
ಸುಬ್ರಹ್ಮಣ್ಯದಲ್ಲಿ ಪ್ರಾಬ್ಲಂಗಳು ಕಿನ್ನಿ ಇಡುತ್ತಾ ಹೋಗುತ್ತಿದ್ದು ಇದೀಗ ಅಪಘಾತಗಳ ಪ್ರಸಾದ ವಿತರಣೆ ಆಗುವ ಅಪಾಯಗಳಿವೆ. ಅಲ್ಲಿ ಸುಬ್ರಹ್ಮಣ್ಯ ಪೇಟೆಯ ಬಿಲದ್ದಾರದ ಜಂಕ್ಷನ್ ಬಳಿ ಕಳೆದ ಆರು ತಿಂಗಳ ಹಿಂದೆಯೇ ಪೊಯ್ಯೆ ಬಂದು ಮಾರ್ಗಕ್ಕೆ ಬಿದ್ದಿತ್ತು. ನಮ್ಮ ಮಾಹಿತಿದಾರ ಈ ಸಮಸ್ಯೆ ಬಗ್ಗೆ ಫೋಟೋ ತೆಗೆದು ಸಂಬಂಧ ಪಟ್ಟ ಕುರುಡರಿಗೆ ಮತ್ತು ಪೊಟ್ಟರಿಗೆ ತಿಳಿಯುವಂತೆ ವರದಿ ಮಾಡಿ ಅಂದಿದ್ದ. ಸಿಲ್ಲಿ ನ್ಯೂಸ್ ಅಂತ ನಾನೂ ಬದಿಗೆ ಇಟ್ಟಿದ್ದೆ. ಇವತ್ತು ಬೆಳಿಗ್ಗೆ ಅದೇ ಸ್ಪಾಟಲ್ಲಿ ಒಂದು ಅಪಘಾತ ನಡೆದಿದೆ. ಆ ಸ್ಪಾಟಿಗೆ ಅಪ್ಪ ಯಾರಾದರೂ ಇದ್ದರೆ ಈ ಕೂಡಲೇ ಮಾರ್ಗಕ್ಕೆ ಬಿದ್ದ ಪೊಯ್ಯೆ ತೆಗೆಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲದಿದ್ದರೆ ಇನ್ನೂ ಇನ್ನೂ ಇಲ್ಲಿ ಅಪಘಾತಗಳು ನಡೆಯುವ ಅಪಾಯಗಳಿವೆ.
Post Views: 2,269