು ಅನ್ನುವ ಪೋಲಿಸ್ ಸ್ಟೈಲ್, ನಮ್ಮನ್ನು ಕಳ್ಳರಂತೆ, ಡಕಾಯಿತರಂತೆ ನೋಡುವ ಗೆಟಪ್ ಏನು ಪೋಲಿಸರದ್ದು. ದಿನಾ ಚೆಕ್ಕಿಂಗ್. ಬೇರೆ ಎಂಥ ಕೆಲಸ ಕೂಡ ಇಲ್ಲ ಅವರಿಗೆ. ಅದಕ್ಕೆ ಸಾರ್ವಜನಿಕರಿಗೆ ಬಾಧೆ. ಆಯ್ತು ಪೋಲಿಸ್ ಆದರೂ ಚೆಕ್ ಮಾಡಲಿ, ಪೋಲಿಸ್ ದೃಷ್ಟಿಯಲ್ಲಿ ಎಲ್ಲಾರೂ ಕಳ್ಳರಂತೆ ಕಾಣುವುದು ತಪ್ಪಲ್ಲ. ಆದರೆ ಈ ಹೋಂ ಗಾರ್ಡ್ ಗಳಿಗೆ ಎಂಥ ಮರ್ಲ್ ಮಾರಾಯ್ರೆ. ಅವರೂ ಡಾಕ್ಯುಮೆಂಟ್ ಚೆಕ್ ಮಾಡೋದು. ಅಧಿಕ ಪ್ರಸಂಗದ ಪರಮಾವಧಿ.




 ಇದೀಗ ಸುಬ್ರಹ್ಮಣ್ಯ ಠಾಣೆಯ ಹೋಂ ಗಾರ್ಡ್ ಮೋನಪ್ಪಣ್ಣನ ಬಗ್ಗೆ ಸಾರ್ವಜನಿಕರು ಹಾಗೆ ಹೀಗೆ ಅಂತ ಹೇಳಲು ಶುರು ಮಾಡಿದ್ದಾರೆ. ಮೋನಪ್ಪ ಸಾಹೇಬ್ರು ಕಾರ್ತಿಕ್ ಸ್ಟೈಲಲ್ಲಿ, ತಿಮ್ಮಪ್ಪ ನಾಯ್ಕ್ ಗೆಟಪ್ಪಿನಲ್ಲಿ, ಅರುಣ್ ನಾಗೇಗೌಡರ ರೇಂಜಿನಲ್ಲಿ ಸುಬ್ರಹ್ಮಣ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿದೆ. ಅವರಾದರೂ ಪೋಲೀಸ್. ಅವರಿಗೆ ಅವರದೇ ಆದ ಕರ್ತವ್ಯಗಳಿವೆ. ಆದರೆ ಮೋನಪ್ಪಣ್ಣನಿಂದ ದಿನಾ ಯಾತ್ರಾರ್ಥಿಗಳಿಗೆ ಕಿರುಕುಳ, ಊರಿನವರಿಗೆ ಧಮ್ಕಿ, ರೆಕಾರ್ಡ್ ಚೆಕ್ಕಿಂಗ್, ಪುಗೆ ಚೆಕ್, ಇನ್ಸುರು ಚೆಕ್ ಹೀಗೆ ಮೋನಪ್ಪ ಸಾರು ರೋಡಿನಲ್ಲಿ ಕ್ರೀಯಾಶೀಲರಾಗಿರುತ್ತಾರೆ. ಇದೆಲ್ಲ ಮೋನಪ್ಪಣ್ಣನ ಕೆಲಸ ಅಲ್ಲ. ನೋ ಪಾರ್ಕಿಂಗಿನಲ್ಲಿ ಗಾಡಿ ನಿಲ್ಲಿಸಿದರೆ ಒಂದು ವಿಶಿಲ್ ಹೋಡೆಯೋದು ಬಿಟ್ಟರೆ ಬೇರೆ ಏನೂ ಕೆಲಸ ಮೋನಪ್ಪಣ್ಣನ ಲಿಸ್ಟ್ ನಲ್ಲಿ ಇಲ್ಲ. ಆಯ್ತು ಇಷ್ಟೆಲ್ಲಾ ಪುಗೆ ಚೆಕ್ ಮಾಡುವ ಮೋನಪ್ಪಣ್ಣ ಖುದ್ದು ಅವರ ಬೈಕಿಗೆ ಇನ್ಸೂರೆನ್ಸ್ ಕಟ್ಟಿಲ್ಲ, ಪುಗೆ ಚೆಕ್ ಮಾಡಿಸಿಲ್ಲ. ಇನ್ಸೂರು ಇಲ್ಲದ ಬೈಕಿಗೆ ಯಾರಾದರೂ ಡಿಕ್ಕಿ ಆಗಿ ಬೈಕ್ ಸತ್ತು ಹೋದರೆ. ಬೈಕಿನ ಮನೆಯವರು ಕೇಳಿದಷ್ಟು ಮೋನಪ್ಪ ಸಾಹೇಬ್ರು ಕೊಡಬೇಕು. ಎಲ್ಲಿಂದ ಕೊಡ್ತಾರೆ ಮೋನಪ್ಪಣ್ಣ.





ಈ ಹೋಂ ಗಾರ್ಡ್ ಗಳು ಎಲ್ಲಾ ಕಡೆ ಹೀಗೆ ಜೋರು ಮಾರಾಯ್ರೆ. ಪೋಲಿಸರು ಅವರೆದುರು ಪಾಪಚ್ಚಿ. ಪೋಲಿಸರಿಗೆ ಚಾಡಿ ಹೇಳುವುದೂ ಇದೇ ಪೊಕ್ಕಡೆ ಪೋಲಿಸರು. ಅದರಲ್ಲೂ ಸುಬ್ರಹ್ಮಣ್ಯದಂತಹ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬರುವಾಗ ಅವರಲ್ಲಿ ಪುಗೆ ಚೆಕ್ ಮಾಡಿದ್ಯಾ, ಪಡಿಕ್ಕೆ ಚೆಕ್ ಮಾಡಿದ್ಯಾ ಯಾಕೆ ಮಾರಾಯ್ರೆ. ಅವರು ಬಂದು ದೇಜನಿಗೆ ಕೈಮುಗಿದು ಹೋಗಲಿ. ಸುಬ್ರಹ್ಮಣ್ಯ ಪೋಲಿಸರು ಕಳ್ಳರನ್ನು ಹಿಡಿಯುವ ಕೆಲಸ ಮಾಡಿದರೆ ಸಾಕು ಜೊತೆಗೆ ಲಾ ಎಂಡ್ ಆರ್ಡರ್. ಪುಗೆ ಚೆಕ್ ಮಾಡಲು ಆರ್.ಟಿ.ಓ ಇದ್ದಾನೆ.


.............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





   

 

 

   ಕಾಡಿನಲ್ಲಿ ಇವನೊಬ್ಬ ಪರಿಸರ ಪ್ರೇಮಿಯ ವೇಷ ಹಾಕಿದವನು ಮತ್ತು ನಾಡಿನಲ್ಲಿ ಸಾಮಾಜಿಕ ಕಾರ್ಯಕರ್ತನ ವೇಷ, ಭೂಷಣ. ಒಳ್ಳೇ ವೇಷ, ಒಳ್ಳೇ ನಾಟಕ. ತುಂಬಾ ದಿನ ಬಂತು. ಮೊನ್ನೆ ಸಿಕ್ಕಿ ಬಿದ್ದ. ಇನ್ನು ಬೇರೆ ವೇಷ.



