ಹಾಗೆಂದು ಸುಬ್ರಹ್ಮಣ್ಯ ಎಂಬ ಊರಿನಲ್ಲಿ ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಹೋಗೋದು ಇಂದು ನಿನ್ನೆಯ ಕತೆಯಲ್ಲ. ದೇವರ ಪೂಜೆಗೆ ಇಪ್ಪತ್ತೈದು ಪರ್ಸೆಂಟ್ ಹೋದರೆ ಎಪ್ಪತ್ತೈದು ಹೊರಗೆ ಜುಲಾಬು ಹೋದ ಹಾಗೆ ಹೋಗುತ್ತದೆ. ದೇವಸ್ಥಾನವನ್ನು ಬಿಸಿನೆಸ್ ಸೆಂಟರ್ ಮಾಡಿಕೊಂಡಿರುವ ಜನಗಳಿಂದ ಬೇರೆನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಹಾಗೆಂದು ಯಾವುದೇ ಸಾಮಾಗ್ರಿಗಳು ಸರಿಯಾಗಿ ದೇವರಿಗೆ ಮುಟ್ಟುತ್ತಿಲ್ಲ. ಮಹಾಭೀಷೇಕ ಅಂತ ತೆಂಗಿನ ಕಾಯಿ ಡ್ರಾ ಆಗುತ್ತದೆ, ದೇವರವರೆಗೆ ಸ್ವಲ್ಪವೇ ಹೋಗುತ್ತದೆ ಮತ್ತು ಉಳಿದಿದ್ದು ಹೊರಗೆ ಬರುತ್ತದೆ. ಚಾಲ್ತಿ ಉಗ್ರಾಣದಿಂದ ಐದು ಕೆಜಿ ತುಪ್ಪ ಡ್ರಾ ಆದರೆ ದೇವರಿಗೆ ಒಂದೂವರೆ ಕೆಜಿ ಮಾತ್ರ. ಉಳಿದಿದ್ದು ಹೊರಗೆ. ನಿನ್ನೆಯಲ್ಲ ಮೊನ್ನೆ ಕೂಡ ಕಾರ್ಕಳ ಅಸ್ರಣ್ಣರಿಗೆ ಸೇರಿದ ಮೂರು ಗೋಣಿ ತೆಂಗಿನ ಕಾಯಿ ಹೊರಗೆ ಹೋಗಿದೆ. ಇದು ಹೀಗೆ ಹೋಗುತ್ತಾ ಇದ್ದರೆ ಕತೆ ಏನಾಗ ಬಹುದು ಎಂಬುದು ಭಕ್ತಾದಿಗಳ ಪ್ರಶ್ನೆ. ಆಡಳಿತ ಮಂಡಳಿ ಮೀಟಿಂಗುಗಳಲ್ಲಿ ಕುಂತು ಪತ್ರಿಕೆ ಸಂಪಾದಕರುಗಳಿಗೆ ತಾರಮಾರ ಬೈಯ್ಯುವುದು ಬಿಟ್ಟು ಇನ್ನಾದರೂ ಈ ಲೀಕೆಜ್ ಗಳನ್ನ ಬಂದ್ ಮಾಡಿದರೆ ದೇವರಿಗೆ ಒಳ್ಳೆದು. ಅದು ಸರಿ, ದೇವಸ್ಥಾನದ ಪ್ರಧಾನ ಅರ್ಚಕ ಸೀಟು ಖಾಲಿ ಇದೆಯಾ? ಯಾವಾಗ ಭರ್ತಿ?
LATEST
ಸಂಪಾಜೆ ಮೀನು ಮಾರುಕಟ್ಟೆಯಲ್ಲಿ ಗುಜಿರಿ ಅಂಗಡಿಪಂಜ ಅಮೃತ ಮಹೋತ್ಸವದ ದುಡ್ಡು ಕೊಳೆಯುತ್ತಿದೆ!ಬೆಳ್ತಂಗಡಿಯಲ್ಲಿ ಪಂಚಾಯತ್ ರಾಜ್ ಮತ್ತು ಪೌರಾಡಳಿತ ಇಲಾಖೆ ಮರ್ಜ್?ಬೆಳ್ತಂಗಡಿ ಟೋಕನ್ ಸಿಸ್ಟಂಗೆ ಮೋಕ್ಷ ಕೊಡಿಬೆಳ್ಳಾರೆಯಲ್ಲಿ fake ಆನ್ ಲೈನ್ ಟ್ರೇಡಿಂಗ್! ಫೈನಾನ್ಸ್ ಗಳಿಗೆ ಹರಿದು ಬಂದ ಐದು ಕೆಜಿ ಬಂಗಾರ!WANTED ಮೊಟ್ಟೆ?ಪುತ್ತೂರು: ಭಟ್ರು ವರ್ಸಸ್ ಅಂಡಿಗುಂಡಿ ಭಟ್ರುಎಡಮಂಗಲ ಸರ್ಕಾರಿ ಕಾರ್ಯಕ್ರಮದಲ್ಲಿ ತಾಮರೆ ಚಿಹ್ನೆ!ಸುಳ್ಯ, ಪುತ್ತೂರು, ಬೆಳ್ತಂಗಡಿ ಬಾರ್ ಗಳಲ್ಲಿ ಕುರಿ ಮಾಲು!
ಸುಬ್ರಹ್ಮಣ್ಯ : ದೇವಸ್ಥಾನದಿಂದ ಪೂಜೆ ಸಾಮಗ್ರಿಗಳು ಹೊರಗೆ ಮಾರಾಟ?
Pattler News
Bureau Report
