ಹಾಗೆಂದು ಸುಬ್ರಹ್ಮಣ್ಯ ಎಂಬ ಊರಿನಲ್ಲಿ ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಹೋಗೋದು ಇಂದು ನಿನ್ನೆಯ ಕತೆಯಲ್ಲ. ದೇವರ ಪೂಜೆಗೆ ಇಪ್ಪತ್ತೈದು ಪರ್ಸೆಂಟ್ ಹೋದರೆ ಎಪ್ಪತ್ತೈದು ಹೊರಗೆ ಜುಲಾಬು ಹೋದ ಹಾಗೆ ಹೋಗುತ್ತದೆ. ದೇವಸ್ಥಾನವನ್ನು ಬಿಸಿನೆಸ್ ಸೆಂಟರ್ ಮಾಡಿಕೊಂಡಿರುವ ಜನಗಳಿಂದ ಬೇರೆನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಹಾಗೆಂದು ಯಾವುದೇ ಸಾಮಾಗ್ರಿಗಳು ಸರಿಯಾಗಿ ದೇವರಿಗೆ ಮುಟ್ಟುತ್ತಿಲ್ಲ. ಮಹಾಭೀಷೇಕ ಅಂತ ತೆಂಗಿನ ಕಾಯಿ ಡ್ರಾ ಆಗುತ್ತದೆ, ದೇವರವರೆಗೆ ಸ್ವಲ್ಪವೇ ಹೋಗುತ್ತದೆ ಮತ್ತು ಉಳಿದಿದ್ದು ಹೊರಗೆ ಬರುತ್ತದೆ. ಚಾಲ್ತಿ ಉಗ್ರಾಣದಿಂದ ಐದು ಕೆಜಿ ತುಪ್ಪ ಡ್ರಾ ಆದರೆ ದೇವರಿಗೆ ಒಂದೂವರೆ ಕೆಜಿ ಮಾತ್ರ. ಉಳಿದಿದ್ದು ಹೊರಗೆ. ನಿನ್ನೆಯಲ್ಲ ಮೊನ್ನೆ ಕೂಡ ಕಾರ್ಕಳ ಅಸ್ರಣ್ಣರಿಗೆ ಸೇರಿದ ಮೂರು ಗೋಣಿ ತೆಂಗಿನ ಕಾಯಿ ಹೊರಗೆ ಹೋಗಿದೆ. ಇದು ಹೀಗೆ ಹೋಗುತ್ತಾ ಇದ್ದರೆ ಕತೆ ಏನಾಗ ಬಹುದು ಎಂಬುದು ಭಕ್ತಾದಿಗಳ ಪ್ರಶ್ನೆ. ಆಡಳಿತ ಮಂಡಳಿ ಮೀಟಿಂಗುಗಳಲ್ಲಿ ಕುಂತು ಪತ್ರಿಕೆ ಸಂಪಾದಕರುಗಳಿಗೆ ತಾರಮಾರ ಬೈಯ್ಯುವುದು ಬಿಟ್ಟು ಇನ್ನಾದರೂ ಈ ಲೀಕೆಜ್ ಗಳನ್ನ ಬಂದ್ ಮಾಡಿದರೆ ದೇವರಿಗೆ ಒಳ್ಳೆದು. ಅದು ಸರಿ, ದೇವಸ್ಥಾನದ ಪ್ರಧಾನ ಅರ್ಚಕ ಸೀಟು ಖಾಲಿ ಇದೆಯಾ? ಯಾವಾಗ ಭರ್ತಿ?
LATEST
ಬೆಳ್ಳಾರೆಯಲ್ಲಿ ಬಪ್ಪಿ ಲಹರಿಗೆ ಎರಡು ಮದುವೆ, ಮೂರು ಲವ್ವು!ಅಭಿವೃದ್ಧಿಯ ಹರಿಕಾರನ ಯಶೋಗಾಥೆಮುಚ್ಚಿಲದಲ್ಲಿ ತಲಾಕ್….ಕಾನತ್ತ್… …ಕಾನತ್… ತಲಾಕ್!ಅಲೆಕ್ಕಾಡಿ ಮಿಲ್ಕ್ ಸೊಸೈಟಿಯಲ್ಲಿ 26 ಲಕ್ಷ ಅಂಚಿಂಚಿ?ಪುತ್ತೂರು: ಕಾಫಿ ಕಳ್ಳರು ಅಂದರ್?ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರು ದಫ್ ಪ್ರದರ್ಶನಪುತ್ತೂರು: ಮಾಜೀ CRP ಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳಪುತ್ತೂರು: ಮಾಜೀ CRP ಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ.ರಂಗಸ್ಥಳಕ್ಕೆ ಬಂದ ಕುಕ್ಕೆ ಸುಬ್ರಹ್ಮಣ್ಯ!ಚೆಂಬು: ಅಣ್ಣನಿಂದ ಗನ್ನು ಹೋಯ್ತು, ತಮ್ಮನಿಂದ ಮೊರಂಪು ಹೋಯ್ತು!
ಸುಬ್ರಹ್ಮಣ್ಯ : ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಮಾರಾಟ?
Pattler News
Bureau Report