 ಇವರು ಸನ್ಮಾನ್ಯ ಸಿಬಿ ಯಾನೆ ವರ್ಗಿಸ್ ತೋಮಸ್ ಯಾನೆ ಟಾರ್ಜನ್. ಇವರ ಮೂಲಸ್ಥಾನ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಳಜಾಲು ಪರಕ್ಕಳ ಒಟ್ಟ ತೆಂಗಿಲ್.  ಕಾಡಿನಲ್ಲಿಯೇ ಇರುವುದು ಇವರು. ಪರಿಸರದ ಪರಮ ಪ್ರೇಮಿ. ಪ್ರಾಣಿಗಳನ್ನು ಕಂಡರೆ ಇವರಿಗೆ ಜೀವ ಮತ್ತು ಅಚ್ಚುಮೆಚ್ಚು.ಕಾಡು ಪ್ರಾಣಿಗಳಿಗಾಗಿ ಇವರ ಹೃದಯ ಡುಂಯಿ ಡುಂಯಿ ಎಂದು ಮಿಡಿಯುತ್ತಾ ಇರುತ್ತದೆ. ಕಾಡುಕೋಣಗಳ ಬಗ್ಗೆ, ಕಾಡು ಹಂದಿಗಳ ಬಗ್ಗೆ, ಕಡವೆಗಳ ಬಗ್ಗೆ, ಮೊಲ,  ವಿವಿಧ ಪಕ್ಕಿಗಳ ಬಗ್ಗೆ ಭಾರೀ ಸ್ಟಡಿ ಮಾಡಿದವರು. ಕಾಡು ಕೋಣಗಳ ಚಲನವಲನ, ಹಂದಿಗಳ ಹೆಜ್ಜೆ ಗುರುತಿನ  ಮೇಲೆ ಭಾರೀ ನಿಗಾ, ನಿರೀಕ್ಷೆ ಇಟ್ಟವರು.  ಅವುಗಳ ಬಗ್ಗೆ ಕಾಳಜಿ ವಹಿಸಿದವರು. ಪ್ರಾಣಿಗಳ ಮೇಲಿನ ವಿಶೇಷ ಪ್ರೀತಿಗಾಗಿಯೇ ಸನ್ಮಾನ್ಯರು ಕಾಡು ಕೋಣಗಳು ಕಾಡಿನಲ್ಲಿದ್ದರೆ ಅವಕ್ಕೆ ಶೀತ, ಉರಿಕೆನ್ನಿ, ಜಾಂಡೀಸ್ ಮತ್ತು ಕರುಳು ಸಂಬಂಧಿ ಕಾಯಿಲೆ ಬರಬಹುದು ಎಂದು ಅವನ್ನು ತಂದು ತಂದು ತನ್ನ ಮನೆಯ ಫ್ರಿಡ್ಜ್ ನಲ್ಲಿ ಇಟ್ಟು ರಕ್ಷಿಸುತ್ತಿದ್ದರು. ಇನ್ನು ಕಾಡು ಹಂದಿಗಳ ಬಗ್ಗೆ ವಿಶೇಷ ಮಮಕಾರ ಹೊಂದಿದ್ದ ಈ ಪರಿಸರ ಪ್ರೇಮಿ ಇಡೀ ನೂಜಿಬಾಳ್ತಿಲ ರಕ್ಷಿತಾರಣ್ಯದ ಅಷ್ಟೂ ಕಾಡು ಹಂದಿಗಳನ್ನು ಹುಡುಕಿ ಹುಡುಕಿ ತಂದು ಫ್ರಿಡ್ಜ್ ನಲ್ಲಿ ಇಟ್ಟು ಅವನ್ನು ಗಾಳಿ ಮಳೆ ಬಿಸಿಲಿನಿಂದ ರಕ್ಷಿಸಿ ಮಾನವತೆ ಮೆರೆದಿದ್ದರು. ಇನ್ನು ಇಡೀ ರಿಸರ್ವ್ ಫಾರೆಸ್ಟ್ ನಲ್ಲಿ ಒಂದು ತುಂಡು ಹಂದಿ ಕೂಡ ಇಲ್ಲ. ಎಲ್ಲಾ ಪರಿಸರ ಪ್ರೇಮಿಯ ಫ್ರಿಡ್ಜ್ ನಲ್ಲಿದೆ. ಇನ್ನು ಜಿಂಕೆ, ಕಡವೆ, ಮೊಲ, ಮುಳ್ಳು ಹಂದಿ ಮುಂತಾದ ವಿವಿಧ ಜಾತಿಯ, ವಿವಿಧ ತಳಿಗಳ ಕಾಡುಪ್ರಾಣಿಗಳಿಗೆ ಇವರು ತಮ್ಮ ಫ್ರಿಡ್ಜ್ ನಲ್ಲಿ ರಕ್ಷಣೆ ನೀಡಿದ್ದಾರೆ. ಸನ್ಮಾನ್ಯರ ಈ ಒಂದು ಪರಿಸರ ಪ್ರೇಮದ, ಪ್ರಾಣಿ ಪ್ರೇಮದ ಬಗ್ಗೆ ಕತೆಗಳು, ಉಪಕಥೆಗಳು, ದಂತಕತೆಗಳು ಪಂಜ ಸೀಮೆಯ ವಲಯ ಅರಣ್ಯಾಧಿಕಾರಿ ಸಂಧ್ಯಾ ಮ್ಯಾಮ್ ಕಿವಿಗೆ ಬಿದ್ದಿದೆ. ಸಂಧ್ಯಾ ಮ್ಯಾಡಂ ಮೊದಲೇ ವೈಡ್ ಬಾಲಿಗೂ ಸಿಕ್ಸ್ ಎತ್ತುವವರು ಪರಿಸರ ಪ್ರೇಮಿಯನ್ನೇ ಫ್ರಿಡ್ಜ್ ನಲ್ಲಿ ಇಡಲು ಸ್ಕೆಚ್ ಹಾಕಿ ಬಿಟ್ಟರು. ಅಷ್ಟೇ!
ಹಾಗೇ ಮೊನ್ನೆ ಎಪ್ರಿಲ್ 20 ಭಾನುವಾರ ಒಂದು ಕರೆಕ್ಟ್ ಇನ್ಫಾರ್ಮೇಷನ್ ಸಂಧ್ಯಾ ಮ್ಯಾಮ್ ಗೆ ಬಂದಿದೆ. ಪರಿಸರ ಪ್ರೇಮಿಯ ಫ್ರಿಡ್ಜ್ ನಲ್ಲಿ ಒಂದು ಕಾಡು ಕೋಣ ತಂದು ರಕ್ಷಿಸಲಾಗಿದೆ ಎಂದು. ಕೂಡಲೇ ಜಾಗೃತರಾದ ಸಂಧ್ಯಾ ಮ್ಯಾಮ್ ಫಾರೆಸ್ಟರ್ ಅಜಿತ್ ರನ್ನು ಕರೆದು ಟೈಟ್ ಆಪರೇಶನ್ ಮಾಡಲು ನಿರ್ದೇಶಿಸಿದ್ದಾರೆ. ಅದರಂತೆ ಅಜಿತ್ ಗ್ಯಾಂಗ್ ಪರಿಸರ ಪ್ರೇಮಿಯ ಫ್ರಿಡ್ಜ್ ಮೇಲೆ ಧಾಳಿ ಮಾಡಿದ್ದಾರೆ. ಕಾಡುಕೋಣದ ಹತ್ತು ಕೆ.ಜಿ ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ ಮಾಂಸ ಸಿಕ್ಕಿದೆ. ಅರಣ್ಯ ಇಲಾಖೆಯ ಬಿನ್ನೆರ್ ಮನೆಗೆ ಬರುವುದನ್ನು ಕಂಡಿಯಲ್ಲಿ ನೋಡಿದ ಪರಿಸರ ಪ್ರೇಮಿ ಹಿಂಬಾಗಿಲಿನ ಮೂಲಕ ಓಡಿ ಕಾಡಿನಲ್ಲಿ ಮಾಯವಾಗಿದ್ದಾನೆ ಎಂದು ತಿಳಿದುಬಂದಿದೆ.  ಅರಣ್ಯಾಧಿಕಾರಿಗಳು ಪರಿಸರ ಪ್ರೇಮಿಯ ಮನೆಯಿಂದ ಒಂದು ಫ್ರಿಡ್ಜ್, ಗೋಣದ ಮಾಸ, ಒಂದು ಗನ್ನು, ಮತ್ತು ಒಂದು ಫೋರ್ಡ್ ಇಕೋ ಸ್ಪೋರ್ಟ್ ಕಾರನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.



ಹಾಗೆಂದು ಈ ಪರಿಸರ ಪ್ರೇಮಿಗೆ ಕಾಡು ಪ್ರಾಣಿಗಳ ಮೇಲೆ ಮಾತ್ರ ಪ್ರೀತಿ ಅಲ್ಲ. ಇಡೀ ಅರಣ್ಯ ಸಂಪತ್ತಿನ ಮೇಲೆಯೇ ವಿಶೇಷ ಒಲವು. ಅವುಗಳ ರಕ್ಷಣೆಗೆ ಬದ್ಧರಾಗಿದ್ದರು. ಇವರ ಗ್ರಾಮದಲ್ಲಿರುವ ರಿಸರ್ವ್ ಫಾರೆಸ್ಟ್ ಮರಗಳ ಮೇಲೆ ಇವರಿಗೆ ವಿಶೇಷ ಕಾಳಜಿ. ಬೆಲೆ ಬಾಳುವ ಮರಗಳನ್ನು ಕಂಡರೆ ಇವರಿಗೆ ಬಾಯ್ತುಂಬಾ ಜೊಲ್ಲು ಸುರಿದು ಹರಿದು ತೊರೆಯಾಗಿ, ನದಿಯಾಗಿ ಹರಿದು ಸಮುದ್ರ ಸೇರುತ್ತಿತ್ತು. ರಕ್ಷಿತಾರಣ್ಯದ ಬೆಲೆ ಬಾಳುವ ಮರಗಳು ಹಾಳಾಗ ಬಾರದು, ಕಳ್ಳ ಕಾಕರ ಪಾಲಾಗಬಾರದು, ಹುಳ ಬಿದ್ದು ಸತ್ತು ಹೋಗಬಾರದು ಎಂದು ಇವರೇ ಅವನ್ನು ಕಡಿದು ಕಡಿದು ಮಿಲ್ಲುಗಳಲ್ಲಿ ಸಂಗ್ರಹಿಸಿಡುತ್ತಿದ್ದರು ಎಂದು ತಿಳಿದುಬಂದಿದೆ. ಇಂಥ ವಿವಿಧ ಕಾಡುತ್ಪತ್ತಿಗಳಿಂದ, ಕಾಡಿನ ವಿವಿಧ ಆದಾಯಗಳಿಂದ ಲಕ್ಸುರಿ ಜೀವನ ನಡೆಸುತ್ತಿದ್ದ ಇವರ ಬಗ್ಗೆ ಕರ್ನಾಟಕ ಅರಣ್ಯ ಮಂತ್ರಿಗಳ ಟೇಬಲ್ ಗೆ, ಅರಣ್ಯ ಮಹಾ ಸಂರಕ್ಷಣಾಧಿಕಾರಿ ಕಚೇರಿಗೆ ಕರೆದು, ಹಿಡಿದು ಸನ್ಮಾನ ಮಾಡುವಂತೆ ಮನವಿ ಪತ್ರ ಹೋಗಿತ್ತು. ಸಂಧ್ಯಾ ಮ್ಯಾಮ್ ಗೆ ಮೇಲಿಂದ ಮೇಲೆ ಮೇಲಿಂದ ಪ್ರೆಷರ್ ಬಂದಿತ್ತು. ಹಾಗಾಗಿ ಅವರು ಪರಿಸರ ಪ್ರೇಮಿಯ ಚಲನವಲನದ ಮೇಲೆ ಒಂದು ಕಣ್ಣಿಟ್ಟಿದ್ದರು. ಮೊನ್ನೆ ಸಿಕ್ಕಿ ಬಿದ್ದ. ಸನ್ಮಾನ ಸಮಾರಂಭ ಮಾಡಲು ಆಗಲಿಲ್ಲ ಅಷ್ಟೇ.


