ಸುಳ್ಯ ಪುತ್ತೂರು ಪೋಲಿಸ್ ಸರಹದ್ದನ್ನು ಒಳಗೊಂಡಂತೆ ಇರುವ ಪುತ್ತೂರು ಪೋಲಿಸ್ ಉಪ ವಿಭಾಗಕ್ಕೆ ಹೊಸ ಪೋಲಿಸ್ ಉಪ ವರಿಷ್ಠಾಧಿಕಾರಿಯ ನೇಮಕ ಆಗಿದೆ. ಹೆಸರು ಪ್ರಮೋದ್ ಕುಮಾರ್. ನಮ್ಮವರೇ, ಕಡಬದವರು ಮತ್ತು ಸವಣೂರಿಗೂ ಸಂಬಂಧ ಪಟ್ಟವರು.
ಹಾಗೆಂದು ಮೊದಲು ಪುತ್ತೂರು ಉಪ ವಿಭಾಗ ಅಂದರೆ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳು ಬರುತ್ತಿತ್ತು. ಆಮೇಲೆ ರಾಜಕಾರಣಿಗಳು ತಮ್ಮ ತಮ್ಮ ಅನುಕೂಲತೆಗಾಗಿ ಅದನ್ನೆಲ್ಲ ಕಟ್ ಕಟ್ ಮಾಡಿ ಇದೀಗ ಪುತ್ತೂರು ಉಪ ವಿಭಾಗದಲ್ಲಿ ಸುಳ್ಯ ಮಾತ್ರ ನೇಲಿಕೊಂಡಿದೆ. ಹಾಗೆಂದು ಪುತ್ತೂರು ಉಪ ವಿಭಾಗ ದೊಡ್ಡ ದೊಡ್ಡ ಐಪಿಎಸ್ ಗಳನ್ನು ನೋಡಿದೆ. ರಾಜ್ಯದ ಪೋಲಿಸ್ ಭೂಪಟದಲ್ಲಿ ದೊಡ್ಡ ದೊಡ್ಡ ಟೋಪಿಯ ಹೆಚ್ಚಿನ ಐಪಿಎಸ್ ಗಳೆಲ್ಲ ಪುತ್ತೂರು ಮೂಲಕವೇ ಹಾದು ಹೋದವರು. ಇದೀಗ ಅರುಣ್ ನಾಗೇಗೌಡರ ನಂತರ ಪುತ್ತೂರು ಉಪ ವಿಭಾಗಕ್ಕೆ ಪ್ರಮೋದ್ ಬಂದಿದ್ದಾರೆ.
ಹಾಗೆಂದು ಪ್ರಮೋದ್ ಕುಮಾರ್ ಕಡಬ ಸಮೀಪದ ಬೆದ್ರಾಜೆಯವರು. ಬೆದ್ರಾಜೆ ಪ್ರಮೋದರ ತಾಯಿ ಮನೆ ಆಗಿದ್ದರೆ ಇತ್ತ ಸವಣೂರು ಸಮೀಪದ ಬಂಬಿಲ ಗುತ್ತು ಪ್ರಮೋದ್ ಕುಮಾರ್ ತಂದೆಯವರ ಮನೆ. ನಂಜನ ಗೂಡು, ಸಕಲೇಶಪುರ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿರುವ ಪ್ರಮೋದ್ ಮುಖ್ಯಮಂತ್ರಿಗಳ ಚಿನ್ನದ ಪದಕ ವಿನ್ನರ್. ಮೇಲ್ನೋಟಕ್ಕೆ ಪ್ರಮೋದ್ ಡೀಸೆಂಟ್ ಪೋಲಿಸ್ ಆಗಿದ್ದು ಕಾನೂನು ಸುವ್ಯವಸ್ಥೆಯಲ್ಲಿ ಕಟ್ಟುನಿಟ್ಟು ಎಂದು ತಿಳಿದುಬಂದಿದೆ. ಪುತ್ತೂರು ಉಪ ವಿಭಾಗದ ತುಂಬಾ ವಿವಿಧ ಸೈಜಿನ ಕಳ್ಳಕಾಕರ ಜಾತ್ರೆಯೇ ಇದ್ದು ಪ್ರಮೋದ್ ಇವರನ್ನೆಲ್ಲ ಹೇಗೆ ಮಡಚಿ ಬೆಂಡ್ ತೆಗೆಯುತ್ತಾರೆ ಎಂದು ಕಾದು ನೋಡ ಬೇಕಾಗಿದೆ.
LATEST
ಸಂಪಾಜೆ ಮೀನು ಮಾರುಕಟ್ಟೆಯಲ್ಲಿ ಗುಜಿರಿ ಅಂಗಡಿಪಂಜ ಅಮೃತ ಮಹೋತ್ಸವದ ದುಡ್ಡು ಕೊಳೆಯುತ್ತಿದೆ!ಬೆಳ್ತಂಗಡಿಯಲ್ಲಿ ಪಂಚಾಯತ್ ರಾಜ್ ಮತ್ತು ಪೌರಾಡಳಿತ ಇಲಾಖೆ ಮರ್ಜ್?ಬೆಳ್ತಂಗಡಿ ಟೋಕನ್ ಸಿಸ್ಟಂಗೆ ಮೋಕ್ಷ ಕೊಡಿಬೆಳ್ಳಾರೆಯಲ್ಲಿ fake ಆನ್ ಲೈನ್ ಟ್ರೇಡಿಂಗ್! ಫೈನಾನ್ಸ್ ಗಳಿಗೆ ಹರಿದು ಬಂದ ಐದು ಕೆಜಿ ಬಂಗಾರ!WANTED ಮೊಟ್ಟೆ?ಪುತ್ತೂರು: ಭಟ್ರು ವರ್ಸಸ್ ಅಂಡಿಗುಂಡಿ ಭಟ್ರುಎಡಮಂಗಲ ಸರ್ಕಾರಿ ಕಾರ್ಯಕ್ರಮದಲ್ಲಿ ತಾಮರೆ ಚಿಹ್ನೆ!ಸುಳ್ಯ, ಪುತ್ತೂರು, ಬೆಳ್ತಂಗಡಿ ಬಾರ್ ಗಳಲ್ಲಿ ಕುರಿ ಮಾಲು!
ಪುತ್ತೂರಿಗೆ ಪೊಸ DYSP
Pattler News
Bureau Report
