ಸುಳ್ಯ ಪುತ್ತೂರು ಪೋಲಿಸ್ ಸರಹದ್ದನ್ನು ಒಳಗೊಂಡಂತೆ ಇರುವ ಪುತ್ತೂರು ಪೋಲಿಸ್ ಉಪ ವಿಭಾಗಕ್ಕೆ ಹೊಸ ಪೋಲಿಸ್ ಉಪ ವರಿಷ್ಠಾಧಿಕಾರಿಯ ನೇಮಕ ಆಗಿದೆ. ಹೆಸರು ಪ್ರಮೋದ್ ಕುಮಾರ್. ನಮ್ಮವರೇ, ಕಡಬದವರು ಮತ್ತು ಸವಣೂರಿಗೂ ಸಂಬಂಧ ಪಟ್ಟವರು.
ಹಾಗೆಂದು ಮೊದಲು ಪುತ್ತೂರು ಉಪ ವಿಭಾಗ ಅಂದರೆ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳು ಬರುತ್ತಿತ್ತು. ಆಮೇಲೆ ರಾಜಕಾರಣಿಗಳು ತಮ್ಮ ತಮ್ಮ ಅನುಕೂಲತೆಗಾಗಿ ಅದನ್ನೆಲ್ಲ ಕಟ್ ಕಟ್ ಮಾಡಿ ಇದೀಗ ಪುತ್ತೂರು ಉಪ ವಿಭಾಗದಲ್ಲಿ ಸುಳ್ಯ ಮಾತ್ರ ನೇಲಿಕೊಂಡಿದೆ. ಹಾಗೆಂದು ಪುತ್ತೂರು ಉಪ ವಿಭಾಗ ದೊಡ್ಡ ದೊಡ್ಡ ಐಪಿಎಸ್ ಗಳನ್ನು ನೋಡಿದೆ. ರಾಜ್ಯದ ಪೋಲಿಸ್ ಭೂಪಟದಲ್ಲಿ ದೊಡ್ಡ ದೊಡ್ಡ ಟೋಪಿಯ ಹೆಚ್ಚಿನ ಐಪಿಎಸ್ ಗಳೆಲ್ಲ ಪುತ್ತೂರು ಮೂಲಕವೇ ಹಾದು ಹೋದವರು. ಇದೀಗ ಅರುಣ್ ನಾಗೇಗೌಡರ ನಂತರ ಪುತ್ತೂರು ಉಪ ವಿಭಾಗಕ್ಕೆ ಪ್ರಮೋದ್ ಬಂದಿದ್ದಾರೆ.
ಹಾಗೆಂದು ಪ್ರಮೋದ್ ಕುಮಾರ್ ಕಡಬ ಸಮೀಪದ ಬೆದ್ರಾಜೆಯವರು. ಬೆದ್ರಾಜೆ ಪ್ರಮೋದರ ತಾಯಿ ಮನೆ ಆಗಿದ್ದರೆ ಇತ್ತ ಸವಣೂರು ಸಮೀಪದ ಬಂಬಿಲ ಗುತ್ತು ಪ್ರಮೋದ್ ಕುಮಾರ್ ತಂದೆಯವರ ಮನೆ. ನಂಜನ ಗೂಡು, ಸಕಲೇಶಪುರ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿರುವ ಪ್ರಮೋದ್ ಮುಖ್ಯಮಂತ್ರಿಗಳ ಚಿನ್ನದ ಪದಕ ವಿನ್ನರ್. ಮೇಲ್ನೋಟಕ್ಕೆ ಪ್ರಮೋದ್ ಡೀಸೆಂಟ್ ಪೋಲಿಸ್ ಆಗಿದ್ದು ಕಾನೂನು ಸುವ್ಯವಸ್ಥೆಯಲ್ಲಿ ಕಟ್ಟುನಿಟ್ಟು ಎಂದು ತಿಳಿದುಬಂದಿದೆ. ಪುತ್ತೂರು ಉಪ ವಿಭಾಗದ ತುಂಬಾ ವಿವಿಧ ಸೈಜಿನ ಕಳ್ಳಕಾಕರ ಜಾತ್ರೆಯೇ ಇದ್ದು ಪ್ರಮೋದ್ ಇವರನ್ನೆಲ್ಲ ಹೇಗೆ ಮಡಚಿ ಬೆಂಡ್ ತೆಗೆಯುತ್ತಾರೆ ಎಂದು ಕಾದು ನೋಡ ಬೇಕಾಗಿದೆ.
LATEST
ಮಠಂತಬೆಟ್ಟು ಟೆಂಪಲ್ ಮೇಲೆ ಪ್ರಯೋಗ? ತಗಡ್, ಭಸ್ಮ ಸಿಕ್ಕಿದೆ !ಸುಳ್ಯದಲ್ಲಿ ಧರ್ಮಸ್ಥಳದ ಜಾಗ ಗುಳುಂ ಪ್ರಕರಣ! ಕಕ್ಕಿಸಿದ ವ್ಯವಸ್ಥಾಪಕರು!ಬೆಳ್ಳೂರು ಬೈಲು ಸೇತುವೆ ಬಳಿ ಅಕ್ರಮ ಪೊಯ್ಯೆ ಅಡ್ಡೆಗೆ ಪೊಲೀಸ್ ದಾಳಿ 3 ಟಿಪ್ಪರ್ ವಾಹನಗಳು ವಶಕ್ಕೆಬೆಳ್ತಂಗಡಿ ಪೊಯ್ಯೆ ಅಡ್ಡೆಗೆ ಪೋಲಿಸ್ ಧಾಳಿ?ತ್ಯಾಗರಾಜದ ಬೋರಿರಾಜಅಪ್ರಾಪ್ತ ಹುಡುಗಿಯ ಜೊತೆ ಮುಕ್ತರಾಕ. ಕಾಪಿನಬಾಗಿಲಿನಲ್ಲಿ ಪೆಟ್ಟಿನ ಬರ್ಸ!ಸುಬ್ರಹ್ಮಣ್ಯದಲ್ಲಿ ಅಪಘಾತದ ಪ್ರಸಾದ!ಕಲ್ಲುಗುಂಡಿಗೆ ಕೌ ಡಾಕ್ಟರ್ ಇಲ್ಲ!ಮರ್ಧಾಳ ಕುಂಡಡ್ಕ ಫಾಲ್ಸ್ ನಲ್ಲಿ ಅನೈತಿಕ ಪೋಲಿಸರು!ಗುಂಡ್ಯದಲ್ಲಿ ಕಳ್ಳಂಗಡಿಗಳಿಗೆ ಲೈಸೆನ್ಸ್ ?
ಪುತ್ತೂರಿಗೆ ಪೊಸ DYSP
Pattler News
Bureau Report