.............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





  

 

   ಇದೊಂದು ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸೊಸೈಟಿ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದೇಶಭಕ್ತರ ಜಂಟಿ ಕಾರ್ಯಾಚರಣೆ ಇದೆ. ಇಬ್ಬರದ್ದೂ ಸಮೂಹ ಭೋಜನ.   ಹಾಗಾಗಿ ಈ ವರ್ಷದ ವಹಿವಾಟಿನಲ್ಲಿ ಅಂದಾಜು ಒಂದು ಕೋಟಿ ತನಕ ಲೆಕ್ಕ ಎಟ್ಟೆಟ್ಟ್ ಪೊಯ್ನೆಟ್ ಆಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿದೆ. ಮುಳುಗಿದರೆ ಟೈಟಾನಿಕ್ ಉಳಿದರೆ ಸೊಸೈಟಿ.






 ಇದು ಬೆಳಾಲು ಸೊಸೈಟಿ. ಇಲ್ಲಿನ ಸ್ಟಾಫ್  ಗಳಿಬ್ಬರ ಗಲಾಟೆಯಲ್ಲಿ ಬೊಳ್ಳಕ್ಕೆ ಹೋಗಲಿದ್ದ ಸೊಸೈಟಿ ದುಡ್ಡಿನ ಕತೆ ಹೊರಗೆ ಬಂದಿದೆ. ರಬ್ಬರ್ ಖರೀದಿಯಲ್ಲಿ ಅಂಡಿಗುಂಡಿ ಲೆಕ್ಕಾಚಾರ ತೋರಿಸಿ ಸೊಸೈಟಿಗೆ ಪತಾಯಿಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಸಗೊಬ್ಬರ ಶಾಖೆಯಲ್ಲೂ ಗೊಬ್ಬರ ತಿಂದು ಸೊಸೈಟಿಗೆ ಢಂ ಮಾಡಲಾಗಿದೆ. ಡಮ್ಮಿ ಅಕೌಂಟ್ ಗಳ ಕತೆಯೂ ಸೊಸೈಟಿಯಲ್ಲಿದೆ. ಈ ಅಂಡಿಗುಂಡಿ ವಹಿವಾಟುಗಳೆಲ್ಲ ಕಳೆದ ಟರ್ಮಿನಲ್ಲಿ ನಡೆದಿದ್ದು ಇದೀಗ ಬಂದಿರುವ ಆಡಳಿತ ಮಂಡಳಿಗೆ ಇನ್ನು ಕತೆ ಹೇಳಬೇಕಷ್ಟೇ.  ಓ ಮೊನ್ನೆ ತಾನೇ ಸೊಸೈಟಿಯ ಆಡಿಟ್ ಮುಗಿದಿದ್ದು ಅಂದಾಜು ಎಪ್ಪತ್ತರಿಂದ ಒಂದು ಕೋಟಿ ತನಕದ ಲೆಕ್ಕಾಚಾರ ತಪ್ಪಿದೆ ಎಂದು ಆಡಿಟಿಂಗ್ ಹೇಳಿದೆ. ಲೆಕ್ಕಾಚಾರ ಎಲ್ಲಾ ಸರಿ ಇದೆ, ಆದರೆ ಲೆಕ್ಕಾಚಾರದಲ್ಲಿರುವ ದುಡ್ಡಿಲ್ಲ. ಕೋಮಣ ಇದೆ ಸಾಮಾನಿಲ್ಲ ಎಂಬ ಗಾದೆಯಂತಾಗಿದೆ ಸೊಸೈಟಿ ಕತೆ.ಏನಾಗಿದೆ ಏನಾಗಿದೆ ಎಂದು ನೋಡಲಾಗಿ ಸೊಸೈಟಿಯ ಇಬ್ಬರು ಕಳ್ಳ ಮಹಾಶಯರು ನೀನು ತಿಂದಿದ್ದು, ನೀನು ತಿಂದಿದ್ದು ಎಂದು ಗಲಾಟೆಗೆ ಬಿದ್ದು ಆ ಗಲಾಟೆ ಇಡೀ ಬೆಳಾಲಿಗೆ ಕೇಳಿ ನಂತರ ಅದು ಬೆಳ್ತಂಗಡಿ ತನಕವೂ ಮುಟ್ಟಿದೆ. ಇದೀಗ ಸೊಸೈಟಿಯೊಳಗಿನ ಕಳ್ಳರಿಬ್ಬರ ಪರ ನಿಂತಿರುವ ಆಡಳಿತ ಮಂಡಳಿ ಹದಿನೈದು ದಿನಗಳ ಒಳಗೆ ಅವರಿಂದ ದುಡ್ಡು ಕಟ್ಟಿಸಿಕೊಳ್ಳಲು ಪಂಚಾಯ್ತಿ ನಡೆಸಿದೆ ಎಂದು ತಿಳಿದುಬಂದಿದೆ. ಆದರೆ ಆ ಇಬ್ಬರೂ ಸ್ಟಾಫ್ ಗಳೂ ಬೊಳ್ಳಕ್ಕೆ ಹೋಗಲು ರೆಡಿಯಾಗಿ ನಿಂತಿರುವಾಗ ಅವರಿಂದ ದುಡ್ಡು ಕಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹಾಗಾದರೆ ಸೊಸೈಟಿ ದುಡ್ಡಿನ ಗತಿ ಏನು? ಎಳ್ಳುನೀರು ರೆಡಿ ಮಾಡುವುದಾ?




..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





 

 

   ಅಲ್ಲಿ ಸಾಮೆತ್ತಡ್ಕದ ಮನೆಯೊಂದರಲ್ಲಿ ನಿರಂತರ ವೇಶ್ಯಾವಾಟಿಕೆ ನಡೆಯುತ್ತಿದೆ, ಯಾರಾದರೂ ಪುಣ್ಯಾತ್ಮರು ಹೋಗಿ ರೈಡ್ ಮಾಡಿಪ್ಪ ಎಂದು ಕೆಲವು ದಿನಗಳ ಹಿಂದೆ ಅಲ್ಲಿನ ಲೋಕಲ್ಸ್ ಗೋಗರೆದಿದ್ದರು. ನೆಪಕ್ಕೆ ಬಾಡಿಗೆ ಮನೆ ಅಂತ ರೈಲು ಬಿಟ್ಟು ಇಲ್ಲಿಗೆ ನಿತ್ಯ ಸುಮಂಗಲಿಯರನ್ನು ಕರೆಸಿ ಹುಳ ಬಿಡುವ ಕಾರ್ಯಕ್ರಮ ನಡೆಸಲಾಗುತ್ತಿತ್ತು. ನಿಮ್ಗೆ ಬೇಕಿದ್ದರೆ ಪಿಂಪ್ ನಂಬರಿಗೆ ಕಾಲ್ ಮಾಡಿದರೆ ಯಾವ ಟೈಪಿನ ಹುಡುಗಿ ಬೇಕು ಎಂದು ಅವನೇ ಕೇಳುತ್ತಾನೆ. ಲತ್ತ್ ಲತ್ತ್ ಕರ್ಕ್ ಹುಡುಗಿ, ಬಾಕ್ಸ್ ಪೀಸ್, ಮಾಸ್ಟರ್ ಪೀಸ್,ಕಾಲೇಜ್ ಸ್ಟೂಡೆಂಟ್, ಸ್ಪೆಷಲಿಸ್ಟ್ ಆಂಟಿಸ್, ಫಾರ್ಟಿ ಪ್ಲಸ್, ಫಿಫ್ಟಿ ಪ್ಲಸ್, ಘಟ್ಟದ್ದು, ಹಿಂದೀ ಹೀಗೆ ನಿಮಗೆ ಯಾವ ಪೀಸ್ ಬೇಕಾದರೂ ರಖಂ ಸರಬರಾಜು ಇಲ್ಲಿ ಇದೆ. ಪೀಸ್ ಗಳ ರೇಟ್ ಲಿಸ್ಟೂ ತರಾವರಿ ಇದ್ದು ಕಾಲೇಜು ಹುಡುಗಿಗೆ ಇಲ್ಲಿ ಚಿನ್ನದ ರೇಟಿದೆ. ಒಬ್ಬ ಪೊರ್ಬುಲು ಈ ಒಂದು ಹುಡುಗಿ ಅಂಗಡಿ ನಡೆಸುತ್ತಿದ್ದು ವಹಿವಾಟು ದೊಡ್ಡದಿದೆ.






