
ಸುಳ್ಯ ತಾಲೂಕಿನ ಶೇಣಿ ಶಾಲೆಯಲ್ಲಿ ಮಾಸ್ತರರೊಬ್ಬರು ಎಳೆಯ ಮಗುವಿನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಹಲ್ಲೆ ಬಗ್ಗೆ ಮಗುವಿನ ಮನೆಯವರು ಬೆಚ್ಚಿ ಬಿದ್ದಿದ್ದು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಶೇಣಿ ಶಾಲೆಯಲ್ಲಿ ನಿನ್ನೆ ಮಾಸ್ತರರೊಬ್ಬರು ಒಂದನೇ ಕ್ಲಾಸಿನ ಕಿಡ್ನಿ ಪೇಶೆಂಟ್ ಮಗುವಿನ ಮೇಲೆ ಹಲ್ಲೆ ನಡೆಸಿದ್ದು ಇದೊಂದು ಅಮಾನವೀಯ ಘಟನೆ ಎಂದು ಊರವರು ತಿಳಿಸಿದ್ದಾರೆ.ಸದಾ ಆ ಸಂಘಟನೆ ಈ ಸಂಘಟನೆ ಎಂದು ಬ್ಯುಸಿ ಆಗಿರುವ ಮಾಸ್ತರರು ಯಾವುದೋ ತಗಡ್ ಬೆಚ್ಚದಲ್ಲಿ ಒಂದನೇ ಕ್ಲಾಸಿನ ಮಗುವಿಗೆ ಬಡಿದು ಬಡಿದು ಮಗುವನ್ನು ಕಂಗಾಲು ಮಾಡಿದ್ದಾರೆ. ಈ ಬಗ್ಗೆ ಇದೀಗ ಊರವರ ಬಿ.ಪಿ ಏರಿದ್ದು ಮಾಸ್ತರರು ಚಳಿ ಬಿಡಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
Post Views: 2,127