ಸುಳ್ಯ ಪುತ್ತೂರು ಪೋಲಿಸ್ ಸರಹದ್ದನ್ನು ಒಳಗೊಂಡಂತೆ ಇರುವ ಪುತ್ತೂರು ಪೋಲಿಸ್ ಉಪ ವಿಭಾಗಕ್ಕೆ ಹೊಸ ಪೋಲಿಸ್ ಉಪ ವರಿಷ್ಠಾಧಿಕಾರಿಯ ನೇಮಕ ಆಗಿದೆ. ಹೆಸರು ಪ್ರಮೋದ್ ಕುಮಾರ್. ನಮ್ಮವರೇ, ಕಡಬದವರು ಮತ್ತು ಸವಣೂರಿಗೂ ಸಂಬಂಧ ಪಟ್ಟವರು.
ಹಾಗೆಂದು ಮೊದಲು ಪುತ್ತೂರು ಉಪ ವಿಭಾಗ ಅಂದರೆ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳು ಬರುತ್ತಿತ್ತು. ಆಮೇಲೆ ರಾಜಕಾರಣಿಗಳು ತಮ್ಮ ತಮ್ಮ ಅನುಕೂಲತೆಗಾಗಿ ಅದನ್ನೆಲ್ಲ ಕಟ್ ಕಟ್ ಮಾಡಿ ಇದೀಗ ಪುತ್ತೂರು ಉಪ ವಿಭಾಗದಲ್ಲಿ ಸುಳ್ಯ ಮಾತ್ರ ನೇಲಿಕೊಂಡಿದೆ. ಹಾಗೆಂದು ಪುತ್ತೂರು ಉಪ ವಿಭಾಗ ದೊಡ್ಡ ದೊಡ್ಡ ಐಪಿಎಸ್ ಗಳನ್ನು ನೋಡಿದೆ. ರಾಜ್ಯದ ಪೋಲಿಸ್ ಭೂಪಟದಲ್ಲಿ ದೊಡ್ಡ ದೊಡ್ಡ ಟೋಪಿಯ ಹೆಚ್ಚಿನ ಐಪಿಎಸ್ ಗಳೆಲ್ಲ ಪುತ್ತೂರು ಮೂಲಕವೇ ಹಾದು ಹೋದವರು. ಇದೀಗ ಅರುಣ್ ನಾಗೇಗೌಡರ ನಂತರ ಪುತ್ತೂರು ಉಪ ವಿಭಾಗಕ್ಕೆ ಪ್ರಮೋದ್ ಬಂದಿದ್ದಾರೆ.
ಹಾಗೆಂದು ಪ್ರಮೋದ್ ಕುಮಾರ್ ಕಡಬ ಸಮೀಪದ ಬೆದ್ರಾಜೆಯವರು. ಬೆದ್ರಾಜೆ ಪ್ರಮೋದರ ತಾಯಿ ಮನೆ ಆಗಿದ್ದರೆ ಇತ್ತ ಸವಣೂರು ಸಮೀಪದ ಬಂಬಿಲ ಗುತ್ತು ಪ್ರಮೋದ್ ಕುಮಾರ್ ತಂದೆಯವರ ಮನೆ. ನಂಜನ ಗೂಡು, ಸಕಲೇಶಪುರ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿರುವ ಪ್ರಮೋದ್ ಮುಖ್ಯಮಂತ್ರಿಗಳ ಚಿನ್ನದ ಪದಕ ವಿನ್ನರ್. ಮೇಲ್ನೋಟಕ್ಕೆ ಪ್ರಮೋದ್ ಡೀಸೆಂಟ್ ಪೋಲಿಸ್ ಆಗಿದ್ದು ಕಾನೂನು ಸುವ್ಯವಸ್ಥೆಯಲ್ಲಿ ಕಟ್ಟುನಿಟ್ಟು ಎಂದು ತಿಳಿದುಬಂದಿದೆ. ಪುತ್ತೂರು ಉಪ ವಿಭಾಗದ ತುಂಬಾ ವಿವಿಧ ಸೈಜಿನ ಕಳ್ಳಕಾಕರ ಜಾತ್ರೆಯೇ ಇದ್ದು ಪ್ರಮೋದ್ ಇವರನ್ನೆಲ್ಲ ಹೇಗೆ ಮಡಚಿ ಬೆಂಡ್ ತೆಗೆಯುತ್ತಾರೆ ಎಂದು ಕಾದು ನೋಡ ಬೇಕಾಗಿದೆ.
LATEST
ಮೂಜೂರಿನ ರಣ ಬೇಟೆಗಾರ ಕೊಲ್ಲೂರಿನಲ್ಲಿ ಪತ್ತೆ?ಸುಳ್ಯ: ಯಮನ ಮನೆ ದಾರಿಯಲ್ಲಿ!ಶಿರಾಡಿ PDO ಗೆ ಡಬ್ಬಲ್ ಸೈನ್?ಕಡಬ ಮೀನು ಮಾರುಕಟ್ಟೆಗೆ ಕುರ್ದಿ ನೀರು ಸಿಂಪಡಣೆ?ಸುಬ್ರಹ್ಮಣ್ಯ ಸರ್ಪ ಸಂಸ್ಕಾರದಲ್ಲಿ 79 ನಂಬರ್ !ಪುತ್ತೂರಿನಲ್ಲಿ ನಾಗಸಾಧುವಿನಿಂದ ಉಂಗುರ ಲಪಟಾಯಿಸ್?ಕೊಲ್ಲಮೊಗ್ರದಲ್ಲಿ ಬಾಲ್ಕತ್ತಿ ಬಾಲಣ್ಣೆ!ಎಲ್ಲಿದ್ದರೂ ಮನೆಗೆ ಬಾಕಲ್ಮಕಾರಿನಲ್ಲಿ ಗಾಂಜಾ ಘಾಟು! ಆರು ಜನ ಬಂಧಿಖಾನೆಗೆ?ಕನಕ ಮಜಲಿನಲ್ಲಿ ಅವಧಿ ಮೀರಿದ (Expired) ಔಷಧಿ ನೀಡಿದ ಕ್ಲಿನಿಕ್! ರೋಗಿ ಅಸ್ವಸ್ಥೆ !
ಪುತ್ತೂರಿಗೆ ಪೊಸ DYSP
Pattler News
Bureau Report