  ಹಾಗೆ ಒಂದು ಹತ್ತು, ಹದಿನೈದು ದಿನಗಳ ಹಿಂದೆ ಈ ದರುಬುರು ಸೆಂಟರ್ ಮೇಲೆ ಪೋಲಿಸ್ ರೈಡ್ ಆಗಿದೆ ಎಂಬ ಮಾಹಿತಿ ಇದೆ. ಪೋಲಿಸ್ ರೈಡು ಬಿದ್ದಾಗ ಹುಡುಗಿಯರು ಮಾಲು ಸಮೇತ ಸಿಕ್ಕಿಬಿದ್ದಿದ್ದು, ಪೋಲಿಸರು ಪೊರ್ಬುಗಳಿಗೆ ಕಾಲ್ ಮಾಡಿದರೆ "ಬೆಂಗಳೂರಿನಲ್ಲಿ ಇದ್ದೇನೆ, ಬಂದು ಕಾಣುತ್ತೇನೆ" ಎಂದು ರೈಲು ಬಿಟ್ಟು ಆಗ ಬಚಾವಾಗಿದ್ದ ಎಂದು ತಿಳಿದುಬಂದಿದೆ. ಪೊರ್ಬುಗಳ ಮಾತು ನಂಬಿ ಪೋಲಿಸರು ಹುಡುಗಿಯರನ್ನು ಸಂತೂರ್ ಕೊಟ್ಟು ಸ್ನಾನಕ್ಕೆ ಕಳಿಸಿ ವಾಪಾಸಾಗಿದ್ದು ಅಂದಾಜು ಒಂದು ಲಕ್ಷ ತನಕ ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಯಾರೋ ಎಎಸೈ ಒಬ್ಬರ ಟೀಂ ಈ ಧಾಳಿ ನಡೆಸಿದ್ದು ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ.





..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





   ಕಾಡ ಪಂಜಿ ಮಾಚ ಬೋಡ, ಜಿಂಕೆ ಮಾಚ ಬೋಡ, ಕನಕ್ಕ್ ಬೋಡ, ಉಪ್ಪಡ್ಡ ಕುಕ್ಕು ಬೋಡ, ಮರ ಚೇವು ಬೋಡ, ಕಣಿಲೆ ಬೋಡ ಎಂದು ಕಂಡ ಕಂಡವರಿಂದ ದುಡ್ಡು ತಗೊಂಡು ಪತಾಯಿಸ್ ಮಾಡುತ್ತಿದ್ದ ಮಹಾನ್ ಸಾಮಾನ್ ಒಂದನ್ನು ಸುಬ್ರಹ್ಮಣ್ಯ ಪೋಲಿಸರು ಕ್ಯಾಚ್ ಮಾಡಿ, ಬೆಂಡ್ ತೆಗೆದು, ಸನ್ಮಾನ ಮಾಡಿ ಕಳಿಸಿದ ಮಾಹಿತಿ ಸುಬ್ರಹ್ಮಣ್ಯದಿಂದ ಬಂದಿದೆ.


   ಇವನು ಮಹೇಚ ಯಾನೆ ಪಂಜಿ ಮಹೇಚ. ಮರ್ಧಾಳ ಸಮೀಪದ ಗ್ರಾಮೀಣ ಪ್ರತಿಭೆ ಇವನು. ಮಂಗಳೂರು, ಬೆಂಗಳೂರು ಎಂದೆಲ್ಲ ಹೋದರೆ ಇವನಿಗೆ ಬ್ರೈಟ್ ಫ್ಯೂಚರ್ ಇರುವ ಹಾಗೆ ಕಾಣುತ್ತದೆ. ಯಾಕೆಂದರೆ ಇವನು ಎಡಮಂಗಲ, ಕುಲ್ಕುಂದ, ಮರ್ಧಾಳ, ಕೋಡಿಂಬಾಳ ಮುಂತಾದ ಗ್ರಾಮೀಣ ಭಾಗಗಳಲ್ಲಿಯೇ ಅಮಾಯಕ ಜನರನ್ನು ಮಂಗ ಮಾಡಿ ದಿನಕ್ಕೆ ಐದತ್ತು ಸಾವ್ರ ದುಡಿಯುತ್ತಾನೆಂದರೆ ಇವನು ಮೆಟ್ರೋಪಾಲಿಟನ್ ಸಿಟಿಗಳ ಬದಿಯಲ್ಲಿ ಹೋದರೂ ಸಾಕು ಓವರಿಗೆ ಮೂವತ್ತಾರೂ ಹೊಡೆಯಬಹುದು.


  ಕಳೆದ ಕೆಡ್ಡಸ‌ ಟೈಮಲ್ಲಿ ಎಡಮಂಗಲದಲ್ಲ ಅಮಾಯಕರೊಬ್ಬರನ್ನು ಕಾಡು ಹಂದಿ ಮಾಂಸ ಕೊಡುತ್ತೇನೆ ಎಂದು ಮಂಗೀಸ್ ಮಾಡಿ ಮೂರೂವರೇ ಸಾವಿರ ತನಕ ವಂಚಿಸಿದ ಪ್ರಕರಣ ಜಾಲತಾಣಗಳಲ್ಲಿ ಶತದಿನೋತ್ಸವ ಕಂಡಿತ್ತು. ಕೆಡ್ಡಸದ ದಿನ ನೈಂಟಿ ಹಾಕಿ ತೆಂಗಿನ ಕಾಯಿ ಕುಟ್ಲಿಕ್ಕೆ ಯಾವ ದಿಕ್ಕಿಗೆ ಹೋಗೋದು ಎಂದು ಎಡಮಂಗಲ ಬಸ್ ನಿಲ್ದಾಣದಲ್ಲಿ ಭಕ ಧ್ಯಾನ ಮಾಡುತ್ತಿದ್ದ ಹಿರಿಯರೊಬ್ಬರ ಹತ್ತಿರ ಬಂದಿದ್ದ ಅಪರಿಚಿತ ವ್ಯಕ್ತಿ " ನಿಮ್ಗೆ ಕಾಡುಹಂದಿ ಮಾಂಸ ಬೇಕಾ, ನಿನ್ನೆ ನೈಟ್ ಉರ್ಲಿಗೆ ಬಿದ್ದಿದೆ, ಕೆ.ಜೀಗೆ ರಿಡಕ್ಷನ್ ಸೇಲಲ್ಲಿ ಕೊಡುವ, ಮುನ್ನೂರಕ್ಕೆ ಕೊಡುವ, ಬೇರೆ ಜನ ಇದ್ದರೂ ಮಾಡಿಕೊಡಿ" ಎಂದು ಗಾಳಿ ಹಾಕಿದ್ದಾನೆ. ಹಿರಿಯರಿಗೆ ಖುಷೀ ಆಗಿದೆ.‌ ಮುನ್ನೂರಕ್ಕೆ ಕಾಡ ಪಂಜಿ ಮಾಸ ಯಾರಾದರೂ ತಂದು ಕೊಡುವವರು ಈ ಜಗತ್ತಿನಲ್ಲಿ ಇದ್ದಾರಾ ಎಂದು ಹಿರಿಯರು ಮುನ್ನೂರಕ್ಕೆ ಒಂದು ಹದಿನೈದು ಮೆಂಬರ್ ಮಾಡಿ, ದುಡ್ಡೂ ತೆಗೆದು ಕೊಟ್ಟಿದ್ದಾರೆ. ಹಾಗೆ ಹಿರಿಯರನ್ನು ಪಂಜಿದ ಮಾಸಕ್ಕಾಗಿ ಬೈಕಲ್ಲಿ ಕೂರಿಸಿಕ್ಕೊಂಡು ಒಂದು ಅರ್ಧದಷ್ಟು ಹೋಗಿ ಒಂದು ಕಡೆ ಮೋರಿಯ ಹತ್ತಿರ ಬೈಕ್ ನಿಲ್ಲಿಸಿ ಇವರನ್ನು ಇಳಿಸಿ, "ನೀವು ಸ್ಪಾಟಿಗೆ ಬಂದರೆ ರೇಟ್ ಜಾಸ್ತಿ ಹೇಳ್ತಾರೆ, ನಾನು ಹೋಗಿ ತರುತ್ತೇನೆ" ಎಂದು ಹೇಳಿ ಹೋದವನು ಮತ್ತೆ ಸಿಕ್ಕಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರಿಗೇ. ಮತ್ತೆ ಅಲ್ಲಿ ಮರ್ಕಂಜ ಹತ್ತಿರ ಅದ್ಯಾವುದೋ ಗೂಡಂಗಡಿ ಧಣಿ ಹತ್ತಿರ ಹೋಗಿ ಅಲ್ಲೇ ಎಲ್ಲೋ ಆಸುಪಾಸಿನಲ್ಲಿ ಎರಡು ತೆಂಗಿನ ಮರ ಬಿದ್ದಿದೆ, ಇಪ್ಪತ್ತೈದಕ್ಕೆ ಬೊಂಡ ಕೊಡಿಸುತ್ತೇನೆ ಎಂದು ಐದು ಸಾವಿರ ಹಿಡ್ಕೊಂಡು ಹೋದವನು ಮತ್ತೆ ಕಾಣಿಸಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರ ಜೀಪಿನಲ್ಲೇ.


