ಅಲ್ಲಿ ಸುಬ್ರಹ್ಮಣ್ಯ – ಮಂಜೇಶ್ವರ ಸ್ಟೇಟ್ ಹೈವೇಯಿಂದ ಅಲೆಕ್ಕಾಡಿಯಲ್ಲಿ ಲೆಫ್ಟ್ ಗೆ ತಗೊಂಡ್ರೆ ಎಡಮಂಗಲ – ಕಡಬಕ್ಕೆ ಹೋಗಲು ಒಂದು ತೋಡು ಇದೆ. ಈ ತೋಡನ್ನು ಎಡಮಂಗಲದಿಂದ ಕಡಬ ತನಕ ರೋಡ್ ಮಾಡಿದ್ದು, ಉಳಿದ ಎಡಮಂಗಲ ಟೂ ಅಲೆಕ್ಕಾಡಿ ತನಕದ ತೋಡು ತೋಡಾಗಿಯೇ ಉಳಿದಿದೆ. ಈ ತೋಡಿನಲ್ಲೇ ದಿನಾ ಸಾವಿರಾರು ಜನ ಎಡಮಂಗಲದಿಂದ ತಾಲೂಕಿನ ವಿವಿಧ ಭಾಗಗಳಿಗೆ ಕೆಲಸಕ್ಕೆ, ವಿದ್ಯಾಭ್ಯಾಸಕ್ಕೆ, ಕೋರ್ಟ್ ಕಚೇರಿಗಳಿಗೆ, ಮದ್ದಿಗೆ, ಮದುವೆಗೆ, ಕೋಳಿ ಕಟ್ಟಕ್ಕೆ, ಬಲಿಮ್ಮೆಗೆ, ಹುಡುಗಿ ನೋಡಲು ಹೋಗುತ್ತಿದ್ದಾರೆ. ಈ ತೋಡಿನಲ್ಲಿ ಹೋದವರ ಸೊಂಟ ಮಾತ್ರ ಸೋಬಾನೆ ಗ್ಯಾರೆಂಟಿ.
ಹಾಗೆಂದು ಈ ಕುಷ್ಠರೋಗಿ ರಸ್ತೆಯ ಕುಟುಂಬಿಕರು ಯಾರು, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅವರೆಲ್ಲ ಜೀವಂತ ಇದ್ದಿದ್ದರೆ ಒಮ್ಮೆಯಾದರೂ ಈ ರೋಡ್ ಕಡೆ ತಿರುಗಿ ನೋಡುತ್ತಿದ್ದರು, ರೋಡಿನ ಆರೋಗ್ಯ ವಿಚಾರಿಸುತ್ತಿದ್ದರು. ಇಲ್ಲ ಅವರು ಬರೋದೇ ಇಲ್ಲ. ಹಾಗಾಗಿ ಈ ರೋಡು ತೋಡಾಗಿದೆ. ಅದರಲ್ಲೂ ಎಡಮಂಗಲದಂತಹ ಗ್ರಾಮೀಣ ಪ್ರದೇಶದಲ್ಲಿ ಏನಾದರೂ ಅವಗಢಗಳಾದರೆ, ಅರ್ಜೆಂಟಿಗೆ ಈ ರೋಡಲ್ಲಿ ಬಂದರೆ ಲೀಟರ್ ಗಟ್ಟಲೆ ಅಮೃತ್ ನೋನಿ ಕುಡಿಯುವ ಪರಿಸ್ಥಿತಿ ಇದೆ. ಎರಡು ಚಕ್ರದ್ದು, ನಾಲ್ಕು ಚಕ್ರದ್ದು ಈ ರಸ್ತೆಯಲ್ಲಿ ಬೆಲ್ಲಿ ಡಾನ್ಸ್ ಮಾಡುತ್ತಾ ಹೋದರೆ ಆರು ಚಕ್ರದ್ದು ಪೆರ್ಮರಿ ಹೋದ ಹಾಗೆ ಹೋಗುತ್ತದೆ. ಒಮ್ಮೆ ಈ ರೋಡಲ್ಲಿ ಹೋದವನಿಗೆ ನರಕ ಅಂದರೆ ಏನು ಅಂತ ಅಲೆಕ್ಕಾಡಿಯಲ್ಲೇ ಅರಿವಾಗುತ್ತದೆ. ಅದರಲ್ಲೂ ಮಹಾಕಾಳಿ ಬಸ್ ನಿಲ್ದಾಣ, ಸುಲತಂಡ್ಕ ಪೇರ್ ಸೊಸೈಟಿ, ಕರಿಂಬಿಲ ಕ್ರಾಸ್, ನರ್ಲಡ್ಕ ಕ್ರಾಸ್, ಕೇರ್ಪಡ ದೇವಸ್ಥಾನ ಮುಂತಾದ ಕಡೆಗಳಲ್ಲಿ ರಸ್ತೆಯ ಆರೋಗ್ಯ ಭಾರೀ ಕೆಟ್ಟಿದೆ. ಆದ್ದರಿಂದ ಈ ರಸ್ತೆಯನ್ನು ಸಂಬಂಧ ಪಟ್ಟವರು ಈ ಕೂಡಲೇ ಐಸಿಯೂಗೆ ಹಾಕಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ಇನ್ನು ಒಂದು ಬರ್ಸ ಬಂದರೆ ರೋಡು ಬಿಡಿ ತೋಡು ಕೂಡ ಸಿಗಲ್ಲ.