ಹಾಗೆ ಮೊನ್ನೆ ಸುಬ್ರಹ್ಮಣ್ಯ ಸಮೀಪದ ಹಳ್ಳಿಗಾಡಿನ ಮನೆಯೊಂದರಲ್ಲಿ ವಯರಿಂಗ್ ಮಾಡಿಸುತ್ತೇನೆ ಎಂದು ಎಷ್ಟೋ ಕಿಸಿಗೆ ಇಳಿಸಿ ಮಾಯಕ ಆಗಿದ್ದ.‌ ಜನ ಇವನನ್ನು ಮಾಸ ಮಾಡಲು ಹುಡುಕುತ್ತಾ ಇದ್ದರು. ಅದಕ್ಕೆ ಸರಿಯಾಗಿ ಮೊನ್ನೆ ಕುಲ್ಕುಂದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಹೆಂಗಸೊಬ್ಬಳ ಹತ್ತಿರ ಹೋಗಿ "ಕಾಡ ಪಂಜಿದ ಮಾಸ ಬೋಡ" ಎಂದು ಕೇಳಿದ್ದಾನೆ ಮತ್ತು ಆ ಹೆಂಗಸು ಬೇಡ ಅಂದು ಹತ್ತಿರದ ಅಂಗಡಿಯೊಂದಕ್ಕೆ ಮೆಸೇಜ್ ಕೊಟ್ಟಿದ್ದಾರೆ. ಅಷ್ಟೇ! ಜನ ಮೆರವಣಿಗೆಯಲ್ಲಿ ಬಂದಿದ್ದಾರೆ. ಕೈಗೆ ಸಿಕ್ಕಿದ ಕಾಡು ಹಂದಿಗೆ ಸೂಸು ಲೀಕ್ ಆಗುವಷ್ಟು ಹೊಡೆದು ಸುಬ್ರಹ್ಮಣ್ಯ ಪೋಲಿಸರ ಕೈಗೆ ಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಪೋಲಿಸರು ಕಂಪ್ಲೈಂಟ್ ಕೊಡಲು ಯಾರೂ ಮುಂದೆ ಬಾರದ ಕಾರಣ ಮಹೇಚನನ್ನು ಬೆಂಡ್ ತೆಗೆದು ಕಳಿಸಿ ಕೊಟ್ಟಿದ್ದಾರೆ. ಹಾಗೆಂದು ಈ ವಂಚಕನ ವಿರುದ್ಧ ಯಾರೂ ಕಂಪ್ಲೈಂಟ್ ಕೊಡಲು ಮುಂದೆ ಬಂದಿಲ್ಲ  ಯಾಕೆ ಅಂದರೆ ಕಾಡು ಹಂದಿ ಬೇಟೆ ಕಾನೂನು ವಿರುದ್ಧ ಆಗಿದ್ದು, ಎಲ್ಲಿಯಾದರೂ ಕಂಪ್ಲೈಂಟ್ ಕೊಡಲು ಹೋದರೆ ತಾವೂ ಸಿಕ್ಕಿ ಹಾಕಿ ಕೊಳ್ಳುವ ಅಪಾಯಗಳು ಇದ್ದ ಕಾರಣ ಜನ ಜಾರಿ ಬಿಟ್ಟರು, ಇವನು ಸೇಫಾಗಿ ಬಿಟ್ಟ.


   ಹಾಗೆಂದು ಈ ಮಹಾನ್ ವಂಚಕನ ಜಾತಕ ಇಡೀ ಮರ್ಧಾಳ, ಕಡಬದಲ್ಲಿ ವೈರಲ್ ಆಗಿದ್ದು 420 ಸೆಕ್ಷನ್ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳಲ್ಲಿ ಇವನು ಕೈಯಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಹಕ್ಕಿಗಳು ಎದ್ದು ಇಂಗ್ಲೀಷ್ ಮಾತಾಡುವ ಮುಂಚೆಯೇ ಇವನು ಮನೆಯಿಂದ ಹೊರಟು ಹೋಗುತ್ತಿದ್ದು ಎಲ್ಲಿಗೆ ಹೋಗುತ್ತಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ಏನಾದರೂ ಇಂಥದ್ದೇ ವಹಿವಾಟು ಇರಬಹುದು.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 






  ಬೆಳ್ತಂಗಡಿಯ ಸೌಜನ್ಯ ಒರಟು ಹೋರಾಟ ದಿನೇ ದಿನೇ ದೌರ್ಜನ್ಯದ ಹೋರಾಟವಾಗಿ ನಿಜ ಬಣ್ಣ ಬಯಲು ಮಾಡುತ್ತಿದೆ. ಅನಾವಶ್ಯಕವಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಿರುವ ಹೋರಾಟಗಾರರು ಮತ್ತು ಈ ಹೋರಾಟದ ನೇತೃತ್ವವನ್ನು ವಹಿಸಿರುವ ಉಜಿರೆಯ ಮೃಗರಾಜನಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಇದೀಗ ಈ ಹೋರಾಟಗಾರರ ಬಾಯಲ್ಲಿ ಅಜಿಲ ಸೀಮೆಯ ಬಗ್ಗೆ ಉಲ್ಲೇಖವಾಗಿದ್ದು, ಜೈನರನ್ನು ಶತಾಯಗತಾಯ ಲಗಾಡಿ ತೆಗೆಯಲೇ ಬೇಕೆಂಬ ಶಪಥ ಮಾಡಿದಂತಿದೆ."ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು" ಎಂಬ ಮೆಂಟಾಲಿಟಿಯ ಜನರೂ ಈ ಸಮಾಜದಲ್ಲಿ ಇದ್ದಾರೆ ಎಂದರೆ ಸಮಾಜ  ಯಾವ ಕಡೆ ಚಿತ್ತೈಸುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಒಂದು ಧರ್ಮದ ಬಗ್ಗೆ ಅವಹೇಳನ ಮಾಡಿರುವ ಒಬ್ಬ ಸೌಜನ್ಯ ಹೋರಾಟಗಾರ ಮತ್ತು ಅವರ ತುಂಡು ಲೀಡರ್ ಉಜಿರೆಯ ಮೃಗರಾಜನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕಂಪ್ಲೈಂಟ್ ಆಗಿದ್ದು ಪೋಲಿಸರು ನೋಡುವ, ಮಾಡುವ ಎಂದು ಹೇಳಿದ್ದಾರೆ. ಅವರಿಗೂ ಮೃಗರಾಜನ ಭಯ.


  ಅದೊಂದು ಮೊಬೈಲ್ ಫೋನ್ ಸಂಭಾಷಣೆ. ಒಬ್ಬ ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು ಎಂಬ ಮೆಂಟಾಲಿಟಿಯ ಹೋರಾಟಗಾರ ಮತ್ತು ಉಜಿರೆಯ ಮೃಗರಾಜನ ನಡುವೆ ನಡೆದ ಮಾತುಕತೆಯ ರೆಕಾರ್ಡೆಡ್ ಆಡಿಯೋ. ಅದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಉಜಿರೆಯ ಮೃಗರಾಜ ತನ್ನನ್ನು ತಾನು ಆನೆಗೆ ಹೋಲಿಸಿಕ್ಕೊಂಡು ಆನೆ ನಡೆದದ್ದೇ ದಾರಿ ಎಂದು ಹೇಳಿದೆ. ಆನೆ ನಡೆದದ್ದೇ ದಾರಿ ಎಂದು ಆನೆ ಹಂಪನ ಕಟ್ಟೆಯಲ್ಲಿ ನಡೆದರೆ ಜನ ಆನೆಗೆ ಇಂಜೆಕ್ಷನ್ ಶೂಟ್ ಮಾಡಿ ದುಬಾರೆ ಆನೆ ಶಿಬಿರಕ್ಕೆ ಸೆಂಡ್ ಮಾಡಿ ಬಿಡುತ್ತಾರೆ. ಮುಂದುವರಿದ ಮೃಗರಾಜ ಧರ್ಮ ಸ್ಥಾಪನೆ ಆಗಲೇ ಬೇಕು ಒತ್ತಿ ಒತ್ತಿ ಹೇಳಿದೆ. ಮೃಗರಾಜನ ಲೀಡರ್ ಶಿಪ್ ನಲ್ಲಿ ಯಾವ ರೀತಿಯ ಧರ್ಮ ಸ್ಥಾಪನೆ ಆಗಬಹುದು ಎಂದು ಸಮಾಜ ಅವಲೋಕಿಸ ಬೇಕಾಗಿದೆ.ಈಗ  ಬಂದು ಮೃಗರಾಜ ಧರ್ಮ ಸ್ಥಾಪನೆ ಮಾಡುವುದಿದ್ದರೆ ಜೈನರು ಇಲ್ಲಿ ತನಕ ಮಾಡಿದ್ದೇನು? ದೇವಸ್ಥಾನಗಳನ್ನು ಕಟ್ಟಿಸಿದ್ದು, ದೈವ ಸ್ಥಾನಗಳನ್ನು ಕಟ್ಟಿಸಿದ್ದು ಯಾರು? ಭೂದಾನ, ವಸ್ತ್ರದಾನ, ಅನ್ನದಾನ ಮಾಡಿದ್ದು ಯಾರು? ಇವತ್ತು ಅದೇ ಮೃಗರಾಜನ ಸಪೋರ್ಟಿಗೆ ನಿಂತಿರುವ ಪುಂಡುಪೊಕ್ರಿಗಳು ಜನ್ಮತಾಳಿದ್ದು, ಬೆಳೆದು ಬಂದದ್ದು ಯಾರ ಭೂಮಿಯಲ್ಲಿ? ಎಲ್ಲವೂ ಜೈನರದ್ದು. ಧರ್ಮ ಸ್ಥಾಪನೆಯನ್ನು ಜೈನ ಅರಸರು, ಗುತ್ತು ಬೀಡುಗಳ ಜೈನರು ಮಾಡಿಯಾಗಿದೆ. ಅಧರ್ಮದ ಅಮಲಿನಲ್ಲಿರುವ ಅಧರ್ಮಿಗಳಿಂದ ಧರ್ಮ ಸ್ಥಾಪನೆಯ ಮಾತು ಬಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಲು ನಾಚಿಕೆ ಆಗಬೇಕು. ಇದೇ ಟಾರ್ಗೆಟ್ ಬೇರೆ ಅಲ್ಪಸಂಖ್ಯಾತರಿಗೆ ಮಾಡಿದರೆ ಅವರು ಟಿಕೆಟ್ ಕೊಟ್ಟು ಬಿಡುತ್ತಾರೆ ಅಷ್ಟೇ.


ಮುಂದೆ ಈ ಫೋನ್ ಸಂಭಾಷಣೆಯಲ್ಲಿ  ಸೌಜನ್ಯ ಹೋರಾಟಗಾರ ಮೃಗರಾಜನಲ್ಲಿ ಧರ್ಮಸ್ಥಳದ ಡಬ್ಬಿಯಲ್ಲಿ ದುಡ್ಡು ಉಂಟು, ಅದು ಹಿಂದೂಗಳ ದುಡ್ಡು, ಜೈನರು ಅದನ್ನು ದುರುಪಯೋಗ ಪಡಿಸುತ್ತಾರೆ ಎಂದು ಹೇಳಿದ್ದಾನೆ. ದುಡ್ಡು ಹಿಂದೂಗಳದ್ದು ಅದರೂ ಅದು ಜೈನರ ದೇವಸ್ಥಾನ. ಎಂಟು ನೂರು ವರ್ಷಗಳಿಂದ ಇದೆ ಆ ದೇವಸ್ಥಾನ. ಅದು ಅವರ ಖಾಸಗೀ ದೇವಸ್ಥಾನ. ಯಾರಿಗೂ ಅದನ್ನು ಎಳೆದು ಕೊಳ್ಳಲು ಬಿಡಲಿಲ್ಲ ಅವರು. ಹಾಗೆಂದು ಧರ್ಮಸ್ಥಳದ ದೇವಸ್ಥಾನ ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಷ್ಟೂ ದೇವಸ್ಥಾನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟರೂ ಅಲ್ಲಿ ಜೈನರ ಹೆಸರು ಬರುತ್ತದೆಯೇ ವಿನಃ ಮೃಗರಾಜನ ಹೆಸರು, ಅವನ ಟೀಮಿನ ಹೆಸರು ಬರಲ್ಲ. ಆದರೆ ಜೈನರಿಂದ ಅಷ್ಟೂ ದೇವಸ್ಥಾನಗಳನ್ನು ಎಳೆದು ಕೊಂಡಾಗಿದೆ. ಈಗ ಉಳಿದಿರುವುದು ಧರ್ಮಸ್ಥಳ ಮಾತ್ರ. ಅದನ್ನೂ ಎಳೆದು ಕೊಂಡು ಜೈನರನ್ನು ಓಡಿಸಿದರೆ ಮಾಳಿಗೆ ಹಾಕಬಹುದು ಎಂಬ ಲೆಕ್ಕಾಚಾರ. ಇನ್ನು  ದೇವಸ್ಥಾನದ ಡಬ್ಬಿಯಲ್ಲಿ ಇರುವ ದುಡ್ಡು ಗಡಂಗಿನಲ್ಲಿ ಕುಂತು ಟೈಟಾಗಲು,  ಕೋಳಿ ಕಟ್ಟಕ್ಕೆ ಸೇಲಂ ಕೋಳಿ ಪರ್ಚೇಸ್ ಮಾಡಲು, ಜುಗಾರಿ ಆಡಲು,   ಮಟ್ಕಾ ದಂಧೆಗೆ, ಕಂಬಳದಲ್ಲಿ ಜೂಜಾಡಲು, ಮರಳು ತೆಗೆದು ನದಿಗಳನ್ನು ಬರಿದು ಮಾಡಲು, ಅಲ್ಲಲ್ಲಿ ಬಾರ್ ರೆಸ್ಟೋರೆಂಟ್ ಓಪನ್ ಮಾಡಲು  ಸದುಪಯೋಗ ಆಗುತ್ತಿಲ್ಲ. ಬದಲಾಗಿ ದೇವಸ್ಥಾನಕ್ಕೆ ಮಂಜುನಾಥನ ದರ್ಶನಕ್ಕೆ ಬಂದ ಭಕ್ತರಿಗೆ ಅನ್ನದಾನ ಮಾಡಲು, ಸಾಮೂಹಿಕ ವಿವಾಹದ ಮೂಲಕ ಕನ್ಯಾದಾನ ಮಾಡಲು, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾ ದಾನ ಮಾಡಲು, ಆಸ್ಪತ್ರೆಗಳ ಮೂಲಕ ಆರೋಗ್ಯ ದಾನ ಮಾಡಲು, ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಧರ್ಮ ಸ್ಥಾಪನೆ ಮಾಡಲು ದುರುಪಯೋಗ ಆಗುತ್ತಿದೆ. ಅರ್ಥ ಮಾಡಿಕೊಂಡರೆ ಸಾಕು. ಧರ್ಮಸ್ಥಳ ದೇವಸ್ಥಾನ ಜೈನ ಹೆಗ್ಗಡೆ ಮನೆತನದ್ದು. ವೀರೇಂದ್ರ ಹೆಗ್ಗಡೆ ಅವರ ಅಪ್ಪಂದು, ಅಜ್ಜಂದು. ಆ ದೇವಸ್ಥಾನದ ಬಗ್ಗೆ ಮಾತಾಡಲು ನಮಗೆ ಹಕ್ಕಿಲ್ಲ. ಯಾಕೆಂದರೆ ನಮ್ಮ ಕುಟುಂಬವೇ  ಬೇರೆ, ಜಾತಿಯೇ ಬೇರೆ, ಧರ್ಮವೇ ಬೇರೆ. ಜೈನರು ಹಿಂದೂ ದೇವಸ್ಥಾನ ಕಟ್ಟಬಾರದು, ಆಡಳಿತ ನಡೆಸಬಾರದು ಎಂದು ಪ್ರಪಂಚದ ಯಾವುದಾದರೂ ಕಾನೂನು ಪುಸ್ತಕದಲ್ಲಿ ಬರೆದಿದ್ದರೆ ಅದನ್ನು ಎತ್ತಿ ತೋರಿಸಬಹುದಿತ್ತು. ಕೇವಲ ಮೃಗರಾಜ ಉಜಿರೆಯ ಸಂವಿಧಾನದಲ್ಲಿ ಇಂತಹ ಅಂಡಿಗುಂಡಿ ಕಾನೂನು ಬರಕ್ಕೊಂಡಿದ್ದರೆ ಅದಕ್ಕೆ ಜೈನರು ಜವಾಬ್ದಾರರಲ್ಲ. ದೇವಸ್ಥಾನದ ಡಬ್ಬಿಯ ದುಡ್ಡು ದುರುಪಯೋಗ ಆಗುತ್ತಿದೆ ಎಂದು ಮನವರಿಕೆ ಆದರೆ ಡಬ್ಬಿಗೆ ದುಡ್ಡು ಹಾಕಬೇಡಿ, ಗಡಂಗ್, ಕೋಳಿಕಟ್ಟ, ಜುಗಾರಿ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಸದುಪಯೋಗ ಪಡಿಸಿಕೊಳ್ಳಿ.
  ಈ ಒಂದು ಫೋನ್ ಸಂಭಾಷಣೆಯಲ್ಲಿ ಅಜಿಲ ಸೀಮೆಯ ಅರಸರ ಬಗ್ಗೆ ಉಲ್ಲೇಖವಿದೆ. ಅಜಿಲ ಸೀಮೆಯ ಅರಸು ಅಂದರೆ ನಾವು ನೀವು ಪೂಜಿಸುವ ಕಲ್ಕುಡ ದೈವಕ್ಕೆ ಆಶ್ರಯ ಕೊಟ್ಟವರು, ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದವರು, ಎಷ್ಟೋ ದೇವಸ್ಥಾನಗಳನ್ನು ಕಟ್ಟಿಸಿದವರು. ಅಜಿಲ ಸೀಮೆಯ ಅರಸರ ಹೆಸರು ಅಷ್ಟಮಂಗಲದಲ್ಲಿ ಬರುವ ಹೆಸರು. ಅಂತಹ ಅರಸರ ಹೆಸರನ್ನು ಕೂಡ ಬಾಯಿ ಹರಿದ ಹೋರಾಟಗಾರರು ಟಾರ್ಗೆಟ್ ಮಾಡುತ್ತಾರೆ ಮತ್ತು ಅವರನ್ನು ಬೆಳೆಯಲು ಬಿಡಬಾರದು ಎಂದು ಮೃಗರಾಜ ಹೇಳುತ್ತದೆ. ಹಾಗಾದರೆ ಅಜಿಲ ಅರಸರಿಗೆ ಪರ್ಯಾಯ ಯಾರು? ಕಲ್ಕುಡನ ಸಂಧಿಯಲ್ಲಿ ಕಲ್ಕುಡ ಯಾರನ್ನು ಉಲ್ಲೇಖ ಮಾಡಲಿ? ಕಲ್ಲುರ್ಟಿ ಯಾರ ಬಗ್ಗೆ ಹೇಳಲಿ? ಮೃಗರಾಜನ ಹೆಸರು ಸಂಧಿಯಲ್ಲಿ ಸೇರಿಸಲು ಆಗುತ್ತಾ? ಅಷ್ಟಕ್ಕೂ ಕೇವಲ ಜೈನ ಧರ್ಮೀಯರು ಎಂಬ ಏಕೈಕ ಕಾರಣಕ್ಕೆ ಅಜಿಲ ಅರಸರ  ಹೆಸರೂ ಇವರ ಹರಿದ ಬಾಯಲ್ಲಿ ಬರುತ್ತಿದೆ ಎಂದರೆ ಇವರ ಬಂಜಿಬೇನೆ ಎಷ್ಟು ಸೀರಿಯಸ್ಸಲ್ಲಿ ಇರಬಹುದು ಎಂದು ಊಹಿಸಲೂ ಕಷ್ಟ.


   ಇನ್ನು ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯಿರಿ ಎಂದು ಮೃಗರಾಜ ಆ ಆಡೀಯೋದಲ್ಲಿ ಕರೆ ಕೊಟ್ಟಿದೆ. ಇನ್ನೂ ಹಿಂದೂಗಳನ್ನು ಜೈನರು ಜೀತದಾಳು ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಮೃಗರಾಜ ಹೇಳಿದೆ. ಹಿಂದೂ ಧರ್ಮವನ್ನು ಸ್ವಂತ ಧರ್ಮದಂತೆಯೇ ಲಾಲನೆ ಪಾಲನೆ ಮಾಡಿ,ಪೋಷಿಸಿ ರಾಜಾಶ್ರಯ ನೀಡಿದ ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯುವ ಇದೇ ಮಂದಿ ತುಂಡು ಬಂಗುಡೆಗಾಗಿ ಮೀನು ವ್ಯಾಪಾರಿಯನ್ನು ಸಾಹುಕಾರ್ರೆ ಎಂದು ಕರೆಯುತ್ತಾರೆ, ದಕ್ಷಿಣೆಗೆ ಬರುವ ಹತ್ತು ವರ್ಷಗಳ ಹುಡುಗನ ಕಾಲಿಗೆ ಸಾಷ್ಟಾಂಗ ಬೀಳುತ್ತಾರೆ, ಗಡಂಗ್ ಮಾಲೀಕನನ್ನು ಧಣಿಗಳೇ ಎಂದು ಕರೆಯಲಾಗುತ್ತದೆ ಮತ್ತು ಭೂಗತ ಧಣಿಗಳ ಮುಂದೆ ನಿಂತು ಬಸ್ಕಿ ಹೊಡೆದು ಅಣ್ಣಾ ಅಂತ ಜೊಲ್ಲು ಸುರಿಸುತ್ತಾರೆ. ಜೀತ ಪದ್ಧತಿ ಸಮಾಜದಲ್ಲೇ ಇದೆ. ಜೀತ ನಮ್ಮ ದೇಶದ ಪೂರ್ವ ಕಟ್ ಸಂಪ್ರದಾಯ. ಅದರ ಆಚರಣೆ ಬೇರೆ ಬೇರೆ ಧರ್ಮಗಳಲ್ಲಿ, ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಇದರಲ್ಲಿ ಜೈನರದ್ದೇ ಮಾತ್ರ ಯಾಕೆ ಟಾರ್ಗೆಟ್ ಆಗುತ್ತಿದೆ ಅಂದರೆ ಜೈನರ ಸಂಖ್ಯೆ ಕಡಿಮೆ ಇದೆ, ಅವರಿಂದ ಏನೂ ಮಾಡಕ್ಕಾಗಲ್ಲ ಎಂಬ ವಿಕೃತ ಮನೋಭಾವ. ಮೃಗರಾಜನನ್ನು "ಅಣ್ಣಾ" ಎಂದು ಕರೆಯುವುದೂ ಜೀತ ಪದ್ಧತಿಯ ಒಂದು ಲಕ್ಷಣವೇ. ಅಣ್ಣಾನ ಮುಂದೆ ಸಮನಾಗಿ ಕೂರುವ ಹಾಗಿಲ್ಲ, ಕೈಕಟ್ಟಿ ನಿಂತು ಮಾತಾಡಬೇಕು, ಅಣ್ಣಾ ನಿಮ್ಮನ್ನು ವಾಪಾಸ್ ಅಣ್ಣಾ ಎಂದು ಕರೆಯಲ್ಲ, ಅಣ್ಣಾ ಅಂದಿದ್ದಕ್ಕೆಲ್ಲ ಅಹುದು ಅಹುದು ಅನ್ನಬೇಕು. ಇದು ಕೂಡ ಜೀತದ ಹೊರಮೈ ಲಕ್ಷಣಗಳೇ.ಭೂ ಸುಧಾರಣೆ ಕಾನೂನಿನ ಮೂಲಕ ಜೈನರ ಭೂಮಿ ತಿಂದು, ಅವರನ್ನು ಹೊಡೆದೊಡಿಸಿ, ಅವರ ಗುತ್ತು ಬೀಡುಗಳನ್ನು ವಶಪಡಿಸಿಕೊಂಡು, ಅವರು ಕಟ್ಟಿಸಿದ ದೇವಸ್ಥಾನಗಳ ಮೊಕ್ತೇಸರನ ಕುರ್ಚಿಯಲ್ಲಿ ಕುಂತು ದೇವಸ್ಥಾನದ ದುಡ್ಡಿನಲ್ಲಿ ಕಮಿಷನ್ ಹೊಡೆದು ಮಾಳಿಗೆ ಹಾಕಿದ ಮಂದಿ ಇವತ್ತು ಜೈನರು ದೇವಸ್ಥಾನಗಳ ಮೇಲೆ ಧಾಳಿ ಮಾಡಿದರು ಎಂದು ಸಮಾಜದ ಮಂಡೆ ತಿರುಗಿಸುತ್ತಿದ್ದಾರೆ ಮತ್ತು ಸಮಾಜ ಅದನ್ನು ನಂಬುತ್ತಿದೆ ಅಂದರೆ ಕಾಲ ಎಲ್ಲಿಗೆ ಬ್ರೇಕ್ ಫೈಲಾಗಿ ಹೋಗುತ್ತಿದೆ ಎಂದೇ ಅರ್ಥ ಆಗುತ್ತಿಲ್ಲ.



  ಆಯ್ತು ಜೈನರನ್ನು ಓಡಿಸಿ ಧರ್ಮ ಸ್ಥಾಪನೆ ಮಾಡಬೇಕು ಎಂಬುದು ಮೃಗರಾಜ ಮತ್ತು ಅದರ ಟೀಮಿನ ಆಶಯ. ಆಯ್ತು ಧರ್ಮ ಸ್ಥಾಪನೆ ಆಗಲಿ, ಆದರೆ ರೌಡಿ ಶೀಟರ್ ಗಳು ಸ್ಥಾಪಿಸುವ ಧರ್ಮ ಸ್ಥಾಪನೆ ಹೇಗಿರಬಹುದು? ಭೂಗತ ದೊರೆಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು, ಜುಗಾರಿ ಪ್ಲೇಯರ್ಸ್ ಧರ್ಮ ಸ್ಥಾಪನೆ ಮಾಡಿದರೆ ಧರ್ಮದ ಕತೆ ಏನಾಗಬಹುದು? ಅಜಿಲ ಸೀಮೆಯ ಅಜಿಲ ಅರಸರು, ಮೂಡುಬಿದಿರೆಯ ಚೌಟ ಅರಸರು, ಉಳ್ಳಾಲದ ರಾಣಿ ಅಬ್ಬಕ್ಕ, ಪುತ್ತೂರಿನ ಭಂಗ ಅರಸ, ಕಾರ್ಕಳದ ಭೈರವ ಅರಸ, ಸೂರಲಿನ ರಾಜ ಮನೆತನ, ಕೊಕ್ಕರ್ಣೆಯ ಅರಸು ಮನೆತನ, ಮೂಲ್ಕಿಯ ಸಾವಂತರು ಇವರೆಲ್ಲರು ಮಾಡಿದ ಧರ್ಮ ಸ್ಥಾಪನೆಗೆ ಇತೀಶ್ರೀ ಹೇಳಿ ಇವತ್ತು ರೌಡಿ ಶೀಟರ್ ಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು ಸ್ಥಾಪಿಸಲು ಹೊರಟಿರುವ ಧರ್ಮ ಸ್ಥಾಪನೆ ಹೇಗಿರಬಹುದು ಎಂಬ ಕುತೂಹಲ ಜೈನರಲ್ಲಿದೆ. ಇವರು ಮಾಡಲಿರುವ ಧರ್ಮ ಸ್ಥಾಪನೆಯಲ್ಲಿ ಎಲ್ಲರಿಗೂ ಚಿರಶಾಂತಿ ಸಿಗುವುದಿದ್ದರೆ ಅದಕ್ಕೆ ಜೈನರ ಅಭ್ಯಂತರವಿಲ್ಲ. ಆದರೆ ಜೈನರ ದೇವಸ್ಥಾನಗಳು, ಬಸದಿಗಳು, ಭೂಮಿ, ಅವರ ಗುತ್ತು ಬೀಡುಗಳನ್ನು ಧರ್ಮ ಸ್ಥಾಪನೆಗೆ ಹೊರಟಿರುವ ಠಪೋರಿಗಳಿಂದ ರಕ್ಷಿಸಿ ಕೊಳ್ಳಲು ಬದ್ಧರಾಗಿದ್ದಾರೆ. ಇನ್ನು ಜೈನರನ್ನು ಮುಂಡೆ ಮುಚ್ಚಿಸುತ್ತೇನೆ ಎಂದು ಮೃಗರಾಜ ಘರ್ಜಿಸಿದೆ. ಸೌಜನ್ಯ ಸಾವಿಗಿಂತ ಮುಂಚೆ ಮುಂಡೆ ಮುಚ್ಚಿ ಹೋಗಿದ್ದ ಮೃಗರಾಜ ಸೌಜನ್ಯ ಸಾವಿನ ನಂತರ ಕೇವಲ ಜೈನರ ಹೆಸರೇಳಿ ಹಾಕಿದ ಮಾಳಿಗೆ ಜಗತ್ತಿಗೇ ಕಾಣುತ್ತಿದೆ. ಮುಂಡೆ ಮುಚ್ಚಿಸಲು ಬಂದವರ ಮಂಡೆ ಬಿಚ್ಚಿಸುವುದು ಹೇಗೆ ಅಂತ ಜೈನರಿಗೂ ಗೊತ್ತಿದೆ. ಗುಡ್ ಬಾಲಿಗಾಗಿ ಕಾಯುತ್ತಿದ್ದಾರೆ ಅಷ್ಟೇ.
  ಸೌಜನ್ಯ ಹೋರಾಟ ದಾರಿ ತಪ್ಪಿದೆ. ಬ್ರೇಕ್ ಫೇಲಾಗಿ ಹೋಗಿ ಜೈನರಿಗೆ ಢಿಕ್ಕಿ ಹೊಡೆದಾಗಿದೆ. ಹೋರಾಟ ಸಮಿತಿ ಅನೇಕ ಬಣಗಳಾಗಿ ಜೈನರ ವಿರುದ್ಧ ಯುದ್ಧ ಸಾರಿದೆ. ಸೌಜನ್ಯ ಹೋರಾಟ ಸಮಿತಿ ಈಗ ಜೈನ ವಿರೋಧಿ ಹೋರಾಟ ಸಮಿತಿ ಆಗಿದೆ. ಧರ್ಮಸ್ಥಳ ದೇವಸ್ಥಾನ ವಿಮೋಚನಾ ಸಮಿತಿ, ಧರ್ಮಸ್ಥಳ ಸಂಘದ ದುಡ್ಡು ಹಿಡಿಸುವವರ ಸಮಿತಿ, ಧರ್ಮಸ್ಥಳ ದೇವಸ್ಥಾನ ಡಬ್ಬಿ ಸಮಿತಿ, ಧರ್ಮಸ್ಥಳ ಅಪಪ್ರಚಾರ ಸಮಿತಿ, ಜೈನರನ್ನು ಮುಂಡೆ ಮುಚ್ಚಿಸುವ ಸಮಿತಿ, ಧರ್ಮಸ್ಥಳಕ್ಕೆ ನುಗ್ಗುವ ಸಮಿತಿ ಹೀಗೆ ಇನ್ನೂ ಅನೇಕ ಬಣಗಳಾಗಿ ನಿರಂತರವಾಗಿ ಹೋರಾಟದಲ್ಲಿ ಸಕ್ರೀಯರಾಗಿದ್ದಾರೆ. ಏನು ಹೋರಾಟ, ಏನು ಹಾರಾಟ, ಏನು ಅರಚಾಟ, ಅಪಗಪಗ ಘರ್ಜನೆ ಎಲ್ಲವೂ ಅಲ್ಪಸಂಖ್ಯಾತ ಜೈನರ ವಿರುದ್ಧ. ಇವರ ಹೋರಾಟ ಬಂಗುಡೆ ತರುವ ಸಾಹುಕಾರ್ರ ವಿರುದ್ಧ ಇಲ್ಲ. ಯಾಕೆಂದರೆ ನಡಿಯಲ್ಲ. ಮತಾಂತರ ಮಾಡುವ ಅಲ್ಪಸಂಖ್ಯಾತರ ವಿರುದ್ಧ ಇಲ್ಲ. ಯಾಕೆಂದರೆ ಅದೂ ನಡಿಯಲ್ಲ. ಹೋರಾಟ ಏನಿದ್ದರೂ ಜೈನರ ವಿರುದ್ಧ. ಈಗಾಗಲೇ ಅವರನ್ನು ಓಡಿಸಿ ಅವರ ಗುತ್ತು ಬೀಡುಗಳಲ್ಲಿ ಸ್ಥಾಪನೆ ಆಗಿ ಆಗಿದೆ, ಭೂಸುಧಾರಣೆ ಮೂಲಕ ಅವರ ಭೂಮಿಯನ್ನೂ ತಿಂದಾಯಿತು, ಅವರು ಕಟ್ಟಿಸಿದ ದೇವಸ್ಥಾನಗಳಿಂದಲೂ ಅವರನ್ನು ಹೊರಗಿಟ್ಟಾಯಿತು, ಇನ್ನು ಧರ್ಮಸ್ಥಳ ಒಂದು ಸಿಕ್ಕರೆ ಏಳೇಳು ಜನ್ಮ ಕುಂತು ತಿನ್ನ ಬಹುದು ಎಂಬ ಹಗಲುಗನಸು. ಪರಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ, ಹಿಂದೂ ಧರ್ಮ ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಬಲವಾಗಿ ಕೈಜೋಡಿಸಿದ, ಅಲ್ಪಸಂಖ್ಯಾತರಾಗಿರುವ ನಮ್ಮ ಮೇಲೆ ಈ ರೀತಿಯ ಧಾಳಿ ಭಾರತ ದೇಶದಲ್ಲಿ ಆಗಬಹುದು ಎಂದು ಜೈನರಿಗೆ ಗೊತ್ತೇ ಇರಲಿಲ್ಲ. ಈಗ ಗೊತ್ತಾಗಿದೆ. ಆದರೆ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರುಗೆ ಈ ವಿಷಯ 1947 ರಲ್ಲಿಯೇ ಗೊತ್ತಿತ್ತು. ಅದಕ್ಕೆ ಅವರು ಈ ದೇಶ ಜಾತ್ಯಾತೀತ ಆಗಿರಲಿ ಎಂದು ನಿರ್ಧಾರ ಮಾಡಿದ್ದು. ಆಯ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನು ಮುಂದೆ ಜೈನರು ನಿಮಗೆ ಸಿಗಲ್ಲ. ಈ ಒಂದು ತಲೆಮಾರು, ತಪ್ಪಿದರೆ ಇನ್ನೊಂದು ತಲೆಮಾರು ಅಷ್ಟೇ. ಅವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಅವರ ಮಕ್ಕಳೆಲ್ಲ ಸೇಫಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಮತ್ತು ಅಲ್ಲೇ ಸೆಟಲ್ ಆಗುತ್ತಿದ್ದಾರೆ. ಇಲ್ಲಿ ಜೈನರೇ ಇಲ್ಲದಿದ್ದರೆ ಮೃಗರಾಜನ ಟೀಮಿಗೆ ಖುಷಿ ಅಲ್ವಾ. ಸಾಹುಕಾರ್ರ ಜೊತೆ ಹಾಯಾಗಿರಬಹುದು.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget